ಬಜೆಟ್ 2022: ವಿದೇಶದಲ್ಲಿರುವ ಭಾರತೀಯರ ನಿರೀಕ್ಷೆಗಳು ಏನು?
ನವದೆಹಲಿ, ಜನವರಿ 17: ಕಳೆದ ವರ್ಷದ ಬಜೆಟ್ ಅನಿವಾಸಿ ಭಾರತೀಯರು (ಎನ್ಆರ್ಐ) ಎದುರಿಸುತ್ತಿರುವ ತೊಂದರೆಗಳನ್ನು ನಿವಾರಿಸಲು ಕೆಲವು ಕ್ರಮಗಳನ್ನು ತೆಗೆದುಕೊಂಡಿತು. ಎನ್ಆರ್ಐಗಳಿಗೆ ಒನ್ ಪರ್ಸನ್ ಕಂಪನಿಗಳನ್ನು (ಒಪಿಸಿ) ಸ್ಥಾಪಿಸಲು ಅನುಮತಿ ನೀಡುವ ಮೂಲಕ ಎನ್ಆರ್ಐಗಳು ಭಾರತದಲ್ಲಿ ವ್ಯಾಪಾರ ಮಾಡಲು ಸುಲಭ ಅವಕಾಶ ಮಾಡಿಕೊಡಲಾಯಿತು.
ಕೈಗೆಟಕುವ ದರದ ಮನೆಗಳಿಗೆ ತೆರಿಗೆ ಪ್ರಯೋಜನಗಳು ಮತ್ತು ಈ ವಿಭಾಗದಲ್ಲಿನ ಯೋಜನೆಗಳಿಗೆ ತೆರಿಗೆ ವಿನಾಯಿತಿಯನ್ನು ಎನ್ಆರ್ಐಗಳಿಗೂ ನೀಡಲಾಗಿದೆ. ಹಲವಾರು ದೇಶಗಳು ವಿಧಿಸಿದ ಲಾಕ್ಡೌನ್ಗಳು ಮತ್ತು ವಿಮಾನಯಾನ ನಿರ್ಬಂಧಗಳನ್ನು ಪ್ರಸ್ತುತ ಸಡಿಲಿಕೆ ಮಾಡಲಾಗಿದೆ. ಈ ನಡುವೆ ಭಾರತದಲ್ಲಿ ನಡೆಯುವ ಕೇಂದ್ರ ಬಜೆಟ್ನಲ್ಲಿ ಎನ್ಆರ್ಐಗಳು ಹಲವಾರು ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಬಜೆಟ್ ಮಂಡನೆ ಮಾಡಲಿದ್ದಾರೆ. ಈ ನಡುವೆ ಹಲವಾರು ವಲಯಗಳು ಹಲವು ನಿರೀಕ್ಷೆಗಳನ್ನು ಇರಿಸಿಕೊಂಡಿದೆ. ಈ ಬಗ್ಗೆ ಪ್ರಸ್ತಾಪವನ್ನು ಕೂಡಾ ಮಾಡಲಾಗಿದೆ. ಎನ್ಆರ್ಐಗಳ ಬಹುಕಾಲದ ಬೇಡಿಕೆಗಳು ಇನ್ನೂ ಕೂಡಾ ಈಡೇರಿಕೆ ಆಗಿಲ್ಲ. ಹಾಗಾದರೆ ಎನ್ಆರ್ಐಗಳು ಈ ಬಾರಿಯ ಬಜೆಟ್ನಲ್ಲಿ ಏನು ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ ಎಂದು ತಿಳಿಯಲು ಮುಂದೆ ಓದಿ..

ತೆರಿಗೆ ವಿನಾಯಿತಿಯಲ್ಲಿನ ನಿರೀಕ್ಷೆ
ಅನಿವಾಸಿ ಭಾರತೀಯರು (ಎನ್ಆರ್ಐ) ತೆರಿಗೆ ಕಡಿತದ (ಟಿಡಿಎಸ್) ವಿಚಾರಕ್ಕೆ ಬಂದಾಗ ಒಂದು ಕೋಲಿನ ತುದಿಯಲ್ಲಿ ಇನ್ನೇನು ಕೆಳಗೆ ಬೀಳಬಹುದು ಎಂಬ ಪರಿಸ್ಥಿತಿಯಲ್ಲಿ ನಿಂತಿರುತ್ತಾರೆ. ಎನ್ಆರ್ಐಗಳು ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಆಸ್ತಿಯನ್ನು ಹೊಂದಿದ್ದರೆ ಅದನ್ನು 50 ಲಕ್ಷಕ್ಕಿಂತ ಕಡಿಮೆ ಆಸ್ತಿಯನ್ನು ಮಾರಾಟ ಮಾಡಿದಾಗ ಬಂಡವಾಳ ಲಾಭದ ಮೇಲೆ ಶೇಕಡ 20ರಷ್ಟು ಟಿಡಿಎಸ್ ಅನ್ನು ಪಾವತಿಸಬೇಕಾಗುತ್ತದೆ. ಬಂಡವಾಳ ಲಾಭಗಳು ಅಲ್ಪಾವಧಿಯದ್ದಾಗಿದ್ದರೆ ಅಂದರೆ ಎರಡು ವರ್ಷಗಳಿಗಿಂತಲೂ ಕಡಿಮೆ ಅವಧಿಯ ಆಸ್ತಿ ಆಗಿದ್ದರೆ, ಟಿಡಿಎಸ್ ಆ ವ್ಯಕ್ತಿಯ ಆದಾಯ ತೆರಿಗೆಯ ಆದಾರದಲ್ಲಿ ಇರುತ್ತದೆ. ಆಸ್ತಿಯು 50 ಲಕ್ಷಕ್ಕಿಂತ ಹೆಚ್ಚು ಮೌಲ್ಯದ್ದಾಗಿದ್ದರೆ ಎಲ್ಟಿಸಿಜಿ ಅಂದರೆ ದೀರ್ಘಾವಧಿಯ ಬಂಡವಾಳ ಲಾಭಗಳ ತೆರಿಗೆಯ ಮೇಲೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಅದೇ ರೀತಿ, ಸ್ಟಾಕ್ಗಳು ಮತ್ತು ಮ್ಯೂಚುವಲ್ ಫಂಡ್ಗಳಲ್ಲಿ ಭಾರತೀಯ ನಿವಾಸಿ ಹೂಡಿಕೆದಾರರಿಗೆ ಯಾವುದೇ ಟಿಡಿಎಸ್ ಇಲ್ಲದಿದ್ದರೂ, ಎನ್ಆರ್ಐಗಳು ಹೆಚ್ಚಿನ ತೆರಿಗೆ ದರಗಳಲ್ಲಿ ಟಿಡಿಎಸ್ ಅನ್ನು ಪಾವತಿ ಮಾಡಬೇಕಾಗುತ್ತದೆ. ಆದರೆ ಅನಿವಾಸಿ ಭಾರತೀಯರು ಈ ತೆರಿಗೆ ವಿನಾಯಿತಿ ವಿಚಾರದಲ್ಲಿ ತಮ್ಮ ಹಾಗೂ ನಿವಾಸಿ ಭಾರತೀಯರ ನಡುವೆ ಸಮಾನತೆಯನ್ನು ಆಶಿಸುತ್ತಿದ್ದಾರೆ.

ಮೂಲ ವಿನಾಯಿತಿ ಮಿತಿ
ಎನ್ಆರ್ಐಗಳಿಗೆ ಮತ್ತೊಂದು ಪ್ರಮುಖ ನೋವಿನ ಅಂಶವೆಂದರೆ ತಮ್ಮ ಬಂಡವಾಳ ಲಾಭವನ್ನು ಮೂಲ ವಿನಾಯಿತಿ ಮಿತಿಯಾದ 2.5 ಲಕ್ಷಕ್ಕೆ ಹೊಂದಿಕೆ ಮಾಡದಿರುವುದು. ಭಾರತೀಯ . ನಿವಾಸಿ ತೆರಿಗೆದಾರರಿಂದ ಗಳಿಸಿದ ಬಂಡವಾಳದ ಲಾಭಗಳು (ಅಲ್ಪಾವಧಿಯ ಮತ್ತು ದೀರ್ಘಾವಧಿಯ ಎರಡೂ) ಮೂಲ ವಿನಾಯಿತಿ ಮಿತಿಗಿಂತ ಕೆಳಗಿದ್ದರೆ, ಅಂದರೆ 2.5 ಲಕ್ಷಕ್ಕಿಂತ ಕಡಿಮೆ ಇದ್ದರೆ ಯಾವುದೇ ತೆರಿಗೆಯನ್ನು ಪಾವತಿ ಮಾಡಬೇಕಾಗಿಲ್ಲ. ಆದರೆ ಎನ್ಆರ್ಐಗಳು ತಮ್ಮ ಆದಾಯ 2.5 ಲಕ್ಷಕ್ಕಿಂತ ಕಡಿಮೆ ಇದ್ದರೂ ಬಂಡವಾಳದ ಲಾಭದ ಮೇಲೆ ಒಟ್ಟು ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಅನೇಕ ಎನ್ಆರ್ಐಗಳು ಈ ಬಗ್ಗೆ ಅಗತ್ಯ ಬದಲಾವಣೆಯನ್ನು ಬಜೆಟ್ನಲ್ಲಿ ನಿರೀಕ್ಷಿಸಿದ್ದಾರೆ.

ಹೂಡಿಕೆ ಎಲ್ಲಿ ಮಾಡುವುದು?: ನಿರ್ಬಂಧಗಳಿವೆ
ಯಾವುದೇ ಇತರ ತೆರಿಗೆದಾರರಂತೆ, ಎನ್ಆರ್ಐಗಳು ಸೆಕ್ಷನ್ 80 ಸಿ ಅಡಿಯಲ್ಲಿ ರೂ 1.5 ಲಕ್ಷ ಕಡಿತಕ್ಕೆ ಮತ್ತು ಸೆಕ್ಷನ್ 80 ಸಿಸಿಡಿ (1 ಬಿ) ಅಡಿಯಲ್ಲಿ ಎನ್ಪಿಎಸ್ನಲ್ಲಿ ಹೂಡಿಕೆ ಮಾಡಲು ರೂ 50,000 ಗೆ ಅರ್ಹರಾಗಿರುತ್ತಾರೆ. ಆದರೆ ಎನ್ಆರ್ಐಗಳು ಎಲ್ಲಿ ಹೂಡಿಕೆ ಮಾಡಬಹುದು ಎಂಬುದರ ಮೇಲೆ ನಿರ್ಬಂಧಗಳಿವೆ. ಎನ್ಆರ್ಐಗಳು ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಲು ಸಾಧ್ಯವಿಲ್ಲ. ಪಿಪಿಎಫ್ ಖಾತೆಯನ್ನು ತೆರೆಯಲು ಅಥವಾ ಎನ್ಎಸ್ಸಿಗಳು ಮತ್ತು ಪೋಸ್ಟ್ ಆಫೀಸ್ ಠೇವಣಿಗಳನ್ನು ಮಾಡಲು ಸಾಧ್ಯವಿಲ್ಲ. ಯಾವುದೇ ಸಂದರ್ಭದಲ್ಲಿ, ಅಂತಹ ಹೂಡಿಕೆಗಳಿಂದ ಗಳಿಸಿದ ಆದಾಯವು ಸಾಮಾನ್ಯ ತೆರಿಗೆಗೆ ಒಳಪಟ್ಟಿರುತ್ತದೆ.

ಸಮಾನ ತೆರಿಗೆ ವಿನಾಯಿತಿಗಳು
ಎನ್ಆರ್ಐಗಳು ಬಯಸಬಹುದಾದ ಇತರ ಕೆಲವು ಪ್ರಯೋಜನಗಳು ಕೆಲವು ಸಣ್ಣ ಪುಟ್ಟ ವಿನಾಯಿತಿಗಳು ಆಗಿದೆ. ಆದರೆ ಕೆಲವು ಜನರಿಗೆ ಅದು ತೀರಾ ಮುಖ್ಯವಾಗಿದೆ. ಎನ್ಆರ್ಐಗಳು ವಿದೇಶದಲ್ಲಿ ವಾಸಿಸುತ್ತಿರುವವರಾಗಿದ್ದು, ಸ್ವದೇಶದಲ್ಲಿ ಸಂಬಂಧಿಕರು ಮತ್ತು ಕುಟುಂಬವನ್ನು ಹೊಂದಿದ್ದಾರೆ. ಆದರೆ ಅಂಗವಿಕಲ ಅವಲಂಬಿತರ ವೈದ್ಯಕೀಯ ಚಿಕಿತ್ಸೆ (ಸೆಕ್ಷನ್ 80DD), ನಿರ್ದಿಷ್ಟ ರೋಗಗಳಿಂದ ಬಳಲುತ್ತಿರುವ ಕುಟುಂಬದ ಸದಸ್ಯರ ಚಿಕಿತ್ಸೆ (ಸೆಕ್ಷನ್ 80DDB) ಮತ್ತು ಸ್ವಯಂ ಅಥವಾ ಅವಲಂಬಿತ (ಸೆಕ್ಷನ್ 80U) ಅಂಗವೈಕಲ್ಯ ಸೇರಿದಂತೆ ಕೆಲವು ತೆರಿಗೆ ವಿನಾಯಿತಿಗಳಿಗೆ ಎನ್ಆರ್ಐಗಳು ಅರ್ಹರಾಗಿರುವುದಿಲ್ಲ. ಅನೇಕ ಎನ್ಆರ್ಐಗಳು ಅನಾರೋಗ್ಯ ಮತ್ತು ದುರ್ಬಲರಾಗಿರುವ ತಮ್ಮ ಕುಟುಂಬಸ್ಥರನ್ನು ನೋಡಿಕೊಳ್ಳುತ್ತಿರುತ್ತಾರೆ. ತೀರಾ ಅನಿವಾರ್ಯವಾಗಿ ವಿದೇಶದಲ್ಲಿ ದುಡಿಯುತ್ತಿರುತ್ತಾರೆ. ಈ ಕೆಲವು ಸೌಲಭ್ಯಗಳು ಎನ್ಆರ್ಐಗಳಿಗೂ ಲಭಿಸಬೇಕು ಎಂಬುವುದು ಎನ್ಆರ್ಐಗಳ ಬೇಡಿಕೆಯಾಗಿದೆ. (ಒನ್ಇಂಡಿಯಾ ಸುದ್ದಿ)
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications