ಹೊನ್ನಾವರ: ಶ್ರೀಧರರು ಭೇಟಿ ನೀಡಿದ್ದ ಶ್ರೀಕ್ಷೇತ್ರ ಧನ್ವಂತರೀ ಮಹಾವಿಷ್ಣು ದೇವಾಲಯ
ಕಾರವಾರ, ಫೆಬ್ರವರಿ 4: ಶ್ರೀ ಕ್ಷೇತ್ರ ಧನ್ವಂತರೀ ಮಹಾವಿಷ್ಣು ದೇವಸ್ಥಾನ ಯಲಗುಪ್ಪಾವು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಖರ್ವಾ ಗ್ರಾಮದಲ್ಲಿದೆ. ಶ್ರೀ ಕ್ಷೇತ್ರದ ಧನ್ವಂತರೀ ಮಹಾವಿಷ್ಣು ದೇವರ ವಿಗ್ರಹವು ಕಪ್ಪುಶಿಲೆಯಿಂದ ಕೆತ್ತಲ್ಪಟ್ಟಿದ್ದು, ಒಂದು ಕೈಯಲ್ಲಿ ಶಂಖ ಹಾಗೂ ಇನ್ನೊಂದು ಕೈಯಲ್ಲಿ ದಂಡ ಹಿಡಿದಿದ್ದಾನೆ. ಪೀತಾಂಬರ ದಾರಿಯಾದ ಶ್ರೀ ದೇವರ ಕುತ್ತಿಗೆಯಲ್ಲಿ ಮಾಣಿಕ್ಯದ ಹಾರವಿದ್ದು ಕಮಲ ದಳಗಳ ಮೇಲೆ ಆಸೀನರಾಗಿದ್ದಾರೆ.
ಶ್ರೀ ಶ್ರೀಧರರು ಖುದ್ದಾಗಿ ಭೇಟಿ ನೀಡಿ ಈ ಕ್ಷೇತ್ರದಲ್ಲಿ ಸಾಕ್ಷಾತ್ ಮಹಾವಿಷ್ಣುವೇ ನೆಲೆಸಿದ್ದು, ಇಲ್ಲಿನ ಪುಷ್ಕರಣೀಯಲ್ಲಿ ತೀರ್ಥಸ್ನಾನ ಮಾಡಿ ದೇವರಲ್ಲಿ ಪೂಜಾ ಕೈಂಕರ್ಯ ಹಾಗೂ ದೇವರ ಸೇವೆಗಳನ್ನು ಮಾಡಿದವರ ಸಕಲ ರೋಗಗಳೂ ದೂರವಾಗಿ ಆರೋಗ್ಯ ಪೂರ್ಣರಾಗಿ ಜೀವನ ನಡೆಸುತ್ತಾರೆ ಎಂಬುದಾಗಿ ತಮ್ಮ ಭಕ್ತ ಕೋಟಿಗೆ ತಿಳಿಸಿದ್ದಾರೆ.
ದೇಹದ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಿಂದು ಪುರಾಣ ಹಾಗೂ ಗ್ರಂಥಗಳಲ್ಲಿ ಉಲ್ಲೇಖಿಸಿರುವಂತಹ ಆಯುರ್ವೇದ ಶಾಸ್ತ್ರವು ಅನೇಕ ದೇಶಗಳಿಂದ ಮಾನ್ಯತೆ ಪಡೆದಿದ್ದು, ಪ್ರಕೃತಿ ಸಹಜವಾದ ದೇಹದ ಎಲ್ಲಾ ರೋಗಗಳಿಗೆ ನೀಡುವ ಚಿಕಿತ್ಸಾಶಾಸ್ತ್ರವಾಗಿದೆ. ಶ್ರೀ ದೇವ ಧನ್ವಂತರಿಯು ಸಾಕ್ಷಾತ್ ವಿಷ್ಣುವೇ ಆಗಿದ್ದು, ಆರೋಗ್ಯಕ್ಕೆ ಸಂಬಂಧಿಸಿದ ದೇವನಾಗಿದ್ದಾನೆ. ಶ್ರೀ ದೇವರನ್ನು ದೇವತಾ ಪುರಾಣಗಳಲ್ಲಿ ದೇವತೆಗಳ ವೈದ್ಯ, ಆಯುರ್ವೇದದ ದೇವ ಎಂಬ ಬಿರುದುಗಳೊಂದಿಗೆ ಕೊಂಡಾಡಿದ್ದಾರೆ. ಇಂದಿಗೂ ನಾವು ಆರೋಗ್ಯಕ್ಕಾಗಿ ಶ್ರೀ ಧನ್ವಂತರಿಯನ್ನು ಆರಾಧಿಸುವ ಹಾಗೂ ಪೂಜಿಸುವ ಪದ್ಧತಿಯಿದೆ.

ಸರ್ವರೋಗಗಳಿಗೂ ಆಯುರ್ವೇದದಲ್ಲಿ ಚಿಕಿತ್ಸೆಯಿದೆ ಎಂಬಂತೆಯೇ, ಎಲ್ಲಾ ತರಹದ ಔಷಧಗಳನ್ನು ಶ್ರೀದೇವರಲ್ಲಿ ಪ್ರಾರ್ಥನೆಗಳೊಂದಿಗೆ ಅಭಿಮಂತ್ರಿಸಿ ರೋಗಿಗಳಿಗೆ ನೀಡಿ ಗುಣಪಡಿಸಲಾಗುತ್ತದೆ. ಅದರಲ್ಲಿಯೂ ವಿಶೇಷವಾಗಿ ಡಯಾಬಿಟೀಸ್, ಕಿಡ್ನಿ ಸ್ಟೋನ್ (ಮುತ್ರಾಶಯದಲ್ಲಿ ಕಲ್ಲು) ಹಾಗೂ ಹಲವು ವಿಧಗಳ ಚರ್ಮರೋಗಗಳಿಗೆ ಔಷಧೋಪಚಾರ ಮಾಡಿ ಗುಣಪಡಿಸಲಾಗುತ್ತದೆ. ಆಸಿಡಿಟಿ, ಗ್ಯಾಸ್ಟ್ರಿಕ್ (ಅಜೀರ್ಣ) ನಿಂದಾಗುವ ಆರೋಗ್ಯ ಸಮಸ್ಯೆಗೆ ಶ್ರೀಕ್ಷೇತ್ರದಲ್ಲಿ ಕೊಡಲಾಗುವ ಕಷಾಯ ಅತ್ಯಂತ ಜನಪ್ರಿಯ ಹಾಗೂ ಪ್ರಭಾವಶಾಲಿಯಾಗಿದೆ.
ಚಮತ್ಕಾರ ಎಂಬತೆಯೇ ಯಾವುದೇ ರಾಸಾಯನಿಕ ಸಂರಕ್ಷಕಗಳನ್ನೂ ಹಾಕದೆ ಇರುವ ಈ ಔಷಧವನ್ನು ಎಷ್ಟೇ ವರ್ಷಗಳ ಕಾಲ ಹಾಗೆಯೇ ಇಟ್ಟರೂ ಕೆಡದೇ ತನ್ನ ಗುಣವನ್ನು ಹಾಗೆಯೇ ಉಳಿಸಿಕೊಳ್ಳುತ್ತದೆ. ಸ್ತ್ರಿಯರಿಗೆ ಋತುಚಕ್ರ ಅಥವಾ ಮುಟ್ಟಿನ ಸಮಯದಲ್ಲಿ ಹಾಗೂ ಇತರೆ ಕಾರಣಗಳಿಂದಾಗಿ ಬರುವ ಹೊಟ್ಟೆನೋವಿಗೂ ಈ ಮೇಲಿನ ಕಷಾಯ ರೂಪದ ಔಷಧವು ದಿವ್ಯಾಮೃತವಾಗಿದೆ. ಕ್ಷೇತ್ರದ ಆಡಳಿತ ಮಂಡಳಿಯವರು ನಿಯೋಜಿಸಿದ ಪರಂಪರಾಗತ ವೈದೈರ ಮೂಲಕ ಕ್ಷೇತ್ರಕ್ಕೆ ಬಂದ ರೋಗಿಗಳಿಗೆ ಔಷಧೋಪಚಾರಗಳನ್ನು ಮಾಡಲಾಗುತ್ತದೆ ಹಾಗೂ ಬಹುತೇಕ ಎಲ್ಲಾ ತರಹದ ಔಷಧಗಳು ಪ್ರಾಕೃತಿಕ ಧತ್ತವಾಗಿ ಸಿಗುವ ಗಿಡ ಮೂಲಿಕೆಗಳಿಂದ ತಯಾರು ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಜಿ. ಕೆ. ಹೆಗಡೆಯವರನ್ನು ಸಂಪರ್ಕಿಸಿ: 09731487135/ 09480604040
ಸಂಪರ್ಕ ಮಾಹಿತಿ:
ಶ್ರೀಕ್ಷೇತ್ರ ಧನ್ವಂತರೀ ಮಹಾವಿಷ್ಣು ದೇವ ಆಡಳಿತ ಮಂಡಳಿ
ಯಲಗುಪ್ಪಾ, ಪೋ.ಖರ್ವಾ, ತಾ.ಹೊನ್ನಾವರ (ಉ.ಕ)
ರಸ್ತೆ ಸಾರಿಗೆ ಸೌಲಭ್ಯ
ಬೆಂಗಳೂರು > ಶಿವಮೊಗ್ಗ > ಸಾಗರ > ಗೇರುಸೊಪ್ಪಾ > ಶ್ರೀಕ್ಷೇತ್ರ ಧನ್ವಂತರೀ ಮಹಾವಿಷ್ಣು ದೇವ
ಬೆಂಗಳೂರು > ಹಾವೇರಿ > ಶಿರಸಿ > ಕುಮಟಾ > ಹೊನ್ನಾವರ > ಶ್ರೀಕ್ಷೇತ್ರ ಧನ್ವಂತರೀ ಮಹಾವಿಷ್ಣು ದೇವ
ಮಂಗಳೂರು > ಉಡುಪಿ > ಭಟ್ಕಳ > ಹೊನ್ನಾವರ > ಶ್ರೀಕ್ಷೇತ್ರ ಧನ್ವಂತರೀ ಮಹಾವಿಷ್ಣು ದೇವ
ಹುಬ್ಬಳ್ಳಿ > ಶಿರಸಿ > ಕುಮಟಾ > ಹೊನ್ನಾವರ > ಶ್ರೀಕ್ಷೇತ್ರ ಧನ್ವಂತರೀ ಮಹಾವಿಷ್ಣು ದೇವ
ಗೋವಾ > ಕಾರವಾರ > ಕುಮಟಾ > ಹೊನ್ನಾವರ > ಶ್ರೀಕ್ಷೇತ್ರ ಧನ್ವಂತರೀ ಮಹಾವಿಷ್ಣು ದೇವ
-
ರಶ್ಮಿಕಾ ಮೊದಲ ಸಿನಿಮಾದಲ್ಲಿ ನಾನು ಹೀರೋ, ನೀನು ಬಾಲಿವುಡ್ಗೆ ಪಕ್ಕಾ ಹೋಗ್ತೀಯ ಎಂದಿದ್ದೆ: ನಟ ತ್ರಿವಿಕ್ರಮ್ -
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಜೋಡಿಯಿಂದ ಕರ್ನಾಟಕ ಸೇರಿ ದೇಶದ ಪ್ರಮುಖ ದೇವಸ್ಥಾನಗಳಲ್ಲಿ ಅನ್ನದಾನ ಸೇವೆ -
LPG Price: ಎಲ್ಪಿಜಿ ಗ್ಯಾಸ್ ಸಿಲಿಂಡರ್ ದರದಲ್ಲಿ ಭಾರೀ ಏರಿಕೆ: ಇಲ್ಲಿದೆ ಮಾರ್ಚ್ 1ರ ದರಪಟ್ಟಿ -
Gold Rate Today: ಆಭರಣ ಪ್ರಿಯರ ಗಮನಕ್ಕೆ: ಬೆಂಗಳೂರಿನಲ್ಲಿ ಇಂದು ಚಿನ್ನ-ಬೆಳ್ಳಿ ದರ ಹೇಗಿದೆ? ಇಲ್ಲಿದೆ ಮಾಹಿತಿ -
National Highway: ರಾಜ್ಯದಲ್ಲಿ ಹೊಸ ರಾಷ್ಟ್ರೀಯ ಹೆದ್ದಾರಿಯ ಮಹತ್ವದ ಅಪ್ಡೇಟ್ -
ಬೇರೆ ದೇಶಗಳಂತೆ ಭಾರತೀಯರಿಗೆ ಭಯದಿಂದ ನಿದ್ರಿಸುವ ಪರಿಸ್ಥಿತಿ ಅಲ್ಲ: ನಿವೃತ್ತ ಸೇನಾಧಿಕಾರಿ ಸುನೀಲ್ ಕುಮಾರ್ ಶಾಸ್ತ್ರಿ -
ಇರಾನ್ ಸುಪ್ರೀಂ ಯತೊಲ್ಲಾ ಅಲಿ ಖಮೇನಿ ಅಂತ್ಯ: ವಿಶ್ವದ ಮೇಲೆ 5 ಪರಿಣಾಮ ಸಾಧ್ಯತೆ: ಆಶಿಶ್ ಸಾರಡ್ಕ ಬರಹ -
Thalapathy Vijay: 400 ಕೋಟಿ ಆಸ್ತಿಗೆ ಒಡತಿ, ಲಂಡನ್ ಬೆಡಗಿ: ಯಾವ ಸಿನಿಮಾಗೂ ಕಡಿಮೆ ಇಲ್ಲ ದಳಪತಿ ವಿಜಯ್-ಸಂಗೀತಾ ಲವ್ ಸ್ಟೋರಿ -
Karnataka Weather: ಕರ್ನಾಟಕದ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ, ಬಿಸಿಲೂ ಹೆಚ್ಚು -
ಮಾರ್ಚ್ 3, 2026 – ಪೂರ್ವ ಫಲ್ಗುಣಿ ನಕ್ಷತ್ರದಲ್ಲಿ ಕೇತುಗ್ರಸ್ತ ಮಹಾ ಚಂದ್ರಗ್ರಹಣ: ದ್ವಾದಶ ರಾಶಿಗಳ ಫಲಿತಾಂಶ -
ಕರ್ನಾಟಕದ 4 ರೈಲು ನಿಲ್ದಾಣ ಸೇರಿ 76 ಕಡೆ ಪ್ರಯಾಣಿಕರ ನಿಲುಗಡೆ ತಾಣ ನಿರ್ಮಾಣ, ಏನಿದರ ಪ್ರಯೋಜನ? -
ಅಮೆರಿಕಕ್ಕೆ ಸೆಡ್ಡು ಹೊಡೆದು 16,800 ಕೋಟಿ ರೂ ಒಪ್ಪಂದ ಕಡಿದುಕೊಂಡ ಆಂತ್ರೋಪಿಕ್: ಬೆಂಗಳೂರು ಟೆಕ್ಕಿ ಮೆಚ್ಚುಗೆ












Click it and Unblock the Notifications