'ನನ್ನ ಗಂಡ ಸತ್ತ ದಿನವೇ ಸಂಚು ಮಾಡಿದ್ದರು': ಗುರುಪ್ರಸಾದ್ ಪತ್ನಿ ಆಕ್ರೋಶ
ಕನ್ನಡ ಚಿತ್ರರಂಗಕ್ಕೆ ಹಿಟ್ ಸಿನಿಮಾಗಳನ್ನು ನೀಡಿದ ಸ್ಟಾರ್ ನಿರ್ದೇಶಕ ಗುರುಪ್ರಸಾದ್ ಅವರ ಕೊನೆಯ ಚಿತ್ರ ಎದ್ದೇಳು ಮಂಜುನಾಥ 2 ಇಂದು (ಫೆಬ್ರವರಿ 21)ರಂದು ರಿಲೀಸ್ ಆಗಬೇಕಿತ್ತು. ಆದರೆ ಬಿಡುಗಡೆಗೆಯ ಸಮಯದಲ್ಲಿ ವಿವಾದಕ್ಕೆ ಸಿಕ್ಕಿಕೊಂಡಿದೆ. ಗುರುಪ್ರಸಾದ್ ಪತ್ನಿ ಸುಮಿತ್ರಾ ನಿರ್ಮಾಪಕರ ವಿರುದ್ಧ ಕೋರ್ಟ್ ಮೊರೆ ಹೋಗಿದ್ದು, ಸದ್ಯ ಸಿನಿಮಾ ಬಿಡುಗಡೆಯನ್ನು ತಡೆ ಹಿಡಿಯಲಾಗಿದೆ. ಯಾಕೆ ಸುಮಿತ್ರಾ ಸಿನಿಮಾ ಬಿಡುಗಡೆಗೆ ತಡೆ ತಂದರು ಎನ್ನುವುದಕ್ಕೆ ಕಾರಣ ಇಲ್ಲಿದೆ.
ಗುರುಪ್ರಸಾದ್ ಪತ್ನಿ ಸುಮಿತ್ರಾ ಟಿವಿ 9 ಕನ್ನಡಕ್ಕೆ ನೀಡಿದ ಹೇಳಿಕೆಯಲ್ಲಿ ಈ ಬಗ್ಗೆ ವಿವರಿಸಿದ್ದಾರೆ. 'ಎಲ್ಲರಿಗೂ ಗೊತ್ತಿರುವ ಹಾಗೇ ಎದ್ದೇಳು ಮಂಜುನಾಥ-2 ಗುರು ಪ್ರಸಾದ್ ಅವರ ಸಿನಿಮಾ. ಗುರು ಪ್ರಸಾದ್ ಅವರ ಬ್ಯಾನರ್ನಲ್ಲೇ ಸಿನಿಮಾ ರೆಡಿಯಾಗಿತ್ತು. ನಾನು ಜನವರಿಯಲ್ಲಿ ಸುದ್ದಿಗೋಷ್ಠಿಯವರೆಗೂ ಅವರ ಜೊತೆಯಲ್ಲಿ ಇದ್ದಿದ್ದು ಇದೇ ಕಾರಣಕ್ಕಾಗಿ. ನಮ್ಮ ಸಿನಿಮಾ ಇದು ಎಂದು'

'ಗುರು ಪ್ರಸಾದ್ ಅವರು ತೀರಿ ಕೊಂಡ ಬಳಿಕ ಸಿನಿಮಾದ ಕಟೆಂಟ್ ನನ್ನ ಬಳಿ ಇರುತ್ತದೆ. ಆ ಸಮಯದಲ್ಲಿ ನನಗೂ ಉಸಿರಾಡಲು ಕೂಡ ಬಿಡಲಿಲ್ಲ. ಗಂಡ ಸತ್ತ ನೋವು ಎಷ್ಟಿರುತ್ತದೆ ಎಂದು ಎಲ್ಲರಿಗೂ ಗೊತ್ತು. ಯಾರೂ ಆ ಸಮಯದಲ್ಲಿ ಸಂತೋಷ ಪಟ್ಟುಕೊಂಡು ಇರುವುದಿಲ್ಲ. ಅವರು ಸತ್ತ ದಿನವೇ ಸಂಚು ಹೂಡುತ್ತಾರೆ. ಸಿನಿಮಾ ಕಂಟೆಟ್ಅನ್ನು ವಶ ಮಾಡಿಕೊಳ್ಳಬೇಕು ಎನ್ನುವ ಪ್ಲಾನ್ ಮೊದಲ ದಿನಾದಿಂದಲೇ ಶುರುವಾಗುತ್ತದೆ. ಆ ಸಮಯದಲ್ಲಿ ಪೊಲೀಸರು ಬಿಡಲಿಲ್ಲ' ಎಂದರು.
'ಬಳಿಕ ನಮ್ಮ ಯಜಮಾನರ ಶವ ಸಂಸ್ಕಾರ ಮಾಡಿ ಎರಡನೇ ದಿನ ಹೋಗಿ ನಾನು ಹೋಟೆಲ್ನಲ್ಲಿದ್ದ ಕಂಟೆಂಟ್ಗಳನ್ನು ತೆಗೆದುಕೊಂಡು ಬಂದು ನನ್ನ ಹತ್ತಿರ ಇಟ್ಟುಕೊಂಡೆ. ಅವತ್ತಿನಿಂದ ಕೊಟ್ಟು ಬಿಡಿ ಸಿನಿಮಾ ರಿಲೀಸ್ ಮಾಡೋಣ ಎನ್ನುವುದು ಶುರುವಾಗುತ್ತದೆ. ಸಿನಿಮಾ ಬಹುತೇಕ ಮುಗಿದಿತ್ತು. ಪೋಸ್ಟ್ ಪೊಡಕ್ಷನ್ ಕೆಲಸ ಬಾಕಿ ಇತ್ತು. ನನಗೆ ಸುಧಾರಿಸಿಕೊಳ್ಳಲು ಸಮಯ ಕೊಡದೇ ಮಾತುಕತೆ ಮಾಡಿ ತೆಗೆದುಕೊಂಡು ಹೋಗುತ್ತಾರೆ'.

'ಸಿನಿಮಾ ಕೆಲಸ ಮುಗಿಸುತ್ತೇವೆ ರಿಲೀಸ್ ಮಾಡಲ್ಲ ಎಂದು ತೆಗೆದುಕೊಂಡು ಹೋದರು. ಈಗ ತನ್ನ ಬ್ಯಾನರ್ನಲ್ಲಿ ಸಿನಿಮಾ ರಿಲೀಸ್ ಮಾಡುತ್ತಾರೆ ಎಂದರೆ ಯಾರಿಗೆ ತಾನೇ ಕೋಪ ಬರುವುದಿಲ್ಲ. ನನ್ನ ಗಂಡನ ಹಕ್ಕು, ನನ್ನ ಮಗುವಿನ ಆಸ್ತಿಯನ್ನು ಹೇಗೆ ಬೇರೆಯವರಿಗೆ ಬಿಟ್ಟುಕೊಡುವುದು. ನನ್ನನ್ನು ಹೊರಗಿಟ್ಟು ಸಿನಿಮಾದ ಎಲ್ಲವನ್ನೂ ಅವರ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳುತ್ತಾರೆ. ಹೀಗಾಗಿ ಸಿನಿಮಾ ರಿಲೀಸ್ಗೆ ಕೋರ್ಟ್ ಮೂಲಕ ಸ್ಟೇ ತರಲಾಗಿದೆ' ಎಂದು ಗುರುಪ್ರಸಾದ್ ಪತ್ನಿ ಸುಮಿತ್ರಾ ಹೇಳಿಕೊಂಡಿದ್ದಾರೆ.
-
ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ವಿಶೇಷ: ಬೆಟ್ಟದ ಹೂವಿನಿಂದ ಗಂಧದ ಗುಡಿಯವರೆಗೆ, ಅಪ್ಪು ಎಂಬ ಅಳಿಸಲಾಗದ ನಗು -
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ












Click it and Unblock the Notifications