ಕೇಂದ್ರ ಬಜೆಟ್ ಘನತೆ ಉಳಿಸಿಕೊಂಡಿಲ್ಲ: ಷೇರುಪೇಟೆ ತಜ್ಞ ಕೆಜಿ ಕೃಪಾಲ್
ಒಂದು ಸಮಯ ಇತ್ತು. ಬಜೆಟ್ ಅಂದರೆ ಅದಕ್ಕಾಗಿಯೇ ಕುತೂಹಲದಿಂದ ಕಾಯಬೇಕಿತ್ತು. ಆದರೆ ಈಗ ಬಜೆಟ್ ತನ್ನ ಘನತೆಯನ್ನು ಉಳಿಸಿಕೊಂಡಿಲ್ಲ. ಏಕೆಂದರೆ ಆರ್ಥಿಕ ನೀತಿಗಳನ್ನು ಯಾವಾಗೆಂದರೆ ಆಗ ಘೋಷಣೆ ಮಾಡುತ್ತಾರೆ. ಬದಲಾವಣೆಯೇ ವಿಪರೀತ ಆಗಿದ್ದು, ಈ ಬಜೆಟ್ ಬಗ್ಗೆ ಒಂದೇ ಮಾತಲ್ಲಿ ಹೇಳಬೇಕೆಂದರೆ, ಹೆಸರು ಸಂಪತ್ತಯ್ಯ, ಕಿಸೆಯಲ್ಲಿ ಕಾಸಿಲ್ಲಯ್ಯ ಎನ್ನಬಹುದು.
ಉದಾಹರಣೆಗೆ ಹೇಳ್ತೀನಿ, ಪೆಟ್ರೋಲ್- ಡೀಸೆಲ್ ನ ಬೆಲೆಯಲ್ಲಿ ಎರಡು ರುಪಾಯಿ ಕಡಿಮೆ ಮಾಡಿದ್ದಾರೆ. ಆದರೆ ಒಂದು ಪರ್ಸೆಂಟ್ ಸೆಸ್ ಏರಿಕೆ ಮಾಡಿರುವುದರಿಂದ ಇದೊಂದರಲ್ಲೇನೋ ಉಳಿಯಿತು ಅಂದುಕೊಳ್ಳುವಷ್ಟರಲ್ಲಿ ಎಲ್ಲಕ್ಕೂ ಒಂದಿಷ್ಟು ಹೆಚ್ಚು ಬೆಲೆ ತೆರಲೇ ಬೇಕಾಗುತ್ತದೆ.
ಹಾಗಂತ ಈ ಬಜೆಟ್ ಏನೇನೂ ಸರಿಯಲ್ಲ ಅಂತ ಹೇಳೋಕ್ಕಾಗಲ್ಲ. ಏಕೆಂದರೆ, ಒಂದು ಕುಟುಂಬಕ್ಕೆ ವರ್ಷಕ್ಕೆ ಐದು ಲಕ್ಷ ರುಪಾಯಿವರೆಗೆ ವಿಮಾ ಯೋಜನೆ, ಕೃಷಿಗೆ ನೀಡಿದ ಒತ್ತು, ವೇತನದಾರರಿಗೆ ಹೆಚ್ಚಿಸಿದ ಸ್ಟ್ಯಾಂಡರ್ಡ್ ಡಿಡಿಕ್ಷನ್ ಇತರ ಅಂಶಗಳನ್ನು ಗಮನಿಸುವಾಗ ಎಲ್ಲ ವರ್ಗದವರನ್ನು ತೃಪ್ತಿ ಪಡಿಸುವ ಸಲುವಾಗಿಯೇ ಮಂಡಿಸಿದ ಬಜೆಟ್ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ.

ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ಸ್ ಹಾಕಬಾರದಿತ್ತು
ಷೇರು ಮಾರುಕಟ್ಟೆ ವ್ಯವಹಾರದಲ್ಲಿನ ನನ್ನ ತಿಳಿವಳಿಕೆಯ ಹಿನ್ನೆಲೆಯಿಂದ ಈ ಮಾತು ಹೇಳ್ತಿದ್ದೀನಿ. ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ಸ್ ಅಂತ ಶೇ 10ರಷ್ಟು ತೆರಿಗೆಯನ್ನು ಜಾರಿಗೆ ತರಬಾರದಿತ್ತು. ಏಕೆಂದರೆ, ಸದ್ಯಕ್ಕೆ ಒಂದು ವರ್ಷದೊಳಗೆ ಮಾರಾಟ ಮಾಡಿದ ಷೇರಿನ ಲಾಭದ ಮೇಲೆ ಶೇ ಹದಿನೈದರಷ್ಟು ತೆರಿಗೆ ಇತ್ತು. ಆ ನಂತರದ ಅವಧಿಗೆ ಮಾರಾಟ ಮಾಡಿದ ಷೇರಿನ ಲಾಭಕ್ಕೆ ಯಾವುದೇ ತೆರಿಗೆ ಇರಲಿಲ್ಲ. ಈಗ ಒಂದು ವರ್ಷದ ನಂತರ ಮಾರಿ, ಪಡೆದ ಲಾಭಕ್ಕೆ ಶೇ ಹತ್ತರಷ್ಟು ತೆರಿಗೆ ಹಾಕುವುದರಿಂದ ದೀರ್ಘಕಾಲೀನ ಹೂಡಿಕೆ ಕಾರಣಕ್ಕೆ ಷೇರಿನಲ್ಲಿ ಹಣ ತೊಡಗಿಸುವವರ ಸಂಖ್ಯೆ ಕಡಿಮೆ ಆಗುವ ಸಾಧ್ಯತೆ ಇದೆ.

ಹಿರಿಯ ನಾಗರಿಕರಿಗೆ ಅನುಕೂಲ
ಇನ್ನು ಆದಾಯ ತೆರಿಗೆ ವಿಚಾರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲದಿರುವುದು ಸ್ಥಿರತೆ ದೃಷ್ಟಿಯಿಂದಲೇ ಇರಬಹುದು. ಆದರೆ ಸ್ಟ್ಯಾಂಡರ್ಡ್ ಡಿಡಕ್ಷನ್ ನ ಸ್ವಲ್ಪ ಮಟ್ಟಿಗೆ ಹೆಚ್ಚು ಮಾಡಿದ್ದಾರೆ. ಇನ್ನು ಹಿರಿಯ ನಾಗರಿಕರಿಗೆ ಅನುಕೂಲ ಮಾಡಿಕೊಡಲಾಗಿದೆ.

ಬಹುತೇಕ ತೆರಿಗೆ ಬಜೆಟ್ ವ್ಯಾಪ್ತಿಯ ಹೊರಗಿವೆ
ಈ ಹಿಂದೆ ವ್ಯಾಟ್ ಮತ್ತೊಂದು ಎಂದು ನಾನಾ ಬಗೆಯಲ್ಲಿ ತೆರಿಗೆ ಇರುತ್ತಿದ್ದವು. ಅವುಗಳನ್ನೆಲ್ಲ ಒಗ್ಗೂಡಿಸಿ ಜಿಎಸ್ ಟಿ ಅಂತ ಮಾಡಿದ್ದಾರೆ. ಜಿಎಸ್ ಟಿ ಬಂದ ಮೇಲಿನ ಮೊದಲ ಬಜೆಟ್ ಇದು. ಎಷ್ಟು ಅತ್ಯಲ್ಪ ಅವಧಿಯ ಬಜೆಟ್ ಇದು ಎಂಬುದು ಗೊತ್ತಾಗುತ್ತದೆ. ಏಕೆಂದರೆ ಬಹುತೇಕ ತೆರಿಗೆಗಳು ಈಗಾಗಲೇ ಬಜೆಟ್ ನ ವ್ಯಾಪ್ತಿಯ ಹೊರಗೆ ಇವೆ.

ಎಲ್ಲ ವರ್ಗವನ್ನೂ ತಲುಪುವ ಯತ್ನ
ಒಟ್ಟಾರೆ ಈ ಬಜೆಟ್ ನಲ್ಲಿ ಎಲ್ಲ ವರ್ಗದ ಜನರನ್ನೂ ತಲುಪುವ ಪ್ರಯತ್ನ ಮಾಡಿರುವುದಂತೂ ಸ್ಪಷ್ಟ. ಆದರೆ ಮುಂಚಿನಂತೆ ಈಗ ಬಜೆಟ್ ಗೆ ಹೆಚ್ಚಿನ ಮಹತ್ವ ಇಲ್ಲ. ಅದರಾಚೆಗೂ ಆರ್ಥಿಕ ನೀತಿ ನಿರೂಪಣೆಗಳು ಆಗುತ್ತಿವೆ. ಬದಲಾವಣೆಗಳು ತೀರಾ ವೇಗವಾಗಿ ಆಗುತ್ತಿರುವುದರಿಂದ ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವೂ ಇಲ್ಲ.
-
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ












Click it and Unblock the Notifications