Shankar Nag Birthday: ಎಲ್ಲಿದೆ ಶಂಕರ್ ನಾಗ್ ಸಮಾಧಿ? ಅಭಿಮಾನಿಗಳಿಗೆ ಈ ವಿಚಾರದಲ್ಲಿ ಬೇಸರ ಯಾಕೆ?
ನಾಗರ ಕಟ್ಟೆ ಶಂಕರ, ಅಭಿಮಾನಿಗಳ ಪಾಲಿನ ಶಂಕ್ರಣ್ಣ, ಆಟೋ ಚಾಲಕರ ಪಾಲಿನ ಸೂಪರ್ ಸ್ಟಾರ್, ಕನ್ನಡ ಚಿತ್ರರಂಗದ ನಿಜವಾದ ಕನಸುಗಾರ ಶಂಕರ್ ನಾಗ್ ಅವರ ಹುಟ್ಟುಹಬ್ಬ ಇಂದು (ನವೆಂಬರ್ 9). ಅವರು ಇದ್ದಿದ್ದರೆ ಅಭಿಮಾನಿಗಳ ಸಾಗರದ ನಡುವೆ 70ನೇ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿತ್ತು. ಆದರೆ ಪ್ರತಿಭಾವಂತ ನಟ, ನಿರ್ದೇಶಕನೊಬ್ಬ ಚಿಕ್ಕ ವಯಸ್ಸಿನಲ್ಲೇ ಅಪಫಾತದಲ್ಲಿ ಮೃತಪಟ್ಟಿದ್ದು, ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಚಿತ್ರರಂಗ, ನಾಟಕ ರಂಗಕ್ಕೆ ತುಂಬಲಾರದ ನಷ್ಟ.
ಶಂಕರ್ ನಾಗ್ ಕನ್ನಡಿಗರನ್ನು ಬಿಟ್ಟು ಹೋಗಿ 35 ವರ್ಷಗಳಾಗಿದೆ. ಸಿನಿಮಾ ನಟರು ಎಂದ ಮೇಲೆ ಅವರ ನಿಧನದ ಬಳಿಕ ಸಮಾಧಿಯನ್ನು ಸ್ಮಾರಕ ಮಾಡಲಾಗುತ್ತದೆ. ಅಲ್ಲಿಗೆ ಅಭಿಮಾನಿಗಳು ತೆರಳಿ ನೆಚ್ಚಿನ ನಟನನ್ನು ನೆನೆಯುವುದು ಸಾಮಾನ್ಯ, ಹಾಗಾದರೆ ಶಂಕರ್ ನಾಗ್ರ ಸಮಾಧಿ ಎಲ್ಲಿದೆ, ಅವರ ಅಂತ್ಯಕ್ರಿಯೆ ಆಗಿದ್ದು ಎಲ್ಲಿ ಎನ್ನುವ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಶಂಕರ್ ನಾಗ್ ಸಮಾಧಿ ಎಲ್ಲಿದೆ?
ಕೆಲವು ವರ್ಷಗಳ ಹಿಂದೆ ಶಂಕರ್ ನಾಗ್ ಸಮಾಧಿ ಎನ್ನಲಾದ ಫೋಟೊವೊಂದು ಭಾರಿ ವೈರಲ್ ಆಗಿತ್ತು. ಎರಡು ಕಲ್ಲುಗಳ ಮೇಲೆ ಶಂಕರ್ ನಾಗ್ ಬ್ಯಾನರ್, ಕನ್ನಡ ಬಾವುಟ ಇದ್ದ ಚಿತ್ರವೊಂದು ವೈರಲ್ ಆಗಿದ್ದು ಇದೇ ಶಂಕರ್ ನಾಗ್ ಸಮಾಧಿ, ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಹೇಳಲಾಗಿತ್ತು. ಆದರೆ ಶಂಕರ್ ನಾಗ್ ಆಪ್ತ ರಮೇಶ್ ಭಟ್ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದರು.
ಬೇಸರದ ಸಂಗತಿ ಎಂದರೆ ಶಂಕರ್ ನಾಗ್ ಅವರ ಸಮಾಧಿಯಾಗಲಿ, ಸ್ಮಾರಕವಾಗಲಿ ಎಲ್ಲಿಯೂ ಇಲ್ಲ. ಶಂಕರ್ ನಾಗ್ ಅವರ ಸಮಾಧಿ ಎನ್ನುತ್ತಿರುವ ಫೋಟೊ ನಿಜವಲ್ಲ, ಶಂಕರ್ ನಾಗ್ರನ್ನು ಮಣ್ಣು ಮಾಡಲಿಲ್ಲ, ಅವರನ್ನು ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡಿದ್ದರಿಂದ ಅವರಿಗೆ ಸಮಾಧಿ ಕಟ್ಟಲಾಗಿಲ್ಲ ಎಂದು ಹೇಳಿದ್ದರು.
1990 ರ ಸೆಪ್ಟಂಬರ್ 30ರಂದು ದಾವಣೆಗರೆ ಜಿಲ್ಲಯ ಆನಗೋಡು ಬಳಿ ಸಂಭವಿಸಿದ ಅಪಘಾತದಲ್ಲಿ ಶಂಕರ್ ನಾಗ್ ಹಾಗೂ ಕಾರು ಚಾಲಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು. ಅಲ್ಲಿಂದ ಶಂಕರ್ ನಾಗ್ರ ಪಾರ್ಥೀವ ಶರೀರವನ್ನು ಬೆಂಗಳೂರಿಗೆ ತರಲಾಗಿತ್ತು, ವಿಲ್ಸನ್ ಗಾರ್ಡನ್ನಲ್ಲಿರುವ ಚಿತಾಗಾರದಲ್ಲಿ ಅಗ್ನಿಸ್ಪರ್ಷ ಮಾಡಲಾಗಿತ್ತು. ಇದೇ ಕಾರಣಕ್ಕೆ ಅವರಿಗೆ ಸಮಾಧಿ ಕೂಡ ಇಲ್ಲ ಎಂದು ರಮೇಶ್ ಭಟ್ ಹೇಳಿದ್ದರು.
ಅಭಿಮಾನಿಗಳಿಗೆ ಬೇಸರ
ಶಂಕರ್ ನಾಗ್, ಇಡೀ ಭಾರತೀಯ ಚಿತ್ರರಂಗ ಕಂಡ ಅದ್ಭುತ ನಟ, ನಿರ್ದೇಶಕ. ಆ ಕಾಲದಲ್ಲೇ ಹೊಸ ಹೊಸ ತಂತ್ರಜ್ಞಾನಗಳನ್ನು ಕನ್ನಡಕ್ಕೆ ಮಾತ್ರವಲ್ಲದೆ ಭಾರತೀಯ ಚಿತ್ರರಂಗಕ್ಕೆ ಪರಿಚಯಿಸಿದ್ದರು. ಒಂದು ಮುತ್ತಿನ ಕಥೆ ಸಿನಿಮಾದಲ್ಲಿ ಮೊದಲ ಬಾರಿಗೆ ನೀರಿನ ಅಡಿ ಚಿತ್ರೀಕರಣ ಮಾಡಿ ಭಾರತೀಯ ಚಿತ್ರರಂಗವೇ ತಿರುಗಿನೋಡುವಂತೆ ಮಾಡಿದ್ದರು. ಮಾಲ್ಗುಡಿ ಡೇಸ್ ಅವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿದ ಧಾರವಾಹಿ. ಬೆಂಗಳೂರಿಗೆ ಮೆಟ್ರೋ ಬೇಕು ಎಂದು 80ರ ದಶಕದಲ್ಲೇ ಕನಸು ಕಂಡಿದ್ದರು, ನಂದಿ ಬೆಟ್ಟಕ್ಕೆ ರೋಪ್ವೇ ಅವರ ಮತ್ತೊಂದು ಕನಸಾಗಿತ್ತು. ಅಂತಹ ಕನಸುಗಾರ, ಕಲಾವಿದನಿಗೆ ಒಂದು ಸ್ಮಾರಕ ಕೂಡ ಇಲ್ಲದೇ ಇರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
-
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್ -
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
Amulya: ಕಿರುತೆರೆಗೆ ಮರಳಿದ 'ಕಮಲಿ' ಖ್ಯಾತಿಯ ಅಮೂಲ್ಯ: 'ಮಹಾಲಕ್ಷ್ಮಿ ಮದುವೆ' ಮೂಲಕ ಹೊಸ ಪಯಣ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ











Click it and Unblock the Notifications