ಚಿತ್ರಗಳು; ದೀಪಾವಳಿ ಜೊತೆ ಜೊತೆಗೆ ಹೋರಿ ಹಬ್ಬಕ್ಕೆ ಅಣಿಯಾಗಿದೆ ಶಿವಮೊಗ್ಗ
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಶಿರಾಳಕೊಪ್ಪ, ಸೊರಬ ತಾಲೂಕಿನಲ್ಲಿ ದೀಪಾವಳಿ ಹಬ್ಬದ ಬೆನ್ನಲ್ಲೇ ಹೋರಿ ಬೆದರಿಸುವ ಸಂಪ್ರದಾಯ ಬಹಳ ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಮಳೆಗಾಲದ ಬೇಸಾಯ ಮುಗಿದ ನಂತರ ಯಾವುದೇ ಶ್ರಮವಿಲ್ಲದೆ ಮೇವು ತಿಂದು ಕೊಬ್ಬಿರುವ ಹೋರಿಯ ಕೊಬ್ಬನ್ನು ಇಳಿಸಿ ಮುಂದಿನ ಬೆಳೆಗೆ ಹೋರಿಯನ್ನು ಸಜ್ಜುಗೊಳಿಸಲು ಹಿರಿಯರು ಹೋರಿಗಳಿಗೆ ವಿಶೇಷ ಅಲಂಕಾರ ಮಾಡಿ ಅದನ್ನು ಬೆದರಿಸುವುದು, ನೂರಾರು ಯುವಕರು ವೇಗವಾಗಿ ಬರುವ, ಕೊಬ್ಬಿದ ಕೊಬ್ಬರಿ ಕಟ್ಟಿದ ಹೋರಿಗಳನ್ನು ಹಿಡಿದು ಕೊಬ್ಬರಿಯನ್ನು ಅರಿಯುವ ಈ ಹಬ್ಬ ಅನೇಕ ವರ್ಷಗಳಿಂದಲೂ ನಡೆದುಕೊಂಡು ಬಂದಿದೆ.

ತಮಿಳುನಾಡಿನಿಂದ ಹೋರಿಗಳ ಖರೀದಿ
ದೀಪಾವಳಿ ಹಬ್ಬಕ್ಕೆ ಎರಡು ಮೂರು ತಿಂಗಳು ಮುಂಚಿತವಾಗಿಯೇ ಹೋರಿಗಳನ್ನು ಲಕ್ಷಾಂತರ ರೂಪಾಯಿಗೆ ಹೊರ ರಾಜ್ಯಗಳಿಂದ, ವಿಷೇಶವಾಗಿ ತಮಿಳುನಾಡಿನಿಂದ ಖರೀದಿಸಿ ಅವುಗಳಿಗೆ ತಾಲೀಮು ಕೊಡುತ್ತಾರೆ. ಈ ಬಾರಿ ಕೂಡ ಹೊಸ ಹೋರಿಗಳು ಶಿಕಾರಿಪುರಕ್ಕೆ ಬಂದಿದ್ದು, ಪ್ರತಿ ದಿನ ಹೋರಿಗಳನ್ನು ಬೆಳಗ್ಗೆ ಮೈದಾನಕ್ಕೆ ಕರೆದುಕೊಂಡು ಹೋಗಿ ಓಡಿಸುವ ಹಾಗೂ ಹೋರಿಗಳಿಗೆ ಮೇವು ಹಿಂಡಿ ತಿನ್ನಿಸುವ, ಈಜುವ ತಯಾರಿ ನಡೆಸಿದ್ದಾರೆ.

ಹೋರಿ ಹಿಡಿಯಲು ಯುವಕರ ತಾಲೀಮು
ಈ ಬಾರಿ ಹೋರಿಗಳನ್ನು ಹಿಡಿದು ಬಹುಮಾನ ಪಡೆಯಬೇಕು ಎಂಬ ಹುಮ್ಮಸ್ಸಿನಿಂದ ಹಲವು ಯುವಕರು ಪ್ರತಿನಿತ್ಯ ಬೆಳಗ್ಗೆ ಓಡುವ, ಈಜುವ, ವ್ಯಾಯಾಮ ಮಾಡುವ ಮೂಲಕ ತಾಲೀಮು ನಡೆಸುತ್ತಿದ್ದಾರೆ. ಕಳೆದ ಬಾರಿ ಹಿಡಿಯಲು ಕೈತಪ್ಪಿದ ಹೋರಿಗಳನ್ನು ಈ ಬಾರಿ ಹಿಡಿಯಲೇಬೇಕು ಎಂದು ಕಾಯುತ್ತಿದ್ದಾರೆ. ಜೀವದ ಭಯವನ್ನು ಬಿಟ್ಟು ಹೋರಿ ಹಿಡಿಯುವ ಯುವಕರ ಧೈರ್ಯ ಸಾಹಸವೇ ಸರಿ.

ಹೋರಿಗಳಿಗೆ ಕೊಬ್ಬರಿ ಸರ
ದೀಪಾವಳಿ ಹಬ್ಬವೆಂದರೆ ರೈತರ ಹಬ್ಬ. ಅನ್ನ ನೀಡುವ ಭೂತಾಯಿಗೆ ಪೂಜೆ ಸಲ್ಲಿಸಿ ನಂತರ ಬೇಸಾಯಕ್ಕೆ ಬಳಸುವ ಎತ್ತಿನಗಾಡಿ, ಹೋರಿಗಳು, ವ್ಯವಸಾಯದ ಸಾಮಗ್ರಿಗಳನ್ನು ಅಲಂಕರಿಸಿ ಪೂಜಿಸುತ್ತಾರೆ. ಹೋರಿ ಮಾಲೀಕರು ಹೋರಿಗಳಿಗೆ ಪೂಜೆ ಸಲ್ಲಿಸಿ ವಿಶೇಷವಾಗಿ ಅಲಂಕರಿಸುತ್ತಾರೆ. ಅವುಗಳಿಗೆ ಕೊಬ್ಬರಿ ಸರ ಪಿಪಿ (ಬಲೂನ್)ಗಳನ್ನು ಹಾಕುತ್ತಾರೆ. ಸುಮಾರು 5 ಅಡಿಗಿಂತ ಹೆಚ್ಚು ಎತ್ತರದ ಬಲೂನ್ ಗಳನ್ನು ಹೋರಿಗಳ ಕೊಂಬಿಗೆ ಕಟ್ಟಲಾಗುತ್ತದೆ. ಕೊಬ್ಬರಿಗಳನ್ನು ಸೊಂಟಕ್ಕೆ ಬೆನ್ನಿಗೆ ಹೋರಿಯ ಸಾಮರ್ಥ್ಯಕ್ಕೆ ಅನುಗುಣವಾಗಿ ಕಟ್ಟುತ್ತಾರೆ. ಅನೇಕ ಬಣ್ಣಗಳಿಂದ ಹೋರಿಗಳನ್ನು ಸಿಂಗಾರ ಮಾಡಲಾಗುತ್ತದೆ. ಹೋರಿ ಮಾಲೀಕರು ತಮಗಿಷ್ಟವಾದ ಹೆಸರನ್ನು ಹೋರಿಗಳಿಗೆ ಇಡುತ್ತಾರೆ.

ಬಯಲು ಸೀಮೆಯ ಪ್ರಸಿದ್ಧ ಕ್ರೀಡೆ
ಹೋರಿ ಹಬ್ಬ ಅಥವಾ ಹಟ್ಟಿ ಹಬ್ಬ ಎಂದು ಕರೆಯಲಾಗುವ ಈ ಹಬ್ಬ ಬಯಲು ಸೀಮೆ ಭಾಗದಲ್ಲಿ ಪ್ರಸಿದ್ಧಿ ಹೊಂದಿದೆ. ಶಿಕಾರಿಪುರ ತಾಲೂಕು ಬಯಲುಸೀಮೆ ಭಾಗಕ್ಕೆ ಹೊಂದಿಕೊಂಡಿರುವುದರಿಂದ ಈ ತಾಲೂಕಿನ ಅನೇಕ ಗ್ರಾಮೀಣ ಭಾಗದಲ್ಲೂ ಆಚರಿಸಲಾಗುವುದು. ಗ್ರಾಮದಲ್ಲಿ ಹಬ್ಬಕ್ಕೆ ಒಂದು ಸಮಿತಿ ಮಾಡಿಕೊಂಡು ಹಬ್ಬ ಆಚರಿಸುತ್ತಾರೆ. ಹೋರಿ ಹಬ್ಬವನ್ನು ಶಿಕಾರಿಪುರ, ಸೊರಬ, ಶಿರಾಳಕೊಪ್ಪ ಹಾಗೂ ಜಿಲ್ಲೆಯ ಅನೇಕ ಗ್ರಾಮೀಣ ಭಾಗದಲ್ಲಿ ಹಟ್ಟಿ ಹಬ್ಬ ಎಂದು ಆಚರಿಸಲಾಗುತ್ತದೆ. ಅತಿ ಹೆಚ್ಚು ರೈತರು ಯುವಜನತೆಯ ಈ ಹಬ್ಬ ನೋಡಲು ಆಗಮಿಸುತ್ತಾರೆ.

ಹೋರಿ ಹಬ್ಬಕ್ಕೆ ಕಾನೂನಿನ ತೊಡಕು
ಹೋರಿ ಬೆದರಿಸುವ ಹಬ್ಬಕ್ಕೆ ಕಾನೂನು ಅಡ್ಡಿಪಡಿಸಿದೆ. ಹೋರಿ ಹಬ್ಬಕ್ಕೆ ಅನುಮತಿ ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಹೋರಿ ಹಬ್ಬ ಹೋರಾಟ ಸಮಿತಿ ಸದಸ್ಯರು ಮನವಿಯನ್ನು ಕೂಡ ಸಲ್ಲಿಸಿದ್ದರು.
ದೀಪಾವಳಿಯ ಸಂದರ್ಭದಲ್ಲಿ ರೈತರು ಜಾನುವಾರುಗಳನ್ನು ಸಿಂಗಾರ ಮಾಡಿ ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆಯಿಂದ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಲು ಎಲ್ಲಾ ಹೋರಿ ಹಬ್ಬದ ಸಮಿತಿಯವರಿಗೆ ಗ್ರಾಮೀಣ ಭಾಗದ ಎಲ್ಲಾ ಗ್ರಾಮ ಮುಖ್ಯಸ್ಥರಿಗೆ ಪೋಲಿಸ್ ವೃತ್ತ ನಿರೀಕ್ಷಕ ಬಸವರಾಜ್ ಸೂಚಿಸಿದ್ದಾರೆ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications