ಪ್ರಾರ್ಥಿಸಲು ಇಂಥ ದಿನವೊಂದು ಬೇಕೆ?

ಇಂಥದೊಂದು ದಿನವಾದರೂ ಬೇಕಾ ಎಂಬುದು ಪ್ರಶ್ನೆ? ನಮ್ಮ ದೇಶದಲ್ಲಿ ಬೆಳಗಾನೆದ್ದು ಕರಾಗ್ರೇ ವರಸೇ ಲಕ್ಷ್ಮಿ ಅನ್ನುತ್ತಲೇ ದೇವಿಯ ಪ್ರಾರ್ಥನೆಯಿಂದ ದಿನ ಆರಂಭಿಸುತ್ತೇವೆ. ರಾತ್ರಿ ಹಾಸಿಗೆಗೆ ಮೈಚಾಚುವ ಮೊದಲು ಎಷ್ಟೊಂದು ಸಂದರ್ಭದಲ್ಲಿ ಎಷ್ಟೊಂದು ಬಾರಿ ಪ್ರಾರ್ಥನೆಗಳನ್ನು ಮಾಡಿರುತ್ತೇವೆ ಎಂಬುದನ್ನು ಲೆಕ್ಕವಿಡಲೇ ಸಾಧ್ಯವಿಲ್ಲ. ಬೀದಿಗೊಂದಿರುವ ದೇವಸ್ಥಾನ ಕಂಡಕೂಡಲೆ ಕಣ್ಮುಚ್ಚಿ ಮನದಲ್ಲೇ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುವ ನಾವು, ಇನ್ನು ನಮ್ಮವರಿಗಾಗಿ, ಎಲ್ಲರಿಗಾಗಿ ಪ್ರಾರ್ಥಿಸುವ ಲೆಕ್ಕ ರಾತ್ರಿ ಶುಭ್ರ ಬಾನಂಗಳದಲ್ಲಿ ಚುಕ್ಕಿಗಳ ಲೆಕ್ಕವಿಟ್ಟಂತೆ.
ಮಳೆ ಬಾರದಿದ್ದರೆ ವರುಣ ದೇವನನ್ನು ಹೋಲ್ಸೇಲಾಗಿ ಪ್ರಾರ್ಥಿಸುವುದು ಹೋಗಲಿ ಕತ್ತೆಗಳನ್ನು ಎಳೆತಂದು, ಗಂಡು ಹೆಣ್ಣು ಕಪ್ಪೆಗಳನ್ನು ಅಕ್ಕಪಕ್ಕದಲ್ಲಿಟ್ಟು, ನಾಯಿ ನರಿಗಳನ್ನು ಒಟ್ಟುಗೂಡಿಸಿ ಮದುವೆ ಮಾತ್ರವಲ್ಲ ಹೋಮ ಹವನ ಯಾಗಾದಿಗಳನ್ನೇ ಮಾಡಿಬಿಡುತ್ತೇವೆ. ಅತಿವೃಷ್ಟಿಯಾದಾಗ ಮಳೆಯನ್ನು ನಿಲ್ಲಿಸಲು ಕೂಡ ಪ್ರಾರ್ಥನೆ, ಹೋಮಗಳನ್ನು ಮಾಡುವಂಥವರು ನಾವುಗಳು.
![]() | |
| ದಿನದಿನಕ್ಕೆ ಪ್ರಸ್ತುತತೆ, ಮಹತ್ವ ಕಳೆದುಕೊಳ್ಳುತ್ತಿರುವ ದಿನಾಚರಣೆಗಳು! | |
![]() | |
ಇಷ್ಟೆಲ್ಲಾ ಇದ್ದಾಗ ವಿಶ್ವ ಪ್ರಾರ್ಥನಾ ದಿನಾಚರಣೆಯಾದರೂ ಏಕೆ ಬೇಕು? ಅಷ್ಟಕ್ಕೂ ಇಂದಿನ ಕಾಲದಲ್ಲಿ, ಅದೂ ಭಾರತದಲ್ಲಿ ಪ್ರಸ್ತುತವೆ? ಇಂಥ ದಿನಗಳನ್ನಾದರೂ ಯಾಕೆ ಆಚರಿಸುತ್ತೇವೆ? ಇವುಗಳಿಗೆ ಉತ್ತರ ಕಂಡುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಒಬ್ಬೊಬ್ಬರ ಭಾವ ಒಂದೊಂದು ರೀತಿ. ಹೊಸ ಜೆನರೇಶನ್ ಪೀಳಿಗೆಗೆ ಪ್ರತಿ ಆಚರಣೆಯೂ ಹೊಸದರಂತೆ ಕಾಣುತ್ತದೆ.
ಮುಂಬೈ ದಾಳಿಯಲ್ಲಿ ಮಡಿದವರಿಗಾಗಿ ಮೊಂಬತ್ತಿ ಹತ್ತಿಸಿ ಪ್ರಾರ್ಥಿಸುವುದು, ಮಂಗಳೂರು ವಿಮಾನ ಅಪಘಾತದಲ್ಲಿ ಸತ್ತವರ ಆತ್ಮಕ್ಕೆ ಶಾಂತಿ ಕೋರುವುದು, ಗಾಯಗೊಂಡವರು ಆಸ್ಪತ್ರೆಯಿಂದ ಪಾರಾಗಿ ಬಂದರೆ ಸಾಕು ಎಂದು ಪ್ರಾರ್ಥಿಸುವುದು ಒಪ್ಪತಕ್ಕ ಮಾತು. ಆದರೆ ಇಂದಿನ ದಿನಗಳಲ್ಲಿ, ತಿಂಗಳಿಗೆರಡು ದಿನಾಚರಣೆಗಳು ಇರುತ್ತಿರುವಾಗ, ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಶಿಕ್ಷಕರ ದಿನಾಚರಣೆ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಮಕ್ಕಳ ದಿನಾಚರಣೆಗಳು ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ. ಆಚರಣೆಗಿಂತ ಆಡಂಬರವೇ ಜಾಸ್ತಿಯಾಗುತ್ತಿದೆ.
ಪಾಶ್ಚಾತ್ಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವ ಈ ಆಚರಣೆಗಳು ಎಷ್ಟು ಪ್ರಸ್ತುತ? ವಿಶ್ವ ಪ್ರಾರ್ಥನಾ ದಿನಾಚರಣೆ ಮಾತ್ರವಲ್ಲ, ಶಾಂತಿಗಾಗಿ ವಿಶ್ವ ಪ್ರಾರ್ಥನಾ ದಿನಾಚರಣೆ, ಜಾಗತಿಕ ಪ್ರಾರ್ಥನಾ ದಿನಾಚರಣೆ, ರಾಷ್ಟ್ರೀಯ ಪ್ರಾರ್ಥನಾ ದಿನಾಚರಣೆ (ಒಂದೊಂದು ರಾಷ್ಟ್ರದಲ್ಲಿ ಒಂದೊಂದು ದಿನ), ಜೇರುಸಲೇಂನ ವಿಶ್ವ ಪ್ರಾರ್ಥನಾ ದಿನಾಚರಣೆಗಳಂಥ ದಿನಾಚರಣೆಗಳೂ ಬೇಕಾದಷ್ಟಿವೆ. ಆಯಾ ಧರ್ಮದವರು ತಮ್ಮ ಪದ್ಧತಿಗಳಿಗೆ ತಕ್ಕಂತೆ ಬೇರೆಬೇರೆಯ ದಿನಾಚರಣೆಗಳನ್ನು ಆಚರಿಸುತ್ತಾರೆ.
ಇಷ್ಟೆಲ್ಲಾ ಯಾಕೆ ಹೇಳಬೇಕಾಯಿತೆಂದರೆ, ಇಂದು ಎಫ್ಎಂ ರೇಡಿಯೋ ಚಾನಲ್ಲಿನಲ್ಲಿ ಇಂದು ವಿಶ್ವ ಪ್ರಾರ್ಥನಾ ದಿನಾಚರಣೆ ಅಂತ ತರ್ಲೆ ಮತ್ತು ಪಟಾಕಿಗಳಿಬ್ಬರು ಮಾತಾಡುತ್ತಿದ್ದರು. ನೀನು ಯಾರಿಗಾಗಿ ಪ್ರಾರ್ಥಿಸ್ತಿಯಾ ಅಂತ ಆತ ಆಕೆಗೆ, ನೀನು ಏನಂತ ಪ್ರಾರ್ಥಿಸ್ತಿಯಾ ಅಂತ ಆಕೆ ಆತನಿಗೆ ಕೇಳುತ್ತ ಬಡಬಡ ಅಂತ ಬಡಬಡಿಸುತ್ತಿದ್ದರು. ಗೂಗಲ್ ಸರ್ಚ್ ಇಂಜಿನ್ನಿನಲ್ಲಿ ಸರ್ಚಿಸಲಾಗಿ ಇಂದು ವಿಶ್ವ ಪ್ರಾರ್ಥನಾ ದಿನಾಚರಣೆ ಇರಲಿಲ್ಲ! ಅಷ್ಟಕ್ಕೂ ಪ್ರಾರ್ಥಿಸಲು ಒಂದು ದಿನವಾದರೂ ಏಕೆ ಬೇಕು? ತಗೊಳ್ಳಿ ಈಗಲೇ ಪ್ರಾರ್ಥಿಸುತ್ತೇನೆ, "ಆ ಎಫ್ಎಂ ರೇಡಿಯೋ ಚಾನಲ್ಲಿಗೆ ಮತ್ತು ಚಂದದ ಮಾತುಗಾರರಿಗೆ ದೇವರು ಒಳ್ಳೆಯದು ಮಾಡಲಿ!"
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral














Click it and Unblock the Notifications