ವಿಶ್ವ ಶ್ವಾನ ದಿನ: ಮನುಷ್ಯನ ಅತ್ಯಾಪ್ತ ಸ್ನೇಹಿತನೆಂದರೆ ನಾಯಿ
ಮನುಷ್ಯನ ಬದುಕಿನಲ್ಲಿ ನಾಯಿಗಳು ವಹಿಸುವ ಪಾತ್ರವೇನು ಮತ್ತು ಅವುಗಳ ಮಹತ್ವವೇನು ಎಂಬುದರ ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ಆಗಸ್ಟ್ 26 ಅನ್ನು 'ವಿಶ್ವ ಶ್ವಾನ ದಿನ'ವನ್ನಾಗಿ ಆಚರಿಸಲಾಗುತ್ತೆ.
ನಿಯತ್ತಿಗೆ ಮತ್ತೊಮದು ಹೆಸರಾದ ನಾಯ ಮನುಷ್ಯನ ಬದುಕಿನೊಂದಿಗೆ ಹೇಗೆ ಬೆಸೆದುಕೊಂಡಿದೆ, ಮತ್ತು ಬೀದಿ ನಾಯಿಗಳು ಎಷ್ಟು ಹಿಂಸೆಗೆ ಒಳಗಾಗುತ್ತಿವೆ ಎಂಬುದರತ್ತ ಬೆಳಕು ಚೆಲ್ಲುವ ಪ್ರಯತ್ನವನ್ನೂ ಈ ದಿನ ಮಾಡಲಾಗುತ್ತಿದೆ.
ಮಾಲೀಕರಿಗೋಸ್ಕರ ಪ್ರಾಣವನ್ನೂ ಒತ್ತೆ ಇಡಲು ಸಿದ್ಧವಾಗುವ ನಿಯತ್ತಿನ ಮತ್ತೊಂದು ಹೆಸರೇ ಆಗಿ ನಾಯಿ ಪ್ರಖ್ಯಾತಿ ಪಡೆದಿದೆ. ತರವೇವಾರಿ ಹಾತಿಯ ನಾಯಿಗಳನ್ನು ಸಾಕುವುದು ಒಂದು ಶೋಕಿಯಾಗುತ್ತಿರುವ ಈ ಹೊತ್ತಲ್ಲಿ, ಬೀದಿಯಲ್ಲಿ ಹೊಟ್ಟೆಗಿಲ್ಲದೆ ಅಸುನೀಗುತ್ತಿರುವ ನಾಯಿಗಳತ್ತ ಗಮನ ಹರಿಸಿ ಎಂಬ ಸಂದೇಶವನ್ನು ಈ ದಿನ ನೀಡುತ್ತಿದೆ.

ಶ್ವಾನ ದಿನದ ಬಗ್ಗೆ
2004 ರಲ್ಲಿ ಕಾಲ್ಲೀನ್ ಪೈಗೆ ಎಂಬುವವರು ಅಂತಾರಾಷ್ಟ್ರೀಯ ಶ್ವಾನ ದಿನವನ್ನು ಆರಂಭಿಸಿದರು. ಪ್ರಾಣಿ ಹಿತರಕ್ಷಣಾ ಅಡ್ವೋಕೇಟ್ ಆಗಿರುವ ಅವರು ಬೀದಿ ನಾಯಿಗಳ ರಕ್ಷಣೆ ಮತು ಅವುಗಳಿಗೆ ರಕ್ಷಣೆಯ ನೀಡುವ ಉದ್ದೇಶದಿಂದ ಈ ದಿನವನ್ನು ಆರಂಭಿಸಿದರು. ಬೀದಿ ನಾಯಿಗಳನ್ನು ದತ್ತು ಪಡದೆಯುವುದಕ್ಕೆ ಪ್ರೋತ್ಸಾಹ ನೀಡುವುದೂ ಅವರ ಉದ್ದೇಶವಾಗಿತ್ತು.

ಆಚರಣೆ ಹೇಗೆ?
ಈ ದಿನವನ್ನೂ ಹೀಗೆಯೇ ಆಚರಿಸಬೇಕು ಎಂದಿಲ್ಲ. ನೀವು ಸಾಕಿರುವ ನಾಯಿಗೆ ಹೆಚ್ಚಿನ ಸಮಯ ನೀಡಿ, ಅದರೊಂದಿಗೆ ಎಲ್ಲಾದರೂ ಪ್ರವಾಸಕ್ಕೆ ತೆರಲಿ, ಅಥವಾ ಬೀದಿಯಲ್ಲಿರುವ ನಾಯಿಗಳಿಗೆ ಆಹಾರ ನೀಡಿ, ಯಾವುದಾದರೂ ಒಂದು ಬೀದಿ ನಾಯಿಯನ್ನು ದತ್ತು ತೆಗೆದುಕೊಳ್ಳಿ, ಅಥವಾ ನಾಯಿಗಳ ರಕ್ಷಣೆಗಾಗಿ ಕೆಲಸ ಮಾಡುತ್ತಿರುವ ಸಂಘಟನೆಯೊಂದಿಗೆ ಗುರುತಿಸಿಕೊಂಡು ಅಲ್ಲಿನ ಸೇವಾಕಾರ್ಯದಲ್ಲಿ ಭಾಗಿಯಾಗಬಹುದು.

ನಿಮ್ಮನ್ನು ನೋಡಿ ಎಲ್ಲರಿಗಿಂತ ಹೆಚ್ಚು ಖುಷಿ ಪಡುವುದು ನಾಯಿ!
ನೀವು ಎಷ್ಟೋ ದಿನಗಳ ನಂತರ ವಾಪಸ್ ಮನೆಗೆ ಬಂದರೆ ಎಲ್ಲರಿಗಿಂತ ಹೆಚ್ಚು ಉದ್ವೇಗಕ್ಕೊಳಗಾಗುವುದು, ಖುಷಿ ಪಡುವುದು ನಿಮ್ಮ ನಾಯಿ! ನಾಯಿಗಳಿಗೆ ಮನುಷ್ಯನ ಮೇಲಿರುವಷ್ಟು ಬಾಂಧವ್ಯ, ಪ್ರೀತಿ ಬೇರೆ ಪ್ರಾಣಿಗಳಿಗೆ ಅಸಾಧ್ಯ. ಯಾವುದೇ ಸ್ವಾರ್ಥವಿಲ್ಲದೆ ಅವು ತನ್ನ ಒಡೆಯನನ್ನು ಪ್ರೀತಿಸುತ್ತವೆ.

ಮನುಷ್ಯನ ಉತ್ತಮ ಸ್ನೇಹಿತ
ನಿಮ್ಮನ್ನು ಬಹುಬೇಗನೇ ಅರ್ಥಮಾಡಿಕೊಳ್ಳುವ ಸ್ನೇಹಿತ ಎಂದರೆ ನಿಮ್ಮ ನಾಯಿ. ನೀವು ಬೇಸರದಲ್ಲಿದ್ದರೆ, ಸಂತೋಷವಾಗಿದ್ದರೆ ಅದಕ್ಕೆ ತಕ್ಕಂತೆ ಮೂಕವಾಗಿಯೇ ಪ್ರತಿಕ್ರಿಯೆ ನೀಡುವ ನಾಯಿ ಮನುಷ್ಯನ ಆತ್ಮೀಯ ಸ್ನೇಹಿತ ಎಂಬುದರಲ್ಲಿ ಎರಡು ಮಾತಿಲ್ಲ!
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications