ಕೇಂದ್ರ ಬಜೆಟ್ ಘನತೆ ಉಳಿಸಿಕೊಂಡಿಲ್ಲ: ಷೇರುಪೇಟೆ ತಜ್ಞ ಕೆಜಿ ಕೃಪಾಲ್
ಒಂದು ಸಮಯ ಇತ್ತು. ಬಜೆಟ್ ಅಂದರೆ ಅದಕ್ಕಾಗಿಯೇ ಕುತೂಹಲದಿಂದ ಕಾಯಬೇಕಿತ್ತು. ಆದರೆ ಈಗ ಬಜೆಟ್ ತನ್ನ ಘನತೆಯನ್ನು ಉಳಿಸಿಕೊಂಡಿಲ್ಲ. ಏಕೆಂದರೆ ಆರ್ಥಿಕ ನೀತಿಗಳನ್ನು ಯಾವಾಗೆಂದರೆ ಆಗ ಘೋಷಣೆ ಮಾಡುತ್ತಾರೆ. ಬದಲಾವಣೆಯೇ ವಿಪರೀತ ಆಗಿದ್ದು, ಈ ಬಜೆಟ್ ಬಗ್ಗೆ ಒಂದೇ ಮಾತಲ್ಲಿ ಹೇಳಬೇಕೆಂದರೆ, ಹೆಸರು ಸಂಪತ್ತಯ್ಯ, ಕಿಸೆಯಲ್ಲಿ ಕಾಸಿಲ್ಲಯ್ಯ ಎನ್ನಬಹುದು.
ಉದಾಹರಣೆಗೆ ಹೇಳ್ತೀನಿ, ಪೆಟ್ರೋಲ್- ಡೀಸೆಲ್ ನ ಬೆಲೆಯಲ್ಲಿ ಎರಡು ರುಪಾಯಿ ಕಡಿಮೆ ಮಾಡಿದ್ದಾರೆ. ಆದರೆ ಒಂದು ಪರ್ಸೆಂಟ್ ಸೆಸ್ ಏರಿಕೆ ಮಾಡಿರುವುದರಿಂದ ಇದೊಂದರಲ್ಲೇನೋ ಉಳಿಯಿತು ಅಂದುಕೊಳ್ಳುವಷ್ಟರಲ್ಲಿ ಎಲ್ಲಕ್ಕೂ ಒಂದಿಷ್ಟು ಹೆಚ್ಚು ಬೆಲೆ ತೆರಲೇ ಬೇಕಾಗುತ್ತದೆ.
ಹಾಗಂತ ಈ ಬಜೆಟ್ ಏನೇನೂ ಸರಿಯಲ್ಲ ಅಂತ ಹೇಳೋಕ್ಕಾಗಲ್ಲ. ಏಕೆಂದರೆ, ಒಂದು ಕುಟುಂಬಕ್ಕೆ ವರ್ಷಕ್ಕೆ ಐದು ಲಕ್ಷ ರುಪಾಯಿವರೆಗೆ ವಿಮಾ ಯೋಜನೆ, ಕೃಷಿಗೆ ನೀಡಿದ ಒತ್ತು, ವೇತನದಾರರಿಗೆ ಹೆಚ್ಚಿಸಿದ ಸ್ಟ್ಯಾಂಡರ್ಡ್ ಡಿಡಿಕ್ಷನ್ ಇತರ ಅಂಶಗಳನ್ನು ಗಮನಿಸುವಾಗ ಎಲ್ಲ ವರ್ಗದವರನ್ನು ತೃಪ್ತಿ ಪಡಿಸುವ ಸಲುವಾಗಿಯೇ ಮಂಡಿಸಿದ ಬಜೆಟ್ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ.

ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ಸ್ ಹಾಕಬಾರದಿತ್ತು
ಷೇರು ಮಾರುಕಟ್ಟೆ ವ್ಯವಹಾರದಲ್ಲಿನ ನನ್ನ ತಿಳಿವಳಿಕೆಯ ಹಿನ್ನೆಲೆಯಿಂದ ಈ ಮಾತು ಹೇಳ್ತಿದ್ದೀನಿ. ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ಸ್ ಅಂತ ಶೇ 10ರಷ್ಟು ತೆರಿಗೆಯನ್ನು ಜಾರಿಗೆ ತರಬಾರದಿತ್ತು. ಏಕೆಂದರೆ, ಸದ್ಯಕ್ಕೆ ಒಂದು ವರ್ಷದೊಳಗೆ ಮಾರಾಟ ಮಾಡಿದ ಷೇರಿನ ಲಾಭದ ಮೇಲೆ ಶೇ ಹದಿನೈದರಷ್ಟು ತೆರಿಗೆ ಇತ್ತು. ಆ ನಂತರದ ಅವಧಿಗೆ ಮಾರಾಟ ಮಾಡಿದ ಷೇರಿನ ಲಾಭಕ್ಕೆ ಯಾವುದೇ ತೆರಿಗೆ ಇರಲಿಲ್ಲ. ಈಗ ಒಂದು ವರ್ಷದ ನಂತರ ಮಾರಿ, ಪಡೆದ ಲಾಭಕ್ಕೆ ಶೇ ಹತ್ತರಷ್ಟು ತೆರಿಗೆ ಹಾಕುವುದರಿಂದ ದೀರ್ಘಕಾಲೀನ ಹೂಡಿಕೆ ಕಾರಣಕ್ಕೆ ಷೇರಿನಲ್ಲಿ ಹಣ ತೊಡಗಿಸುವವರ ಸಂಖ್ಯೆ ಕಡಿಮೆ ಆಗುವ ಸಾಧ್ಯತೆ ಇದೆ.

ಹಿರಿಯ ನಾಗರಿಕರಿಗೆ ಅನುಕೂಲ
ಇನ್ನು ಆದಾಯ ತೆರಿಗೆ ವಿಚಾರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲದಿರುವುದು ಸ್ಥಿರತೆ ದೃಷ್ಟಿಯಿಂದಲೇ ಇರಬಹುದು. ಆದರೆ ಸ್ಟ್ಯಾಂಡರ್ಡ್ ಡಿಡಕ್ಷನ್ ನ ಸ್ವಲ್ಪ ಮಟ್ಟಿಗೆ ಹೆಚ್ಚು ಮಾಡಿದ್ದಾರೆ. ಇನ್ನು ಹಿರಿಯ ನಾಗರಿಕರಿಗೆ ಅನುಕೂಲ ಮಾಡಿಕೊಡಲಾಗಿದೆ.

ಬಹುತೇಕ ತೆರಿಗೆ ಬಜೆಟ್ ವ್ಯಾಪ್ತಿಯ ಹೊರಗಿವೆ
ಈ ಹಿಂದೆ ವ್ಯಾಟ್ ಮತ್ತೊಂದು ಎಂದು ನಾನಾ ಬಗೆಯಲ್ಲಿ ತೆರಿಗೆ ಇರುತ್ತಿದ್ದವು. ಅವುಗಳನ್ನೆಲ್ಲ ಒಗ್ಗೂಡಿಸಿ ಜಿಎಸ್ ಟಿ ಅಂತ ಮಾಡಿದ್ದಾರೆ. ಜಿಎಸ್ ಟಿ ಬಂದ ಮೇಲಿನ ಮೊದಲ ಬಜೆಟ್ ಇದು. ಎಷ್ಟು ಅತ್ಯಲ್ಪ ಅವಧಿಯ ಬಜೆಟ್ ಇದು ಎಂಬುದು ಗೊತ್ತಾಗುತ್ತದೆ. ಏಕೆಂದರೆ ಬಹುತೇಕ ತೆರಿಗೆಗಳು ಈಗಾಗಲೇ ಬಜೆಟ್ ನ ವ್ಯಾಪ್ತಿಯ ಹೊರಗೆ ಇವೆ.

ಎಲ್ಲ ವರ್ಗವನ್ನೂ ತಲುಪುವ ಯತ್ನ
ಒಟ್ಟಾರೆ ಈ ಬಜೆಟ್ ನಲ್ಲಿ ಎಲ್ಲ ವರ್ಗದ ಜನರನ್ನೂ ತಲುಪುವ ಪ್ರಯತ್ನ ಮಾಡಿರುವುದಂತೂ ಸ್ಪಷ್ಟ. ಆದರೆ ಮುಂಚಿನಂತೆ ಈಗ ಬಜೆಟ್ ಗೆ ಹೆಚ್ಚಿನ ಮಹತ್ವ ಇಲ್ಲ. ಅದರಾಚೆಗೂ ಆರ್ಥಿಕ ನೀತಿ ನಿರೂಪಣೆಗಳು ಆಗುತ್ತಿವೆ. ಬದಲಾವಣೆಗಳು ತೀರಾ ವೇಗವಾಗಿ ಆಗುತ್ತಿರುವುದರಿಂದ ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವೂ ಇಲ್ಲ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications