Fact Check: ಕೋವಿಡ್ ಲಸಿಕೆ ಪಡೆಯದಂತೆ ಆಫ್ರಿಕನ್ನರಿಗೆ ಒಬಾಮ ಮನವಿ
ನವದೆಹಲಿ, ಜನವರಿ 11: ಅಮೆರಿಕ ಮತ್ತು ಯುರೋಪ್ಗಳಿಂದ ಬರುವ ಕೋವಿಡ್ ಲಸಿಕೆಗಳನ್ನು ಪಡೆದುಕೊಳ್ಳದಂತೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಆಫ್ರಿಕನ್ನರಿಗೆ ಮನವಿ ಮಾಡಿದ್ದಾರೆ ಎನ್ನಲಾದ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
'ಅಮೆರಿಕ ಮತ್ತು ಯುರೋಪ್ಗಳಿಂದ ಬರುವ ಲಸಿಕೆಗಳನ್ನು ಸ್ವೀಕರಿಸದಂತೆ ಆಫ್ರಿಕನ್ನರಿಗೆ ಬರಾಕ್ ಒಬಾಮ ಹೇಳುತ್ತಿದ್ದಾರೆ.
ಬರಾಕ್ ಒಬಾಮ: ಆಫ್ರಿಕನ್ನರ ಮೇಲೆ ಈ ಬಿಳಿಯ ಜನರು ಮಾಡಲು ಹೊರಟಿರುವ ಈ ಕೆಟ್ಟ ಕ್ರಮದ ಕುರಿತು ನಾನು ಬಹಿರಂಗಪಡಿಸದೆ ಹೋದರೆ ನಾನೂ ಅದರಲ್ಲಿ ಶಾಮೀಲಾದಂತೆ ಆಗುತ್ತದೆ. ಎಷ್ಟಾದರೂ ನಾನು ಅಮೆರಿಕದಲ್ಲಿ ಹುಟ್ಟಿದ್ದರೂ, ನನ್ನದು ಆಫ್ರಿಕನ್ ರಕ್ತ' ಎಂದು ಒಬಾಮ ಹೇಳಿದ್ದಾರೆ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.

ಆಫ್ರಿಕನ್ನರು ಲಸಿಕೆ ಪಡೆದುಕೊಳ್ಳದಂತೆ ಒಬಾಮ ಅವರು ಮನವಿ ಮಾಡಿರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಇದೇ ರೀತಿಯ ಹೇಳಿಕೆಯನ್ನು ಕಳೆದ ವರ್ಷ ಕೂಡ ಹರಿಬಿಡಲಾಗಿತ್ತು. ಒಬಾಮ ಅವರು ಈ ರೀತಿ ಹೇಳಿಕೆ ನೀಡಿಲ್ಲ. ಅವರು ಲಸಿಕೆಯ ಪರವಾಗಿ ಇದ್ದಾರೆ ಎಂದು ಒಬಾಮ ಅವರ ವಕ್ತಾರೆ ಕೇಟಿ ಹಿಲ್ ತಿಳಿಸಿದ್ದರು.
ಮಿಗಿಲಾಗಿ ಕಳೆದ ಡಿಸೆಂಬರ್ನಲ್ಲಿ ಟ್ವೀಟ್ ಮಾಡಿದ್ದ ಬರಾಕ್ ಒಬಾಮ, 'ಹಿಂದಿಗಿಂತಲೂ ಅಪಾಯಕಾರಿಯಾಗಿ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ. ಲಸಿಕೆ ಪಡೆದುಕೊಳ್ಳುವುದು ನಾವು ಮಾಡಬಹುದಾದ ಅತಿ ಮಹತ್ವದ ಸಂಗತಿಯಾಗಿದೆ. ಆದರೆ ವ್ಯಾಪಕವಾಗಿ ಲಸಿಕೆ ಲಭ್ಯವಾಗುವವರೆಗೂ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವಿಕೆ ವಾಸ್ತವವಾಗಿ ಹೆಚ್ಚು ಜೀವಗಳನ್ನು ಬದುಕಿಸಬಲ್ಲವು. ಜತೆಗೆ ಆರೋಗ್ಯ ಕಾಳಜಿ ಕಾರ್ಯಕರ್ತರ ಮೇಲಿನ ಒತ್ತಡವನ್ನು ತಗ್ಗಿಸಬಲ್ಲದು' ಎಂದು ಹೇಳಿದ್ದರು.

ಲಸಿಕೆಯು ಅಪಾಯಕಾರಿಯಾಗಿದ್ದು, ಆಫ್ರಿಕನ್ನರ ವಿರುದ್ಧ ಪ್ರಯೋಗಿಸಲು ಬಿಳಿಯ ಜನರು ನಡೆಸಿರುವ ಹುನ್ನಾರ ಎಂದು ಎಲ್ಲಿಯೂ ಒಬಾಮ ಹೇಳಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿನ ಈ ಸುದ್ದಿ ಸುಳ್ಳು.

Fact Check
ಕ್ಲೇಮು
ಕೋವಿಡ್ 19 ಲಸಿಕೆ ಪಡೆದುಕೊಳ್ಳದಂತೆ ಆಫ್ರಿಕನ್ನರಿಗೆ ಒಬಾಮ ಮನವಿ ಮಾಡಿದ್ದಾರೆ.
ಪರಿಸಮಾಪ್ತಿ
ಒಬಾಮ ಅಂತಹ ಹೇಳಿಕೆ ನೀಡಿಲ್ಲ. ಇದನ್ನು ಅವರ ವಕ್ತಾರೆ ಖಚಿತಪಡಿಸಿದ್ದಾರೆ.
Rating
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications