ರಿಯಲ್ ಹೀರೋ: ಇಬ್ಬರ ಮಕ್ಕಳೊಂದಿಗೆ ತಂದೆಯ ಝೊಮಾಟೊ ಡೆಲಿವರಿ ಕೆಲಸ
ಆಹಾರ ವಿತರಣಾ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾನೆ. ಈತನ ಕುಟುಂಬದ ಕಷ್ಟಗಳನ್ನು ನಿವಾರಿಸುವ ಸ್ಪೂರ್ತಿದಾಯಕ ಕಥೆಗೆ ಇಂಟರ್ನೆಟ್ ಮನಸೋತಿದೆ. Zomatoದಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುವ ವ್ಯಕ್ತಿಯ ವಿಡಿಯೊ ಆನ್ಲೈನ್ನಲ್ಲಿ ಹೃದಯವನ್ನು ಗೆದ್ದಿದೆ.
ಇನ್ಸ್ಟಾಗ್ರಾಮ್ನಲ್ಲಿ ಫುಡ್ ಬ್ಲಾಗರ್ ಸೌರಭ್ ಪಂಜ್ವಾನಿ ಅವರು ಈ ವ್ಯಕ್ತಿಯನ್ನು ಪರಿಚಯಿಸಿದ್ದಾರೆ. ಝೊಮಾಟೊದಲ್ಲಿ ಕೆಲಸ ಮಾಡುವ ಡೆಲಿವರಿ ಬಾಯ್ ಒಬ್ಬರು ತಮ್ಮೊಂದಿಗೆ ಪುಟ್ಟ ಮಗುವನ್ನು ಜೋಳಿಗೆಯಲ್ಲಿ ಕಟ್ಟಿಕೊಂಡು ಕೆಲಸ ಮಾಡುತ್ತಿರುವ ಫೋಟೋ ವಯರಲ್ ಆಗಿದೆ.
ಸೌರಭ್ ಪಂಜ್ವಾ ಅವರು ಈ ವ್ಯಕ್ತಿಯನ್ನು ಪರಿಚಯಿಸಲು ತಮ್ಮ ಅನುಯಾಯಿಗಳಿಗಾಗಿ ಕಿರು ವೀಡಿಯೊವನ್ನು ಹಂಚಿಕೊಂಡಿದ್ದಾರೆ. "ಇದನ್ನು ನೋಡಿ ನನಗೆ ತುಂಬಾ ಸ್ಪೂರ್ತಿಯಾಯಿತು. ಈ Zomato ಡೆಲಿವರಿ ಬಾಯಿ ಇಬ್ಬರು ಮಕ್ಕಳೊಂದಿಗೆ ಇಡೀ ದಿನ ಬಿಸಿಲಿನಲ್ಲಿ ಕಳೆಯುತ್ತಾರೆ. ಒಬ್ಬ ವ್ಯಕ್ತಿಯು ಬಯಸಿದರೆ, ಅವನು ಏನು ಬೇಕಾದರೂ ಮಾಡಬಹುದು ಎಂಬುದನ್ನು ನಾವು ಈತನನ್ನು ನೋಡಿ ಕಲಿಯಬೇಕು" ಎಂದು ಪಂಜ್ವಾನಿ ಪೋಸ್ಟ್ನ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಫುಡ್ ಡೆಲಿವರಿಗಾಗಿ ವ್ಯಕ್ತಿ ಹೋಗಿರುವುದನ್ನು ವಿಡಿಯೊ ತೋರಿಸುತ್ತದೆ. ಅವನ ಪುಟ್ಟ ಮಗು ಅವನ ಎದೆಗೆ ಕಟ್ಟಿಕೊಂಡಿರುವುದು ಕಂಡುಬಂದರೆ, ಅವನ ಮತ್ತೊಂದು ಮಗ ಅವನ ಹಿಂದೆ ತಿರುಗಾಡುತ್ತಿರುವುದನ್ನು ಕಾಣಬಹುದು.
ಕ್ಲಿಪ್ನಲ್ಲಿ ಪಂಜ್ವಾನಿ ಅವರು ಆತನ ಕೆಲಸ ಮತ್ತು ಮಕ್ಕಳ ಬಗ್ಗೆ ವಿತರಣೆ ಮಾಡುವುದನ್ನು ಕೇಳಬಹುದು. ಆಗ ಆ ವ್ಯಕ್ತಿಯು ತನ್ನ ಮಕ್ಕಳನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವುದಾಗಿ ಹೇಳುತ್ತಾನೆ. ಅವನ ಮಗ ಕೆಲಸದಲ್ಲಿ ಆಹಾರ ವಿತರಿಸಲು ಸಹಾಯ ಮಾಡುತ್ತಾನೆ ಎಂದು ತಿಳಿಸುತ್ತಾನೆ.
ವಿಡಿಯೋ ಹಂಚಿಕೊಂಡಾಗಿನಿಂದ ಒಂದು ಮಿಲಿಯನ್ಗೂ ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ. ಝೊಮಾಟೊ ಕೂಡ ವಿಡಿಯೋಗೆ ಪ್ರತ್ಯುತ್ತರ ನೀಡಿದ್ದು, ಶಿಶುಪಾಲನಾ ಪ್ರಯೋಜನಗಳೊಂದಿಗೆ ಅವರಿಗೆ ಸಹಾಯ ಮಾಡಲು ಡೆಲಿವರಿ ಏಜೆಂಟ್ನ ಸಂಪರ್ಕ ವಿವರಗಳನ್ನು ಕೇಳಿದೆ. "ದಯವಿಟ್ಟು ಆರ್ಡರ್ ವಿವರಗಳನ್ನು ಖಾಸಗಿ ಸಂದೇಶದಲ್ಲಿ ಹಂಚಿಕೊಳ್ಳಿ. ಇದರಿಂದ ನಾವು ಅವರನ್ನು ತಲುಪಬಹುದು ಮತ್ತು ವಿತರಣಾ ಪಾಲುದಾರರಿಗೆ ಸಹಾಯ ಮಾಡಬಹುದು" ಎಂದು Zomato ಕಾಮೆಂಟ್ ಮಾಡಿದೆ.
ಇಂಟರ್ನೆಟ್ ಬಳಕೆದಾರರು ಕಾಮೆಂಟ್ ವಿಭಾಗದಲ್ಲಿ ಹೃದಯ ಮತ್ತು ಬೆಂಕಿಯ ಎಮೋಜಿಗಳನ್ನು ಕಳುಹಿಸಿದ್ದಾರೆ. ಒಬ್ಬ ಬಳಕೆದಾರರು ಬರೆದು, "ಜೀವನವು ತುಂಬಾ ಸುಂದರವಾಗಿದೆ ಆದರೆ ಕಠಿಣವಾಗಿದೆ." ಮತ್ತೊಬ್ಬರು ಹೇಳುತ್ತಾರೆ, "ಈ ರೀತಿಯ ಜನರ ಬಗ್ಗೆ ನನಗೆ ವಿಶೇಷ ಗೌರವವಿದೆ. ಇದು ಅವರ ಜೀವನಕ್ಕೆ ಅರ್ಥವನ್ನು ನೀಡುತ್ತದೆ" ಎಂದು ಬರೆದಿದ್ದಾರೆ. ಮತ್ತೊಬ್ಬರು "ತಂದೆಯೇ ನಿಜವಾದ ಹೀರೋ" ಎಂದು ಕಾಮೆಂಟ್ ಮಾಡಿದ್ದಾರೆ.
-
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ












Click it and Unblock the Notifications