ಗೊಂಬೆಗಳ ಹಬ್ಬಕ್ಕೆ ನಿಮ್ಮ ಮನೇಲಿ ತಯಾರಿ ಹೀಗಿರಲಿ

ನಮ್ಮ ಸಾಂಸ್ಕ್ರತಿಕ, ಐತಿಹಾಸಿಕ, ಪೌರಾಣಿಕ ಕಥೆಯನ್ನು ಗೊಂಬೆ ಕೂರಿಸುವ ಮೂಲಕ ಮಕ್ಕಳಿಗೆ ಸಾರುವ ಈ ಗೊಂಬೆ ಹಬ್ಬವೆಂದರೆ ಕರ್ನಾಟಕಕ್ಕೆ ವಿಶೇಷ. ಆದರೆ ಮೊದಲ ಬಾರಿ ತಮ್ಮ ಮನೆಯಲ್ಲಿ ಗೊಂಬೆಹಬ್ಬ ಮಾಡುತ್ತಿದ್ದವರಿಗೆ ಉಪಯುಕ್ತವಾಗಲೆಂದು ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
ಗೊಂಬೆ ಹಬ್ಬಕ್ಕೆ ತಯಾರಿ ಹೀಗಿರಲಿ:
1. ಸ್ಥಳಾವಕಾಶ: ಮೊದಲು, ಗೊಂಬೆಗಳನ್ನು ಕೂರಿಸಲು ಸೂಕ್ತ ಸ್ಥಳವನ್ನು ನಿಗದಿಪಡಿಸಿಕೊಳ್ಳಿ. ಮನೆಯ ಹಾಲ್ ನಲ್ಲೇ ಗೊಂಬೆ ಕೂರಿಸದರೆ ಚೆಂದ. ಯಾವ ಕಡೆ ಇಡಬೇಕೆಂದು ಯೋಚಿಸಿ ನಂತರ ಸಾವಕಾಶವಾಗಿರುವಂತೆ ಸ್ಥಳವನ್ನು ಸರಿಮಾಡಿಕೊಳ್ಳಿ.
2. ಟೇಬಲ್: 3 ಉದ್ದದ ಟೇಬಲ್ ಗಳನ್ನು ಹೊಂದಿಸಿಕೊಳ್ಳಿ. ಒಂದಕ್ಕಿಂತ ಒಂದು ಸ್ವಲ್ಪ ಎತ್ತರದ, ಒಟ್ಟು ಮೂರು ಟೇಬಲ್ ಗಳು ಗೊಂಬೆ ಕೂರಿಸಲು ಇರಲಿ. ಈ ಟೇಬಲ್ ಗೆ ಉತ್ತಮ ಬಟ್ಟೆಯನ್ನೂ ಹೊಂದಿಸಿಕೊಳ್ಳಿ. ರೇಷ್ಮೆ ಅಥವಾ ಸ್ವಲ್ಪ ಗಾಢ ಬಣ್ಣದ ಬಟ್ಟೆ ಟೇಬಲ್ ಹೊದಿಕೆಗೆ ಇರಲಿ.
3. ಪಟ್ಟದ ಗೊಂಬೆ: ಗೊಂಬೆ ಹಬ್ಬಕ್ಕೆ ಈ ಗೊಂಬೆಗಳು ಇರಲೇಬೇಕು. ಎತ್ತರದಲ್ಲಿ ಮತ್ತು ಮದ್ಯದಲ್ಲಿ ಪಟ್ಟದ ಗೊಂಬೆ (ಮದುವೆ ಗಂಡು ಮತ್ತು ಹೆಣ್ಣು) ಗೊಂಬೆಗಳಿರಲಿ. ವಿಷ್ಣುವಿನ ದಶಾವತಾರ, ರಾಮಾಯಣ ಪಾತ್ರಧಾರಿಗಳು ಮತ್ತು ಮಹಾಭಾರತದ ಪಾತ್ರಧಾರಿಗಳ ಗೊಂಬೆಗಳು ಮುಖ್ಯವಾಗಿ ಇರಬೇಕು.
4. ಹಳ್ಳಿ ಮತ್ತು ಕಾಡು: ಪೌರಾಣಿಕ ಗೊಂಬೆಯ ಹೊರತಾಗಿ ಹಳ್ಳಿಗಾಡಿನ ಮತ್ತು ಕಾಡಿನ ವಾತಾವರಣವನ್ನು ಗೊಂಬೆ ರೂಪದಲ್ಲಿ ಸೃಷ್ಟಿಸಬಹುದು. ಅನೇಕ ಪ್ರಾಣಿಗಳ ಮತ್ತು ವಿವಿಧ ಭಂಗಿಯ ಗೊಂಬೆಗಳನ್ನು ಅಲಂಕಾರಕ್ಕೆ ಬಳಸಬಹುದು.
5. ರಾಗಿ ಅಥವಾ ಸಾಸಿವೆ ತೆನೆ: ರಾಗಿ ಮತ್ತು ಸಾಸಿವೆ ಬೇಗ ಮೊಳಕೆ ಹೊಡೆದು ಚಿಗುರುವುದರಿಂದ ಈ ತೆನೆಯನ್ನು ಬರಿಸಿ ಟ್ರೇ ಗಳಲ್ಲಿ ಇಟ್ಟು ಹಸಿರು ವಾತಾವರಣ ಸೃಷ್ಟಿಸಬಹುದು. ಇದು ಗೊಂಬೆ ಹಬ್ಬಕ್ಕೆ ನೈಸರ್ಗಿಕ ಕಳೆ ನೀಡುತ್ತದೆ.
6. ದಸರಾ ಗೊಂಬೆ: ಮೈಸೂರಿನ ಚಿತ್ರಣ, ಆನೆ, ಚಾಮುಂಡೇಶ್ವರಿ ತೇರು, ಕುದುರೆ ಅನೇಕ ರೀತಿಯ ಗೊಂಬೆಗಳನ್ನು ಕೂರಿಸುವ ಚೆಂದದ ದೃಶ್ಯವನ್ನು ನಿಮ್ಮ ಮನೆಯಲ್ಲಿಯೇ ಸೃಷ್ಟಿಸಬಹುದು.
7. ಚನ್ನಪಟ್ಟಣದ ಗೊಂಬೆ: ಚನ್ನಪಟ್ಟಣದ ಗೊಂಬೆಗಳು ಎಲ್ಲೆಲ್ಲೂ ಲಭ್ಯವಿರುವುದರಿಂದ ವಿವಿಧ ದೃಶ್ಯಾವಳಿಯ ವಿವಿಧ ಗೊಂಬೆಗಳನ್ನು ಖರೀದಿಸಿದ ಗೊಂಬೆಹಬ್ಬಕ್ಕೆ ಇನ್ನಷ್ಟು ಕಳೆ ತರಬಹುದು.
8. ಮಣ್ಣಿನ ಗೊಂಬೆಗಳೊಂದಿಗೆ ಪ್ಲಾಸ್ಟಿಕ್, ಪೇಪರ್ ಗೊಂಬೆಗಳನ್ನೂ ಬಳಸಬಹುದು. ನಿಮ್ಮ ಮಕ್ಕಳು ಆಟವಾಡಲು ಬಳಸುವ ವಿವಿಧ ಆಟಸಾಮಾನುಗಳನ್ನೂ ಇಡಬಹುದು.
9. ಮಣ್ಣಿನ ಗೊಂಬೆಗಳು ಬೇಗ ಬಣ್ಣ ಕಳೆದುಕೊಳ್ಳುತ್ತವೆ. ಆದ್ದರಿಂದ 2 ದಿನದ ಮುನ್ನ ಆಯಿಲ್ ಪೇಂಟ್ ನಿಂದ ಬಣ್ಣ ಬಳಿದು ಜ್ಯೂಟ್ ಅಥವಾ ಪೇಪರ್ ಬ್ಯಾಗ್ ನಲ್ಲಿ ಸುತ್ತಿಟ್ಟರೆ ಬಣ್ಣ ಬಹುಬೇಗ ಮಾಸುವುದಿಲ್ಲ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications