21ನೇ ಶತಮಾನದ ದೀರ್ಘಾವಧಿ ಚಂದ್ರಗ್ರಹಣ, ಭೂಮಿ ಸಮೀಪ ಮಂಗಳ ಠಿಕಾಣಿ
ನಕ್ಷತ್ರಗಳ ಬಗ್ಗೆ ಅಧ್ಯಯನ ಮಾಡುವ ಅಥವಾ ಬಾಹ್ಯಾಕಾಶ ವಿದ್ಯಮಾನಗಳ ಬಗೆಗಿನ ಕುತೂಹಲಿಗಳು, ತಮ್ಮ ಟೆಲಿಫೋಟೋ ಲೆನ್ಸ್ ಗಳ ಸಾಮರ್ಥ್ಯ ಪರೀಕ್ಷೆ ಮಾಡಬೇಕು ಅನ್ನುವ ಇರಾದೆಯಲ್ಲಿರುವವರು ಸಿದ್ಧರಾಗಿ. ಏಕೆಂದರೆ, ಅವುಗಳನ್ನು ಬಳಸುವ ಅವಶ್ಯಕತೆ ಬರುವಂಥ ಅಪರೂಪದ ಘಟನೆ ಮುಂದಿನ ತಿಂಗಳು ಸಂಭವಿಸಲಿದೆ.
ಇಪ್ಪತ್ತೊಂದನೇ ಶತಮಾನದಲ್ಲೇ ಅತ್ಯಂತ ದೀರ್ಘಾವಧಿಯ ಚಂದ್ರಗ್ರಹಣವು ಜುಲೈ 27- 28ರಂದು ಸಂಭವಿಸಲಿದೆ. 103 ನಿಮಿಷಗಳ ಕಾಲ ಸಂಭವಿಸುವ ಇದನ್ನು 'ಬ್ಲಡ್ ಮೂನ್' ಅಂತೇನೋ ಹೇಳ್ತಾರೆ. ಆದರೆ ಇದು ವೈಜ್ಞಾನಿಕವಾದ ಹೆಸರಲ್ಲ. ಪೂರ್ಣ ಪ್ರಮಾಣದ ಚಂದ್ರ ಗ್ರಹಣ ಎಂಬುದನ್ನು ಹೀಗೆ ಬ್ಲಡ್ ಮೂನ್ ಅನ್ನೋದು ರೂಢಿ.
ಈ ವರ್ಷದ ಗ್ರಹಣದಲ್ಲಿ ಚಂದ್ರ ಸಂಪೂರ್ಣವಾಗಿ ಕಾಣದಂತೇನೂ ಆಗಲ್ಲ. ಸೂರ್ಯನ ಕಿರುಣವು ಭೂಮಿಯ ವಾತಾವರಣದಲ್ಲಿ ಚದುರುವ ಕಾರಣಕ್ಕಾಗಿ ಕೆಂಪು ಬಣ್ಣಕ್ಕೆ ತಿರುಗಿದಂತೆ ಗೋಚರಿಸುತ್ತದೆ. ಇನ್ನೂ ವಿಶೇಷ ಏನು ಗೊತ್ತಾ? ಮಂಗಳ ಗ್ರಹ ಕೂಡ ಭೂಮಿಗೆ ಬಹಳ ಹತ್ತಿರದಲ್ಲಿದೆ. ಕಳೆದ ಹದಿನೈದು ವರ್ಷದ ಅವಧಿಯಲ್ಲೇ ಜುಲೈನ ಚಂದ್ರ ಗ್ರಹಣದ ವೇಳೆ ಭೂಮಿಗೆ ಅಂಗಾರಕ ಬಹಳ ಹತ್ತಿರದಲ್ಲಿದೆ.

ಜುಲೈ ಇಪ್ಪತ್ತೇಳನೇ ತಾರೀಕು ಸೂರ್ಯನಿಗೆ ವಿರುದ್ಧವಾಗಿ ಮಂಗಳ ಬರುತ್ತದೆ. ಭೂಮಿ ಹಾಗೂ ಮಂಗಳದ ಮಧ್ಯದ ಕನಿಷ್ಠ ಅಂತರ ಮೂವತ್ತನೇ ತಾರೀಕಿನ ಹೊತ್ತಿಗೆ ಬಹಳ ಕಡಿಮೆ ಆಗುತ್ತದೆ. ಆ ದಿನ ಕೆಂಪು ಗ್ರಹ ಮಂಗಳ ತನ್ನ ಸಹಜ ಮೆರುಗಿಗಿಂತ ಹೆಚ್ಚಿರುತ್ತದೆ. ಗುರು ಗ್ರಹಕ್ಕಿಂತ ದುಪ್ಪಟ್ಟು ಮಿಂಚುತ್ತಿರುತ್ತದೆ. ಆದರೆ ಶುಕ್ರ ಗ್ರಹಕ್ಕಿಂತ ಕಡಿಮೆ ಪ್ರಕಾಶಮಾನವಾಗಿರುತ್ತದೆ.
ಆಕಾಶ ಶುಭ್ರವಾಗಿದ್ದರೆ ಅಂದು ಬರಿಗಣ್ಣಿಗೆ ಮಂಗಳ ಗ್ರಹ ಕಾಣಿಸಿಕೊಳ್ಳುತ್ತದೆ. ಹಾಗೆ ಭೂಮಿಗೆ ಅಂಗಾರಕ ಬಹಳ ಹತ್ತಿರ ಬಂದಿದ್ದು 2003ರಲ್ಲಿ. ಈಗ ಮುಂಗಾರಿನ ಸಮಯ. ಜುಲೈ 27 -28ರಂದು ಆಗಸ ಶುಭ್ರವಾಗಿದ್ದರೆ, ಅಂದರೆ ಮೋಡ- ಮಳೆ ಇಲ್ಲದಿದ್ದ ಪಕ್ಷದಿದ್ದಲ್ಲಿ ಅದ್ಭುತ ವಿದ್ಯಮಾನವೊಂದಕ್ಕೆ ನಾವೆಲ್ಲರೂ ಸಾಕ್ಷಿಯಾಗಬಹುದು.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications