ಕುಡುಕರು ಖುಷಿಪಡುವ ಸುದ್ದಿ: ಬಿಯರ್ ಕುಡಿದರೆ ಮಧುಮೇಹ, ಬೊಜ್ಜು, ಕರುಳಿನ ಸಮಸ್ಯೆ ಮಾಯ!
ಮದ್ಯಪಾನ ಆರೋಗ್ಯಕ್ಕೆ ಹಾನಿಕರ, ಧೂಮಪಾನ ಆರೋಗ್ಯಕ್ಕೆ ಹಾನಿಕರ ಎನ್ನುವ ಈ ಸಾಲು ಸದಾಕಾಲ ಸರ್ವರಿಗೂ ಚಿರಪರಿಚಿತವಾಗಿ ಇರುತ್ತದೆ. ಎಣ್ಣೆ ಕುಡಿದರೆ ಕರಳು ಸುಟ್ಟು ಹೋಗುತ್ತೆ ಎಂದು ಎಷ್ಟೋ ತಜ್ಞರು ಹೇಳೋದನ್ನು ಕೇಳಿರುತ್ತೀರಿ. ಇದರ ಮದ್ಯೆ ಮದ್ಯಪ್ರಿಯರು ಖುಷಿ ಪಡುವ ಸುದ್ದಿಯೊಂದು ಹೊರ ಬಿದ್ದಿದೆ.
ಮದ್ಯಪಾನ ಮಾಡುವುದರಿಂದ ನಿಮ್ಮ ಆರೋಗ್ಯ ಸಮಸ್ಯೆಯು ನಿವಾರಣೆ ಆಗುತ್ತದೆ. ಮದ್ಯಪಾನದಿಂದ ನಿಮ್ಮ ಆರೋಗ್ಯ ಸುಧಾರಣೆ ಆಗುತ್ತದೆ ಎಂದು ಹೇಳುವ ವಿಭಿನ್ನ, ವಿಶೇಷ ಹಾಗೂ ಅಚ್ಚರಿ ಮೂಡಿಸುವಂತಹ ಸಮೀಕ್ಷೆಯೊಂದು ಪ್ರಕಟವಾಗಿದೆ.
ಬಿಯರ್ ಕುಡಿದರೆ ಕರುಳಿನ ಸಮಸ್ಯೆ ಕಾಡುವುದಿಲ್ಲ, ಮಧುಮೇಹದ ಸಮಸ್ಯೆ ಅಂಟಿಕೊಳ್ಳುವುದಿಲ್ಲ, ಬೊಜ್ಜು ಕಡಿಮೆಯಾಗುತ್ತದೆ. ಹೀಗೆ ಹಲವು ಆರೋಗ್ಯಕರ ಅಂಶಗಳನ್ನು ವಿಭಿನ್ನ ಸಮೀಕ್ಷಾ ವರದಿಯು ತಿಳಿಸಿದೆ. ಮದ್ಯಪ್ರಿಯ ಮುಖದಲ್ಲಿ ಮಂದಹಾಸ ಮೂಡಿಸುವ, ಕುಡುಕರಿಗೆ ಖುಷಿ ಕೊಡುವ ಸಮೀಕ್ಷೆಯಲ್ಲಿ ಒಟ್ಟಾರೆ ಏನೆಲ್ಲಾ ಅಂಶಗಳನ್ನು ಉಲ್ಲೇಖಿಸಲಾಗಿದೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ದೀರ್ಘಕಾಲಿಕ ರೋಗಗಳಿಗೆ ಮದ್ದು ಈ ಬಿಯರ್!
ಬಿಯರ್ ಕುಡಿಯುವುದು ಕರುಳಿಗೆ ಪ್ರಯೋಜನಕಾರಿ ಮತ್ತು ದೀರ್ಘಕಾಲದ ಕಾಯಿಲೆಗಳನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಧ್ಯಯನವೊಂದು ಹೇಳಿದೆ. ಬಿಯರ್ ಕರುಳನ್ನು ಆರೋಗ್ಯಕರವಾಗಿಸಲು ಸಹಾಯ ಮಾಡುವ ಕೆಲವು ಅಂಶಗಳನ್ನು ಹೊಂದಿದೆ ಎಂದು ಅಧ್ಯಯನ ತಿಳಿಸಿದೆ. ಬಿಯರ್ನಲ್ಲಿರುವ ಪಾಲಿಫಿನಾಲ್ ಅಂಶವು ಆರೋಗ್ಯದ ದೃಷ್ಟಿಯಿಂದ ಹೆಚ್ಚು ಪ್ರಯೋಜನಕಾರಿ ಆಗಿರುತ್ತದೆ. ರೆಡ್ ವೈನ್ನಲ್ಲಿ ಪಾಲಿಫಿನಾಲ್ಗಳ ಪ್ರಯೋಜನಗಳು ಎಷ್ಟರ ಮಟ್ಟಿಗೆ ಉಪಯೋಗಕಾರಿ ಎಂಬುದನ್ನು ಸಂಶೋಧಕರು ಈಗಾಗಲೇ ಸಾಬೀತುಪಡಿಸಿದ್ದಾರೆ. ಈ ಅಂಶವನ್ನು ಸಹ ಅಧ್ಯಯನದಲ್ಲಿ ಗಣನೆಗೆ ತೆಗೆದುಕೊಳ್ಳಲಾಗಿದೆ. ಹಾಗಿದ್ದರೆ ಈ ಪಾಲಿಫಿನಾಲ್ ಅಂಶವು ಹೇಗೆ ರೋಗದಿಂದ ರಕ್ಷಣೆ ಒದಗಿಸುತ್ತದೆ ಎಂಬುದನ್ನೂ ನಾವಿಲ್ಲಿ ತಿಳಿದುಕೊಳ್ಳಬೇಕಾಗಿದೆ.

ದೇಹದಲ್ಲಿ ಪಾಲಿಫಿನಾಲ್ ಹೇಗೆ ಕೆಲಸ ಮಾಡುವುದು?
ಸಾಮಾನ್ಯವಾಗಿ ಬಿಯರ್ನಲ್ಲಿ ಪಾಲಿಫಿನಾಲ್ ಎಂಬ ಅಂಶವಿರುತ್ತದೆ. ಈ ಪಾಲಿಫಿನಾಲ್ ಅಂಶವು ಕೆಲವು ಆರೋಗ್ಯ ಸಮಸ್ಯೆಗಳನ್ನು ನಿರ್ವಹಿಸುವ ಮತ್ತು ನಿಯಂತ್ರಿಸುವ ಪ್ರತಿರೋಧಕ ಶಕ್ತಿಯನ್ನು ಹೊಂದಿರುತ್ತದೆ. ಅದೇ ರೀತಿಯಲ್ಲಿ ಆಂಟಿ-ಆಕ್ಸಿಡೆಂಟ್ಗಳೆಂದು ಕರೆಯಲ್ಪಡುವ ವಿಟಮಿನ್ ಸಿ, ವಿಟಮಿನ್ ಇ ಮತ್ತು ಕ್ಯಾರೊಟಿನಾಯ್ಡ್ಗಳು ದೇಹದ ಅಂಗಾಂಶಗಳನ್ನು ಆಕ್ಸಿಡೇಟಿವ್ ಒತ್ತಡ ಮತ್ತು ಕ್ಯಾನ್ಸರ್, ಪರಿಧಮನಿಯ ಹೃದಯ ಕಾಯಿಲೆ ಮತ್ತು ಉರಿಯೂತದಂತಹ ಸಂಬಂಧಿತ ರೋಗಗಳಿಂದ ರಕ್ಷಿಸುತ್ತವೆ.

ಯಾವ ರೋಗಗಳಿಂದ ರಕ್ಷಣೆ ನೀಡುವುದು ಬಿಯರ್?
ಸಾಮಾನ್ಯವಾಗಿ ಬಿಯರ್ ಸೇವಿಸುವುದರಿಂದ ಹಲವು ದೀರ್ಘಕಾಲಿಕ ರೋಗಗಳಿಂದ ರಕ್ಷಣೆ ಸಿಗಲಿದೆ. ಈ ಪೈಕಿ ಸ್ಥೂಲಕಾಯತೆ, ಮಧುಮೇಹ ಮತ್ತು ಹೃದಯ ರಕ್ತನಾಳದ ಕಾಯಿಲೆಗಳಂತಹ ದೀರ್ಘಕಾಲದ ಕಾಯಿಲೆಗಳನ್ನು ತಡೆಗಟ್ಟಬಹುದಾಗಿದೆ. ಈ ರೋಗಗಳಿಂದ ರಕ್ಷಣೆಯನ್ನು ಹೊಂದುವುದರ ಜೊತೆಗೆ ಬಿಯರ್ ಸೇವನೆಯಿಂದಾಗಿ ಕರುಳಿನ ಮೈಕ್ರೋ-ಬಯೋಟಾದ ಸಂಯೋಜನೆಯನ್ನು ಸುಧಾರಿಸಬಹುದು ಎಂದು ಅಧ್ಯಯನವು ತಿಳಿಸಿದೆ.

ಫೋರ್ಚುಗಲ್ ಸಂಶೋಧನಾ ಕೇಂದ್ರವು ಹೇಳಿದ್ದೇನು?
"ಕರುಳಿನ ಮೈಕ್ರೋ-ಬಯೋಟಾದ ಸಂಯೋಜನೆಯ ಬಿಯರ್ ಸೇವನೆಯು ಹೆಚ್ಚು ಉಪಯುಕ್ತವಾಗಿರುತ್ತದೆ. ಇದರ ಜೊತೆಗೆ ಬೊಜ್ಜು, ಮಧುಮೇಹ ಮತ್ತು ಹೃದಯ ರಕ್ತನಾಳದ ಕಾಯಿಲೆಗಳಂತಹ ಸಾಮಾನ್ಯ ದೀರ್ಘಕಾಲದ ಕಾಯಿಲೆಗಳ ತಡೆಗಟ್ಟುವಿಕೆಗೆ ಸಂಬಂಧಿಸಿದೆ," ಎಂದು ಉತ್ತರ ಪೋರ್ಚುಗಲ್ನ ಪೋರ್ಟೊ ನಗರದಲ್ಲಿನ ಸೆಂಟರ್ ಫಾರ್ ರಿಸರ್ಚ್ ಇನ್ ಹೆಲ್ತ್ ಟೆಕ್ನಾಲಜೀಸ್ ಅಂಡ್ ಸರ್ವೀಸಸ್ (CINTESIS) ನಡೆಸಿದ ಸಂಶೋಧನಾ ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.

ಬಿಯರ್ ಸಂಬಂಧಿತ ಸಂಶೋಧನೆ ನಡೆದಿದ್ದು ಹೇಗೆ?
ಸಾಮಾನ್ಯವಾಗಿ 23 ರಿಂದ 58 ವರ್ಷ ವಯಸ್ಸಿನ ಆರೋಗ್ಯವಂತ ಪುರುಷರನ್ನು ಒಳಗೊಂಡಂತೆ ಈ ಅಧ್ಯಯನವನ್ನು ನಡೆಸಲಾಯಿತು. ಸಂಶೋಧನೆಯಲ್ಲಿ ಭಾಗವಹಿಸಿದ ಪುರುಷರಿಗೆ ನಾಲ್ಕು ವಾರಗಳವರೆಗೆ ಪ್ರತಿನಿತ್ಯ ಆಲ್ಕೋಹಾಲ್ ಅಥವಾ ವಿಥೌಟ್ ಅಲ್ಕೋಹಾಲ್ ಉಳ್ಳ 330 ಮಿಲಿ ಮೀಟರ್ ಬಿಯರ್ ಕುಡಿಯುವಂತೆ ಸೂಚನೆ ನೀಡಲಾಗಿತ್ತು. ಈ ವೇಳೆ CINTESIS ನಡೆಸಿದ ಸಂಶೋಧನೆಯಿಂದ ಬಿಯರ್ ಸೇವನೆಯು ತೂಕ ಮತ್ತು ಕೊಬ್ಬಿನ ಅಂಶವನ್ನು ಹೆಚ್ಚಿಸುವುದಿಲ್ಲ, ಕರುಳಿನ ಸಮಸ್ಯೆಯಿಂದ ರಕ್ಷಣೆಯನ್ನು ನೀಡುತ್ತದೆ ಎಂದು ತಿಳಿದು ಬಂದಿದೆ.
-
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications