ಮಿನುಗು ನಕ್ಷತ್ರ ಹೇಳಿತು ಕ್ರಿಸ್ ಮಸ್ ಹಬ್ಬದ ಕಥೆ...
ವರ್ಷದ ಆರಂಭಕ್ಕೆ ಸಂಭ್ರಮದ ಮುನ್ನುಡಿ ಬರೆದಂತೆ ಬರುವುದೇ ಈ ಕ್ರಿಸ್ ಮಸ್ ಹಬ್ಬ. ವರ್ಷದ ಅಂತ್ಯವನ್ನೂ ಸಂಭ್ರಮಿಸುವಂತೆ ಮಾಡುವ ಈ ಹಬ್ಬ ಕ್ರಿಶ್ಚಿಯನ್ ಸಮುದಾಯಕ್ಕೆ ಸಡಗರದ ದಿನ.
ಅಲಂಕೃತಗೊಂಡ ಕ್ರಿಸ್ ಮಸ್ ಮರ, ಸಾಂತಾ ಕ್ಲಾಸ್, ಉಡುಗೊರೆಗಳು, ಭಿನ್ನ ಭಿನ್ನ ಕೇಕ್ ಗಳು, ಕ್ರಿಸ್ ಮಸ್ ಸ್ಟಾರ್ ಗಳು ಈ ಹಬ್ಬವನ್ನು ಎಲ್ಲಾ ಸಮುದಾಯದವರೂ ಇಷ್ಟಪಡುವಂತೆ ಮಾಡುವ ಆಕರ್ಷಣೆಗಳು...
ಅದರಲ್ಲಿ, ಕ್ರಿಸ್ ಮಸ್ ದಿನ ಸಮೀಪಿಸುತ್ತಿದೆ ಎನ್ನುವಾಗಲೇ ಮನೆಗಳ ಮುಂದೆ ಕಾಣಿಸಿಕೊಳ್ಳುವ ಕ್ರಿಸ್ ಮಸ್ ಸ್ಟಾರ್ ಪ್ರಮುಖ ಆಕರ್ಷಣೆ. ಹಬ್ಬಕ್ಕೆ ವಾರದ ಮುನ್ನವೇ ಮನೆಗಳ ಮುಂದೆ ಈ ಸ್ಟಾರ್ ಗಳು ಕಾಣಿಸಿಕೊಳ್ಳುತ್ತವೆ. ಕತ್ತಲಲ್ಲಿ ಹೊಳೆಯುತ್ತಾ ಎಲ್ಲರ ಕಣ್ಸೆಳೆಯುತ್ತವೆ. ಆದರೆ ಇದು ಬರೀ ಕ್ರಿಸ್ ಮಸ್ ಹಬ್ಬದ ಅಲಂಕಾರಕ್ಕಿರುವ ವಸ್ತುವಲ್ಲ. ನಿಮಗೆ ಗೊತ್ತೇ? ಈ ಮಿನುಗು ನಕ್ಷತ್ರದ ಹಿಂದೆ ಅರ್ಥಪೂರ್ಣ ಕಥೆ, ಸಂದೇಶವೂ ಇದೆ. ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ಭರವಸೆಯೂ ಇದೆ.

ಬನ್ನಿ, ಈ ನಕ್ಷತ್ರದ ಹಿಂದಿನ ಕಥೆ ಏನು ನೋಡೋಣ...
ಹೀಗೆ ಒಂದು ದಿನ ರಾತ್ರಿ ಇದ್ದಕ್ಕಿದ್ದಂತೆ ಬಾನಿನಲ್ಲಿ ಪ್ರಖರವಾಗಿ ನಕ್ಷತ್ರವೊಂದು ಮಿನುಗುತ್ತಿತ್ತು. ಬೇರೆ ನಕ್ಷತ್ರಗಳಿಗಿಂತ ಸಾವಿರ ಪಟ್ಟು ಹೆಚ್ಚು ಮಿನುಗುತ್ತಿದ್ದ ಆ ನಕ್ಷತ್ರದ ಬೆಳಕು ಬೆಟ್ಟಗುಡ್ಡವನ್ನೂ ಆವರಿಸಿತ್ತು. ಬೆಟ್ಟದಲ್ಲಿ ಮಲಗಿದ್ದ ಕುರಿಗಾಹಿಗಳಿಗೆ ಈ ಬೆಳಕು ಅಚ್ಚರಿ ತಂದಿತ್ತು. ಇಷ್ಟು ಬೆಳಕನ್ನು ನೀಡುತ್ತಿರುವ ಈ ನಕ್ಷತ್ರ ಏನನ್ನು ಸೂಚಿಸುತ್ತಿದೆ ಎಂದು ಅರೆಕ್ಷಣ ದಿಗಿಲಾದರು. ಆದರೆ ಆ ಕ್ಷಣ ಪ್ರತ್ಯಕ್ಷಗೊಂಡ ದೇವತೆ, "ಹೆದರಬೇಡಿ. ನಿಮಗೆ ಒಳಿತನ್ನು ಮಾಡುವ ಸಂಕೇತವಾಗಿಯೇ ಈ ನಕ್ಷತ್ರ ಕಾಣಿಸಿಕೊಂಡಿದೆ. ಮುಂದೆ ವಿಶ್ವದಲ್ಲಿ ಸಂತಸ, ನೆಮ್ಮದಿ ಮನೆ ಮಾಡಲಿದೆ. ಇದಕ್ಕೆ ಕಾರಣವಾಗುವ ದೇವ ಮಾನವನ ಜನನದ ಸಂಕೇತವೇ ಈ ನಕ್ಷತ್ರವಾಗಿದೆ. ಆತ ಇಡೀ ಜಗತ್ತಿಗೆ ಬೆಳಕು ನೀಡಲಿರುವನು" ಎಂದು ಅಭಯ ನೀಡಿದಳು.

ನಂತರ ಆ ಕುರಿಗಾಹಿಗಳು ಆ ಮಗುವನ್ನು ನೋಡಲು ನಿಶ್ಚಯಿಸಿ ಬೆಟ್ಟ ತೊರೆದರು. ಆ ನಕ್ಷತ್ರದ ಹಾದಿಯನ್ನೇ ಹಿಂಬಾಲಿಸಿ ನಡೆದರು. ಆ ನಕ್ಷತ್ರ ಅವರನ್ನು ಏಸು ಕ್ರಿಸ್ತ ಜನಿಸಿದ್ದ ಬೆತ್ಲೆಹೆಮ್ ಗೆ ಕರೆದುಕೊಂಡು ಹೋಯಿತು. ಆ ಮಗು ಹುಟ್ಟಿದ ಸ್ಥಳವನ್ನು ತೋರಿ, ಎಲ್ಲರ ಮೇಲೂ ಬೆಳಕು ಚೆಲ್ಲಿತು. ಅಷ್ಟರಲ್ಲಾಗಲೇ ಬೆಳಕು ಹರಿದು ನಕ್ಷತ್ರ ಮರೆಯಾಯಿತು.

ಏಸು ಕ್ರಿಸ್ತನ ಜನನವನ್ನು ಸಂಕೇತಿಸುತ್ತಲೇ ಜಗತ್ತಿನಲ್ಲಿ ಬೆಳಕಿನ ಭರವಸೆಯನ್ನೂ ಈ ನಕ್ಷತ್ರ ಪ್ರತಿನಿಧಿಸುತ್ತದೆ. ಹೊಸ ಭರವಸೆ, ಹೊಸ ಆಲೋಚನೆ, ಪ್ರಖರ ಭವಿಷ್ಯವನ್ನು ಈ ನಕ್ಷತ್ರ ಪ್ರತಿನಿಧಿಸುತ್ತದೆ. ಬದುಕಿಗೆ ಹೊಸ ಬೆಳಕಿನ ನಿರೀಕ್ಷೆಯ ಸಂಕೇತವಾಗಿಯೇ ಕ್ರಿಸ್ ಮಸ್ ನಕ್ಷತ್ರವನ್ನು ಹಬ್ಬದಲ್ಲಿ ಬಳಕೆ ಮಾಡಲಾಗುತ್ತದೆ.
-
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
B Khata: ಬಿ ಖಾತಾದಿಂದ ಎ ಖಾತಾ: ಹಳೆಯ ಗೈಡ್ಲೈನ್ ವ್ಯಾಲ್ಯೂ ವಿಧಿಸಲು ವಿಧಾನಸಭೆಯಲ್ಲಿ ಚರ್ಚೆ









Click it and Unblock the Notifications