Get Updates
Get notified of breaking news, exclusive insights, and must-see stories!

ಕನ್ನಡ ಚಿತ್ರರಂಗ ಉತ್ತುಂಗಕ್ಕೇರಲು ಯಶ್, ರಿಷಬ್‌, ನೀಲ್‌ ಕಾರಣ: ಬಾಲಿವುಡ್‌ ನಟ ಅನಿಲ್‌ ಕಪೂರ್‌

ಕನ್ನಡ ಚಿತ್ರರಂಗದ ಕಡೆ ಇಂದು ಇಡೀ ಭಾರತೀಯ ಸಿನಿಮಾರಂಗ ತಿರುಗಿ ನೋಡುತ್ತಿದೆ. ಕನ್ನಡದಲ್ಲಿ ತೆರೆಕಂಡು, ಬಹುಭಾಷೆಗಳಲ್ಲಿ ಮಿಂಚಿದ ಕೆಜಿಎಫ್‌ ಹಾಗೂ ಕಾಂತಾರ ಸಿನಿಮಾಗಳು ಮಾಡಿದ ಮೋಡಿ ಕಡಿಮೆಯೇನಲ್ಲ. ಸ್ಯಾಂಡಲ್‌ವುಡ್‌ ಅಂದ್ರೆ ಇಂದು ಬಾಲಿವುಡ್‌ನವರೂ ಹುಬ್ಬೇರಿಸಿ ನೋಡುವ ವಾತಾವರಣ ನಿರ್ಮಾಣವಾಗಿದೆ. ಇನ್ನು ಕನ್ನಡ ಚಿತ್ರರಂಗದೊಂದಿಗೆ ನಂಟಿರುವ ಬಾಲಿವುಡ್‌ ಹಿರಿಯ ನಟ ಅನಿಲ್‌ ಕಪೂರ್‌ ಕೂಡ ಕನ್ನಡ ಕಲಾವಿದರಿಗೆ ಭೇಷ್‌ ಎಂದಿದ್ದಾರೆ.

43 ವರ್ಷಗಳ ಹಿಂದೆ "ಪಲ್ಲವಿ ಅನು ಪಲ್ಲವಿ" ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಅನಿಲ್ ಕಪೂರ್ ಪಾದಾರ್ಪಣೆ ಮಾಡಿದರು. ಈ ಹಿರಿಯ ನಟ ಈ ಚಿತ್ರದೊಂದಿಗಿನ ತಮ್ಮ ಆರಂಭಿಕ ಅನುಭವವನ್ನು ನೆನಪಿಸಿಕೊಳ್ಳುತ್ತಾ, ಕನ್ನಡ ಸಿನಿಮಾವನ್ನು ಜಾಗತಿಕ ವೇದಿಕೆಯಲ್ಲಿ ಭಾರತೀಯ ಸಿನಿಮಾವನ್ನು ಹೇಗೆ ಮರು ವ್ಯಾಖ್ಯಾನಿಸಲು ಸಹಾಯ ಮಾಡಿದೆ ಎಂಬುದನ್ನು ಶ್ಲಾಘಿಸಿದ್ದಾರೆ.

Yash Rishab Shetty Prashanth Neel Took Kannada Cinema To New Heights Anil Kapoor

'ನಾನು ಕನ್ನಡ ಚಿತ್ರರಂಗಕ್ಕೆ 43 ವರ್ಷಗಳ ಹಿಂದೆ ನನ್ನ ಮೊದಲ ಹೆಜ್ಜೆ ಇಟ್ಟಿದ್ದೆ. ಅಂದಿನಿಂದ ಇಲ್ಲಿಯವರೆಗೆ, ಕನ್ನಡ ಚಿತ್ರರಂಗವು ಜಾಗತಿಕವಾಗಿ ಭಾರತೀಯ ಸಿನಿಮಾವನ್ನು ಹೇಗೆ ಮರು ವ್ಯಾಖ್ಯಾನಿಸುತ್ತಿದೆ ಮತ್ತು ಅಭಿವೃದ್ಧಿ ಹೊಂದುತ್ತಿದೆ ಎಂಬುದನ್ನು ನೋಡುವುದು ನಿಜಕ್ಕೂ ಅದ್ಭುತವಾಗಿದೆ' ಎಂದು ಅನಿಲ್‌ ಕಪೂರ್‌ ಕೊಂಡಾಡಿದ್ದಾರೆ.

ಕನ್ನಡದಲ್ಲಿ ನಟಿಸುವ ಆಸೆ

'ಕೆಜಿಎಫ್‌ ಮತ್ತು ಕಾಂತಾರ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದ ಮಟ್ಟವನ್ನು ಅಷ್ಟೊಂದು ಎತ್ತರಕ್ಕೆ ಕೊಂಡೊಯ್ದ ನಟ ಯಶ್, ಪ್ರಶಾಂತ್ ನೀಲ್, ರಿಷಬ್ ಶೆಟ್ಟಿ ಮತ್ತು ಈ ಸಿನಿಮಾಗಳ ಹಿಂದೆ ದುಡಿದ ಸಂಪೂರ್ಣ ತಂಡಕ್ಕೆ ನನ್ನ ಹೃದಯಪೂರ್ವಕ ವಂದನೆಗಳು. ಇಂತಹ ಅದ್ಭುತ ಚಿತ್ರರಂಗದೊಂದಿಗೆ ನನ್ನ ಸಂಬಂಧ ಇಲ್ಲಿಗೇ ಮುಗಿಯದೆ, ಮುಂದೆಯೂ ಮುಂದುವರಿಯಲಿ ಎಂಬ ಆಶಯ' ಎಂದಿದ್ದಾರೆ ನಟ ಅನಿಲ್‌ ಕಪೂರ್‌. ಕನ್ನಡ ಚಿತ್ರರಂಗದ ಕುರಿತು ಕಪೂರ್ ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳು ಸ್ಯಾಂಡಲ್‌ವುಡ್‌ ಅಭಿಮಾನಿಗಳ ಮನಸ್ಸು ಗೆದ್ದಿವೆ.

ಸುಮಾರು 43 ವರ್ಷಗಳ ಹಿಂದೆ ಕನ್ನಡ ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಟ್ಟ ಕ್ಷಣವನ್ನು ನೆನಪಿಸಿಕೊಂಡ ಅವರು ಅಂದಿನಿಂದ ಇಂದಿನವರೆಗೂ ಕನ್ನಡ ಸಿನಿಮಾಗಳು ತಲುಪಿರುವ ಎತ್ತರ ನಿಜಕ್ಕೂ ಆಶ್ಚರ್ಯಕರವಾಗಿದೆ ಎಂದು ಹೇಳಿದ್ದಾರೆ. ಆರಂಭದಲ್ಲಿ ಒಂದು ಪ್ರಾದೇಶಿಕ ಚಿತ್ರರಂಗವಾಗಿದ್ದ ಕನ್ನಡ ಸಿನಿಮಾ, ಇಂದು ಜಾಗತಿಕ ಮಟ್ಟದಲ್ಲಿ ಭಾರತೀಯ ಸಿನಿಮಾವನ್ನು ಮರು ವ್ಯಾಖ್ಯಾನಿಸುವಷ್ಟು ಬೆಳವಣಿಗೆ ಕಂಡಿದೆ ಎಂಬುದು ಹೆಮ್ಮೆಯ ವಿಚಾರ ಎಂದಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಕೆಜಿಎಫ್‌ ಮತ್ತು ಕಾಂತಾರ ಸಿನಿಮಾಗಳು ಕನ್ನಡ ಚಿತ್ರರಂಗಕ್ಕೆ ವಿಶ್ವಮಟ್ಟದ ಗುರುತನ್ನು ತಂದಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದ ಮಟ್ಟವನ್ನು ಅಸಾಧಾರಣವಾಗಿ ಎತ್ತರಕ್ಕೆ ಕೊಂಡೊಯ್ದ ನಟ ಯಶ್, ನಿರ್ದೇಶಕ ಪ್ರಶಾಂತ್ ನೀಲ್, ನಟ ರಿಷಬ್ ಶೆಟ್ಟಿ ಹಾಗೂ ಈ ಸಿನಿಮಾಗಳ ಹಿಂದೆ ಶ್ರಮಿಸಿದ ಸಂಪೂರ್ಣ ತಂಡಕ್ಕೆ ಅವರು ಹೃದಯಪೂರ್ವಕ ವಂದನೆಗಳನ್ನು ತಿಳಿಸಿದ್ದಾರೆ.

ಕನ್ನಡ ಚಿತ್ರರಂಗದ ಬೆಳವಣಿಗೆ ಕೇವಲ ವಾಣಿಜ್ಯ ಯಶಸ್ಸಿಗೆ ಸೀಮಿತವಾಗಿಲ್ಲ, ಬದಲಿಗೆ ಭಾರತೀಯ ಸಿನಿಮಾಗೆ ಹೊಸ ದಿಕ್ಕು ನೀಡುವಂತಹ ಪ್ರಯತ್ನಗಳು ಇಲ್ಲಿ ನಡೆಯುತ್ತಿವೆ. ಪ್ರಾದೇಶಿಕ ಭಾಷೆಯ ಗಡಿ ಮೀರಿ ಜಾಗತಿಕ ಪ್ರೇಕ್ಷಕರಿಗೆ ತಲುಪುವ ಶಕ್ತಿ ಕನ್ನಡ ಸಿನಿಮಾಗಳಲ್ಲಿ ಇಂದು ಸ್ಪಷ್ಟವಾಗಿ ಕಾಣಿಸುತ್ತಿದೆ. ಇಂತಹ ಅದ್ಭುತ ಚಿತ್ರರಂಗದೊಂದಿಗೆ ತಮ್ಮ ಸಂಬಂಧ ಇಲ್ಲಿಗೇ ಮುಗಿಯಬಾರದು ಎಂಬ ಆಶಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಮುಂದೆಯೂ ಕನ್ನಡ ಚಿತ್ರರಂಗದೊಂದಿಗೆ ತಮ್ಮ ಸಂಪರ್ಕ ಮುಂದುವರಿಯಬೇಕು ಹಾಗೂ ಉತ್ತಮ ಕಥೆಗಳು ಮತ್ತು ಹೊಸ ಪ್ರಯೋಗಗಳ ಭಾಗವಾಗುವ ಅವಕಾಶ ಸಿಗಲಿ ಎಂದು ಆಶಿಸಿದ್ದಾರೆ. ಅವರ ಈ ಮಾತುಗಳು ಕನ್ನಡ ಚಿತ್ರರಂಗದ ಸಾಧನೆಗೆ ಮತ್ತಷ್ಟು ಗೌರವ ಮತ್ತು ಹೆಮ್ಮೆಯನ್ನು ತಂದುಕೊಟ್ಟಿದ್ದು, ಸ್ಯಾಂಡಲ್‌ವುಡ್‌ನ ಜಾಗತಿಕ ಪಯಣಕ್ಕೆ ಮತ್ತೊಂದು ಮಾನ್ಯತೆ ದೊರೆತಂತಾಗಿದೆ.

ನೀವು ಲೆಜೆಂಡ್‌ ಎಂದ ರಿಷಬ್

'ನಿಮ್ಮ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ ಸರ್! ನಿಮ್ಮ ಪ್ರಯಾಣ ಇಲ್ಲಿಂದ ಪ್ರಾರಂಭವಾಯಿತು ಮತ್ತು ಇಂದು ನೀವು ಭಾರತೀಯ ಚಿತ್ರರಂಗದ ನಿಜವಾದ ದಂತಕಥೆಯಾಗಿ ನಿಂತಿದ್ದೀರಿ. ನಿಮ್ಮನ್ನು ಭೇಟಿಯಾಗಲು ಮತ್ತು ಅಂತಹ ಅದ್ಭುತ ಸಂಭಾಷಣೆ ನಡೆಸಲು ನನಗೆ ಸಂಪೂರ್ಣ ಗೌರವವಾಗಿದೆ. ನಿಮ್ಮ ಪಲ್ಲವಿ ಅನುಪಲ್ಲವಿ ನನ್ನ ನೆಚ್ಚಿನ ಚಿತ್ರಗಳಲ್ಲಿ ಒಂದಾಗಿದೆ' ಎಂದು ರಿಷಬ್‌ ಶೆಟ್ಟಿ ಅನಿಲ್‌ ಕುಮಾರ್‌ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+