ಮತ್ತೆ ಬಾಲ್ಯ ಮರುಕಳಿಸಿದ ಶಿಕ್ಷಕರ ದಿನಾಚರಣೆ

ನಾನೀಗ ಹೇಳುತ್ತಿರುವುದು ಸರಿಯಾಗಿ ಆರೂವರೆ ದಶಕಗಳ ಹಿಂದೆ ನಾನು ಆ ಕುಗ್ರಾಮದಲ್ಲಿ ಕಳೆದ ಬಾಲ್ಯ ಮತ್ತು ಎಂದೂ ಮರೆಯಲಾಗದ, ಮನಃಪಟಲದ ಮೇಲೆ ಅಚ್ಚಳಿಯದೆ ಉಳಿದಿರುವ ಶಾಲಾ ಮುಖ್ಯೋಪಾಧ್ಯಾಯರ ಬಗ್ಗೆ. ನನಗೀಗ 74 ವರ್ಷ ವಯಸ್ಸು. ಆದರೂ, ಆ ನೆನಪುಗಳನ್ನು ನೆನೆದರೆ, ಮುಖ್ಯೋಪಾಧ್ಯಾಯರ ವ್ಯಕ್ತಿತ್ವವನ್ನು ಮೆಲುಕುಹಾಕಿದರೆ ನನಗೆ ಚಡ್ಡಿ ಹಾಕಿ ತಿರುಗುತ್ತಿದ್ದ ಬಾಲ್ಯವನ್ನು ಮರುಕಳಿಸಿಬಿಡುತ್ತದೆ, ಮತ್ತೆ ಬಾಲಕನನ್ನಾಗಿ ಮಾಡಿಬಿಡುತ್ತದೆ, ಮನಸ್ಸು ಮತ್ತೂ ಕೋಮಲವಾಗಿಬಿಡುತ್ತದೆ. ಅದು, ನೆನಪುಗಳ ಶಕ್ತಿ.
ಶಾಲಾ ಕಟ್ಟಡದ ಮುಂಭಾಗದ ಒಂದು ಮೂಲೆಯಲ್ಲಿ ಮಾತನಾಡದೆ ಕುಳಿತುಕೊಂಡೇ ವಿದ್ಯಾರ್ಥಿಗಳಲ್ಲಿ, ಶಿಕ್ಷಕ ವೃಂದದಲ್ಲಿ ಸಮಯಪಾಲನೆ, ಶಿಸ್ತನ್ನು ಮೂಡಿಸುತ್ತಿದ್ದ ಅವರ ವೈಖರಿ ಎಂಥವರಿಗೂ ಆದರ್ಶ. ತರಗತಿಗೆ ವಿದ್ಯಾರ್ಥಿಗಳು ತಡವಾಗಿ ಬರುವುದನ್ನು ಅವರು ಎಳ್ಳಷ್ಟೂ ಸಹಿಸುತ್ತಿರಲಿಲ್ಲ. ಅರ್ಧಗಂಟೆ ಮೊದಲೇ ಕುಳಿತು ಸುತ್ತಲೂ ದೃಷ್ಟಿ ಹರಿಸುತ್ತಿದ್ದರು. ತಡ ಮಾಡಿ ಬಂದಾಗ, ಅವರ ಕಣ್ಣು ತಪ್ಪಿಸಿ ತರಗತಿ ಸೇರಿಕೊಳ್ಳುವ ವಿದ್ಯಾರ್ಥಿಗಳ ಸಾಹಸ, ದುಸ್ಸಾಹಸವಾಗುತ್ತಿತ್ತು. 'ಯಾರದು?' ಎಂಬ ಮೂರಕ್ಷಗಳ ಗುಡುಗು ಹೆದರಿದ ವಿದ್ಯಾರ್ಥಿಗಳ ಧೈರ್ಯವನ್ನೆಲ್ಲ ದ್ರವೀಕರಿಸುತ್ತಿತ್ತು. ತಡವಾಗಿ ಬಂದ ಶಿಕ್ಷಕರ ಪಾಡು ಸಹ ಅದೇ ಆಗಿರುತ್ತಿತ್ತು!
ಶಿಕ್ಷಕರ ದಿನ ನಮ್ಮ ವ್ಯಕ್ತಿತ್ವವನ್ನು ರೂಪಿಸಿದ ಎಲ್ಲ ಗುರುಗಳಿಗೂ ಒಂದು ನಮಸ್ಕಾರ ಹೇಳೋಣ. ಕಾಲ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಹಳೆ ನೀರು ಹರಿದು ಹೊಸ ನೀರು ಸೇರಿಕೊಂಡಿದೆ. ಶಿಕ್ಷಣದ ವ್ಯವಸ್ಥೆ ಬದಲಾಗಿದೆ. ಶಿಕ್ಷಕರ ಮನೋಭಾವ, ಕಲಿಸುವ ರೀತಿ, ವಿದ್ಯಾರ್ಥಿಗಳನ್ನು ನಡೆಸಿಕೊಳ್ಳುವ ಬಗೆ ಎಲ್ಲವೂ ಬದಲಾಗಿದೆ. ಆದರೆ, ಇಂದಿನ ದಿನವೂ ಅಂದು ನಾನು ಕಂಡ, ಪೂಜ್ಯಭಾವದಿಂದ ಗೌರವಿಸಿದ ಮುಖ್ಯೋಪಾಧ್ಯಾಯ(ರಂಗಣ್ಣ ಅವರ ಹೆಸರಿರಬಹುದೆಂದು ನನ್ನ ಊಹೆ)ರಂಥ ಗುರುವು ಇಂದಿನ ವಿದ್ಯಾರ್ಥಿಗಳಿಗೂ ಇದ್ದಿದ್ದರೆ ಎಷ್ಟು ಚೆನ್ನ ಎಂದು ಅನ್ನಿಸದೇ ಇರದು.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications