ನನ್ನ ಅತ್ತೆ ಬಲು ಚಾಲಾಕಿ, ಸಖತ್ ಘಾಟಿ

ಇಂತಹ ಅತ್ತೆ ತಟ್ಟೆ ಮುಂದೆ ಹಿಡಿದಾಗ ಸಾವಿರ ರುಪಾಯಿ ಹಾಕಿ ಕೈಸುಟ್ಟುಕೊಂಡೆ. ಯಾಕೆಂದರೆ, ಉಳಿದವರೆಲ್ಲ ನೀಡಿದ ಕಾಣಿಕೆಯ ಲೆಕ್ಕಾಚಾರ ಹಾಕಿದರೆ ಐನೂರು ಕೂಡ ದಾಟಿರಲಿಲ್ಲ. ನನ್ನ ಹರಳೆಣ್ಣೆ ಕುಡಿದಂತಿದ್ದ ಮುಖವನ್ನು ಮತ್ತು ಅರಳಿರುವ ಅತ್ತೆಯ ಮುಖವನ್ನು ಆಗ ನೋಡಬೇಕಿತ್ತು. ಫೋಟೋ ತೆಗೆದಿದ್ದರೆ ಚೆನ್ನಾಗಿತ್ತು. ಇಷ್ಟೆಲ್ಲ ಆದಮೇಲೆ ಕಾಣಿಕೆ ಪಡೆಯುವ ಸರದಿ ನನ್ನದು.
ಮೂಗಿನ ತುದಿಗೆ ಇಳಿದಿದ್ದ ಕನ್ನಡಕ ಏರಿಸಿಕೊಂಡು ರೆಡಿಯಾದೆ. ಭರ್ತಿ ನಿರೀಕ್ಷೆಯಿಂದ ಕಣ್ಣರಳಿತ್ತು. ಮೊದಲು ಹಣೆಯ ಮೇಲೆ ಉದ್ದೋಉದ್ದಕ್ಕೆ ಕುಂಕುಮವಿಟ್ಟರು. ಮಗಳಿಗೊಂದು ಸೀರೆ. ನನಗೆ ಪ್ಯಾಂಟು ಮತ್ತು ಶರ್ಟಿನ ಬಟ್ಟೆ. ಅವರಿವರು ಕೊಟ್ಟಿದ್ದರಲ್ಲಿಯೇ, ಒಂದಕ್ಕೊಂದು ಮ್ಯಾಚ್ ಆಗದಿದ್ದರೂ, ಚೆನ್ನಾಗಿದ್ದುದನ್ನು ಆರಿಸಿ ನನಗೆ ಕೊಟ್ಟಿದ್ದರು. ಅಷ್ಟರಲ್ಲಿ ಬಂತಲ್ಲ ಬೆಳ್ಳಿ ಚೊಂಬು. ಅದಾದರೂ ಫಸ್ಟ್ ಹ್ಯಾಂಡ್ ಆಗಿರಬಾರದಾ? ಅದೂ ಕೂಡ ಯಾರೋ ಕೊಟ್ಟದ್ದನ್ನೇ ಕಲರ್ ಪೇಪರ್ ಸುತ್ತಿ ನನಗೆ ಕೊಟ್ಟಿದ್ದರು.
ಅದನ್ನು ನನಗಾಗಿಯೇ ಕೊಂಡದ್ದೆಂದು ಯಾರೂ ಆರ್ಗ್ಯೂ ಮಾಡುವ ಹಾಗೇ ಇರಲಿಲ್ಲ. ಚೊಂಬಿನ ಮೇಲೆ ಕೊಟ್ಟವರ ಹೆಸರು, ದಿನಾಂಕ ಸಖತ್ತಾಗಿ ಒಡಮೂಡಿತ್ತು. ಅನ್ನುವ ಹಾಗೂ ಇಲ್ಲ ಅನುಭವಿಸುವ ಹಾಗೂ ಇಲ್ಲ. ಅತ್ತೆಯನ್ನು ತರಾಟೆಗೆ ತೆಗೆದುಕೊಳ್ಳುವ ಧೈರ್ಯವಂತೂ ನನ್ನಲ್ಲಿ ಇಲ್ಲವೂ ಇಲ್ಲ. ಪಾಲಿಗೆ ಬಂದಿದ್ದೇ ಪಂಚಾಮೃತ ಅಲ್ವೇನ್ರೀ. ದಯವಿಟ್ಟು ಹೀಗೆಲ್ಲ ಬರೆದಿದ್ದೇನೆಂದು ನನ್ನ ಹೆಂಡತಿಗೆ ತಿಳಿಸಬೇಡಿ, ಪ್ಲೀಸ್. ಅಂದ ಹಾಗೆ ನಿಮ್ಮ ಮೊದಲ ದೀಪಾವಳಿ ಹೇಗಿತ್ತು?
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications