ರಿಪಬ್ಲಿಕ್ P-MARQ ಸಮೀಕ್ಷೆ: ಉತ್ತರಪ್ರದೇಶದಲ್ಲಿ ಯಾರಿಗೆ ಅಧಿಕಾರ?
ಲಕ್ನೋ ಜನವರಿ 18: 403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಗೆ ಫೆಬ್ರವರಿ 10 ರಿಂದ ಮಾರ್ಚ್ 7 ರವರೆಗೆ ಏಳು ಹಂತಗಳಲ್ಲಿ ಚುನಾವಣೆಗಳು ನಡೆಯಲಿದೆ. ಪ್ರಮುಖ ರಾಜಕೀಯ ಪಕ್ಷಗಳಾದ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ), ಸಮಾಜವಾದಿ ಪಕ್ಷ (ಎಸ್ಪಿ), ಬಹುಜನ ಸಮಾಜ ಪಕ್ಷ (BSP), ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಚೊಚ್ಚಲ ಆಮ್ ಆದ್ಮಿ ಪಕ್ಷ (AAP) ಚುನಾವಣೆಯಲ್ಲಿ ಪೈಪೋಟಿಗಿಳಿಯಲಿವೆ. ರಿಪಬ್ಲಿಕ್-ಪಿ ಮಾರ್ಕ್ 2022 ರ ಅಸೆಂಬ್ಲಿ ಚುನಾವಣೆಯ ಕುರಿತು ಆನ್-ಪಾಯಿಂಟ್ ಅಭಿಪ್ರಾಯ ಸಂಗ್ರಹವನ್ನು ತರಲು ಸಮಗ್ರ ಸಮೀಕ್ಷೆಯನ್ನು ನಡೆಸಿದೆ. ರಿಪಬ್ಲಿಕ್-ಪಿ ಮಾರ್ಕ್ ಸಮೀಕ್ಷೆಯನ್ನು ಉತ್ತರ ಪ್ರದೇಶ ರಾಜ್ಯದಲ್ಲಿ ಜನವರಿ 5 ರಿಂದ ಜನವರಿ 16 ರವರೆಗೆ 16,390 ವ್ಯಕ್ತಿಗಳನ್ನು ಮಾದರಿಯಾಗಿಟ್ಟುಕೊಂಡು ನಡೆಸಲಾಯಿತು. ಸಮೀಕ್ಷೆಯು ಒಟ್ಟಾರೆ ರಾಜ್ಯವಾರು ಭವಿಷ್ಯ, ಸ್ಥಾನ ಮತ್ತು ಮತ ಹಂಚಿಕೆಯನ್ನು ತೋರಿಸುತ್ತದೆ.
ಉತ್ತರ ಪ್ರದೇಶದ ಸಮೀಕ್ಷೆ: ಯಾರು ಗೆಲ್ಲುತ್ತಾರೆ?
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ 403 ಸದಸ್ಯರ ವಿಧಾನಸಭೆಯಲ್ಲಿ 252-272 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯೊಂದಿಗೆ ಅಧಿಕಾರವನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಮತ್ತೊಂದೆಡೆ, ಸಮಾಜವಾದಿ ಪಕ್ಷ + 111-131 ಸ್ಥಾನಗಳನ್ನು ಗಳಿಸಲು ನೋಡುತ್ತಿದೆ. ಇತರೆ ಪಕ್ಷಗಳು ಅಲ್ಪ ಲಾಭ ಪಡೆಯುವ ಸಾಧ್ಯತೆ ಇದೆ. ಬಿಎಸ್ಪಿ 8-16, ಕಾಂಗ್ರೆಸ್ 3-9 ಮತ್ತು ಇತರರು 0-4 ಸ್ಥಾನಗಳನ್ನು ಗಳಿಸುವ ಸಾಧ್ಯತೆಯಿದೆ.
18% ರಷ್ಟು ಜನರು ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಸಾಧನೆ ಅತ್ಯುತ್ತಮವಾಗಿದೆ ಎಂದು ಬಣ್ಣಿಸಿದ್ದಾರೆ ಮತ್ತು 38% ರಷ್ಟು ಉತ್ತಮವಾಗಿದೆ ಎಂದು ಹೇಳಿದ್ದಾರೆ. 25%ರಷ್ಟು ಜನರು ಇದು ಸರಾಸರಿ ಎಂದು ನಂಬಿದರೆ 19% ಜನರು ಇದನ್ನು ಕಳಪೆ ಎಂದು ಕರೆದಿದ್ದಾರೆ. ಕೇಂದ್ರದ ಆಡಳಿತದ ಬಗ್ಗೆ ಪ್ರತಿಕ್ರಿಯಿಸಿದವರಲ್ಲಿ 34% ಜನರು ಪಿಎಂ ಮೋದಿ ಸರ್ಕಾರದ ಕಾರ್ಯಕ್ಷಮತೆಯ ಬಗ್ಗೆ ತುಂಬಾ ಸಂತೋಷಪಟ್ಟಿದ್ದಾರೆ ಮತ್ತು ಅದನ್ನು ಅತ್ಯುತ್ತಮವೆಂದು ಕರೆದಿದ್ದಾರೆ. 28% ಜನರು ಕ್ರಮವಾಗಿ 24% ಜನ ಸರಾಸರಿಯಾಗಿದೆ ಎಂದರೆ ಮತ್ತು 14% ಜನ ತೃಪ್ತಿದಾಯಕ ಎಂದಿದ್ದಾರೆ.
ಅಭಿಪ್ರಾಯ ಸಂಗ್ರಹ: ನಿಮ್ಮ ಪ್ರಕಾರ ದೊಡ್ಡ ಸಮಸ್ಯೆ ಯಾವುದು?
ಇನ್ನೂ ರಾಜ್ಯದಲ್ಲಿ ನಿರುದ್ಯೋಗ ಮತ್ತು ರೈತರ ಪ್ರತಿಭಟನೆಯನ್ನು 20%ರಷ್ಟು ಜನ ಅತಿದೊಡ್ಡ ಸಮಸ್ಯೆ ಎಂದು ಕರೆದಿದ್ದಾರೆ. ನಂತರ ಇಂಧನ ಬೆಲೆಗಳು ಮತ್ತು ಅಗತ್ಯ ವಸ್ತುಗಳ ಹೆಚ್ಚಳ (15%), ವ್ಯಾಪಕವಾದ ನೀರಿನ ಲಭ್ಯತೆಯ ಕೊರತೆ, (14%) ಕೆಟ್ಟ ರಸ್ತೆಗಳು (8%) , ಬಿಡಾಡಿ ದನಗಳ ಸಮಸ್ಯೆ (6%) ಮತ್ತು ಇತರ ಸಮಸ್ಯೆಗಳು (10%)ರಷ್ಟಿವೆ ಎನ್ನಲಾಗುತ್ತಿದೆ.
ಅಭಿಪ್ರಾಯ ಸಂಗ್ರಹ: ರಾಜ್ಯದ ಸಿಎಂ ಆಗಿ ಯಾರಿಗೆ ಆದ್ಯತೆ?
ಪ್ರಸ್ತುತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮತ್ತೆ ಸಿಎಂ ಆಗಲು 41.2% ರಷ್ಟು ಜನ ಮೊದಲ ಆಯ್ಕೆಯನ್ನು ವ್ಯಕ್ತಪಡಿಸಿದ್ದಾರೆ. 29.4% ರಷ್ಟು ಪ್ರತಿಕ್ರಿಯಿಸಿದವರು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಪರವಾಗಿದ್ದಾರೆ. ಬಿಎಸ್ಪಿಯ ಮಾಯಾವತಿ 13.4% ರಷ್ಟು ಬೆಂಬಲವನ್ನು ಪಡೆದರು. 5.8% ಜನರು ಕಾಂಗ್ರೆಸ್ನಿಂದ ಪ್ರಿಯಾಂಕಾ ಗಾಂಧಿ ರಾಜ್ಯದಲ್ಲಿ ಚುಕ್ಕಾಣಿ ಹಿಡಿಯಬಹುದು ಎಂದು ನಂಬಿದ್ದರು.
ನಿಮ್ಮ ಶಾಸಕರ ಕಾರ್ಯವೈಖರಿ ನಿಮಗೆ ತೃಪ್ತಿ ತಂದಿದೆಯೇ?
38% ರಷ್ಟು ಜನ ತಮ್ಮ ಶಾಸಕರ ಕಾರ್ಯವೈಖರಿ ತೃಪ್ತಿದಾಯಕ ಎಂದು ಹೇಳಿದರೆ, 54%ರಷ್ಟು ಜನ ಇಲ್ಲ ಎಂದಿದ್ದಾರೆ. 8%ರಷ್ಟು ಜನ ಹೇಳಲು ಆಗುವುದಿಲ್ಲ ಎಂದಿರೆ ,8%ರಷ್ಟು ಜನ ಪ್ರತಿಕ್ರಿಯೆ ನೀಡಿಲ್ಲ.
ನಿಮ್ಮ ಮತಕ್ಕೆ ದೊಡ್ಡ ಅಂಶ ಯಾವುದು?
ಪ್ರತಿಕ್ರಿಯಿಸಿದವರಲ್ಲಿ 22%ರಷ್ಟು ಜನ ಬಿಜೆಪಿ ರಾಜ್ಯ ಸರ್ಕಾರದ ಒಟ್ಟಾರೆ ಸಾಧನೆಯಿಂದ ತೃಪ್ತಿ ಇದೆ ಎಂದಿದ್ದಾರೆ. ಇನ್ನೂ 16%ರಷ್ಟು ಜನ ಪ್ರಧಾನಿ ಮೋದಿಯವರ ಕಾರ್ಯವೈಖರಿ ಬಗ್ಗೆ ಮೆಚ್ಚಿಕೊಂಡಿದ್ದಾರೆ. ಅಧಿಕಾರ-ವಿರೋಧಿ, ಬದಲಾವಣೆಯ ಅಗತ್ಯವಿದೆ ಎಂದು 15%ರಷ್ಟು ಜನರು ಹೇಳಿಕೊಂಡಿದ್ದಾರೆ. 10%ರಷ್ಟು ಜನರು ರೈತರ ಸಮಸ್ಯೆಗಳಿಂದಾಗಿ ಪ್ರಸ್ತುತ ಸರ್ಕಾರದ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಸುಧಾರಣೆ ಮೇಲೆ 10%, ಧರ್ಮದ ಮೇಲೆ 6%ರಷ್ಟು ಜನ ಮತಚಲಾಯಿಸುತ್ತಿದ್ದಾರೆ. ಪಡಿತರ ಯೋಜನೆ, ಮತ್ತು PM ಕಿಸಾನ್, PMAY ನಂತಹ ಇತರ ಯೋಜನೆಗಳಿಗಾಗಿ 5%, ಇತರ ಕಾರಣಗಳಿಂದಾಗಿ 10% ರಷ್ಟು ಜನ ಮತಚಲಾಯಿಸುತ್ತಿದ್ದಾರೆ.
2017 ರ ಚುನಾವಣೆ
2017 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ, 403 ಸದಸ್ಯರ ಸದನದಲ್ಲಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಆದರೆ ಬಿಎಸ್ಪಿ ಕೇವಲ 19 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಮತ್ತೊಂದೆಡೆ, ಎಸ್ಪಿ-ಕಾಂಗ್ರೆಸ್ ಮೈತ್ರಿ 54 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಲು ವಿಫಲವಾಗಿದೆ. ಬಿಜೆಪಿ ಯಾವುದೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದ ಕಾರಣ ಇದು ಪ್ರಧಾನಿ ಮೋದಿಯವರಿಗೆ ಜನಾದೇಶವೆಂದು ಕಂಡುಬಂದರೆ, ಗೋರಖ್ಪುರ ಸಂಸದ ಯೋಗಿ ಆದಿತ್ಯನಾಥ್ ಅವರು ಈ ಸ್ಥಾನಕ್ಕೆ ಅಚ್ಚರಿಯ ಆಯ್ಕೆಯಾಗಿದ್ದಾರೆ. ಮುಂಬರುವ ಯುಪಿ ವಿಧಾನಸಭಾ ಚುನಾವಣೆಯು ಫೆಬ್ರವರಿ 10 ರಿಂದ 7 ಹಂತಗಳಲ್ಲಿ ನಡೆಯಲಿದ್ದು, ಮತಗಳ ಎಣಿಕೆ ಮಾರ್ಚ್ 10 ರಂದು ನಡೆಯಲಿದೆ.
Recommended Video