ವಿಶೇಷ: ಇದು ಸಿಡಿಸುವ ಪಟಾಕಿ ಅಲ್ಲ, ತಿನ್ನುವ ಪಟಾಕಿ!
ಇಂದು ದೀಪಾವಳಿ ಎಂದರೆ ಕೇವಲ ಬೆಳಕಿನ ಹಬ್ಬವಾಗಿ ಉಳಿದಿಲ್ಲ. ಬಹುತೇಕರು ದೀಪಾವಳಿ ಎಂದರೆ 'ಪಟಾಕಿ ಹಬ್ಬ' ಎಂದೇ ಭಾವಿಸಿದ್ದಾರೆ. ಆದರೆ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಬ್ಬದ ವಿಶೇಷ ಏನು ಗೊತ್ತಾ? ಇಲ್ಲಿ ಪಟಾಕಿಯನ್ನು ಸುಡುವುದಿಲ್ಲ ಬದಲಿಗೆ ತಿನ್ನುತ್ತಾರೆ!
ಆಶ್ಚರ್ಯವಾದರೂ ನಿಜ, ಸುರ್ಸುರ್ ಬತ್ತಿ, ಕೃಷ್ಣನ ಚಕ್ರ, ಬಾಂಬು, ರಾಕೆಟ್, ಲಕ್ಷ್ಮಿ ಪಟಾಕಿ ಎಲ್ಲವೂ ಇಲ್ಲಿ ಚಾಕೋಲೇಟ್ ರೂಪ ಪಡೆದುಕೊಂಡಿವೆ. ನಿಮಗಿಷ್ಟವಾದ ಪಟಾಕಿ ಮಾದರಿಯಲ್ಲಿ ಚಾಕೋಲೇಟ್ ಪಟಾಕಿ ಸಿಗುತ್ತದೆ. ಸಾಮಾನ್ಯವಾಗಿ ಉತ್ತರಭಾರತದಲ್ಲಿ ಪಟಾಕಿ ರೂಪದ ಚಾಕೋಲೇಟ್ ಹೆಚ್ಚು ಫೇಮಸ್. ದೀಪಾವಳಿ ಬಂದರೆ ಸಾಕು ಮಕ್ಕಳು ವಿನೂತನ ಬಗೆಯ ಚಾಕೋಲೇಟ್ ಪಟಾಕಿಯನ್ನು ಸವಿಯಲು ಇಷ್ಟಪಡುತ್ತಾರೆ.
ನೆಲ ಚಕ್ರದ ಬರ್ಫಿ, ನಕ್ಷತ್ರ ಕಡ್ಡಿಯ ಚಾಕೋಲೇಟ್, ಸಿಹಿಸಿಹಿ ಸುರ್ಸುರ್ ಬತ್ತಿಯಿಂದ ಹಿಡಿದು ಎಲ್ಲ ಬಗೆಯ ತಿನಿಸುಗಳು ಬೇಕರಿಯಲ್ಲಿ ಸಿಗುತ್ತವೆ. ಪಟಾಕಿ ರೂಪ ಈ ತಿನಿಸುಗಳನ್ನು ನೋಡಿದವರು ಕ್ಷಣ ಕಾಲ ಆತಂಕಗೊಳ್ಳದೆ ಇರಲಾರರು. ಅಂತೆಯೇ ಅರಮನೆ ನಗರಿ ಮೈಸೂರಿನಲ್ಲೂ ಇದೀಗ ಪಟಾಕಿ ಚಾಕೋಲೇಟ್ ಮಕ್ಕಳ ಆಕರ್ಷಣೆ ಕೇಂದ್ರಬಿಂದುವಾಗಿವೆ. ಸುಡುಮದ್ದುಗಳೆಲ್ಲಾ ಇಲ್ಲಿ ಸಿಹಿತಿಂಡಿಯಾಗಿ ಪರಿವರ್ತನೆಯಾಗಿವೆ!

3 ವರ್ಷದಿಂದ ಚಾಕೊಲೇಟ್ ಪಟಾಕಿ
ಕಳೆದ ಎರಡು ದಶಕಗಳಿಂದ ಚಾಕೊಲೇಟ್ ಉದ್ಯಮದಲ್ಲಿ ಮೈಸೂರಿನ 'ಕೊಕೊ ವರ್ಕ್ಸ್' ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಇದೀಗ ಮೂರು ವರ್ಷದಿಂದ ಸಿಹಿತಿನಿಸಿನ ಚಾಕೋಲೇಟ್ ಪಟಾಕಿಗಳನ್ನು ಕೊಕೊ ವರ್ಕ್ಸ್ ತಯಾರಿಸುತ್ತಿದೆ. ಗೋಡಂಬಿ ಹಾಗೂ ಡ್ರೈ ಪ್ರೂಟ್ಸ್ಗಳನ್ನು ಬಳಸಿ ವಿವಿಧ ನಮೂನೆಯ ಚಾಕೋಲೇಟ್ಗಳನ್ನು ಮಾಡಲಾಗುತ್ತದೆ.

ಚಾಕೊಲೇಟ್ ಪಟಾಕಿ ತಯಾರಿಸುವ ವಿಧಾನ
ಮೊದಲಿಗೆ ಚಾಕೊಲೇಟ್ ಕರಗಿಸಿ, ಅವುಗಳನ್ನು ಹದಗೊಳಿಸಿ ನಂತರ ಅವುಗಳನ್ನು ಪಟಾಕಿ ಆಕಾರದ ಅಚ್ಚುಗಳಾಗಿ ಅಚ್ಚು ಮಾಡಲಾಗುತ್ತದೆ. ಬಳಿಕ ಅದನ್ನು ಸುತ್ತಿ ಆಯಾ ಪಟಾಕಿಯ ಸ್ಟಿಕ್ಕರ್ ಅನ್ನು ಅಂಟಿಸಲಾಗುತ್ತದೆ. ಜೊತೆಗೆ ಕ್ರ್ಯಾಕರ್ನಂತೆ ಕಾಣುವ ಹಾಗೆ ಮಾಡಲಾಗುತ್ತದೆ. ಈ ವರ್ಷ 1 ಸಾವಿರ ಬಾಕ್ಸ್ ಖಾಲಿಯಾಗಿದ್ದು, ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕೊಕೊ ವರ್ಕ್ಸ್ ಮಾಲೀಕರಾದ ಪೂರ್ಣಿಮಾ
''ನಾವು ಕಳೆದ 3 ವರ್ಷದಿಂದ ಚಾಕೋಲೇಟ್ ಪಟಾಕಿ ತಯಾರಿಸುತ್ತಿದ್ದೇವೆ. ಮೈಸೂರು ಮಾತ್ರವಲ್ಲದೆ ಬೆಂಗಳೂರು ಸೇರಿದಂತೆ ವಿವಿಧೆಡೆಗೂ ಕಳುಹಿಸಿಕೊಡುತ್ತೇವೆ. ಉತ್ತರ ಭಾರತದಲ್ಲಿ ಚಾಕೋಲೇಟ್ನಿಂದ ತಯಾರಿಸಿದ ಪಟಾಕಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ವರ್ಷದಿಂದ ವರ್ಷಕ್ಕೆ ಜನರ ಸ್ಪಂದನೆ ಚೆನ್ನಾಗಿದೆ,'' ಎನ್ನುತ್ತಾರೆ ಕೊಕೊ ವರ್ಕ್ಸ್ ಮಾಲೀಕರಾದ ಪೂರ್ಣಿಮಾ.

ಮಕ್ಕಳಿಗೆ ಅಚ್ಚುಮೆಚ್ಚು
ಸಾಮಾನ್ಯವಾಗಿ ದೀಪಾವಳಿ ಬಂದರೆ ಸಾಕು ಮಕ್ಕಳು ಪೋಷಕರನ್ನು ಪಟಾಕಿ ತೆಗೆದುಕೊಡಿ ಎಂದು ಹಠ ಹಿಡಿಯುತ್ತಾರೆ. ಆದರೆ, ಪಟಾಕಿಯಿಂದ ಶಬ್ದ ಹಾಗೂ ವಾಯು ಮಾಲಿನ್ಯ ಉಂಟಾಗುತ್ತದೆ. ಇದು ಗೊತ್ತಿದ್ದರೂ ಮಕ್ಕಳು ಹಠಕ್ಕೆ ಬಿದ್ದಾಗ ಪೋಷಕರು ಅನಿವಾರ್ಯವಾಗಿ ಕೊಡಿಸುತ್ತಾರೆ. ಆದರೆ, ಮತ್ತೆ ಕೆಲವರು ಆಕಾಶ ಬುಟ್ಟಿ ತೆಗೆದುಕೊಟ್ಟು ಸಮಾಧಾನ ಮಾಡುತ್ತಾರೆ. ಆದರೆ, ಇದೀಗ ಪಟಾಕಿ ಹೋಲುವ ಚಾಕೊಲೇಟ್ ಇರುವುದರಿಂದ ಬಹುತೇಕರು ಪಟಾಕಿ ಬದಲು ಇದನ್ನೇ ಕೊಡಿಸುತ್ತಿದ್ದಾರೆ. ಇದು ಮಕ್ಕಳಿಗೂ ತುಂಬಾ ಇಷ್ಟವಾಗಿದ್ದು, ಬೇಡಿಕೆಯೂ ಸೃಷ್ಟಿಯಾಗಿದೆ.

ಬಾಲಕ ಮನೋಹರ್ ಖುಷಿ ವ್ಯಕ್ತಪಡಿಸಿದ್ದಾನೆ
''ವರ್ಷದಿಂದ ವರ್ಷಕ್ಕೆ ಪಟಾಕಿ ಸಿಡಿಸುವವರ ಮನಸ್ಥಿತಿ ಬದಲಾಗುತ್ತಿದೆ. ನಾನು ಕೂಡ ಕಳೆದ ಎರಡು ವರ್ಷದಿಂದ ಪಟಾಕಿ ಕೊಡಿಸಿ ಎಂದು ಅಪ್ಪಅಮ್ಮನನ್ನು ಕೇಳುವುದಿಲ್ಲ. ಪರಿಸರ ಉಳಿದರೆ ಮಾತ್ರ ನಾವು ಉಳಿಯುತ್ತೇವೆ. ಹಾಗಾಗಿ ಕಳೆದ ವರ್ಷದಿಂದ ನಾನು ಪಟಾಕಿ ಚಾಕೋಲೇಟ್ ತಿನ್ನುವುದನ್ನು ಇಷ್ಟಪಡುತ್ತಿದ್ದೇನೆ. ಈ ಚಾಕೋಲೇಟ್ ತಿಂದರೆ ಪಟಾಕಿ ಹೊಡೆದಷ್ಟೇ ಖುಷಿ ಸಿಗುತ್ತದೆ,'' ಎಂದು ವಿಜಯನಗರ ಬಾಲಕ ಮನೋಹರ್ ಖುಷಿ ವ್ಯಕ್ತಪಡಿಸಿದ್ದಾನೆ.
-
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ












Click it and Unblock the Notifications