ಹೆದರಿಕೆ ಬಿಡಿ, ಕ್ರಿಸ್ಮಸ್ನಲ್ಲಿ ವೈನ್ ಜೊತೆ ಚಿಯರ್ಸ್ ಹೇಳಿ
ಮದ್ಯಪಾನದ ವಿರುದ್ಧ ಎಷ್ಟೇ ಹೋರಾಟ ನಡೆಯಲಿ. ವೈನ್ ವಿರುದ್ಧ ಮಾತ್ರ ಯಾರೂ ಬೆರಳು ತೋರಲ್ಲ. "ಇದು ಮದ್ಯವಲ್ಲ ಹಣ್ಣಿನ ರಸ ಅಷ್ಟೇ" ಎಂಬುದು ವೈನ್ ಪ್ರಿಯರು ನೀಡುವ ಸಮರ್ಥನೆ. ಜಗತ್ತಿನಾದ್ಯಂತ ಕ್ರಿಸ್ಮಸ್ ಆಚರಣೆಯಲ್ಲಿಯೂ ವೈನ್ಗೆ ಬಹುಮುಖ್ಯ ಪಾತ್ರ.
ಇವರಿಗೀಗ ವಿಜ್ಞಾನಿಗಳು ಕೂಡ ಬೆನ್ನು ತಟ್ಟಿದ್ದಾರೆ. "ಯಸ್ ಯಸ್, ವೈನ್ ಕುಡಿಯಿರಿ, ಆರೋಗ್ಯವಂತರಾಗಿ" ಎಂದು ಪ್ರೋತ್ಸಾಹಿಸಿದ್ದಾರೆ ಎಂದು ಖ್ಯಾತ ವಿಜ್ಞಾನ ಪತ್ರಿಕೆ ಜರ್ನಲ್ ನೇಚರ್ ಹೇಳಿದೆ. ಏಕೆ ಗೊತ್ತೇ...? ನೋಡೋಣ ಬನ್ನಿ.

ಧಾನ್ಯ ಹಾಗೂ ದ್ರಾಕ್ಷಿ ಹಣ್ಣಿನಲ್ಲಿರುವಂತಹ ಉತ್ಕರ್ಷಣ ನಿರೋಧಕ ಗುಣ ಕೆಂಪು ವೈನ್ನಲ್ಲಿ ಕೂಡ ಕಂಡುಬಂದಿದೆ. ಇದು ಹೃದಯ ರೋಗವನ್ನು ಕಡಿಮೆ ಮಾಡುವುದಷ್ಟೇ ಅಲ್ಲ, ನೆನಪಿನ ಶಕ್ತಿಯನ್ನೂ ಹೆಚ್ಚಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತು. [ದುಬಾರಿ ವೈನ್ ನಂ.1 : ಡಾಮ್ ರೊಮೆನ್ ಕಾಂಟಿ 1997]
ಈಗ ವಿಜ್ಞಾನಿಗಳ ಸಂಶೋಧನೆಯ ಪ್ರಕಾರ ರೆಡ್ ವೈನ್ ಕುಡಿದರೆ ಆನುವಂಶಿಕವಾಗಿ ಕಾಡುವ ದೈಹಿಕ ಸಮಸ್ಯೆಗಳೂ ಗಣನೀಯವಾಗಿ ಕಡಿಮೆಯಾಗುತ್ತದೆ.
ದೇಹದಲ್ಲಿ ನೈಸರ್ಗಿಕವಾಗಿಯೇ ಸೃಷ್ಟಿಯಾಗುವ ಅಮಿನೋ ಆಮ್ಲ ಎಂಬ ಕಿಣ್ವವು TyrRS ಜೊತೆ ಸಂಯೋಜನೆ ಹೊಂದಿ ಟೈರೋಸಿನ್ ಎಂಬ ರಾಸಾಯನಿಕವನ್ನು ದೇಹದಲ್ಲೇ ಉತ್ಪಾದನೆಯಾಗುತ್ತದೆ. ಇದು ಉತ್ಕರ್ಷಣ ನಿರೋಧಕ ಗುಣವನ್ನು ಹೆಚ್ಚಿಸುತ್ತದೆ.
ಬೇಗ ವಯಸ್ಸಾಗಲ್ಲ : ದೇಹಕ್ಕೆ ಒತ್ತಡ ಬಿದ್ದಾಗ ಮತ್ತು ಹಾನಿಯುಂಟಾದಾಗ ಜೀವಕೋಶಕ್ಕೆ ಉಂಟಾಗುವ ನಷ್ಟವನ್ನು ಟೈರೋಸಿನ್ ರಾಸಾಯನಿಕವು ತಡೆಯಬಲ್ಲದು. ಇದರಿಂದ ದೇಹಕ್ಕೆ ಬೇಗ ವಯಸ್ಸಾಗುವುದು ಹಾಗೂ ರೋಗ ಬರುವ ಸಂಭಾವ್ಯತೆ ಕಡಿಮೆಯಾಗುತ್ತದೆ.
ರೆಸ್ವೆರಾಟ್ರೊಲ್ (ಉತ್ಕರ್ಷಣ ನಿರೋಧಕ ಗುಣ ಹೊಂದಿದ) ರಾಸಾಯನಿಕ ಹಾಗೂ TyrRS ಸಂಯೋಗವು ಕ್ಯಾನ್ಸರ್ ವಿರುದ್ಧ ಹೋರಾಡುವ ಜೀನ್ p53 ಅನ್ನೂ ಕಾರ್ಯಗತಗೊಳಿಸುತ್ತದೆ. ಇದು ಟ್ಯೂಮರ್ ಸೇರಿದಂತೆ ಇತರ ವೃದ್ಧಾಪ್ಯದ ರೋಗಗಳನ್ನು ತಡೆಯಬಲ್ಲದು. [ರಾಜಧಾನಿಯಲ್ಲಿ ವೈನ್ ಎಕ್ಸ್ ಪ್ರೆಸ್]
ಈ ಎಲ್ಲ ಕಾರಣಗಳಿಂದ ಓರ್ವ ವ್ಯಕ್ತಿಗೆ ದಿನಕ್ಕೆ ಒಂದೆರಡು ಗ್ಲಾಸ್ ರೆಡ್ ವೈನ್ ನೀಡಿದರೆ ಆತನಲ್ಲಿ ರೆಸ್ವೆರಾಟ್ರೊಲ್ ರಾಸಾಯನಿಕ ಹೆಚ್ಚು ಉತ್ಪತ್ತಿಯಾಗಿ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದಾಗಿ ತಜ್ಞರು ಹೇಳಿದ್ದಾರೆ. [ಬೆಂಗಳೂರಲ್ಲಿ ವೈನ್ ಲೈಬ್ರರಿ, ವೈನ್ ಅಕಾಡೆಮಿ]
ಆದ್ದರಿಂದ ಇನ್ನು ಕ್ರಿಸ್ ಮಸ್ ಆಚರಣೆ ಸಂದರ್ಭ ವೈನ್ ಕುಡಿಯಲು ಹೆದರಬೇಡಿ. ಈ ದಿನ ವೈನ್ ಎಂಬ ಮದ್ಯ ಸೇವಿಸಿದರೆ ಜಠರ ಸಮಸ್ಯೆ ಉಂಟಾಗುತ್ತೆ, ರಕ್ತದೊತ್ತಡ ಹೆಚ್ಚುತ್ತದೆ ಹಾಗೂ ಸಂತಾನೋತ್ಪತ್ತಿ ಸಾಮರ್ಥ್ಯ ಕಡಿಮೆಯಾಗುತ್ತದೆ ಎಂಬ ಹೆದರಿಕೆಯನ್ನು ಪಕ್ಕದಲ್ಲಿಟ್ಟು ಬಿಡಿ. ವಿಜ್ಞಾನಿಗಳ ಹೊಸ ಸಂಶೋಧನೆಯ ವರದಿ ಓದಿಕೊಂಡು ವೈನ್ ಕುಡಿಯುತ್ತ ಜೊತೆಯಲ್ಲಿದ್ದವರಿಗೆ ಚಿಯರ್ಸ್ ಹೇಳಿ...
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications