ಹೆದರಿಕೆ ಬಿಡಿ, ಕ್ರಿಸ್ಮಸ್ನಲ್ಲಿ ವೈನ್ ಜೊತೆ ಚಿಯರ್ಸ್ ಹೇಳಿ
ಮದ್ಯಪಾನದ ವಿರುದ್ಧ ಎಷ್ಟೇ ಹೋರಾಟ ನಡೆಯಲಿ. ವೈನ್ ವಿರುದ್ಧ ಮಾತ್ರ ಯಾರೂ ಬೆರಳು ತೋರಲ್ಲ. "ಇದು ಮದ್ಯವಲ್ಲ ಹಣ್ಣಿನ ರಸ ಅಷ್ಟೇ" ಎಂಬುದು ವೈನ್ ಪ್ರಿಯರು ನೀಡುವ ಸಮರ್ಥನೆ. ಜಗತ್ತಿನಾದ್ಯಂತ ಕ್ರಿಸ್ಮಸ್ ಆಚರಣೆಯಲ್ಲಿಯೂ ವೈನ್ಗೆ ಬಹುಮುಖ್ಯ ಪಾತ್ರ.
ಇವರಿಗೀಗ ವಿಜ್ಞಾನಿಗಳು ಕೂಡ ಬೆನ್ನು ತಟ್ಟಿದ್ದಾರೆ. "ಯಸ್ ಯಸ್, ವೈನ್ ಕುಡಿಯಿರಿ, ಆರೋಗ್ಯವಂತರಾಗಿ" ಎಂದು ಪ್ರೋತ್ಸಾಹಿಸಿದ್ದಾರೆ ಎಂದು ಖ್ಯಾತ ವಿಜ್ಞಾನ ಪತ್ರಿಕೆ ಜರ್ನಲ್ ನೇಚರ್ ಹೇಳಿದೆ. ಏಕೆ ಗೊತ್ತೇ...? ನೋಡೋಣ ಬನ್ನಿ.

ಧಾನ್ಯ ಹಾಗೂ ದ್ರಾಕ್ಷಿ ಹಣ್ಣಿನಲ್ಲಿರುವಂತಹ ಉತ್ಕರ್ಷಣ ನಿರೋಧಕ ಗುಣ ಕೆಂಪು ವೈನ್ನಲ್ಲಿ ಕೂಡ ಕಂಡುಬಂದಿದೆ. ಇದು ಹೃದಯ ರೋಗವನ್ನು ಕಡಿಮೆ ಮಾಡುವುದಷ್ಟೇ ಅಲ್ಲ, ನೆನಪಿನ ಶಕ್ತಿಯನ್ನೂ ಹೆಚ್ಚಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತು. [ದುಬಾರಿ ವೈನ್ ನಂ.1 : ಡಾಮ್ ರೊಮೆನ್ ಕಾಂಟಿ 1997]
ಈಗ ವಿಜ್ಞಾನಿಗಳ ಸಂಶೋಧನೆಯ ಪ್ರಕಾರ ರೆಡ್ ವೈನ್ ಕುಡಿದರೆ ಆನುವಂಶಿಕವಾಗಿ ಕಾಡುವ ದೈಹಿಕ ಸಮಸ್ಯೆಗಳೂ ಗಣನೀಯವಾಗಿ ಕಡಿಮೆಯಾಗುತ್ತದೆ.
ದೇಹದಲ್ಲಿ ನೈಸರ್ಗಿಕವಾಗಿಯೇ ಸೃಷ್ಟಿಯಾಗುವ ಅಮಿನೋ ಆಮ್ಲ ಎಂಬ ಕಿಣ್ವವು TyrRS ಜೊತೆ ಸಂಯೋಜನೆ ಹೊಂದಿ ಟೈರೋಸಿನ್ ಎಂಬ ರಾಸಾಯನಿಕವನ್ನು ದೇಹದಲ್ಲೇ ಉತ್ಪಾದನೆಯಾಗುತ್ತದೆ. ಇದು ಉತ್ಕರ್ಷಣ ನಿರೋಧಕ ಗುಣವನ್ನು ಹೆಚ್ಚಿಸುತ್ತದೆ.
ಬೇಗ ವಯಸ್ಸಾಗಲ್ಲ : ದೇಹಕ್ಕೆ ಒತ್ತಡ ಬಿದ್ದಾಗ ಮತ್ತು ಹಾನಿಯುಂಟಾದಾಗ ಜೀವಕೋಶಕ್ಕೆ ಉಂಟಾಗುವ ನಷ್ಟವನ್ನು ಟೈರೋಸಿನ್ ರಾಸಾಯನಿಕವು ತಡೆಯಬಲ್ಲದು. ಇದರಿಂದ ದೇಹಕ್ಕೆ ಬೇಗ ವಯಸ್ಸಾಗುವುದು ಹಾಗೂ ರೋಗ ಬರುವ ಸಂಭಾವ್ಯತೆ ಕಡಿಮೆಯಾಗುತ್ತದೆ.
ರೆಸ್ವೆರಾಟ್ರೊಲ್ (ಉತ್ಕರ್ಷಣ ನಿರೋಧಕ ಗುಣ ಹೊಂದಿದ) ರಾಸಾಯನಿಕ ಹಾಗೂ TyrRS ಸಂಯೋಗವು ಕ್ಯಾನ್ಸರ್ ವಿರುದ್ಧ ಹೋರಾಡುವ ಜೀನ್ p53 ಅನ್ನೂ ಕಾರ್ಯಗತಗೊಳಿಸುತ್ತದೆ. ಇದು ಟ್ಯೂಮರ್ ಸೇರಿದಂತೆ ಇತರ ವೃದ್ಧಾಪ್ಯದ ರೋಗಗಳನ್ನು ತಡೆಯಬಲ್ಲದು. [ರಾಜಧಾನಿಯಲ್ಲಿ ವೈನ್ ಎಕ್ಸ್ ಪ್ರೆಸ್]
ಈ ಎಲ್ಲ ಕಾರಣಗಳಿಂದ ಓರ್ವ ವ್ಯಕ್ತಿಗೆ ದಿನಕ್ಕೆ ಒಂದೆರಡು ಗ್ಲಾಸ್ ರೆಡ್ ವೈನ್ ನೀಡಿದರೆ ಆತನಲ್ಲಿ ರೆಸ್ವೆರಾಟ್ರೊಲ್ ರಾಸಾಯನಿಕ ಹೆಚ್ಚು ಉತ್ಪತ್ತಿಯಾಗಿ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದಾಗಿ ತಜ್ಞರು ಹೇಳಿದ್ದಾರೆ. [ಬೆಂಗಳೂರಲ್ಲಿ ವೈನ್ ಲೈಬ್ರರಿ, ವೈನ್ ಅಕಾಡೆಮಿ]
ಆದ್ದರಿಂದ ಇನ್ನು ಕ್ರಿಸ್ ಮಸ್ ಆಚರಣೆ ಸಂದರ್ಭ ವೈನ್ ಕುಡಿಯಲು ಹೆದರಬೇಡಿ. ಈ ದಿನ ವೈನ್ ಎಂಬ ಮದ್ಯ ಸೇವಿಸಿದರೆ ಜಠರ ಸಮಸ್ಯೆ ಉಂಟಾಗುತ್ತೆ, ರಕ್ತದೊತ್ತಡ ಹೆಚ್ಚುತ್ತದೆ ಹಾಗೂ ಸಂತಾನೋತ್ಪತ್ತಿ ಸಾಮರ್ಥ್ಯ ಕಡಿಮೆಯಾಗುತ್ತದೆ ಎಂಬ ಹೆದರಿಕೆಯನ್ನು ಪಕ್ಕದಲ್ಲಿಟ್ಟು ಬಿಡಿ. ವಿಜ್ಞಾನಿಗಳ ಹೊಸ ಸಂಶೋಧನೆಯ ವರದಿ ಓದಿಕೊಂಡು ವೈನ್ ಕುಡಿಯುತ್ತ ಜೊತೆಯಲ್ಲಿದ್ದವರಿಗೆ ಚಿಯರ್ಸ್ ಹೇಳಿ...
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications