ನಾಗರ ಹಾವಿಗೆ ಸಾಬೂನಿನಿಂದ ಸ್ನಾನ: ವಿಡಿಯೋ ಕಂಡು ಬೆಚ್ಚಿಬಿದ್ದ ಜನ
ವಿಶ್ವದ ಅತ್ಯಂತ ಅಪಾಯಕಾರಿ ಜೀವಿಗಳ ಪಟ್ಟಿ ಮಾಡಿದರೆ, ಕಿಂಗ್ ಕೋಬ್ರಾ ಅಗ್ರಸ್ಥಾನದಲ್ಲಿದೆ. ಇದರ ವಿಷವು ಆನೆಯಂತಹ ಬೃಹತ್ ಪ್ರಾಣಿಯನ್ನೂ ನಿದ್ದೆಗೆಡಿಸುತ್ತದೆ. ಮನುಷ್ಯರು ಅವನೊಂದಿಗೆ ಮುಖಾಮುಖಿಯಾದಾಗ, ಅವರು ತಮ್ಮ ಮಾರ್ಗವನ್ನು ಬದಲಾಯಿಸುತ್ತಾರೆ. ಆದರೆ ಈಗ ವಿಡಿಯೊ ಇನ್ಟಾಗ್ರಾಮ್ನಲ್ಲಿ ವೈರಲ್ ಆಗುತ್ತಿದ್ದು ಇದನ್ನು ನೋಡಿ ಜನ ಆಶ್ಚರ್ಯಚಕಿತರಾಗಿದ್ದಾರೆ.
ವೈರಲ್ ಆಗಿರುವ ವಿಡಿಯೋ ಎಲ್ಲಿಂದ ಬಂದಿದೆ ಎಂಬುದು ತಿಳಿದಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಬಾತ್ರೂಮ್ನಲ್ಲಿ ನಾಗರ ಹಾವು ಕುಳಿತಿರುವುದು ಕಾಣುತ್ತದೆ. ಅದರ ಪಕ್ಕದಲ್ಲಿ ಒಬ್ಬ ವ್ಯಕ್ತಿ ನಿಂತಿದ್ದಾನೆ. ಮೊದಲು ನಾಗರಹಾವಿನ ಮೇಲೆ ವ್ಯಕ್ತಿ ನೀರು ಸುರಿಯುತ್ತಾನೆ. ಇದಾದ ನಂತರ ಅದಕ್ಕೆ ಸಾಬೂನು ಹಚ್ಚಲು ಆರಂಭಿಸುತ್ತಾನೆ. ಆತ ಬಹಳ ಹೊತ್ತು ನಾಗರ ಹಾವಿಗೆ ನೀರಿನಿಂದ ಸ್ನಾನ ಮಾಡಿಸುತ್ತಾನೆ.
ನಾಗರಹಾವಿಗೆ ಸ್ನಾನ
ಈ ವಿಡಿಯೊವನ್ನು SAKHT LOGG ಹೆಸರಿನ Instagram ಹ್ಯಾಂಡಲ್ನಿಂದ ಅಪ್ಲೋಡ್ ಮಾಡಲಾಗಿದೆ. ಅದರೊಂದಿಗೆ ಶೀರ್ಷಿಕೆ ಹೀಗಿದೆ - 'ತಣ್ಣೀರಿನಿಂದ ಸ್ನಾನ ಮಾಡುವುದರಿಂದ ಮಹಿಳೆಯರು ಪುರುಷರಿಗಿಂತ ಹೆಚ್ಚು ಕಾಲ ಬದುಕುತ್ತಾರೆ' ಎಂದು ಬರೆಯಲಾಗಿದೆ.
— Ashutosh Tiwari (@tiwari_ashu11) December 2, 2022
ಈ ವಿಡಿಯೋವನ್ನು ಜನರು ಕೂಡ ತುಂಬಾ ಆನಂದಿಸಿದ್ದಾರೆ. ಜೊತೆಗೆ ಕಾಮೆಂಟ್ ಮಾಡಿದ್ದಾರೆ. 'ಸಹೋದರ, ನೀವು ಸೋಪಿನಿಂದ ಸ್ನಾನ ಮಾಡಿಸಲು ಅದು ನಿಮ್ಮ ಮಗು ಅಲ್ಲ' ಎಮದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ 'ಸಹೋದರ, ಸುರಕ್ಷಿತವಾಗಿರಿ, ಇಲ್ಲದಿದ್ದರೆ ಜನರು ನಿಮ್ಮ ಅಂತ್ಯಕ್ರಿಯೆಯಲ್ಲಿ ಸ್ನಾನ ಮಾಡಬೇಕಾದ ಪರಿಸ್ಥಿತಿ ಬಂದೊದಗಬಹುದು' ಎಂದು ಬರೆದಿದ್ದಾರೆ. 'ಇದನ್ನು ನೋಡಿದ ನನಗೆ ನನ್ನ ಮಾಜಿ ಗೆಳೆಯ ನೆನಪಾಯಿತು' ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.

ಅಂದಹಾಗೆ, ಹಲವೆಡೆ ಹಾವುಗಳನ್ನು ಸಾಕುವ ಪದ್ಧತಿ ಇದೆ. ಇದರಲ್ಲಿ ಮಹಾರಾಷ್ಟ್ರದ ಶೆಟ್ಪಾಲ್ ಗ್ರಾಮವೂ ಸೇರಿದೆ. ಅಲ್ಲಿ ಪ್ರತಿ ಮನೆಯಲ್ಲೂ ನಾಗರ ಹಾವು ಸಾಕುತ್ತಾರೆ. ಜನರು ಆರಾಮವಾಗಿ ವಾಸಿಸುವ ಮನೆಯಲ್ಲಿ ಹಾವುಗಳಿಗಾಗಿ ವಿಶೇಷ ಸ್ಥಳವನ್ನು ಮಾಡಿರುತ್ತಾರೆ. ಹಾವುಗಳು ಮನೆಯಲ್ಲಿ ಶಾಂತವಾಗಿ ವಾಸಿಸುತ್ತವೆ ಮತ್ತು ಯಾರಿಗೂ ಹಾನಿ ಮಾಡಿಲ್ಲ ಎಂದು ಹೇಳಲಾಗುತ್ತದೆ. ಈ ವಿಶೇಷತೆಯಿಂದಾಗಿ ಅನೇಕ ಜನರು ಈ ಗ್ರಾಮಕ್ಕೆ ಭೇಟಿ ನೀಡುತ್ತಾರೆ.
ನಾಗರಹಾವು ಎಷ್ಟು ಅಪಾಯಕಾರಿ?
ನಾಗರಹಾವು ಹಾವುಗಳ ರಾಜ ಎಂದು ಪರಿಗಣಿಸಲ್ಪಟ್ಟಿದೆ. ಅದಕ್ಕಾಗಿಯೇ ಅವನಿಗೆ ಕಿಂಗ್ ಕೋಬ್ರಾ ಎಂಬ ಹೆಸರು ಬಂದಿದೆ. ಇವು 10 ಅಡಿಯಿಂದ 13 ಅಡಿ ಎತ್ತರದವರೆಗೆ ಬೆಳೆಯುತ್ತವೆ. 20 ನೇ ಶತಮಾನದಲ್ಲಿ 18 ಅಡಿ 9 ಇಂಚುಗಳ ನಾಗರಹಾವು ಮಲೇಷ್ಯಾದಲ್ಲಿ ಕಂಡುಬಂದಿದೆ. ಇದರ ವಿಷವು ಮಾನವರು ಮತ್ತು ಇತರ ಜೀವಿಗಳ ನರಮಂಡಲದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇದು ಕಚ್ಚುವುದರಿಂದ ಮೂರ್ಛೆ, ಮಂದ ದೃಷ್ಟಿ, ಪಾರ್ಶ್ವವಾಯು ಮುಂತಾದ ಪರಿಣಾಮಗಳು ತಕ್ಷಣವೇ ಕಂಡುಬರುತ್ತವೆ. ನಾಗರಹಾವು 5400 ಕೆಜಿ ತೂಕದ ಆನೆಯನ್ನು 3 ಗಂಟೆಗಳಲ್ಲಿ ಕೊಲ್ಲಬಲ್ಲದು.
-
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ












Click it and Unblock the Notifications