ಹಳೆಯ 10, 5 ನಾಣ್ಯಗಳನ್ನು ಮಾರಿ ಸಾಕಷ್ಟು ಹಣ ಗಳಿಸಿ, ಷರತ್ತು ಅನ್ವಯ!
ನವದೆಹಲಿ, ಜೂ.22: ಕಳೆದ ಎರಡು ದಿನಗಳಿಂದ ನೀವು ಹಳೆಯ 10 ಮತ್ತು 5 ರೂ ನಾಣ್ಯವನ್ನು ವಿನಿಮಯ ಮಾಡಿಕೊಂಡರೆ ಸಾಕಷ್ಟು ಹಣವನ್ನು ಗಳಿಸಬಹುದು ಎಂದು ಹೇಳುವ ಹಲವಾರು ಪೋಸ್ಟ್ಗಳು ವೈರಲ್ ಆಗಿವೆ. ಜನರು ತಮ್ಮ ಹಳೆಯ ನಾಣ್ಯಗಳನ್ನು ಮಾರಾಟ ಮಾಡುವ ಮೂಲಕ ಲಕ್ಷಾಂತರ ರೂಪಾಯಿಗಳನ್ನು ಸಂಪಾದಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ನೀವು ಮಾತೆ ವೈಷ್ಣೋ ದೇವಿ ಚಿತ್ರವಿರುವ 5 ಮತ್ತು 10 ರೂ.ಗಳ ನಾಣ್ಯಗಳನ್ನು ಹೊಂದಿದ್ದರೆ ಅವುಗಳನ್ನು ಹರಾಜಿಗೆ ಹಾಕುವ ಮೂಲಕ ಲಕ್ಷ ರೂಪಾಯಿಗಳನ್ನು ಗಳಿಸಬಹುದು ಎಂದು ಹೇಳಲಾಗಿದೆ. ಈ ನಾಣ್ಯಗಳಿಗೆ ಹೆಚ್ಚಿನ ಬೇಡಿಕೆಯಿದ್ದು ಲಕ್ಷಾಂತರ ರೂಪಾಯಿಗಳಲ್ಲಿ ಮಾರಿ ಹೋಗುತ್ತಿದೆ ಎಂದು ಹೇಳಲಾಗಿದೆ.
ಹಳೆಯ 5 ರೂ ನೋಟಿನ ವಿನಿಮಯದಿಂದ ನೀವು 30,000 ರೂ.ಗಳವರೆಗೆ ಗಳಿಸಬಹುದು ಎಂದು ಹೆಚ್ಚಿನ ವರದಿಗಳು ತಿಳಿಸಿವೆ. ಆದಾಗ್ಯೂ ಕೆಲವೊಂದು ಷರತ್ತು ಅನ್ವಯವಾಗಲಿದೆ. ನಿಮ್ಮ ನೋಟಿನಲ್ಲಿ ಟ್ರಾಕ್ಟರ್ನ ಚಿತ್ರವಿದ್ದರೆ ಮಾತ್ರ ನೀವು ಹಣವನ್ನು ಸಂಪಾದಿಸಬಹುದಾಗಿದೆ. ಇದಲ್ಲದೆ, ನೋಟಿನಲ್ಲಿ 786 ಇದ್ದರೆ, ನೀವು ಯೋಗ್ಯವಾದ ಹಣವನ್ನು ಗಳಿಸಬಹುದು.

ಇತ್ತೀಚೆಗೆ, ವೆಬ್ಸೈಟ್ವೊಂದು ಜಾಹೀರಾತನ್ನು ಪೋಸ್ಟ್ ಮಾಡಿದ್ದು, ನೀವು ರು. 1 ನೋಟ್ ಹೊಂದಿದ್ದರೆ, ಷರತ್ತಿಗೆ ತಕ್ಕುದಾಗಿದ್ದರೆ, ನೀವು 45,000 ರು. ಗಳಿಸಬಹುದಾಗಿದೆ. ಭಾರತ ಸರ್ಕಾರವು 26 ವರ್ಷಗಳ ಹಿಂದೆ ರು. 1 ನೋಟ್ನ ಬಳಕೆ ಸ್ಥಗಿತಗೊಳಿಸಿದೆ. ಆದರೆ 2015 ರಲ್ಲಿ, ನೋಟ್ ಮತ್ತೆ ಚಲಾವಣೆಯಲ್ಲಿದೆ. ಹಳೆಯ ನೋಟುಗಳು ಪುರಾತನ ಮೌಲ್ಯವನ್ನು ಹೊಂದಿವೆ. ಆದ್ದರಿಂದ ಈ ನೋಟನ್ನು ಭಾರೀ ಬೆಲೆಗೆ ಖರೀದಿ ಮಾಡಲಾಗುತ್ತಿದೆ.
ನೀವು ಮೊದಲು ವೆಬ್ಸೈಟ್ನಲ್ಲಿ ನೋಂದಾಯಿಸಿಕೊಂಡು ಬಳಿಕ ನೋಟು ಅಥವಾ ನಾಣ್ಯದ ಚಿತ್ರವನ್ನು ಆ ವೆಬ್ಸೈಟ್ಗೆ ಅಪ್ಲೋಡ್ ಮಾಡಬೇಕಾಗಿದೆ. ಬಳಿಕ ಇದರ ಮಾರಾಟದ ಜಾಹೀರಾತನ್ನು ಪ್ಲಾಟ್ಫಾರ್ಮ್ನಲ್ಲಿ ತೋರಿಸಲಾಗುತ್ತದೆ. ನಂತರ ಆಸಕ್ತರು ಜಾಹೀರಾತನ್ನು ನೋಡಿ ನಿಮ್ಮನ್ನು ಸಂಪರ್ಕಿಸಿದರೆ, ನೀವು ನಿಮ್ಮ ನೋಟನ್ನು ಮಾರಾಟ ಮಾಡಬಹುದಾಗಿದೆ. ಆದರೆ ರು. 1 ನೋಟ್ ಆದರೆ 1957 ರಲ್ಲಿ ಅಂದಿನ ರಾಜ್ಯಪಾಲ ಎಚ್ ಎಂ ಪಟೇಲ್ನ ಸಹಿ ಆ ನೋಟಿನಲ್ಲಿ ಇರಬೇಕು. ಹಾಗೆಯೇ ಸರಣಿ ಸಂಖ್ಯೆ 123456 ಆಗಿರಬೇಕು ಎಂಬ ಷರತ್ತು ಇದೆ.

Fact Check
ಕ್ಲೇಮು
ನಿಮ್ಮ ಹಳೆಯ 10, 5 ನಾಣ್ಯಗಳು ಮತ್ತು ರು. 1 ನೋಟ್ ಅನ್ನು ಮಾರಾಟ ಮಾಡುವ ಮೂಲಕ ನೀವು ಲಕ್ಷ ರೂಪಾಯಿಗಳನ್ನು ಗಳಿಸಬಹುದು.
ಪರಿಸಮಾಪ್ತಿ
ಇದು ವೆಬ್ಸೈಟ್ ಒಂದರ ಹರಾಜು ಮತ್ತು ಸಾಕಷ್ಟು ಷರತ್ತುಗಳು ಅನ್ವಯವಾಗುತ್ತದೆ.
Rating
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications