ಚಿತ್ರಗಳು; ದೀಪಾವಳಿ ಜೊತೆ ಜೊತೆಗೆ ಹೋರಿ ಹಬ್ಬಕ್ಕೆ ಅಣಿಯಾಗಿದೆ ಶಿವಮೊಗ್ಗ
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಶಿರಾಳಕೊಪ್ಪ, ಸೊರಬ ತಾಲೂಕಿನಲ್ಲಿ ದೀಪಾವಳಿ ಹಬ್ಬದ ಬೆನ್ನಲ್ಲೇ ಹೋರಿ ಬೆದರಿಸುವ ಸಂಪ್ರದಾಯ ಬಹಳ ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಮಳೆಗಾಲದ ಬೇಸಾಯ ಮುಗಿದ ನಂತರ ಯಾವುದೇ ಶ್ರಮವಿಲ್ಲದೆ ಮೇವು ತಿಂದು ಕೊಬ್ಬಿರುವ ಹೋರಿಯ ಕೊಬ್ಬನ್ನು ಇಳಿಸಿ ಮುಂದಿನ ಬೆಳೆಗೆ ಹೋರಿಯನ್ನು ಸಜ್ಜುಗೊಳಿಸಲು ಹಿರಿಯರು ಹೋರಿಗಳಿಗೆ ವಿಶೇಷ ಅಲಂಕಾರ ಮಾಡಿ ಅದನ್ನು ಬೆದರಿಸುವುದು, ನೂರಾರು ಯುವಕರು ವೇಗವಾಗಿ ಬರುವ, ಕೊಬ್ಬಿದ ಕೊಬ್ಬರಿ ಕಟ್ಟಿದ ಹೋರಿಗಳನ್ನು ಹಿಡಿದು ಕೊಬ್ಬರಿಯನ್ನು ಅರಿಯುವ ಈ ಹಬ್ಬ ಅನೇಕ ವರ್ಷಗಳಿಂದಲೂ ನಡೆದುಕೊಂಡು ಬಂದಿದೆ.

ತಮಿಳುನಾಡಿನಿಂದ ಹೋರಿಗಳ ಖರೀದಿ
ದೀಪಾವಳಿ ಹಬ್ಬಕ್ಕೆ ಎರಡು ಮೂರು ತಿಂಗಳು ಮುಂಚಿತವಾಗಿಯೇ ಹೋರಿಗಳನ್ನು ಲಕ್ಷಾಂತರ ರೂಪಾಯಿಗೆ ಹೊರ ರಾಜ್ಯಗಳಿಂದ, ವಿಷೇಶವಾಗಿ ತಮಿಳುನಾಡಿನಿಂದ ಖರೀದಿಸಿ ಅವುಗಳಿಗೆ ತಾಲೀಮು ಕೊಡುತ್ತಾರೆ. ಈ ಬಾರಿ ಕೂಡ ಹೊಸ ಹೋರಿಗಳು ಶಿಕಾರಿಪುರಕ್ಕೆ ಬಂದಿದ್ದು, ಪ್ರತಿ ದಿನ ಹೋರಿಗಳನ್ನು ಬೆಳಗ್ಗೆ ಮೈದಾನಕ್ಕೆ ಕರೆದುಕೊಂಡು ಹೋಗಿ ಓಡಿಸುವ ಹಾಗೂ ಹೋರಿಗಳಿಗೆ ಮೇವು ಹಿಂಡಿ ತಿನ್ನಿಸುವ, ಈಜುವ ತಯಾರಿ ನಡೆಸಿದ್ದಾರೆ.

ಹೋರಿ ಹಿಡಿಯಲು ಯುವಕರ ತಾಲೀಮು
ಈ ಬಾರಿ ಹೋರಿಗಳನ್ನು ಹಿಡಿದು ಬಹುಮಾನ ಪಡೆಯಬೇಕು ಎಂಬ ಹುಮ್ಮಸ್ಸಿನಿಂದ ಹಲವು ಯುವಕರು ಪ್ರತಿನಿತ್ಯ ಬೆಳಗ್ಗೆ ಓಡುವ, ಈಜುವ, ವ್ಯಾಯಾಮ ಮಾಡುವ ಮೂಲಕ ತಾಲೀಮು ನಡೆಸುತ್ತಿದ್ದಾರೆ. ಕಳೆದ ಬಾರಿ ಹಿಡಿಯಲು ಕೈತಪ್ಪಿದ ಹೋರಿಗಳನ್ನು ಈ ಬಾರಿ ಹಿಡಿಯಲೇಬೇಕು ಎಂದು ಕಾಯುತ್ತಿದ್ದಾರೆ. ಜೀವದ ಭಯವನ್ನು ಬಿಟ್ಟು ಹೋರಿ ಹಿಡಿಯುವ ಯುವಕರ ಧೈರ್ಯ ಸಾಹಸವೇ ಸರಿ.

ಹೋರಿಗಳಿಗೆ ಕೊಬ್ಬರಿ ಸರ
ದೀಪಾವಳಿ ಹಬ್ಬವೆಂದರೆ ರೈತರ ಹಬ್ಬ. ಅನ್ನ ನೀಡುವ ಭೂತಾಯಿಗೆ ಪೂಜೆ ಸಲ್ಲಿಸಿ ನಂತರ ಬೇಸಾಯಕ್ಕೆ ಬಳಸುವ ಎತ್ತಿನಗಾಡಿ, ಹೋರಿಗಳು, ವ್ಯವಸಾಯದ ಸಾಮಗ್ರಿಗಳನ್ನು ಅಲಂಕರಿಸಿ ಪೂಜಿಸುತ್ತಾರೆ. ಹೋರಿ ಮಾಲೀಕರು ಹೋರಿಗಳಿಗೆ ಪೂಜೆ ಸಲ್ಲಿಸಿ ವಿಶೇಷವಾಗಿ ಅಲಂಕರಿಸುತ್ತಾರೆ. ಅವುಗಳಿಗೆ ಕೊಬ್ಬರಿ ಸರ ಪಿಪಿ (ಬಲೂನ್)ಗಳನ್ನು ಹಾಕುತ್ತಾರೆ. ಸುಮಾರು 5 ಅಡಿಗಿಂತ ಹೆಚ್ಚು ಎತ್ತರದ ಬಲೂನ್ ಗಳನ್ನು ಹೋರಿಗಳ ಕೊಂಬಿಗೆ ಕಟ್ಟಲಾಗುತ್ತದೆ. ಕೊಬ್ಬರಿಗಳನ್ನು ಸೊಂಟಕ್ಕೆ ಬೆನ್ನಿಗೆ ಹೋರಿಯ ಸಾಮರ್ಥ್ಯಕ್ಕೆ ಅನುಗುಣವಾಗಿ ಕಟ್ಟುತ್ತಾರೆ. ಅನೇಕ ಬಣ್ಣಗಳಿಂದ ಹೋರಿಗಳನ್ನು ಸಿಂಗಾರ ಮಾಡಲಾಗುತ್ತದೆ. ಹೋರಿ ಮಾಲೀಕರು ತಮಗಿಷ್ಟವಾದ ಹೆಸರನ್ನು ಹೋರಿಗಳಿಗೆ ಇಡುತ್ತಾರೆ.

ಬಯಲು ಸೀಮೆಯ ಪ್ರಸಿದ್ಧ ಕ್ರೀಡೆ
ಹೋರಿ ಹಬ್ಬ ಅಥವಾ ಹಟ್ಟಿ ಹಬ್ಬ ಎಂದು ಕರೆಯಲಾಗುವ ಈ ಹಬ್ಬ ಬಯಲು ಸೀಮೆ ಭಾಗದಲ್ಲಿ ಪ್ರಸಿದ್ಧಿ ಹೊಂದಿದೆ. ಶಿಕಾರಿಪುರ ತಾಲೂಕು ಬಯಲುಸೀಮೆ ಭಾಗಕ್ಕೆ ಹೊಂದಿಕೊಂಡಿರುವುದರಿಂದ ಈ ತಾಲೂಕಿನ ಅನೇಕ ಗ್ರಾಮೀಣ ಭಾಗದಲ್ಲೂ ಆಚರಿಸಲಾಗುವುದು. ಗ್ರಾಮದಲ್ಲಿ ಹಬ್ಬಕ್ಕೆ ಒಂದು ಸಮಿತಿ ಮಾಡಿಕೊಂಡು ಹಬ್ಬ ಆಚರಿಸುತ್ತಾರೆ. ಹೋರಿ ಹಬ್ಬವನ್ನು ಶಿಕಾರಿಪುರ, ಸೊರಬ, ಶಿರಾಳಕೊಪ್ಪ ಹಾಗೂ ಜಿಲ್ಲೆಯ ಅನೇಕ ಗ್ರಾಮೀಣ ಭಾಗದಲ್ಲಿ ಹಟ್ಟಿ ಹಬ್ಬ ಎಂದು ಆಚರಿಸಲಾಗುತ್ತದೆ. ಅತಿ ಹೆಚ್ಚು ರೈತರು ಯುವಜನತೆಯ ಈ ಹಬ್ಬ ನೋಡಲು ಆಗಮಿಸುತ್ತಾರೆ.

ಹೋರಿ ಹಬ್ಬಕ್ಕೆ ಕಾನೂನಿನ ತೊಡಕು
ಹೋರಿ ಬೆದರಿಸುವ ಹಬ್ಬಕ್ಕೆ ಕಾನೂನು ಅಡ್ಡಿಪಡಿಸಿದೆ. ಹೋರಿ ಹಬ್ಬಕ್ಕೆ ಅನುಮತಿ ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಹೋರಿ ಹಬ್ಬ ಹೋರಾಟ ಸಮಿತಿ ಸದಸ್ಯರು ಮನವಿಯನ್ನು ಕೂಡ ಸಲ್ಲಿಸಿದ್ದರು.
ದೀಪಾವಳಿಯ ಸಂದರ್ಭದಲ್ಲಿ ರೈತರು ಜಾನುವಾರುಗಳನ್ನು ಸಿಂಗಾರ ಮಾಡಿ ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆಯಿಂದ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಲು ಎಲ್ಲಾ ಹೋರಿ ಹಬ್ಬದ ಸಮಿತಿಯವರಿಗೆ ಗ್ರಾಮೀಣ ಭಾಗದ ಎಲ್ಲಾ ಗ್ರಾಮ ಮುಖ್ಯಸ್ಥರಿಗೆ ಪೋಲಿಸ್ ವೃತ್ತ ನಿರೀಕ್ಷಕ ಬಸವರಾಜ್ ಸೂಚಿಸಿದ್ದಾರೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications