Get Updates
Get notified of breaking news, exclusive insights, and must-see stories!

Navratri 2022 Day 6: ನವರಾತ್ರಿ 6ನೇ ದಿನ ಅ. 1, ಕಾತ್ಯಾಯನಿ ಪೂಜೆ ಮಹತ್ವ, ಮುಹೂರ್ತ, ಮಂತ್ರ

ನವರಾತ್ರಿಯ ಆರನೇ ದಿನವನ್ನು ಮಾ ಕಾತ್ಯಾಯನಿ ಎಂದು ಕರೆಯಲ್ಪಡುವ ದುರ್ಗಾ ದೇವಿಯ ಉಗ್ರ ಯೋಧ ಅವತಾರಕ್ಕೆ ಸಮರ್ಪಿಸಲಾಗಿದೆ. ಸಿಂಹದ ಮೇಲೆ ಸವಾರಿ ಮಾಡುವ ಮತ್ತು ಕಮಲದ ಹೂವು ಮತ್ತು ಖಡ್ಗ ಮತ್ತು ಶಿವನ ತ್ರಿಶೂಲ ಸೇರಿದಂತೆ ಬಹು ಆಯುಧಗಳನ್ನು ಹೊಂದಿರುವ ಮಹಿಷಾಸುರಮರ್ದಿನಿಯನ್ನು ಷಷ್ಠಿಯಂದು ಪೂಜಿಸಲಾಗುತ್ತದೆ. ಈ ವರ್ಷ ಷಷ್ಠಿ ಶನಿವಾರ ಅಕ್ಟೋಬರ್ 1 ರಂದು ಬರುತ್ತದೆ. ಭಾರತದಾದ್ಯಂತ ಭಕ್ತರು ಆಶೀರ್ವಾದವನ್ನು ಕೋರಿ ದುರ್ಗಾ ದೇವಿಯ ಯೋಧ ಅವತಾರಕ್ಕೆ ಪ್ರಾರ್ಥಿಸುತ್ತಾರೆ. ಕಾತ್ಯಾಯನಿ ಮಾತೆಯ ಪುರಾಣ, ಪೂಜೆ ವಿಧಿ ಮತ್ತು ಆಕೆಗೆ ಅರ್ಪಿಸಬೇಕಾದ ಭೋಗ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲಾ ಮಾಹಿತಿ ಇಲ್ಲಿದೆ.

ಮಾ ಕಾತ್ಯಾಯನಿ ಪೂಜೆ: ದಿನಾಂಕ ಮತ್ತು ಸಮಯ

ಷಷ್ಠಿಯು ಶನಿವಾರ ಅಕ್ಟೋಬರ್ 1 ರಂದು ಬರುತ್ತದೆ. ಶುಕ್ಲ ಷಷ್ಠಿಯು ಸೆಪ್ಟೆಂಬರ್ 30 ರಂದು ರಾತ್ರಿ 10:34 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಅಕ್ಟೋಬರ್ 01 ರಂದು ರಾತ್ರಿ 08:46ಕ್ಕೆ ಕೊನೆಗೊಳ್ಳುತ್ತದೆ.

ನವರಾತ್ರಿ 2022 ದಿನ 6 ಬಣ್ಣ: ಬೂದು

ಪೂಜಾ ವಿಧಿ

ಪೂಜಾ ವಿಧಿ

ಕಾತ್ಯಾಯನಿ ಮಾತೆಯ ಆರಾಧನೆಯ ಪೂಜಾ ವಿಧಿ ಕಷ್ಟವೇನಲ್ಲ. ಭಕ್ತರು ಶುದ್ಧ ನೀರಿನಲ್ಲಿ ಸ್ನಾನ ಮಾಡಬೇಕು ಮತ್ತು ಆಚರಣೆಯನ್ನು ಮಾಡುವ ಮೊದಲು ಶುದ್ಧವಾದ ಬಟ್ಟೆಗಳನ್ನು ಧರಿಸಬೇಕು. ಮಾ ಕಾತ್ಯಾಯನಿಗೆ ತಾಜಾ ಹೂವುಗಳನ್ನು ವಿಶೇಷವಾಗಿ ಕಮಲ ಅರ್ಪಿಸುವುದು ಒಳ್ಳೆಯ ಶಕುನ ಎಂದು ಪರಿಗಣಿಸಲಾಗುತ್ತದೆ. ಭಕ್ತರು ನಂತರ ಮಂತ್ರಗಳನ್ನು ಪಠಿಸಬಹುದು ಮತ್ತು ಆಚರಣೆಯನ್ನು ಪೂರ್ಣಗೊಳಿಸಲು ಪ್ರಾರ್ಥನೆಗಳನ್ನು ಓದಬಹುದು.

ಮಾ ಕಾತ್ಯಾಯನಿ ಮಂತ್ರಗಳು

ಮಾ ಕಾತ್ಯಾಯನಿ ಮಂತ್ರಗಳು

ಓಂ ದೇವೀ ಕಾತ್ಯಾಯನ್ಯೈ ನಮಃ

ಯಾ ದೇವೀ ಸರ್ವಭೂತೇಷು ಮಾ ಕಾತ್ಯಾಯನೀ ರೂಪೇಣ ಸಂಸ್ಥಿತಾ । ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ

ಚಂದ್ರ ಹಾಸೋಜ್ಜ ವಾಲಕಾರ, ಶಾರ್ದೂಲವರ ವಾಹನ, ಕಾತ್ಯಯನಿ ಶುಭಂ ದದ್ಯ, ದೇವಿ ದಾನವ ಘಾತಿನಿ

ಮಾ ಕಾತ್ಯಾಯನಿ ಭೋಗ್

ಮಾ ಕಾತ್ಯಾಯನಿಗೆ ಭೋಗ್‌ನಲ್ಲಿ ಜೇನುತುಪ್ಪವನ್ನು ಅರ್ಪಿಸುವು ಒಳ್ಳೆಯದು ಎಂದು ನಂಬಲಾಗಿದೆ.

ಮಾ ಕಾತ್ಯಾಯನಿ ಪೂಜೆಯ ಮಹತ್ವ

ಮಾ ಕಾತ್ಯಾಯನಿ ಪೂಜೆಯ ಮಹತ್ವ

ನವರಾತ್ರಿಯ ಆರನೇ ದಿನದಂದು ವೈವಾಹಿಕ ಸಂಕಟಗಳನ್ನು ಪರಿಹರಿಸಲು ಭಕ್ತರು ಮಾ ಕಾತ್ಯಾಯನಿಯನ್ನು ಪೂಜಿಸುತ್ತಾರೆ. ಅವಿವಾಹಿತ ಹುಡುಗಿಯರು ತಮ್ಮ ಜೀವನದಲ್ಲಿ ಪರಿಪೂರ್ಣ ಶಾಂತಿನೆಲೆಸಲು ಮಾ ಕಾತ್ಯಾಯನಿ ಪೂಜೆಯನ್ನು ಮಾಡಲು ಸಲಹೆ ನೀಡಲಾಗುತ್ತದೆ. ಇದರ ಜೊತೆಯಲ್ಲಿ ಮಾ ಕಾತ್ಯಾಯನಿ ವೈವಾಹಿಕ ಸಮಸ್ಯೆಗಳನ್ನು ಪರಿಹರಿಸುವುದು ಮಾತ್ರವಲ್ಲದೆ ಒಬ್ಬರ ಯಶಸ್ಸಿನ ಹಾದಿಯಲ್ಲಿ ನಿಂತಿರುವ ಎಲ್ಲಾ ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತಾಳೆ ಮತ್ತು ಭಕ್ತರಿಗೆ ಅದೃಷ್ಟವನ್ನು ನೀಡುತ್ತಾಳೆ ಎಂದು ಪುರಾಣಗಳು ಹೇಳುತ್ತವೆ.

ಮಾ ಕಾತ್ಯಾಯನಿಯ ದಂತಕಥೆ

ಮಾ ಕಾತ್ಯಾಯನಿಯ ದಂತಕಥೆ

ಧಾರ್ಮಿಕ ಪುರಾಣಗಳ ಪ್ರಕಾರ, ಮಾ ಕಾತ್ಯಾಯನಿಯು ದೇವತೆಗಳ ಸಂಯೋಜಿತ ಶಕ್ತಿಗಳಿಂದ ಹುಟ್ಟಿದಳು. ಸಾವಿರ ಸೂರ್ಯರು, ಮೂರು ಕಣ್ಣುಗಳು, ಕಪ್ಪು ಕೂದಲು ಮತ್ತು ಬಹು ಕೈಗಳ ಶಕ್ತಿಯೊಂದಿಗೆ, ಕಾತ್ಯಾಯನಿ ದೇವಿಯು ಮಹಿಷಾಶುರಾ ಎಂಬ ರಾಕ್ಷಸನನ್ನು ವಧಿಸಲು ಭೂಮಿಗೆ ಇಳಿದಳು.

ಹಿಂದೂ ಧರ್ಮದಲ್ಲಿ, ಮಹಿಷಾಶುರ ಶಕ್ತಿಯುತ ಅರ್ಧ-ಮಾನವ ಅರ್ಧ-ಎಮ್ಮೆ ರೂಪ ಹೊಂದಿದ ರಾಕ್ಷಸನಾಗಿದ್ದನು. ಅವನು ತನ್ನ ಆಕಾರವನ್ನು ಬದಲಾಯಿಸುವ ಸಾಮರ್ಥ್ಯವನ್ನು ದುಷ್ಟ ರೀತಿಯಲ್ಲಿ ಬಳಸಿದನು. ಅವನ ತಿರುಚಿದ ಮಾರ್ಗದಿಂದ ಕೋಪಗೊಂಡ ಎಲ್ಲಾ ದೇವರುಗಳು ಮಾ ಕಾತ್ಯಾಯನಿಯನ್ನು ರಚಿಸಲು ತಮ್ಮ ಶಕ್ತಿಯನ್ನು ಒಗ್ಗೂಡಿಸಿದರು. ದೇವಿ ಮತ್ತು ರಾಕ್ಷಸನ ನಡುವಿನ ಯುದ್ಧ ನಡೆದು ರಾಕ್ಷಸನನ್ನು ಕಾತ್ಯಾಯನಿ ಸಂಹರಿಸಿದಳು. ಇದನ್ನು 'ಕೆಟ್ಟದ ಮೇಲೆ ಒಳ್ಳೆಯದರ ವಿಜಯ' ಎಂದು ಗುರುತಿಸಲಾಗಿದೆ.

ವಂಚಕ ರಾಕ್ಷಸನ ಸಂಹಾರಕ ಮಾ ಕಾತ್ಯಾಯನಿಯನ್ನು ಮಹಿಷರ್ಸುರಮರ್ದಿನಿ ಎಂದೂ ಕರೆಯಲಾಯಿತು. ಈ ಘಟನೆಯು ಹಿಂದೂ ಧರ್ಮದಲ್ಲಿ ಆಳವಾದ ಸಂಕೇತವನ್ನು ಹೊಂದಿದೆ. ಕಾತ್ಯಾಯನಿಗೆ ಬಹು ಕೈಗಳಿವೆ ಎಂದು ಹೇಳಲಾಗುತ್ತದೆ. ಅದು ದೇವರುಗಳಿಂದ ಉಡುಗೊರೆಯಾಗಿ ನೀಡಿದ ಆಯುಧಗಳಿಂದ ಆಶೀರ್ವದಿಸಲ್ಪಟ್ಟಿದೆ.

ಶಿವನು ಅವಳಿಗೆ ತ್ರಿಶೂಲವನ್ನು ಕೊಟ್ಟರೆ, ಭಗವಾನ್ ವಿಷ್ಣುವು ಸುದರ್ಶನ ಚರಕವನ್ನು, ಅಂಗಿ ದೇವನು ಬಾಣವನ್ನು, ವಾಯುದೇವನು ಬಿಲ್ಲು, ಇಂದ್ರ ದೇವನು ಗುಡುಗು, ಬ್ರಹ್ಮದೇವನು ನೀರಿನ ಪಾತ್ರೆಯೊಂದಿಗೆ ರುದ್ರಾಕ್ಷ ಇತ್ಯಾದಿಗಳನ್ನು ನೀಡಲಾಯಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+