ಸ್ಟಾರ್ ಬಕರಾ ಮಾಲಿಕರ ಖುಲಾಯಿಸಿದ ಅದೃಷ್ಟ

ಇಂದಿನ ದಿನ ಬಂಧುಗಳ ಮನೆಗಳಿಗೆ, ಅಕ್ಕಪಕ್ಕದವರ ಮನೆಗಳಿಗೆ ಕೂಡ ಹೋಗಿ ಶುಭಾಶಯ ಕೋರುವುದು ವಾಡಿಕೆಯಾಗಿ ಬೆಳೆದುಬಂದಿದೆ. ಪ್ರಾರ್ಥನೆಯ ನಂತರ, ಇಮಾಮರ ಪವಿತ್ರ ಉಪದೇಶದ ನಂತರ ಮನೆಜನರೆಲ್ಲ ಸೇರಿ ಪಟ್ಟಾಗಿ ಕುಳಿತು ಮೃಷ್ಟಾನ್ನ ಸೇವಿಸುತ್ತಾರೆ.
ಇದಕ್ಕಾಗಿಯೇ ಹಬ್ಬಕ್ಕೆ ತಿಂಗಳಿನಿಂದಲೂ ಬಕರಾ ಅಂದರೆ ಕುರಿ, ಮೇಕೆಗಳಿಗೆ ಇನ್ನೆಲ್ಲಿಲ್ಲದ ಬೇಡಿಕೆ. ಚೆನ್ನಾಗಿ ಮೇವು ತಿನ್ನಿಸಿ ಕೊಬ್ಬಿಸಿದ ಆಡುಗಳಿಗೆ ಭಾರೀ ಬೇಡಿಕೆ. ಅದರಲ್ಲೂ, ಕುರಿಗಳಿಗೆ ಹಿಂದಿ ಚಿತ್ರತಾರೆಯರ ಹೆಸರಿಟ್ಟು ಹೆಚ್ಚಿನ ಬೆಲೆಗಳಿಗೆ ಮಾರಾಟ ಮಾಡುವುದು ಫ್ಯಾಷನ್ ಆಗಿಬಿಟ್ಟಿದೆ. ಹಿಂದಿ ಚಿತ್ರರಂಗದ ಬಾದ್ ಷಾ ಶಾರೂಖ್ ಖಾನ್, ಸಲ್ಲೂ ಮಿಂಯಾ, ಸೈಫ್ ಅಲಿಖಾನ್ ಹೆಸರಿನ ಆಡುಗಳನ್ನು ಮಾರಾಟ ಮಾಡುವುದು ಶೋಕಿ. ಈ ಬಾರಿ ಪಟ್ನಾದಲ್ಲಿ ಸಲ್ಲೂ ಮಿಂಯಾ ಹೆಸರಿನ ಮೇಕೆ 75 ಸಾವಿರ ರು.ಗಳಿಗೆ ಮಾರಾಟವಾದರೆ, ಶಾರೂಖ್ ಬೆಲೆ ಯಾಕೋ ಸ್ವಲ್ಪ ತಗ್ಗಿದೆ. ಕಳೆದ ಬಾರಿಗೆ ಹೋಲಿಸಿದರೆ 'ಸ್ಟಾರ್' ಮೇಕೆಗಳ ಬೆಲೆ ತಗ್ಗಿದೆ ಅಂತಾರೆ ಮಾರಾಟಗಾರರು. ಬಕರಾಗಳಿಗು ಕೂಡ ರಿಸೆಷನ್ ಎಫೆಕ್ಟ್! ಆದರೆ, ಬೆಲೆ ಎಷ್ಟೇ ಇದ್ದರೂ ಮುಸ್ಲಿಂ ಬಾಂಧವರ ಹೊಟ್ಟೆಗಿಳಿಯುವುದು ಅವಕ್ಕೆ ತಪ್ಪಿದ್ದಲ್ಲ.
ನವದೆಹಲಿಯಲ್ಲಿ 'ಖುಷಿ' ಹೆಸರಿನ ಮೇಕೆಯೊಂದು ಭಾರೀ ಆಕರ್ಷಣೆಯ ಕೇಂದ್ರಬಿಂದುವಾಗಿದೆ. 786 ಎಂಬುದು ಮುಸ್ಲಿಂರಿಗೆ ಅತ್ಯಂತ ಪವಿತ್ರವಾದ ಮತ್ತು ಅದೃಷ್ಟದ ಸಂಖ್ಯೆ. ಕಾಕತಾಳೀಯವೋ, ಅಲ್ಲಾಹುವಿನ ಚಮತ್ಕಾರವೋ ಕಪ್ಪುಬಣ್ಣದ ಪೊಗದಸ್ತಾದ ಮೇಕೆಯ ಮೈಮೇಲೆ ಬಿಳಿ ಬಣ್ಣದ ಕಲೆ 786 ಸಂಖ್ಯೆಯನ್ನು ಹೋಲುತ್ತಿರುವುದು ಅದರ ಮಾಲಿಕನ ಅದೃಷ್ಟ ಖುಲಾಯಿಸುವಂತಾಗಿದೆ. ಜೊತೆಗೆ ಅದರ ಬೆನ್ನಿನ ಮೇಲೆ ಅಮವಾಸೆ ನಾಲ್ಕು ದಿನ ಕಳೆದ ಚಂದ್ರನ ಗುರುತಿರುವುದು ಮತ್ತೊಂದು ಆಕರ್ಷಣೆಯಾಗಿದೆ.
ಸಿಂಗ್ ಎಂಬ ಅದರ ಮಾಲಿಕ ಅದನ್ನು ಆರು ತಿಂಗಳಾಗಿದ್ದಾಗ ಕಸಾಯಿಗೆ ಮಾರಾಟ ಮಾಡಲು ನೀಡಿದ್ದನಂತೆ. ಕಸಾಯಿ ಅದೃಷ್ಟದ ಸಂಖ್ಯೆ ನೋಡಿದ್ದೇ ಕೊಲ್ಲುವುದಿಲ್ಲ ಎಂದು ಹೇಳಿದನಂತೆ. ಅದರ ಅದೃಷ್ಟ ಗಟ್ಟಿಯಿತ್ತು. ಈಗ ಬಿಡ್ಡಿಂಗಿನಲ್ಲಿ ಅದರ ಬೆಲೆ 21 ಲಕ್ಷ ರು. ದಾಟಿದೆ. ಅದನ್ನು 51 ಲಕ್ಷ ರು.ಗೆ ಮಾರಾಟ ಮಾಡಿಯೇ ತೀರುತ್ತೇನೆ ಎಂದು ಮಾಲಿಕ ಸರಿಯಾದ 'ಬಕರಾ'ನಿಗಾಗಿ ಕಾಯುತ್ತಿದ್ದಾನೆ.
ಈ ಮೇಕೆಗಳ ಅದೃಷ್ಟವೆಂದರೆ, ಅವುಗಳ ಬೆಲೆ ಏರಿದಷ್ಟೂ ಆಯಸ್ಸು ಜಾಸ್ತಿಯಾಗುತ್ತಿದೆ!
(ಏಜೆನ್ಸೀಸ್)
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications