ನನ್ನ ಅತ್ತೆ ಬಲು ಚಾಲಾಕಿ, ಸಖತ್ ಘಾಟಿ

ಇಂತಹ ಅತ್ತೆ ತಟ್ಟೆ ಮುಂದೆ ಹಿಡಿದಾಗ ಸಾವಿರ ರುಪಾಯಿ ಹಾಕಿ ಕೈಸುಟ್ಟುಕೊಂಡೆ. ಯಾಕೆಂದರೆ, ಉಳಿದವರೆಲ್ಲ ನೀಡಿದ ಕಾಣಿಕೆಯ ಲೆಕ್ಕಾಚಾರ ಹಾಕಿದರೆ ಐನೂರು ಕೂಡ ದಾಟಿರಲಿಲ್ಲ. ನನ್ನ ಹರಳೆಣ್ಣೆ ಕುಡಿದಂತಿದ್ದ ಮುಖವನ್ನು ಮತ್ತು ಅರಳಿರುವ ಅತ್ತೆಯ ಮುಖವನ್ನು ಆಗ ನೋಡಬೇಕಿತ್ತು. ಫೋಟೋ ತೆಗೆದಿದ್ದರೆ ಚೆನ್ನಾಗಿತ್ತು. ಇಷ್ಟೆಲ್ಲ ಆದಮೇಲೆ ಕಾಣಿಕೆ ಪಡೆಯುವ ಸರದಿ ನನ್ನದು.
ಮೂಗಿನ ತುದಿಗೆ ಇಳಿದಿದ್ದ ಕನ್ನಡಕ ಏರಿಸಿಕೊಂಡು ರೆಡಿಯಾದೆ. ಭರ್ತಿ ನಿರೀಕ್ಷೆಯಿಂದ ಕಣ್ಣರಳಿತ್ತು. ಮೊದಲು ಹಣೆಯ ಮೇಲೆ ಉದ್ದೋಉದ್ದಕ್ಕೆ ಕುಂಕುಮವಿಟ್ಟರು. ಮಗಳಿಗೊಂದು ಸೀರೆ. ನನಗೆ ಪ್ಯಾಂಟು ಮತ್ತು ಶರ್ಟಿನ ಬಟ್ಟೆ. ಅವರಿವರು ಕೊಟ್ಟಿದ್ದರಲ್ಲಿಯೇ, ಒಂದಕ್ಕೊಂದು ಮ್ಯಾಚ್ ಆಗದಿದ್ದರೂ, ಚೆನ್ನಾಗಿದ್ದುದನ್ನು ಆರಿಸಿ ನನಗೆ ಕೊಟ್ಟಿದ್ದರು. ಅಷ್ಟರಲ್ಲಿ ಬಂತಲ್ಲ ಬೆಳ್ಳಿ ಚೊಂಬು. ಅದಾದರೂ ಫಸ್ಟ್ ಹ್ಯಾಂಡ್ ಆಗಿರಬಾರದಾ? ಅದೂ ಕೂಡ ಯಾರೋ ಕೊಟ್ಟದ್ದನ್ನೇ ಕಲರ್ ಪೇಪರ್ ಸುತ್ತಿ ನನಗೆ ಕೊಟ್ಟಿದ್ದರು.
ಅದನ್ನು ನನಗಾಗಿಯೇ ಕೊಂಡದ್ದೆಂದು ಯಾರೂ ಆರ್ಗ್ಯೂ ಮಾಡುವ ಹಾಗೇ ಇರಲಿಲ್ಲ. ಚೊಂಬಿನ ಮೇಲೆ ಕೊಟ್ಟವರ ಹೆಸರು, ದಿನಾಂಕ ಸಖತ್ತಾಗಿ ಒಡಮೂಡಿತ್ತು. ಅನ್ನುವ ಹಾಗೂ ಇಲ್ಲ ಅನುಭವಿಸುವ ಹಾಗೂ ಇಲ್ಲ. ಅತ್ತೆಯನ್ನು ತರಾಟೆಗೆ ತೆಗೆದುಕೊಳ್ಳುವ ಧೈರ್ಯವಂತೂ ನನ್ನಲ್ಲಿ ಇಲ್ಲವೂ ಇಲ್ಲ. ಪಾಲಿಗೆ ಬಂದಿದ್ದೇ ಪಂಚಾಮೃತ ಅಲ್ವೇನ್ರೀ. ದಯವಿಟ್ಟು ಹೀಗೆಲ್ಲ ಬರೆದಿದ್ದೇನೆಂದು ನನ್ನ ಹೆಂಡತಿಗೆ ತಿಳಿಸಬೇಡಿ, ಪ್ಲೀಸ್. ಅಂದ ಹಾಗೆ ನಿಮ್ಮ ಮೊದಲ ದೀಪಾವಳಿ ಹೇಗಿತ್ತು?
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications