ಅಮೇಥಿಯಲ್ಲಿ ಎಕೆ 203 ಉತ್ಪಾದನೆ, ಜನಪ್ರಿಯ ಆಯುಧದ ಬಗ್ಗೆ ತಿಳಿಯಿರಿ
ಅತ್ಯಂತ ಜನಪ್ರಿಯ ಆಯುಧ ಎಕೆ -203 ಉತ್ಪಾದನಾ ಘಟಕವು ಉತ್ತರಪ್ರದೇಶದ ಅಮೇಥಿಯಲ್ಲಿ ನಿರ್ಮಾಣಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 03ರಂದು ಈ ಹೊಸ ಘಟಕಕ್ಕೆ ಚಾಲನೆ ನೀಡಿದರು. ರಷ್ಯಾದ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಭಾರತವು ಸುಮಾರು 7,50,000 ರೈಫಲ್ ಗಳನ್ನು ಉತ್ಪಾದಿಸಿ ಭಾರತೀಯ ಭದ್ರತಾ ಪಡೆಗಳ ಬಳಕೆಗೆ ನೀಡಲು ಮುಂದಾಗಿದೆ.
ಭಾರತೀಯ ಭೂ ಸೇನೆ, ವಾಯು ಸೇನೆ ಹಾಗೂ ನೌಕಾಪಡೆ ಬಳಸುತ್ತಿರುವ INSAS ರೈಫಲ್ ಗಳನ್ನು ಬದಲಾಯಿಸಿ ಎಕೆ 203ಗಳನ್ನು ನೀಡಲಾಗುತ್ತದೆ. ಮುಂದಿನ ಹಂತದಲ್ಲಿ ಪ್ಯಾರಾ ಮಿಲಿಟರಿ ಹಾಗೂ ರಾಜ್ಯದ ಪೊಲೀಸ್ ಪಡೆಗಳಿಗೂ ನೀಡಲಾಗುತ್ತದೆ.
ಮುಂಬರುವ 15 ರಿಂದ 20 ವರ್ಷಗಳಲ್ಲಿ ಭಾರತದ ಎಲ್ಲಾ ಭದ್ರತಾ ಪಡೆಗಳ ಕೈಲಿ ಎಕೆ 203 ರೈಫಲ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇದಲ್ಲದೆ, ಅಮೆರಿಕದ ಸಿಗ್ ಸಾರ್ ಜತೆ ಒಪ್ಪಂದ ಮಾಡಿಕೊಂಡಿದ್ದು, 7.69 ಎಂಎಂ 59 ಕ್ಯಾಲಿಬೆರ್ ಅಸಾಲ್ಟ್ ರೈಫಲ್ ಗಳನ್ನು ಖರೀದಿಸಲಾಗುತ್ತಿದೆ.
ಅಮೇಥಿಯಲ್ಲಿ ಎಕೆ 203 ಉತ್ಪಾದನೆ, ಜನಪ್ರಿಯ ಆಯುಧದ ಬಗ್ಗೆ ತಿಳಿಯಿರಿ
ಎಂದಿನಿಂದ ಉತ್ಪಾದನೆ ಆರಂಭ?: ಅತ್ಯಾಧುನಿಕ ರೈಫಲ್ ಗಳಲ್ಲಿ ಒಂದೆನಿಸಿರುವ ಎಕೆ 203 ಉತ್ಪಾದನೆಯು ಮುಂದಿನ 3 ರಿಂದ 6 ತಿಂಗಳೊಳಗೆ ಆರಂಭವಾಗಲಿದ್ದು, 1.2 ಲಕ್ಷ ರೈಫಲ್ ಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಉತ್ಪಾದಿಸುವ ಗುರಿ ಹೊಂದಿದೆ.

ಎಂದಿನಿಂದ ಉತ್ಪಾದನೆ ಆರಂಭ?
ಎಂದಿನಿಂದ ಉತ್ಪಾದನೆ ಆರಂಭ?: ಅತ್ಯಾಧುನಿಕ ರೈಫಲ್ ಗಳಲ್ಲಿ ಒಂದೆನಿಸಿರುವ ಎಕೆ 203 ಉತ್ಪಾದನೆಯು ಮುಂದಿನ 3 ರಿಂದ 6 ತಿಂಗಳೊಳಗೆ ಆರಂಭವಾಗಲಿದ್ದು, 1.2 ಲಕ್ಷ ರೈಫಲ್ ಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಉತ್ಪಾದಿಸುವ ಗುರಿ ಹೊಂದಿದೆ.

ಎಷ್ಟು ರೇಂಜ್?
ಎಷ್ಟು ರೇಂಜ್?: ಎಕೆ 203 ಮ್ಯಾಗಜೀನ್ ನಲ್ಲಿ ಒಟ್ಟು 30 ಬುಲೆಟ್ ಗಳನ್ನು ಹೊಂದಬಹುದಾಗಿದ್ದು, ಸರಿ ಸುಮಾರು 400 ಮೀಟರ್ ತನಕ ಸಮರ್ಥವಾಗಿ ಗುರಿಯನ್ನು ಮುಟ್ಟಬಲ್ಲದಾಗಿದೆ. ಶೇ 100ರಷ್ಟು ನಿಖರವಾಗಿದ್ದು,INSASಗೆ ಹೋಲಿಸಿದರೆ ಲಘು ಹಾಗೂ ಹಗುರ ರೈಫಲ್ ಆಗಿರುವುದರಿಂದ ಸೇನಾ ಸಿಬ್ಬಂದಿಗಳಿಗೆ ಅನುಕೂಲಕರ.

ವಿವಿಧ ರೀತಿಯಲ್ಲಿ ಉಪಯೋಗ
ಇದಲ್ಲದೆ, ಬ್ಯಾರೆಲ್ ಗ್ರೇನೈಡ್ ಲಾಂಚರ್ ಅಥವಾ ಬಯೋನೆಟ್ ಆಗಿ ಕೂಡಾ ಎಕೆ 203ಗಳನ್ನು ಬಳಸಬಹುದು. ನ್ಯಾಟೋ ಗ್ರೆಡ್ ಆಯುಧ ಪ್ರತಿ ಸೆಕೆಂಡಿಗೆ 10 ಬುಲೆಟ್ ನಂತೆ ನಿಮಿಷವೊಂದಕ್ಕೆ 600 ಬುಲೆಟ್ ಗಳನ್ನು ಫೈರ್ ಮಾಡಬಲ್ಲುದು. ಇದು ಸ್ವಯಂಚಾಲಿತ ಹಾಗೂ ಸೆಮಿ ಅಟೋಮ್ಯಾಟಿಕ್ ಮಾದರಿಯನ್ನು ಹೊಂದಿದೆ.

ಯಾವುದೇ ವಾತಾವರಣದಲ್ಲೂ ಕಾರ್ಯ ನಿರ್ವಹಣೆ
ಮೈನಸ್ ಡಿಗ್ರಿ ಸೆಲ್ಸಿಯಸ್ ನಿಂದ ಅತಿ ಉಷ್ಣ ಪ್ರದೇಶಗಳಲ್ಲೂ, ಮರಳುಗಾಡು, ನದಿ, ಸಮುದ್ರ, ಮಣ್ಣಿನಲ್ಲಿ ಹೂತರೂ ಸಮರ್ಥವಾಗಿ ಕಾರ್ಯ ನಿರ್ವಹಿಸಬಲ್ಲುದು. ಅಲ್ಲದೆ, ಜಾಮ್ ಆಗದೆ ನಿರಂತರವಾಗಿ ಬುಲೆಟ್ ಫೈರ್ ಮಾಡುವ ಯಂತ್ರಗಾರಿಕೆಯನ್ನು ಇದು ಹೊಂದಿದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications