ವಿಡಿಯೋ: ಬುಲ್ಡೋಜರ್ನಲ್ಲಿ ಕುಳಿತು ಗ್ರ್ಯಾಂಡ್ ಎಂಟ್ರಿ ವೇಳೆ ಕೆಳಗೆ ಬಿದ್ದ ಕಪಲ್ಸ್
ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುವ ಬಹುತೇಕ ವಿಡಿಯೋಗಳು ನೋಡುಗರ ಗಮನ ಸೆಳೆಯುವಂತಿರುತ್ತವೆ. ಕೆಲವು ವಿಡಿಯೋಗಳು ತಿಳುವಳಿಕೆಯನ್ನೂ ನೀಡುತ್ತವೆ. ಕೆಲವು ವಿಡಿಯೋಗಳು ಹಾಸ್ಯದಾಯಕವಾಗಿರುತ್ತವೆ. ಇನ್ನೂ ಕೆಲವು ನೋಡುಗರಿಗೆ ನಗೆ ತರಿಸಿದರೆ ವಿಡಿಯೋದಲ್ಲಿದ್ದವರಿಗೆ ಪ್ರಾಣಕ್ಕೆ ಕುತ್ತು ತಂದಿರುತ್ತವೆ. ಇಂಥ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದನ್ನು ನೋಡಿದವರು ಹಾಸ್ಯಾಸ್ಪದವಾಗಿ ಕಾಮೆಂಟ್ ಮಾಡಿದರೆ, ಇನ್ನೂ ಕೆಲವರು ಕಳವಳ ವ್ಯಕ್ತಪಡಿಸಿದ್ದಾರೆ. ಅದ್ದೂರಿ ಮದುವೆಯಲ್ಲಿ ಭರ್ಜರಿ ಎಂಟ್ರಿ ಕೊಡಲು ಹೋಗಿ ಬುಲ್ಡೋಜರ್ನಿಂದ ವಧು-ವರ ಇಬ್ಬರೂ ಕೆಳಗೆ ಬಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಅದು ಅದ್ದೂರಿ ಮದುವೆ ಸಮಾರಂಭ. ಮದುವೆ ಅದ್ದೂರಿಯಾಗಿರಬೇಕಾದ್ರೆ ಇನ್ನೂ ವಧು-ವರ ಕೂಡ ನೆರೆದವರೆಲ್ಲರ ಕಂಗೊಳಿಸುವಂತೆ ಉಡುಪು ಧರಿಸಿದ್ದರು. ವಧು ಸುಂದರವಾದ ಬಿಳಿ ಗೌನ್ ಧರಿಸಿದ್ದರೆ, ವರನು ಬ್ಲಾಕ್ ಸೂಟ್ ಧರಿಸಿದ್ದಾರೆ. ಜೊತೆಗೆ ಈ ಸಮಾರಂಭದಲ್ಲಿ ಇಬ್ಬರ ಗ್ರ್ಯಾಂಡ್ ಎಂಟ್ರಿ ಕೂಡ ನಡೆದಿದೆ. ಅದು ಹೇಗೆಂದರೆ, ಅಲಂಕಾರದಿಂದ ಆಕರ್ಷಕವಾಗಿದ್ದ ಬುಲ್ಡೋಜರ್ನಲ್ಲಿ ಕುಳಿತ ವಧು ವರ ಮದುವೆ ಸಮಾರಂಭಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡುವುದು. ಆ ಕ್ಷಣವನ್ನು ಕಣ್ತುಂಬಿಕೊಳ್ಳಲು ನೆರೆದೆವರೆಲ್ಲಾ ಹುಬ್ಬೇರಿಸಿ ತಲೆ ಎತ್ತಿ ನೋಡುತ್ತಿದ್ದಾರೆ.
ಕೆಲವರು ತಮ್ಮ ಕೈಯಲ್ಲಿದ್ದ ಮೊಬೈಲ್ ಕ್ಯಾಮರಾ ತೆಗೆದು ಈ ಸುಂದರವಾದ ಸಮಯವನ್ನು ಸೆರೆ ಹಿಡಿಯುತ್ತಿದ್ದಾರೆ. ಬುಲ್ಡೋಜರ್ನಲ್ಲಿ ಕುಳಿತ ವಧು-ವರ ಇಬ್ಬರೂ ಸಂತೋಷದಿಂದ ತಮ್ಮವರತ್ತ ಕೈಬೀಸುತ್ತಿದ್ದಾರೆ. ಈ ವೇಳೆ ಬುಲ್ಡೋಜರ್ ವಧು-ವರರನ್ನು ಕೆಳಗಿಳಿಸಬೇಕು ಎನ್ನುವಷ್ಟರಲ್ಲಿ ದಂಪತಿಗಳು ಕುಳಿತಿದ್ದ ಅಲಂಕಾರಗೊಂಡ ತೊಟ್ಟಿಲು ತಲೆ ಕೆಳಗಾಗಿ ಮುರಿದು ಬಿದ್ದಿದೆ. ತಕ್ಷಣ ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಆನಂದದ ಅಲೆಯಲ್ಲಿ ತೇಲಾಡುತ್ತಿದ್ದವರೆಲ್ಲಾ ನೋಡ ನೋಡುತ್ತಿದ್ದಂತೆ ಗಾಬರಿಗೊಳಗಾಗುತ್ತಾರೆ. ಈ ದೃಶ್ಯವನ್ನು ಸಮಾರಂಭದಲ್ಲಿದ್ದವರು ಸೆರೆ ಹಿಡಿದ್ದಾರೆ.

ಈ ಭಯಾನಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. 15 ಸೆಕೆಂಡುಗಳ ಕ್ಲಿಪ್ ಅನ್ನು ನವೆಂಬರ್ 28 ರಂದು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದೆ ಮತ್ತು 30,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಜೊತೆಗೆ ಹಾಸ್ಯಾಸ್ಪದ ಕಾಮೆಂಟ್ಗಳನ್ನು ಈ ವಿಡಿಯೋ ಪಡೆದುಕೊಂಡಿದೆ.
JCB wala bhul gaya Shaadi ka order hai 🤦♂️😝🤣🤣🤣 pic.twitter.com/wXJMDdjPb0
— Kungfu Pande 🇮🇳2.0 (@pb3060) November 28, 2021
ಓರ್ವ ನೆಟ್ಟಿಗ, "ಜೆಸಿಬಿ ವಾಲಾ ಭುಲ್ ಗಯಾ ಶಾದಿ ಕಾ ಆರ್ಡರ್ ಹೈ," (JCB wala bhul gaya Shaadi ka order hai) 'ಜೆಸಿಬಿ ಚಾಲಕ ಇದು ಮದುವೆಯಾ ಆರ್ಡರ್ ಅನ್ನೋದನ್ನ ಮರೆತಿದ್ದಾನೆ' ಎಂದು ಪೋಸ್ಟ್ ಮಾಡಿದ್ದಾರೆ.
ಕ್ಲಿಪ್ ಹಲವಾರು ನೆಟಿಜನ್ಗಳಿಂದ ಹಲವಾರು ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಇದು ಎಷ್ಟು ಅಪಾಯಕಾರಿ ಎಂದು ಕೆಲವರು ಕಳವಳ ವ್ಯಕ್ತಪಡಿಸಿದ್ದಾರೆ.
"ಇದು ತುಂಬಾ ಅಪಾಯಕಾರಿ" (This is so dangerous) ಎಂದು ಮತ್ತೊಬ್ಬರು ಬರೆದಿದ್ದಾರೆ.
ಮತ್ತೊಬ್ಬ ಬಳಕೆದಾರರು, "ಅವರು ಸೇಕ್ರೆಡ್ ಗೇಮ್ಸ್ನಿಂದ ಸ್ಫೂರ್ತಿ ಪಡೆದಿದ್ದಾರೆ" ಎಂದು ಕಾಮೆಂಟ್ ಮಾಡಿದ್ದಾರೆ.
ನಿಮಗೆ ನಿಮ್ಮಲ್ಲಿ ಕಾರ್ಟೂನ್ ಆಗಲು ಅಧಿಕ ಕುತೂಹಲವಿದೆ. "ಕಾರ್ಟೂನ್ ಬನ್ನೇ ಕಾ ಶಾಕ್ ಹಿ ಖತರ್ನಾಕ್ ಹೈ ಆಪ್ನೆ ಆಪ್ ಮೆ ಭಿ" (Cartoon banne ka shauk hi khatarnak hai apne aap me bhai)
ಇತ್ತೀಚಿನ ದಿನಗಳಲ್ಲಿ ಜನರು ಆಧುನೀಕರಣದಿಂದಾಗಿ ಮದುವೆಯ ಆಚರಣೆಗಳಲ್ಲಿ ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದಾರೆ. ಇವರು ಅದಕ್ಕೆ ಅರ್ಹರು(Vivah sanskar ka mazaak bna ke rakh diya hai aajkal logon ne modernisations ke chakkar me....they deserve it)
ಖತ್ರೋನ್ ಕೆ ಖಿಲಾಡಿ...ಅವರು ಈ ರೀತಿಯ ಸಾಹಸವನ್ನು ಆರಿಸಿಕೊಂಡಾಗ ಇದನ್ನು ಪೂರ್ಣವಾಗಿ ಆನಂದಿಸಬೇಕು.(khatro ke khiladi...When the chose this type of adventure then they should get full mazzaa of the act)
ಈ ಕೆಳಗೆ ಕಾಮೆಂಟ್ ನೋಡಬಹುದು
Why do people come up with weird ideas can someone explain 🙆🙆
— Happy Feet 🇮🇳 (@happyfeet_286) November 29, 2021
Recommended Video
They got inspired by Nawazuddin from sacred games pic.twitter.com/TqbzhsCuQh
— Kungfu Pande 🇮🇳2.0 (@pb3060) November 29, 2021
-
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ












Click it and Unblock the Notifications