Get Updates
Get notified of breaking news, exclusive insights, and must-see stories!

Nirjala Ekadashi 2023: ನಿರ್ಜಲ ಏಕಾದಶಿಯ ದಿನದಂದು ಈ ಐದು ವಸ್ತುಗಳಿಂದ ಮನೆಗೆ ಸಂತೋಷ, ಸಮೃದ್ಧಿ

ನಿರ್ಜಲ ಏಕಾದಶಿಯನ್ನು ಈ ವರ್ಷ ಮೇ 31 ರಂದು ಆಚರಿಸಲಾಗುತ್ತದೆ. ಎಲ್ಲಾ ಏಕಾದಶಿಗಳಲ್ಲಿ ಇದು ಅತ್ಯುತ್ತಮ ಫಲಪ್ರದ ಏಕಾದಶಿಯಾಗಿದೆ. ಈ ದಿನದಂದು ವಿಷ್ಣುವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಒಂದು ನಿರ್ಜಲ ಏಕಾದಶಿಯನ್ನು ಆಚರಿಸುವುದರಿಂದ ವರ್ಷದ ಎಲ್ಲಾ ಏಕಾದಶಿಗಳ ಫಲಿತಾಂಶವು ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

ಈ ದಿನದಂದು ಭಗವಾನ್ ವಿಷ್ಣು ಪ್ರಸನ್ನನಾಗಿದ್ದರೆ, ಲಕ್ಷ್ಮಿ ಕೂಡ ಸಂತೋಷವಾಗಿರುತ್ತಾಳೆ. ಆದರೆ ಈ ದಿನ ವಿಷ್ಣು ಮತ್ತು ತಾಯಿ ಲಕ್ಷ್ಮಿಯನ್ನು ಹೇಗೆ ಸಂತೋಷಪಡಿಸುವುದು? ಧಾರ್ಮಿಕ ವಿಷಯಗಳು ಮತ್ತು ಜ್ಯೋತಿಷ್ಯಶಾಸ್ತ್ರ ವಿಷ್ಣುವನ್ನು ಹೇಗೆ ತೃಪ್ತಿಪಡಿಸಬಹುದು ಎಂಬುದು ತಿಳಿಯುತ್ತದೆ. ಜ್ಯೋತಿಷ್ಯದಲ್ಲಿ ವಿಷ್ಣು ಉಪವಾಸದಿಂದ ಪ್ರಸನ್ನನಾಗುತ್ತಾನೆ ಎಂದು ಹೇಳಲಾಗುತ್ತದೆ. ಹಾಗೆಯೇ ವಿಷ್ಣುವಿನ ಆಶೀರ್ವದ ಲಭಿಸಲಿದೆ.

Nirjala Ekadashi 2023

ನಿರ್ಜಲ ಏಕಾದಶಿಯಂದು ಈ ವಸ್ತುಗಳನ್ನು ಮನೆಗೆ ತಂದರೆ ವಿಷ್ಣುವಿನ ಆಶೀರ್ವಾದ ದೊರೆಯುತ್ತದೆ. ಮನೆಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುವ ಅಂತಹ ಐದು ವಸ್ತುಗಳ ಬಗ್ಗೆ ತಿಳಿದುಕೊಳ್ಳೋಣ.

ತುಳಸಿ ಗಿಡ

ನಿಮ್ಮ ಮನೆಯಲ್ಲಿ ತುಳಸಿ ಮರವಿಲ್ಲದಿದ್ದರೆ, ನಿರ್ಜಲ ಏಕಾದಶಿಯು ಅತ್ಯಂತ ಮಂಗಳಕರ ದಿನವಾಗಿದ್ದು ನೀವು ಮನೆಯಲ್ಲಿ ತುಳಸಿ ಮರವನ್ನು ನೆಡಬಹುದು. ನರ್ಸರಿಯಿಂದ ತುಳಸಿ ಮರವನ್ನು ತಂದು ಮನೆಯ ಅಂಗಳದಲ್ಲಿ ಅಥವಾ ಬಾಲ್ಕನಿಯಲ್ಲಿ ಪೂರ್ಣ ಭಕ್ತಿಯಿಂದ ನೆಡಬೇಕು. ಭಾನುವಾರ ಮತ್ತು ಸಂಜೆಯ ನಂತರ ಇದಕ್ಕೆ ನೀರು ಹಾಕುವುದನ್ನು ತಪ್ಪಿಸಬೇಕು. ತುಳಸಿಯು ವಿಷ್ಣುವಿನ ವಿಶೇಷ ಕೃಪೆಯನ್ನು ಹೊಂದಿರುವುದರಿಂದ ಅದು ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ ಮತ್ತು ಮನೆಯಲ್ಲಿ ಶಾಂತಿಯನ್ನು ನಡಲೆಸುತ್ತದೆ.

ನವಿಲು ಗರಿ

ಕೃಷ್ಣನು ಭಗವಾನ್ ವಿಷ್ಣುವಿನ ಅವತಾರ ಮತ್ತು ಕೃಷ್ಣನಿಗೆ ನವಿಲು ಗರಿಗಳು ತುಂಬಾ ಇಷ್ಟ. ನಿರ್ಜಲ ಏಕಾದಶಿಯ ದಿನ ಮನೆಯಲ್ಲಿ ಮೂರು ನವಿಲು ಗರಿಗಳನ್ನು ತನ್ನಿ. ಇದನ್ನು ಪೂಜಾ ಸ್ಥಳದಲ್ಲಿ ಇಟ್ಟು ಅಥವಾ ಯಾವುದೇ ಗೋಡೆಯ ಮೇಲೆ ಅಲಂಕಾರವಾಗಿ ಇರಿಸಿ. ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ.

Nirjala Ekadashi 2023

ನಗುವ ಬುದ್ಧ

ನಿಮ್ಮ ಮನೆಯಲ್ಲಿ ಅಥವಾ ನೀವು ವ್ಯಾಪಾರ ಮಾಡುವ ಸ್ಥಳದಲ್ಲಿ ವಾಸ್ತು ದೋಷವಿದ್ದರೆ ಅದನ್ನು ಹೋಗಲಾಡಿಸಲು ಈ ಕ್ರಮಗಳನ್ನು ಮಾಡಿ. ನಿರ್ಜಲ ಏಕಾದಶಿಯ ದಿನ ಮನೆಯಲ್ಲಿ ಲಾಫಿಂಗ್ ಬುದ್ಧನ ಚಿಕ್ಕ ವಿಗ್ರಹವನ್ನು ತನ್ನಿ. ಇದು ಧನಾತ್ಮಕ ಪರಿಣಾಮ ಬೀರುತ್ತದೆ.

ಮುತ್ತಿನ ಶಂಖ

ವಿಷ್ಣುವಿನ ಕೃಪೆಯೂ ಮುತ್ತಿನ ಶಂಖದ ಮೇಲಿದೆ. ಏಕಾದಶಿಯ ದಿನ ಮುತ್ತಿನ ಶಂಖವನ್ನು ಮನೆಗೆ ತಂದರೆ ಮನೆಯಲ್ಲಿ ವಿಷ್ಣುವಿನ ಆಶೀರ್ವಾದ ನೆಲೆಸಲಿದೆ ಎಂಬ ನಂಬಿಕೆ ಇದೆ.

ತೆಂಗಿನ ಕಾಯಿ

ನೀವು ಸಾಲದಲ್ಲಿದ್ದರೆ ಅಥವಾ ಹಣವು ಮನೆಯಲ್ಲಿ ಉಳಿಯದಿದ್ದರೆ, ಈ ಕ್ರಮಗಳನ್ನು ಮಾಡಿ. ತೆಂಗಿನಕಾಯಿಯನ್ನು ತಂದು ವಿಷ್ಣು ಮತ್ತು ಲಕ್ಷ್ಮಿಯನ್ನು ಯಥಾವತ್ತಾಗಿ ಪೂಜಿಸಿ ಮತ್ತು ಆ ತೆಂಗಿನಕಾಯಿಯನ್ನು ನಿಮ್ಮ ಕಪಾಟಿನಲ್ಲಿ ಇರಿಸಿ. ಇದರಿಂದ ಮನೆಯಲ್ಲಿ ಹಣ ಬರಲು ಪ್ರಾರಂಭವಾಗುತ್ತದೆ ಎಂದು ನಂಬಲಾಗುತ್ತದೆ.

ಗಮನಿಸಿ: ಈ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಲೇಖನಕ್ಕೆ ಸಂಬಂಧಿಸಿದ ಯಾವುದೇ ಇನ್‌ಪುಟ್ ಅಥವಾ ಮಾಹಿತಿಯನ್ನು ಪರಿಶೀಲಿಸಿರುವುದಿಲ್ಲ. ಕಾರ್ಯನಿರ್ವಹಿಸುವ ಮೊದಲು ದಯವಿಟ್ಟು ಸಂಬಂಧಿತ ತಜ್ಞರ ಸಲಹೆಯನ್ನು ಪಡೆಯಿರಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+