ಸ್ಟಾರ್ ಬಕರಾ ಮಾಲಿಕರ ಖುಲಾಯಿಸಿದ ಅದೃಷ್ಟ

ಇಂದಿನ ದಿನ ಬಂಧುಗಳ ಮನೆಗಳಿಗೆ, ಅಕ್ಕಪಕ್ಕದವರ ಮನೆಗಳಿಗೆ ಕೂಡ ಹೋಗಿ ಶುಭಾಶಯ ಕೋರುವುದು ವಾಡಿಕೆಯಾಗಿ ಬೆಳೆದುಬಂದಿದೆ. ಪ್ರಾರ್ಥನೆಯ ನಂತರ, ಇಮಾಮರ ಪವಿತ್ರ ಉಪದೇಶದ ನಂತರ ಮನೆಜನರೆಲ್ಲ ಸೇರಿ ಪಟ್ಟಾಗಿ ಕುಳಿತು ಮೃಷ್ಟಾನ್ನ ಸೇವಿಸುತ್ತಾರೆ.
ಇದಕ್ಕಾಗಿಯೇ ಹಬ್ಬಕ್ಕೆ ತಿಂಗಳಿನಿಂದಲೂ ಬಕರಾ ಅಂದರೆ ಕುರಿ, ಮೇಕೆಗಳಿಗೆ ಇನ್ನೆಲ್ಲಿಲ್ಲದ ಬೇಡಿಕೆ. ಚೆನ್ನಾಗಿ ಮೇವು ತಿನ್ನಿಸಿ ಕೊಬ್ಬಿಸಿದ ಆಡುಗಳಿಗೆ ಭಾರೀ ಬೇಡಿಕೆ. ಅದರಲ್ಲೂ, ಕುರಿಗಳಿಗೆ ಹಿಂದಿ ಚಿತ್ರತಾರೆಯರ ಹೆಸರಿಟ್ಟು ಹೆಚ್ಚಿನ ಬೆಲೆಗಳಿಗೆ ಮಾರಾಟ ಮಾಡುವುದು ಫ್ಯಾಷನ್ ಆಗಿಬಿಟ್ಟಿದೆ. ಹಿಂದಿ ಚಿತ್ರರಂಗದ ಬಾದ್ ಷಾ ಶಾರೂಖ್ ಖಾನ್, ಸಲ್ಲೂ ಮಿಂಯಾ, ಸೈಫ್ ಅಲಿಖಾನ್ ಹೆಸರಿನ ಆಡುಗಳನ್ನು ಮಾರಾಟ ಮಾಡುವುದು ಶೋಕಿ. ಈ ಬಾರಿ ಪಟ್ನಾದಲ್ಲಿ ಸಲ್ಲೂ ಮಿಂಯಾ ಹೆಸರಿನ ಮೇಕೆ 75 ಸಾವಿರ ರು.ಗಳಿಗೆ ಮಾರಾಟವಾದರೆ, ಶಾರೂಖ್ ಬೆಲೆ ಯಾಕೋ ಸ್ವಲ್ಪ ತಗ್ಗಿದೆ. ಕಳೆದ ಬಾರಿಗೆ ಹೋಲಿಸಿದರೆ 'ಸ್ಟಾರ್' ಮೇಕೆಗಳ ಬೆಲೆ ತಗ್ಗಿದೆ ಅಂತಾರೆ ಮಾರಾಟಗಾರರು. ಬಕರಾಗಳಿಗು ಕೂಡ ರಿಸೆಷನ್ ಎಫೆಕ್ಟ್! ಆದರೆ, ಬೆಲೆ ಎಷ್ಟೇ ಇದ್ದರೂ ಮುಸ್ಲಿಂ ಬಾಂಧವರ ಹೊಟ್ಟೆಗಿಳಿಯುವುದು ಅವಕ್ಕೆ ತಪ್ಪಿದ್ದಲ್ಲ.
ನವದೆಹಲಿಯಲ್ಲಿ 'ಖುಷಿ' ಹೆಸರಿನ ಮೇಕೆಯೊಂದು ಭಾರೀ ಆಕರ್ಷಣೆಯ ಕೇಂದ್ರಬಿಂದುವಾಗಿದೆ. 786 ಎಂಬುದು ಮುಸ್ಲಿಂರಿಗೆ ಅತ್ಯಂತ ಪವಿತ್ರವಾದ ಮತ್ತು ಅದೃಷ್ಟದ ಸಂಖ್ಯೆ. ಕಾಕತಾಳೀಯವೋ, ಅಲ್ಲಾಹುವಿನ ಚಮತ್ಕಾರವೋ ಕಪ್ಪುಬಣ್ಣದ ಪೊಗದಸ್ತಾದ ಮೇಕೆಯ ಮೈಮೇಲೆ ಬಿಳಿ ಬಣ್ಣದ ಕಲೆ 786 ಸಂಖ್ಯೆಯನ್ನು ಹೋಲುತ್ತಿರುವುದು ಅದರ ಮಾಲಿಕನ ಅದೃಷ್ಟ ಖುಲಾಯಿಸುವಂತಾಗಿದೆ. ಜೊತೆಗೆ ಅದರ ಬೆನ್ನಿನ ಮೇಲೆ ಅಮವಾಸೆ ನಾಲ್ಕು ದಿನ ಕಳೆದ ಚಂದ್ರನ ಗುರುತಿರುವುದು ಮತ್ತೊಂದು ಆಕರ್ಷಣೆಯಾಗಿದೆ.
ಸಿಂಗ್ ಎಂಬ ಅದರ ಮಾಲಿಕ ಅದನ್ನು ಆರು ತಿಂಗಳಾಗಿದ್ದಾಗ ಕಸಾಯಿಗೆ ಮಾರಾಟ ಮಾಡಲು ನೀಡಿದ್ದನಂತೆ. ಕಸಾಯಿ ಅದೃಷ್ಟದ ಸಂಖ್ಯೆ ನೋಡಿದ್ದೇ ಕೊಲ್ಲುವುದಿಲ್ಲ ಎಂದು ಹೇಳಿದನಂತೆ. ಅದರ ಅದೃಷ್ಟ ಗಟ್ಟಿಯಿತ್ತು. ಈಗ ಬಿಡ್ಡಿಂಗಿನಲ್ಲಿ ಅದರ ಬೆಲೆ 21 ಲಕ್ಷ ರು. ದಾಟಿದೆ. ಅದನ್ನು 51 ಲಕ್ಷ ರು.ಗೆ ಮಾರಾಟ ಮಾಡಿಯೇ ತೀರುತ್ತೇನೆ ಎಂದು ಮಾಲಿಕ ಸರಿಯಾದ 'ಬಕರಾ'ನಿಗಾಗಿ ಕಾಯುತ್ತಿದ್ದಾನೆ.
ಈ ಮೇಕೆಗಳ ಅದೃಷ್ಟವೆಂದರೆ, ಅವುಗಳ ಬೆಲೆ ಏರಿದಷ್ಟೂ ಆಯಸ್ಸು ಜಾಸ್ತಿಯಾಗುತ್ತಿದೆ!
(ಏಜೆನ್ಸೀಸ್)
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications