Rakshak Bullet: ಪ್ರಥಮ್ಗೆ ಜೀವ ಬೆದರಿಕೆ ಹಾಕಿದಾಗ ಸುಮ್ಮನಿದ್ದಿದ್ದೇಕೆ? ಅಸಲಿ ಕಾರಣ ಹೇಳಿದ ರಕ್ಷಕ್ ಬುಲೆಟ್
ಬಿಗ್ಬಾಸ್ ವಿನ್ನರ್ ಹಾಗೂ ನಟ ಪ್ರಥಮ್ಗೆ ರೌಡಿಗಳ ಗುಂಪೊಂದು ಡ್ರ್ಯಾಗರ್ ತೋರಿಸಿ ಜೀವ ಬೆದರಿಕೆ ಹಾಕಿದ್ದು, ಈ ಘಟನೆ ನಡೆದಾಗ ರಕ್ಷಕ್ ಬುಲೆಟ್ ಕೂಡ ಅದೇ ಜಾಗದಲ್ಲಿದ್ದರು ಎಂಬ ಆರೋಪ ಕೇಳಿಬಂದಿದೆ. ಸದ್ಯ ಈ ವಿಚಾರ ಸಂಚಲನ ಸೃಷ್ಟಿಸಿದ್ದು, ಪ್ರಥಮ್ ಅವರು ಘಟನೆ ವಿವರಿಸಿರುವ ಆಡಿಯೋ ಕೂಡ ವೈರಲ್ ಆಗಿದೆ. ಇನ್ನು ಪ್ರಥಮ್ಗೆ ಬೆದರಿಕೆ ಹಾಕುತ್ತಿದ್ದಾಗ ಪಕ್ಕದಲ್ಲೇ ಇದ್ದ ರಕ್ಷಕ್ ಸಹಾಯಕ್ಕೆ ಬರಲಿಲ್ಲ ಎಂಬ ಆರೋಪವೂ ಕೇಳಿಬಂದಿದ್ದು, ಅಸಲಿಗೆ ನಡೆದಿದ್ದೇನು ಎಂದು ರಕ್ಷಕ್ ಬುಲೆಟ್ ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ದೊಡ್ಡಬಳ್ಳಾಪುರ ಸಮೀಪದ ದೇವಸ್ಥಾನವೊಂದರ ಬಳಿ ಈ ಘಟನೆ ನಡೆದಿದೆ ಎನ್ನಲಾಗಿದೆ. 'ನನಗೆ ಆಹ್ವಾನ ಕೊಟ್ಟಿದ್ದರಿಂದ ನಾನು ಅಲ್ಲಿಗೆ ಹೋಗಿದ್ದೆ ಕೆಲಸ ಮುಗಿಸಿ ಬಂದೆ. ಆದರೆ ನಾನೇ ಬೆದರಿಕೆ ಹಾಕಿಸಿ, ಸುಪಾರಿ ಕೊಟ್ಟಿದ್ದೀನಿ ಎಂದು ಹೇಳಿದ್ದಾರೆ. ಕರ್ಮ ಯಾರನ್ನೂ ಬಿಡೋದಿಲ್ಲ. ನನ್ನದು ಏನಾದ್ರೂ ತಪ್ಪಿದ್ರೆ ದೇವರು ನೋಡಿಕೊಳ್ಳಲಿ' ಎಂದು ರಕ್ಷಕ್ ಬುಲೆಟ್ ಪ್ರತಿಕ್ರಿಯಿಸಿದ್ದಾರೆ.

'ನಾನು ಇಲ್ಲಿ ಯಾವುದೇ ರೌಡಿಸಂ, ಬೇರೆ ವ್ಯವಹಾರ ಮಾಡೋಕೆ ಬಂದಿಲ್ಲ. ನಾನು ನಿಯತ್ತಾಗಿ ನನ್ನ ಕೆಲಸ ಎಂದುಕೊಂಡು ಇದ್ದೀನಿ. ಆ ಘಟನೆ ನಡೆದ ಜಾಗದಲ್ಲಿ ನಾನು ಇದ್ದೆ. ಆದರೆ ನನಗೂ ಅದಕ್ಕೂ ಯಾವುದೇ ಸಂಬಂಧ ಇಲ್ಲ. ನಾನು ಮಧ್ಯದಲ್ಲಿ ಹೋದರೆ ಅದು ನನ್ನ ಮೇಲೆ ಬರುತ್ತೆ ಎಂದು ಆ ವಿಚಾರದಲ್ಲಿ ತಲೆ ಹಾಕಲಿಲ್ಲ' ಎಂದು ರಕ್ಷಕ್ ಬುಲೆಟ್ ಸ್ಪಷ್ಟನೆ ನೀಡಿದ್ದಾರೆ.
'ಈ ಘಟನೆ ನಡೆದಾಗ ನಾನು ಅಲ್ಲೇ ಇದ್ದೇ ಎನ್ನುವ ಕಾರಣಕ್ಕೆ ಇಷ್ಟೆಲ್ಲ ಆಗುತ್ತಿದೆ. ಪ್ರಥಮ್ ನನಗೆ ಅಣ್ಣ ಇದ್ದಂಗೆ, ಇಲ್ಲಿ ನಾನು ಬೇರೆಯವರಿಗೆ ತೊಂದರೆ ಕೊಡಲು ಬಂದಿಲ್ಲ. ಕಲಾವಿದರಂತೆ ಕೆಲಸ ಮಾಡೋಕೆ ಬಂದಿರುವೆ. ನಾನು ಅದನ್ನಷ್ಟೇ ಮಾಡ್ತೀನಿ. ಇದರಲ್ಲಿ ನನ್ನ ಪಾತ್ರ ಏನೂ ಇಲ್ಲ. ಯಾರು ಏನೇ ಕೇಳಿದ್ರೂ ನಾನು ಅಲ್ಲಿ ನಡೆದಿದ್ದನ್ನ ಹೇಳ್ತೀನಿ. ಏನೇ ಆದರೂ ಫೇಸ್ ಮಾಡ್ತೀನಿ' ಎಂದು ರಕ್ಷಕ್ ಹೇಳಿದ್ದಾರೆ.
ತಪ್ಪು ಮಾಡಿದ್ರೆ ದೇವರು ಶಿಕ್ಷೆ ಕೊಡಲಿ
'ಈ ಘಟನೆ ದೇವಸ್ಥಾನದ ಮುಂದೆ ನಡೆದಿದೆ. ಅಲ್ಲಿದ್ದವರೆಲ್ಲ ದೇವಸ್ಥಾನಕ್ಕೆ ಬರಲಿ, ಎಲ್ಲರೂ ಕರ್ಪೂರ ಹಚ್ಚೋಣ. ಒಂದು ವೇಳೆ ನಂದೇನಾದ್ರೂ ತಪ್ಪಿದ್ರೆ ಆ ದೇವರು ಶಿಕ್ಷೆ ಕೊಡಲಿ. ಆ ತಾಯಿ ನನ್ನ ನೋಡಿಕೊಳ್ಳಲಿ. ಕರ್ಮ ಯಾರ ಮನೆ ಬಾಗಿಲನ್ನೂ ಬಿಡೋದಿಲ್ಲ. ಪ್ರಥಮ್ ಅಣ್ಣನಿಗೆ ನಾನು ಏನಾದ್ರೂ ತೊಂದರೆ ನೀಡಿದ್ದರೆ, ಆ ದೇವರು ಶಿಕ್ಷೆ ಕೊಡಲಿ. ಅದನ್ನು ನಾನು ಸ್ವೀಕರಿಸುತ್ತೇನೆ' ಎಂದಿದ್ದಾರೆ.
'ನಾನು ಏನು ಮಾಡಿದ್ರೂ ಕೆಲವರಿಗೆ ಸಮಸ್ಯೆ ಆಗಿದೆ. ಈ ವಿಚಾರದಲ್ಲಿ ನನ್ನ ಪಾತ್ರವೇ ಇಲ್ಲ, ಆದರೂ ಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ. ರಕ್ಷಕ್ ಜೊತೆ ಹುಡುಗರು ಇದ್ದರು ಎಂದು ಹೇಳುತ್ತಿದ್ದಾರೆ. ಇದರಿಂದ ನನಗೆ ಹಾಗೂ ಮನೆಯವರಿಗೆ ತುಂಬಾ ನೋವಾಗಿದೆ. ಈ ಘಟನೆಯ ಬಳಿಕ ನಾನು ಹಾಗೂ ಪ್ರಥಮ್ ಅಣ್ಣ ಚೆನ್ನಾಗಿಯೇ ಮಾತನಾಡಿದ್ದೇವೆ' ಎಂದೂ ಸ್ಪಷ್ಟಪಡಿಸಿದ್ದಾರೆ.
-
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್












Click it and Unblock the Notifications