21ನೇ ಶತಮಾನದ ದೀರ್ಘಾವಧಿ ಚಂದ್ರಗ್ರಹಣ, ಭೂಮಿ ಸಮೀಪ ಮಂಗಳ ಠಿಕಾಣಿ
ನಕ್ಷತ್ರಗಳ ಬಗ್ಗೆ ಅಧ್ಯಯನ ಮಾಡುವ ಅಥವಾ ಬಾಹ್ಯಾಕಾಶ ವಿದ್ಯಮಾನಗಳ ಬಗೆಗಿನ ಕುತೂಹಲಿಗಳು, ತಮ್ಮ ಟೆಲಿಫೋಟೋ ಲೆನ್ಸ್ ಗಳ ಸಾಮರ್ಥ್ಯ ಪರೀಕ್ಷೆ ಮಾಡಬೇಕು ಅನ್ನುವ ಇರಾದೆಯಲ್ಲಿರುವವರು ಸಿದ್ಧರಾಗಿ. ಏಕೆಂದರೆ, ಅವುಗಳನ್ನು ಬಳಸುವ ಅವಶ್ಯಕತೆ ಬರುವಂಥ ಅಪರೂಪದ ಘಟನೆ ಮುಂದಿನ ತಿಂಗಳು ಸಂಭವಿಸಲಿದೆ.
ಇಪ್ಪತ್ತೊಂದನೇ ಶತಮಾನದಲ್ಲೇ ಅತ್ಯಂತ ದೀರ್ಘಾವಧಿಯ ಚಂದ್ರಗ್ರಹಣವು ಜುಲೈ 27- 28ರಂದು ಸಂಭವಿಸಲಿದೆ. 103 ನಿಮಿಷಗಳ ಕಾಲ ಸಂಭವಿಸುವ ಇದನ್ನು 'ಬ್ಲಡ್ ಮೂನ್' ಅಂತೇನೋ ಹೇಳ್ತಾರೆ. ಆದರೆ ಇದು ವೈಜ್ಞಾನಿಕವಾದ ಹೆಸರಲ್ಲ. ಪೂರ್ಣ ಪ್ರಮಾಣದ ಚಂದ್ರ ಗ್ರಹಣ ಎಂಬುದನ್ನು ಹೀಗೆ ಬ್ಲಡ್ ಮೂನ್ ಅನ್ನೋದು ರೂಢಿ.
ಈ ವರ್ಷದ ಗ್ರಹಣದಲ್ಲಿ ಚಂದ್ರ ಸಂಪೂರ್ಣವಾಗಿ ಕಾಣದಂತೇನೂ ಆಗಲ್ಲ. ಸೂರ್ಯನ ಕಿರುಣವು ಭೂಮಿಯ ವಾತಾವರಣದಲ್ಲಿ ಚದುರುವ ಕಾರಣಕ್ಕಾಗಿ ಕೆಂಪು ಬಣ್ಣಕ್ಕೆ ತಿರುಗಿದಂತೆ ಗೋಚರಿಸುತ್ತದೆ. ಇನ್ನೂ ವಿಶೇಷ ಏನು ಗೊತ್ತಾ? ಮಂಗಳ ಗ್ರಹ ಕೂಡ ಭೂಮಿಗೆ ಬಹಳ ಹತ್ತಿರದಲ್ಲಿದೆ. ಕಳೆದ ಹದಿನೈದು ವರ್ಷದ ಅವಧಿಯಲ್ಲೇ ಜುಲೈನ ಚಂದ್ರ ಗ್ರಹಣದ ವೇಳೆ ಭೂಮಿಗೆ ಅಂಗಾರಕ ಬಹಳ ಹತ್ತಿರದಲ್ಲಿದೆ.

ಜುಲೈ ಇಪ್ಪತ್ತೇಳನೇ ತಾರೀಕು ಸೂರ್ಯನಿಗೆ ವಿರುದ್ಧವಾಗಿ ಮಂಗಳ ಬರುತ್ತದೆ. ಭೂಮಿ ಹಾಗೂ ಮಂಗಳದ ಮಧ್ಯದ ಕನಿಷ್ಠ ಅಂತರ ಮೂವತ್ತನೇ ತಾರೀಕಿನ ಹೊತ್ತಿಗೆ ಬಹಳ ಕಡಿಮೆ ಆಗುತ್ತದೆ. ಆ ದಿನ ಕೆಂಪು ಗ್ರಹ ಮಂಗಳ ತನ್ನ ಸಹಜ ಮೆರುಗಿಗಿಂತ ಹೆಚ್ಚಿರುತ್ತದೆ. ಗುರು ಗ್ರಹಕ್ಕಿಂತ ದುಪ್ಪಟ್ಟು ಮಿಂಚುತ್ತಿರುತ್ತದೆ. ಆದರೆ ಶುಕ್ರ ಗ್ರಹಕ್ಕಿಂತ ಕಡಿಮೆ ಪ್ರಕಾಶಮಾನವಾಗಿರುತ್ತದೆ.
ಆಕಾಶ ಶುಭ್ರವಾಗಿದ್ದರೆ ಅಂದು ಬರಿಗಣ್ಣಿಗೆ ಮಂಗಳ ಗ್ರಹ ಕಾಣಿಸಿಕೊಳ್ಳುತ್ತದೆ. ಹಾಗೆ ಭೂಮಿಗೆ ಅಂಗಾರಕ ಬಹಳ ಹತ್ತಿರ ಬಂದಿದ್ದು 2003ರಲ್ಲಿ. ಈಗ ಮುಂಗಾರಿನ ಸಮಯ. ಜುಲೈ 27 -28ರಂದು ಆಗಸ ಶುಭ್ರವಾಗಿದ್ದರೆ, ಅಂದರೆ ಮೋಡ- ಮಳೆ ಇಲ್ಲದಿದ್ದ ಪಕ್ಷದಿದ್ದಲ್ಲಿ ಅದ್ಭುತ ವಿದ್ಯಮಾನವೊಂದಕ್ಕೆ ನಾವೆಲ್ಲರೂ ಸಾಕ್ಷಿಯಾಗಬಹುದು.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications