ನನ್ನ ಅತ್ತೆ ಬಲು ಚಾಲಾಕಿ, ಸಖತ್ ಘಾಟಿ

ಇಂತಹ ಅತ್ತೆ ತಟ್ಟೆ ಮುಂದೆ ಹಿಡಿದಾಗ ಸಾವಿರ ರುಪಾಯಿ ಹಾಕಿ ಕೈಸುಟ್ಟುಕೊಂಡೆ. ಯಾಕೆಂದರೆ, ಉಳಿದವರೆಲ್ಲ ನೀಡಿದ ಕಾಣಿಕೆಯ ಲೆಕ್ಕಾಚಾರ ಹಾಕಿದರೆ ಐನೂರು ಕೂಡ ದಾಟಿರಲಿಲ್ಲ. ನನ್ನ ಹರಳೆಣ್ಣೆ ಕುಡಿದಂತಿದ್ದ ಮುಖವನ್ನು ಮತ್ತು ಅರಳಿರುವ ಅತ್ತೆಯ ಮುಖವನ್ನು ಆಗ ನೋಡಬೇಕಿತ್ತು. ಫೋಟೋ ತೆಗೆದಿದ್ದರೆ ಚೆನ್ನಾಗಿತ್ತು. ಇಷ್ಟೆಲ್ಲ ಆದಮೇಲೆ ಕಾಣಿಕೆ ಪಡೆಯುವ ಸರದಿ ನನ್ನದು.
ಮೂಗಿನ ತುದಿಗೆ ಇಳಿದಿದ್ದ ಕನ್ನಡಕ ಏರಿಸಿಕೊಂಡು ರೆಡಿಯಾದೆ. ಭರ್ತಿ ನಿರೀಕ್ಷೆಯಿಂದ ಕಣ್ಣರಳಿತ್ತು. ಮೊದಲು ಹಣೆಯ ಮೇಲೆ ಉದ್ದೋಉದ್ದಕ್ಕೆ ಕುಂಕುಮವಿಟ್ಟರು. ಮಗಳಿಗೊಂದು ಸೀರೆ. ನನಗೆ ಪ್ಯಾಂಟು ಮತ್ತು ಶರ್ಟಿನ ಬಟ್ಟೆ. ಅವರಿವರು ಕೊಟ್ಟಿದ್ದರಲ್ಲಿಯೇ, ಒಂದಕ್ಕೊಂದು ಮ್ಯಾಚ್ ಆಗದಿದ್ದರೂ, ಚೆನ್ನಾಗಿದ್ದುದನ್ನು ಆರಿಸಿ ನನಗೆ ಕೊಟ್ಟಿದ್ದರು. ಅಷ್ಟರಲ್ಲಿ ಬಂತಲ್ಲ ಬೆಳ್ಳಿ ಚೊಂಬು. ಅದಾದರೂ ಫಸ್ಟ್ ಹ್ಯಾಂಡ್ ಆಗಿರಬಾರದಾ? ಅದೂ ಕೂಡ ಯಾರೋ ಕೊಟ್ಟದ್ದನ್ನೇ ಕಲರ್ ಪೇಪರ್ ಸುತ್ತಿ ನನಗೆ ಕೊಟ್ಟಿದ್ದರು.
ಅದನ್ನು ನನಗಾಗಿಯೇ ಕೊಂಡದ್ದೆಂದು ಯಾರೂ ಆರ್ಗ್ಯೂ ಮಾಡುವ ಹಾಗೇ ಇರಲಿಲ್ಲ. ಚೊಂಬಿನ ಮೇಲೆ ಕೊಟ್ಟವರ ಹೆಸರು, ದಿನಾಂಕ ಸಖತ್ತಾಗಿ ಒಡಮೂಡಿತ್ತು. ಅನ್ನುವ ಹಾಗೂ ಇಲ್ಲ ಅನುಭವಿಸುವ ಹಾಗೂ ಇಲ್ಲ. ಅತ್ತೆಯನ್ನು ತರಾಟೆಗೆ ತೆಗೆದುಕೊಳ್ಳುವ ಧೈರ್ಯವಂತೂ ನನ್ನಲ್ಲಿ ಇಲ್ಲವೂ ಇಲ್ಲ. ಪಾಲಿಗೆ ಬಂದಿದ್ದೇ ಪಂಚಾಮೃತ ಅಲ್ವೇನ್ರೀ. ದಯವಿಟ್ಟು ಹೀಗೆಲ್ಲ ಬರೆದಿದ್ದೇನೆಂದು ನನ್ನ ಹೆಂಡತಿಗೆ ತಿಳಿಸಬೇಡಿ, ಪ್ಲೀಸ್. ಅಂದ ಹಾಗೆ ನಿಮ್ಮ ಮೊದಲ ದೀಪಾವಳಿ ಹೇಗಿತ್ತು?
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications