ಭಾರತೀಯ ಮೂಲದ ಶ್ರೀ ಸೈನಿ 2021ರ ವಿಶ್ವ ಸುಂದರಿ ಸ್ಪರ್ಧೆಯ ಮೊದಲ ರನ್ನರ್ ಅಪ್
ನವದೆಹಲಿ, ಮಾರ್ಚ್ 17: ಇಂದು (ಮಾರ್ಚ್ 17) ಪೋರ್ಟೊ ರಿಕೊದ ಸ್ಯಾನ್ಜುವಾನ್ನಲ್ಲಿ ನಡೆದ ವಿಶ್ವ ಸುಂದರಿ 2021ರ ಸೌಂದರ್ಯ ಸ್ಪರ್ಧೆಯಲ್ಲಿ ಭಾರತೀಯ-ಅಮೆರಿಕನ್ ಶ್ರೀ ಸೈನಿ ಮೊದಲ ರನ್ನರ್ ಅಪ್ ಕಿರೀಟವನ್ನು ಪಡೆದರು. ಅವರು ಸೌಂದರ್ಯ ಸ್ಪರ್ಧೆಯಲ್ಲಿ ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಅನ್ನು ಪ್ರತಿನಿಧಿಸಿದರು.
ಮುಖದ ಸುಟ್ಟಗಾಯಗಳಿಂದ ಬದುಕುಳಿದವರಾದ ಶ್ರೀ ಸೈನಿ, ತಮ್ಮ Instagram ಬಯೋದಲ್ಲಿ ವಿವರಿಸಿದಂತೆ, ಮಿಸ್ ವರ್ಲ್ಡ್ ಬ್ಯೂಟಿ ವಿತ್ ಎ ಪರ್ಪಸ್ (BWAP) ರಾಯಭಾರಿಯಾಗಿದ್ದಾರೆ.
ವಿಶ್ವ ಸುಂದರಿ 2021ರ ಕಾರ್ಯಕ್ರಮಕ್ಕೆ ಮುಂಚಿತವಾಗಿ, ಅವರು Instagramನಲ್ಲಿ ತಮ್ಮ ಬಾಲ್ಯದ ಫೋಟೋವನ್ನು ಹಂಚಿಕೊಂಡಿದ್ದು, ಆಕೆಯ ತಲೆಯ ಮೇಲೆ ಕಿರೀಟವನ್ನು ಹೊಂದಿದ್ದ ಫೋಟೋದಲ್ಲಿ ಶ್ರೀ ಸೈನಿ ವಿಶ್ವ ಸುಂದರಿಯಂತೆ ಕಂಗೊಳಿಸುತ್ತಿದ್ದಳು.

ನಾನು ಕೇವಲ 6 ವರ್ಷದವಳಿದ್ದಾಗ, ಮಿಸ್ ವರ್ಲ್ಡ್ ಕನಸು ಪ್ರಾರಂಭವಾಯಿತು! ನಾನು ವಿಶ್ವ ಸುಂದರಿ ವೇಷ ಧರಿಸಿದ್ದೆ, ಏಕೆಂದರೆ ನಾನು ವಿಶ್ವ ಸುಂದರಿಯನ್ನು ಸೂಪರ್ಹೀರೋ ಆಗಿ ನೋಡಿದ್ದು, ತನ್ನ ಪ್ರೀತಿಯ ಹೃದಯದಿಂದ ಸೇವೆ ಸಲ್ಲಿಸುವ ಮಹಿಳೆ," ಎಂದು ಅವರು ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ಯಾರು ಈ ಶ್ರೀ ಸೈನಿ?
ಶ್ರೀ ಸೈನಿ ಪಂಜಾಬ್ನ ಲುಧಿಯಾನ ಮೂಲದವರು. ಆಕೆ ಕೇವಲ 5 ವರ್ಷದವಳಿದ್ದಾಗ ಆಕೆಯ ಕುಟುಂಬವು ವಾಷಿಂಗ್ಟನ್ ಡಿಸಿಗೆ ಸ್ಥಳಾಂತರಗೊಂಡಿತು. ಆಕೆಯ ಜೀವನವು ಗುಲಾಬಿಗಳ ಹಾಸಿಗೆಯಾಗಿರಲಿಲ್ಲ, ಏಕೆಂದರೆ ಅವರು ಆರೋಗ್ಯ ವಿಚಾರವಾಗಿ ಸಾಕಷ್ಟು ಬಳಲುತ್ತಿದ್ದರು.
ಶ್ರೀ ಸೈನಿ 12ನೇ ವಯಸ್ಸಿನಿಂದ ಶಾಶ್ವತ ಪೇಸ್ಮೇಕರ್ ಅನ್ನು ಹೊಂದಿದ್ದಳು ಮತ್ತು ಅಪರೂಪದ ಹೃದಯ ಕಾಯಿಲೆಯಿಂದ ಬಳಲುತ್ತಿದ್ದಳು. ಈ ಕಾರಣದಿಂದ ಆಕೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಪೇಸ್ ಮೇಕರ್ ಅಳವಡಿಸಲಾಗಿದೆ ಎಂದು ಬೆಟರ್ ಇಂಡಿಯಾ ಪ್ರಕಟಿಸಿದ ವರದಿಯಲ್ಲಿ ತಿಳಿಸಲಾಗಿದೆ.

ನಂತರ ಶ್ರೀ ಸೈನಿ ಮಾರಣಾಂತಿಕ ಅಪಘಾತವನ್ನು ಎದುರಿಸಿದಳು, ಅದು ಅವಳ ಮುಖದ ಮೇಲೆ ಸುಟ್ಟಗಾಯಗಳಾಗಿತ್ತು. ಆದರೆ ಅವಳು ಯಾವುದಕ್ಕೂ ಎದೆಗುಂದಲಿಲ್ಲ ಮತ್ತು ಬಲಶಾಲಿಯಾಗಿ ಹೊರಹೊಮ್ಮಿದಳು.
ಹಲವಾರು ಸವಾಲುಗಳನ್ನು ಎದುರಿಸಿದ ಶ್ರೀ ಸೈನಿ, ತನ್ನ ಜೀವನದ ಗುರಿಯನ್ನು ಪಡೆದುಕೊಂಡಳು. ಸಂದರ್ಶನವೊಂದರಲ್ಲಿ, ಮಿಸ್ ವರ್ಲ್ಡ್ ಆಗುವುದು ತನ್ನ ಬಾಲ್ಯದ ಕನಸಾಗಿತ್ತು ಮತ್ತು ಇತರರನ್ನು ಪ್ರೇರೇಪಿಸಲು ಬಯಸಿದೆ ಎಂದು ಒಮ್ಮೆ ಹೇಳಿದ್ದರು.
"ಮುಖದ ಸುಟ್ಟಗಾಯಗಳು ಮತ್ತು ಹೃದಯ ದೋಷವನ್ನು ನಿವಾರಿಸುವ ನನ್ನ ಕಥೆಯು ತಮ್ಮ ದೈನಂದಿನ ಸವಾಲುಗಳನ್ನು ಜಯಿಸಲು ಜನರನ್ನು ಪ್ರೋತ್ಸಾಹಿಸುತ್ತದೆ ಎಂದು ನಾನು ಭಾವಿಸುತ್ತೇನೆ,'' ಎಂದು ಶ್ರೀ ಸೈನಿ ಮಿಸ್ ವರ್ಲ್ಡ್ ಈವೆಂಟ್ಗೆ ಮುಂಚಿತವಾಗಿ Instagram ಪೋಸ್ಟ್ನಲ್ಲಿ ಬರೆದಿದ್ದಾರೆ.
ಶ್ರೀ ಸೈನಿ ಇನ್ಸ್ಟಾಗ್ರಾಂನಲ್ಲಿ 137k ಅನುಯಾಯಿಗಳನ್ನು ಹೊಂದಿದ್ದಾರೆ ಮತ್ತು ಆಗಾಗ್ಗೆ ಅವರ ವಿವಿಧ ಫೋಟೋಶೂಟ್ಗಳ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ.
-
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ












Click it and Unblock the Notifications