ದೆಹಲಿಯಲ್ಲಿ 2014ರ ಫಲಿತಾಂಶ ಮತ್ತೆ ರಿಪೀಟ್, ಕಮಲ ಕ್ಲೀನ್ ಸ್ವೀಪ್
ನವದೆಹಲಿ, ಮೇ 20: ರಾಷ್ಟ್ರ ರಾಜಧಾನಿ ದೆಹಲಿಯನ್ನು ಪ್ರತ್ಯೇಕ ರಾಜ್ಯ ಮಾಡುವ ಕನಸು ಹೊತ್ತಿರುವ ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೆ ಈ ಬಾರಿಯ ಲೋಕಸಭೆ ಚುನಾವಣೆ ಭಾರಿ ಮುಖಭಂಗ ಅನುಭವಿಸಲಿದೆ ಎಂದು ಎಕ್ಸಿಟ್ ಪೋಲ್ ಸಮೀಕ್ಷೆಗಳು ಹೇಳಿವೆ.
ಮಾಜಿ ಮುಖ್ಯಮಂತ್ರಿ, ಕೇರಳದ ಮಾಜಿ ರಾಜ್ಯಪಾಲೆ ಶೀಲಾ ದೀಕ್ಷಿತ್ ಅವರು ಚುನಾವಣಾ ರಾಜಕೀಯಕ್ಕೆ ಮರಳಿದಿದ್ದಾರೆ. ಆಮ್ ಆದ್ಮಿ ಪಕ್ಷದ ಮೈತ್ರಿ ಇಲ್ಲದೆ ಕಾಂಗ್ರೆಸ್ ಏಕಾಂಗಿ ಸ್ಪರ್ಧಿಸಲಿದೆ ಎಂದು ಘೋಷಿಸಿದ್ದು, ಎಎಪಿಗೆ ಮುಳುವಾಗಿ ಪರಿಣಮಿಸಿದೆ. ಆದರೆ, ಇದೇ ವೇಳೆ ಕಾಂಗ್ರೆಸ್ ಕೂಡಾ ನೆಲಕಚ್ಚಿದೆ.
ಆಮ್ ಆದ್ಮಿ ಪಕ್ಷದಲ್ಲಿ ಭಿನ್ನಮತ ತಲೆದೋರಿದ್ದು, ಶಾಸಕರು ಸಾಲು ಸಾಲಾಗಿ ಬಿಜೆಪಿ ಸೇರುತ್ತಿದ್ದಾರೆ. ಅಲ್ಕಾ ಲಂಬಾ ಅವರು ಪಕ್ಷದ ಪರ ಪ್ರಚಾರ ನಡೆಸುವುದಿಲ್ಲ ಎಂದು ಬಹಿರಂಗವಾಗಿ ಹೇಳಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ, ವಾಯು ಮಾಲಿನ್ಯ, ಯಮುನಾ ನದಿ ರಕ್ಷಣೆ, ಮೂಲ ಸೌಕರ್ಯ, ಸ್ವಚ್ಛತೆ, ಮಹಿಳೆಯರಿಗೆ ರಕ್ಷಣೆ ಇವೆ ಈ ಬಾರಿಯ ಚುನಾವಣೆಯ ವಿಷಯಗಳಾಗಿತ್ತು. ಆಡಳಿತಾರೂಢ ಎಎಪಿ ಬದಲಿಗೆ ಮೋದಿ ಸರ್ಕಾರದ ಮೇಲೆ ಹೆಚ್ಚಿನ ವಿಶ್ವಾಸ ಇರಿಸಿದ್ದಾರೆ ಎಂದು ಎಕ್ಸಿಟ್ ಪೋಲ್ ಗಳ ಸರಾಸರಿ ಹೇಳುತ್ತಿದೆ.
2015ರ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು 70 ಕ್ಷೇತ್ರಗಳ ಪೈಕಿ 67 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿ ಅಧಿಕಾರಕ್ಕೇರಿತ್ತು.

ಎಬಿಪಿ ನೀಲ್ಸನ್
ಎಬಿಪಿ ನೀಲ್ಸನ್: ಬಿಜೆಪಿ 5, ಕಾಂಗ್ರೆಸ್ ಹಾಗೂ ಎಎಪಿ ತಲಾ 1

ಇಂಡಿಯಾ ಟುಡೇ ಆಕ್ಸಿಸ್
ಇಂಡಿಯಾ ಟುಡೇ ಆಕ್ಸಿಸ್: ಬಿಜೆಪಿ 6 ರಿಂದ 7, ಕಾಂಗ್ರೆಸ್ 0 ರಿಂದ 1, ಎಎಪಿ 0

ಟೈಮ್ಸ್ ನೌ ಸಿಎನ್ಎಕ್ಸ್
ಟೈಮ್ಸ್ ನೌ ಸಿಎನ್ಎಕ್ಸ್ : ಬಿಜೆಪಿ 6, ಕಾಂಗ್ರೆಸ್ 1, ಎಎಪಿ 0

ನ್ಯೂಸ್ 24 ಚಾಣಕ್ಯ:
ನ್ಯೂಸ್ 24 ಚಾಣಕ್ಯ: ಬಿಜೆಪಿಗೆ ಎಲ್ಲಾ 7 ಸ್ಥಾನಗಳು

ನ್ಯೂಸ್ 18 ಐಪಿಎಸ್ಒಎಸ್
ನ್ಯೂಸ್ 18 ಐಪಿಎಸ್ಒಎಸ್: ಬಿಜೆಪಿ 6 ರಿಂದ 7, ಕಾಂಗ್ರೆಸ್ 0-1, ಎಎಪಿ 0

ನೇತಾ: ಬಿಜೆಪಿ 5, ಕಾಂಗ್ರೆಸ್ 2, ಇತರೆ 0
ನೇತಾ: ಬಿಜೆಪಿ 5, ಕಾಂಗ್ರೆಸ್ 2, ಇತರೆ 0












Click it and Unblock the Notifications