Get Updates
Get notified of breaking news, exclusive insights, and must-see stories!

ವಿಡಿಯೋ: ಸೇತುವೆಯಿಂದ ಗಂಗೆಗೆ ಹಾರಿದ ಅಜ್ಜಿ ನೃತ್ಯದಲ್ಲೂ ನಂಬರ್ ಒನ್

ಹರಿದ್ವಾರ ಜುಲೈ 1: ಪಾಪಗಳನ್ನು ತೊಡೆದುಹಾಕುತ್ತದೆ ಎಂಬ ನಂಬಿಕೆಯಿಂದ ಹಿಂದೂ ಧರ್ಮದ ಅನುಯಾಯಿಗಳು ಗಂಗಾನದಿಯಲ್ಲಿ ಸ್ನಾನ ಮಾಡುತ್ತಾರೆ. ಮಗುವಿನಿಂದ ವೃದ್ಧಾಪ್ಯದವರೆಗೆ ಎಲ್ಲರೂ ಗಂಗಾಸ್ನಾನವನ್ನು ಶ್ರೇಷ್ಟವೆಂದು ಪರಿಗಣಿಸುತ್ತಾರೆ. ಈ ದಿನಗಳಲ್ಲಿ ಸಾವಿರಾರು ಭಕ್ತರು ಋಷಿಕೇಶ-ಹರಿದ್ವಾರದಲ್ಲಿ ಜಮಾಯಿಸಿದ್ದು ಜಾತ್ರೆಯಂತಾಗಿದೆ. ಇದರ ಮಧ್ಯೆ 70 ವರ್ಷದ ಅಜ್ಜಿ ಕೂಡ ಗಂಗಾನದಿಯಲ್ಲಿ ಸ್ನಾನ ಮಾಡಲು ಹಾರಿದ್ದಾಳೆ. ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗಂಗಾನದಿಯ ಸೇತುವೆಯಿಂದ ಅಜ್ಜಿ ಜಿಗಿಯುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಜಿಗಿದ ನಂತರ ಅವಳು ನೀರಿನಲ್ಲಿ ಈಜಲು ಪ್ರಾರಂಭಿಸುತ್ತಾಳೆ. ಈ ವೇಳೆ ಅವರು ಸ್ನಾನ ಕೂಡ ಮಾಡುತ್ತಾರೆ. ಹೀಗೆ ಸಾಹಸ ಮಾಡಿದ ಅಜ್ಜಿ ಹರಿಯಾಣದ ಬಂದೇಪುರ ಗ್ರಾಮದ ನಿವಾಸಿ ಓಂವತಿ. ಈ ವಿಡಿಯೋ ನೋಡುತ್ತಿದ್ದರೆ ಅಜ್ಜಿ ನಿಜವಾಗಲೂ ನೀರಿಗೆ ಇಚ್ಚೆಯಿಂದ ಹಾರುತ್ತಿದ್ದಾರಾ ಎನ್ನುವ ಭಯ ಉಂಟಾಗುತ್ತದೆ. ಈ ಅಜ್ಜಿ ಸಲಿಸಾಗಿ ಗಂಗೆಗೆ ಹಾರಿದ್ದಾಳೆ. ಈಜು ಪಟು ಸಾಮಾರ್ಥ್ಯ ಕಂಡು ಜನ ಬೆರಗಾಗಿದ್ದಾರೆ. ಅಜ್ಜಿ ಸ್ಟಂಟ್ ಮಾಡುತ್ತಿರುವುದು ಕಂಡು ಹಲವರು ಕಾಮೆಂಟ್ ಮಾಡುತ್ತಿದ್ದಾರೆ.

ಚರ್ಚೆಗೆ ಗ್ರಾಸವಾದ ಅಜ್ಜಿ ಸ್ಟಂಟ್

ಚರ್ಚೆಗೆ ಗ್ರಾಸವಾದ ಅಜ್ಜಿ ಸ್ಟಂಟ್

ಈ ವಿಡಿಯೋ ಜನರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಟ್ವಿಟ್ಟರ್‌ನಲ್ಲಿ ವಿಡಿಯೋ ಕುರಿತು ಪ್ರತಿಕ್ರಿಯಿಸಿದ ಕೆಲವರು, ಈ ಅಜ್ಜಿಗೆ ಸುಮಾರು 70 ವರ್ಷ ವಯಸ್ಸಾಗಿದೆ ಎಂದು ಹೇಳಿದ್ದಾರೆ. ಸ್ನೇಹ್ ಗಹಲ್ಯಾನ್ ಎಂಬ ಬಳಕೆದಾರರು ಹೀಗೆ ಬರೆದಿದ್ದಾರೆ, "ಈ ವಯಸ್ಸಿನಲ್ಲಿ ಒಬ್ಬರು ನಡೆಯಲು ಕಷ್ಟವಾಗುತ್ತಾರೆ. ಆದರೆ, ಅಜ್ಜಿ ಸ್ವತಃ ಸೇತುವೆಯಿಂದ ಹಾರಿ ಗಂಗಾನದಿಯಲ್ಲಿ ಸ್ನಾನ ಮಾಡಿದ್ದಾರೆ. 70 ನೇ ವಯಸ್ಸಿನಲ್ಲಿ ಹಲವರು ಇಂತಹ ಸಾಹಸಗಳನ್ನು ಮಾಡಲು ಯೋಚಿಸುವುದಿಲ್ಲ. ಈ ಅಜ್ಜಿ ಅದನ್ನು ಸಾಧ್ಯವಾಗಿಸಿದ್ದಾರೆ" ಎಂದು ಬರೆದಿದ್ದಾರೆ.

ಸಹಾಯವಿಲ್ಲದೆ ದಡ ತಲುಪುವಲ್ಲಿ ಅಜ್ಜಿ

ನೀರಿನ ಮಟ್ಟ ಹೆಚ್ಚಿದ್ದರೂ ಯಾರ ಸಹಾಯವಿಲ್ಲದೆ ಸುರಕ್ಷಿತವಾಗಿ ನದಿಯ ದಡ ತಲುಪುವಲ್ಲಿ ಅಜ್ಜಿ ಯಶಸ್ವಿಯಾಗಿದ್ದಾರೆ. ಅವರನ್ನು ಅದ್ಭುತ ಈಜುಗಾರ್ತಿ ಎಂದು ಪ್ರಶಂಸಿಸಲಾಗುತ್ತಿದೆ. ಅವರು ಚಿಕ್ಕಂದಿನಿಂದಲೂ ಅದರಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಅಜ್ಜಿ ಡ್ಯಾನ್ಸ್ಗೆ ನೆಟ್ಟಿಗರು ಫಿದಾ

ಹರಿಯಾಣದ ಬಂದೇಪುರ ಗ್ರಾಮದ ನಿವಾಸಿ ಓಂವತಿ ನೃತ್ಯದಲ್ಲಿ ಕೂಡ ಒಲವು ಹೊಂದಿದ್ದಾರೆ. ಅವರು ನೃತ್ಯ ಮಾಡುವ ವಿಡಿಯೋ ಈ ವೇಳೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಬಗ್ಗೆ ಮಾತನಾಡಿದ ಅಜ್ಜಿ,' ಬಾಲ್ಯದಲ್ಲಿ ನದಿ, ಕೊಳಗಳಲ್ಲಿ ಈಜಿದ ಫಲವನ್ನು ನಾನು ಈಗಲೂ ಪಡೆಯುತ್ತಿದ್ದೇನೆ' ಎನ್ನುತ್ತಾರೆ. ಜೊತೆಗೆ ನೃತ್ಯವೂ ನನಗೆ ಅಚ್ಚುಮೆಚ್ಚು. 'ಕಾರ್ಯಕ್ರಮಗಳಲ್ಲಿ ನೃತ್ಯ ಮಾಡುವುದು ನನಗೆ ಖುಷಿ ನೀಡುತ್ತದೆ' ಎಂದು ಅಜ್ಜಿ ಹೇಳಿದ್ದಾರೆ.

ಗಂಗೆಗೆ ಹಾರಿದ ಅಜ್ಜಿ

ಗಂಗೆಗೆ ಹಾರಿದ ಅಜ್ಜಿ

ವಿಷಯ ಪೊಲೀಸರಿಗೂ ತಲುಪಿದೆ. ಗಂಗಾನದಿಯಲ್ಲಿ ಅಜ್ಜಿ ಹಾರಿದ ಬಗ್ಗೆ ಹರಿದ್ವಾರದ ಎಸ್‌ಎಸ್‌ಪಿ ತನಿಖೆಯನ್ನು ಸ್ಥಾಪಿಸಿದ್ದಾರೆ ಎಂದು ವರದಿಯಾಗಿದೆ. ಈ ರೀತಿ ಮಾಡುವುದು ಸರಿಯಲ್ಲ ಎಂದು ಹರಿದ್ವಾರ ಎಸ್‌ಎಸ್‌ಪಿ ಯೋಗೇಂದ್ರ ರಾವತ್ ಹೇಳಿದ್ದಾರೆ. ಮುದುಕರ ಸೇತುವೆಯಿಂದ ಗಂಗೆಗೆ ಹಾರುವುದು ಕಾನೂನಿನ ಪ್ರಕಾರ ಅಪರಾಧ. ಈ ಬಗ್ಗೆ ತನಿಖೆ ನಡೆಸುತ್ತೇವೆ. ಈ ವೇಳೆ ಗಂಗಾ ಸೇತುವೆ ಮೇಲೆ ಯಾವ ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿದ್ದರು ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಈ ಸಂಬಂಧ ಹರ್ ಕಿ ಪೈಡಿ ಚೌಕಿಯಿಂದ ವರದಿ ಕೇಳಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+