ಗೊಂಬೆಗಳ ಹಬ್ಬಕ್ಕೆ ನಿಮ್ಮ ಮನೇಲಿ ತಯಾರಿ ಹೀಗಿರಲಿ

ನಮ್ಮ ಸಾಂಸ್ಕ್ರತಿಕ, ಐತಿಹಾಸಿಕ, ಪೌರಾಣಿಕ ಕಥೆಯನ್ನು ಗೊಂಬೆ ಕೂರಿಸುವ ಮೂಲಕ ಮಕ್ಕಳಿಗೆ ಸಾರುವ ಈ ಗೊಂಬೆ ಹಬ್ಬವೆಂದರೆ ಕರ್ನಾಟಕಕ್ಕೆ ವಿಶೇಷ. ಆದರೆ ಮೊದಲ ಬಾರಿ ತಮ್ಮ ಮನೆಯಲ್ಲಿ ಗೊಂಬೆಹಬ್ಬ ಮಾಡುತ್ತಿದ್ದವರಿಗೆ ಉಪಯುಕ್ತವಾಗಲೆಂದು ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
ಗೊಂಬೆ ಹಬ್ಬಕ್ಕೆ ತಯಾರಿ ಹೀಗಿರಲಿ:
1. ಸ್ಥಳಾವಕಾಶ: ಮೊದಲು, ಗೊಂಬೆಗಳನ್ನು ಕೂರಿಸಲು ಸೂಕ್ತ ಸ್ಥಳವನ್ನು ನಿಗದಿಪಡಿಸಿಕೊಳ್ಳಿ. ಮನೆಯ ಹಾಲ್ ನಲ್ಲೇ ಗೊಂಬೆ ಕೂರಿಸದರೆ ಚೆಂದ. ಯಾವ ಕಡೆ ಇಡಬೇಕೆಂದು ಯೋಚಿಸಿ ನಂತರ ಸಾವಕಾಶವಾಗಿರುವಂತೆ ಸ್ಥಳವನ್ನು ಸರಿಮಾಡಿಕೊಳ್ಳಿ.
2. ಟೇಬಲ್: 3 ಉದ್ದದ ಟೇಬಲ್ ಗಳನ್ನು ಹೊಂದಿಸಿಕೊಳ್ಳಿ. ಒಂದಕ್ಕಿಂತ ಒಂದು ಸ್ವಲ್ಪ ಎತ್ತರದ, ಒಟ್ಟು ಮೂರು ಟೇಬಲ್ ಗಳು ಗೊಂಬೆ ಕೂರಿಸಲು ಇರಲಿ. ಈ ಟೇಬಲ್ ಗೆ ಉತ್ತಮ ಬಟ್ಟೆಯನ್ನೂ ಹೊಂದಿಸಿಕೊಳ್ಳಿ. ರೇಷ್ಮೆ ಅಥವಾ ಸ್ವಲ್ಪ ಗಾಢ ಬಣ್ಣದ ಬಟ್ಟೆ ಟೇಬಲ್ ಹೊದಿಕೆಗೆ ಇರಲಿ.
3. ಪಟ್ಟದ ಗೊಂಬೆ: ಗೊಂಬೆ ಹಬ್ಬಕ್ಕೆ ಈ ಗೊಂಬೆಗಳು ಇರಲೇಬೇಕು. ಎತ್ತರದಲ್ಲಿ ಮತ್ತು ಮದ್ಯದಲ್ಲಿ ಪಟ್ಟದ ಗೊಂಬೆ (ಮದುವೆ ಗಂಡು ಮತ್ತು ಹೆಣ್ಣು) ಗೊಂಬೆಗಳಿರಲಿ. ವಿಷ್ಣುವಿನ ದಶಾವತಾರ, ರಾಮಾಯಣ ಪಾತ್ರಧಾರಿಗಳು ಮತ್ತು ಮಹಾಭಾರತದ ಪಾತ್ರಧಾರಿಗಳ ಗೊಂಬೆಗಳು ಮುಖ್ಯವಾಗಿ ಇರಬೇಕು.
4. ಹಳ್ಳಿ ಮತ್ತು ಕಾಡು: ಪೌರಾಣಿಕ ಗೊಂಬೆಯ ಹೊರತಾಗಿ ಹಳ್ಳಿಗಾಡಿನ ಮತ್ತು ಕಾಡಿನ ವಾತಾವರಣವನ್ನು ಗೊಂಬೆ ರೂಪದಲ್ಲಿ ಸೃಷ್ಟಿಸಬಹುದು. ಅನೇಕ ಪ್ರಾಣಿಗಳ ಮತ್ತು ವಿವಿಧ ಭಂಗಿಯ ಗೊಂಬೆಗಳನ್ನು ಅಲಂಕಾರಕ್ಕೆ ಬಳಸಬಹುದು.
5. ರಾಗಿ ಅಥವಾ ಸಾಸಿವೆ ತೆನೆ: ರಾಗಿ ಮತ್ತು ಸಾಸಿವೆ ಬೇಗ ಮೊಳಕೆ ಹೊಡೆದು ಚಿಗುರುವುದರಿಂದ ಈ ತೆನೆಯನ್ನು ಬರಿಸಿ ಟ್ರೇ ಗಳಲ್ಲಿ ಇಟ್ಟು ಹಸಿರು ವಾತಾವರಣ ಸೃಷ್ಟಿಸಬಹುದು. ಇದು ಗೊಂಬೆ ಹಬ್ಬಕ್ಕೆ ನೈಸರ್ಗಿಕ ಕಳೆ ನೀಡುತ್ತದೆ.
6. ದಸರಾ ಗೊಂಬೆ: ಮೈಸೂರಿನ ಚಿತ್ರಣ, ಆನೆ, ಚಾಮುಂಡೇಶ್ವರಿ ತೇರು, ಕುದುರೆ ಅನೇಕ ರೀತಿಯ ಗೊಂಬೆಗಳನ್ನು ಕೂರಿಸುವ ಚೆಂದದ ದೃಶ್ಯವನ್ನು ನಿಮ್ಮ ಮನೆಯಲ್ಲಿಯೇ ಸೃಷ್ಟಿಸಬಹುದು.
7. ಚನ್ನಪಟ್ಟಣದ ಗೊಂಬೆ: ಚನ್ನಪಟ್ಟಣದ ಗೊಂಬೆಗಳು ಎಲ್ಲೆಲ್ಲೂ ಲಭ್ಯವಿರುವುದರಿಂದ ವಿವಿಧ ದೃಶ್ಯಾವಳಿಯ ವಿವಿಧ ಗೊಂಬೆಗಳನ್ನು ಖರೀದಿಸಿದ ಗೊಂಬೆಹಬ್ಬಕ್ಕೆ ಇನ್ನಷ್ಟು ಕಳೆ ತರಬಹುದು.
8. ಮಣ್ಣಿನ ಗೊಂಬೆಗಳೊಂದಿಗೆ ಪ್ಲಾಸ್ಟಿಕ್, ಪೇಪರ್ ಗೊಂಬೆಗಳನ್ನೂ ಬಳಸಬಹುದು. ನಿಮ್ಮ ಮಕ್ಕಳು ಆಟವಾಡಲು ಬಳಸುವ ವಿವಿಧ ಆಟಸಾಮಾನುಗಳನ್ನೂ ಇಡಬಹುದು.
9. ಮಣ್ಣಿನ ಗೊಂಬೆಗಳು ಬೇಗ ಬಣ್ಣ ಕಳೆದುಕೊಳ್ಳುತ್ತವೆ. ಆದ್ದರಿಂದ 2 ದಿನದ ಮುನ್ನ ಆಯಿಲ್ ಪೇಂಟ್ ನಿಂದ ಬಣ್ಣ ಬಳಿದು ಜ್ಯೂಟ್ ಅಥವಾ ಪೇಪರ್ ಬ್ಯಾಗ್ ನಲ್ಲಿ ಸುತ್ತಿಟ್ಟರೆ ಬಣ್ಣ ಬಹುಬೇಗ ಮಾಸುವುದಿಲ್ಲ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications