ನಟಿ ರಮ್ಯಾ ಜೊತೆಗಿನ ಫೋಟೋ ವೈರಲ್; ವಿನಯ್ ರಾಜ್ಕುಮಾರ್ ಹೇಳಿದ್ದೇನು?
ನಟಿ ರಮ್ಯಾ ಅವರ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಇತ್ತೀಚೆಗೆ ಅವರು ನಟ ವಿನಯ್ ರಾಜ್ಕುಮಾರ್ ಅವರೊಂದಿಗೆ ಹೆಚ್ಚು ಕ್ಲೋಸ್ ಆಗಿ ಕಾಣಿಸಿಕೊಳ್ಳುತ್ತಿದ್ದು, ಇದರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇತ್ತೀಚೆಗೆ ರಮ್ಯಾ ಅವರೊಂದಿಗೆ ವಿನಯ್ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಒಟ್ಟಿಗೆ ಊಟ ಮಾಡಿದ ಫೋಟೋಗಳನ್ನು ಹಂಚಿಕೊಂಡಿದ್ದರು. ದರ್ಶನ್ ಅವರ ಅಭಿಮಾನಿಗಳು ಕೆಟ್ಟದಾಗಿ ಕಾಮೆಂಟ್, ಮೆಸೇಜ್ ಮಾಡಿದ ವಿಚಾರವಾಗಿಯೂ ರಮ್ಯಾಗೆ ಬೆಂಬಲಕ್ಕೆ ವಿನಯ್ ನಿಂತಿದ್ದರು. ಇದರ ಬೆನ್ನಲ್ಲೇ ಸ್ಯಾಂಡಲ್ವುಡ್ನಲ್ಲಿ ಹೊಸ ವದಂತಿ ಹಬ್ಬಿದೆ. ರಮ್ಯಾ ಹಾಗೂ ವಿನಯ್ ಸದ್ಯದಲ್ಲೇ ಸಿಹಿಸುದ್ದಿ ನೀಡಲಿದ್ದಾರೆ ಎಂದು ಚರ್ಚೆಯಾಗುತ್ತಿದೆ. ಇತ್ತೀಚೆಗೆ ಮತ್ತೊಂದು ಫೋಟೋ ಕೂಡ ವೈರಲ್ ಆಗಿದೆ. ಈ ವಿಚಾರದ ಬಗ್ಗೆ ವಿನಯ್ ರಾಜ್ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗೆ ರಮ್ಯಾ ಹಾಗೂ ವಿನಯ್ ರಾಜ್ಕುಮಾರ್ ಅವರ ಫೋಟೋಶೂಟ್ ವಿಡಿಯೋ ವೈರಲ್ ಆಗಿತ್ತು. ಇಬ್ಬರೂ ಸೇರಿ ಹೊಸ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದರಲ್ಲಿ ವಿನಯ್ ಹಾಗೂ ರಮ್ಯಾ ಒಳ್ಳೆಯ ಪೋಸ್ ಕೊಟ್ಟಿದ್ದರು. ಆದರೆ ಇದು ಮ್ಯಾಗಜೀನ್ವೊಂದಕ್ಕೆ ಮಾಡಿಸಿದ್ದ ಫೋಟೋಶೂಟ್ ಎಂದು ಹೇಳಲಾಗಿತ್ತು. ಇದಾದ ಬಳಿಕ ಇಬ್ಬರೂ ಹಲವು ಬಾರಿ ಭೇಟಿಯಾಗಿರುವ ಫೋಟೋಗಳು ವೈರಲ್ ಆಗಿದ್ದವು.

ಸೆಲ್ಫಿ ಫೋಟೋಸ್ ವೈರಲ್
ನಟಿ ರಮ್ಯಾ ಅವರು ಮಿರರ್ ಸೆಲ್ಫಿ ಜೊತೆಗೆ ನಟ ವಿನಯ್ ರಾಜ್ಕುಮಾರ್ ಅವರ ಫೋಟೋ ಕೂಡ ಅಪ್ಲೋಡ್ ಮಾಡಿದ್ದರು. ಇದರಲ್ಲಿ ವಿನಯ್ ಅವರು ಮೊಬೈಲ್ ನೋಡುತ್ತಾ ನಗುತ್ತಿರುವ ಫೋಟೋ ಇತ್ತು. ಈ ಫೋಟೋ ಜೊತೆಗೆ ಪ್ರೀತಿಯನ್ನು ಯಾವಾಗಲೂ ನೆನಪಿಡಿ ಎಂದು ಕೂಡ ಬರೆದುಕೊಂಡಿದ್ದರು. ಆಗಿನಿಂದಲೂ ಹಲವು ವದಂತಿ ಹಬ್ಬಿತ್ತು.
ಇತ್ತೀಚೆಗೆ ವಿನಯ್ ರಾಜ್ಕುಮಾರ್ ಅವರ ಸೆಲ್ಫಿಗೆ ಕಿಸ್ ಮಾಡುವಂತಹ ಪೋಸ್ ಕೊಟ್ಟಿದ್ದರು ರಮ್ಯಾ, ಈ ಫೋಟೋ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇಬ್ಬರ ನಡುವಿನ ಬಾಂಡಿಂಗ್ ನೋಡಿ ಗಾಸಿಪ್ ಕೂಡ ಹಬ್ಬಿದೆ. ವಿನಯ್ ಹಾಗೂ ರಮ್ಯಾ ಇಬ್ಬರೂ ಮದುವೆಯಾಗಿಲ್ಲದ ಕಾರಣ, ಇತ್ತೀಚೆಗೆ ಇಷ್ಟು ಕ್ಲೋಸ್ ಆಗಿ ಕಾಣಿಸಿಕೊಂಡು ಕುತೂಹಲ ಮೂಡಿಸಿದ್ದರು. ಈ ಬಗ್ಗೆ ವಿನಯ್ ರಾಜ್ಕುಮಾರ್ ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ್ದಾರೆ. ತಮ್ಮ ಹಾಗೂ ರಮ್ಯಾ ನಡುವಿನ ಬಾಂಡಿಂಗ್ ಅನ್ನು ವಿನಯ್ ಬಿಚ್ಚಿಟ್ಟಿದ್ದಾರೆ.

'ಹೆಚ್ಚಾಗಿ ಮೀಟ್ ಆಗ್ತೀವಿ'
'ಅದು ಸಿನಿಮಾಗಾಗಿ ಮಾಡಿಸಿದ್ದ ಫೋಟೋಶೂಟ್ ಅಲ್ಲ, ಮ್ಯಾಗಜೀನ್ಗಾಗಿ ಮಾಡಿಸಿದ ಫೋಟೋಶೂಟ್ ಎಂದಿದ್ದಾರೆ ವಿನಯ್. 'ಇಬ್ಬರ ನಡುವಿನ ಬಾಂಡಿಂಗ್ ಬಗ್ಗೆ ಮಾತನಾಡಿದ ವಿನಯ್ ರಾಜ್ಕುಮಾರ್, ಅವರು ನನಗೆ ಚಿಕ್ಕವಯಸ್ಸಿನಿಂದಲೂ ಗೊತ್ತಿದೆ. ಅಭಿ ಸಿನಿಮಾದ ಟೈಮಿಂದಲೂ ರಮ್ಯಾ ಅವರ ಪರಿಚಯ ಇದೆ. ಆಗ ನಾನು ಎಂಟನೇ ತರಗತಿಯಲ್ಲಿ ಓದುತ್ತಿದ್ದೆ. ಆಗಿನಿಂದಲೂ ತುಂಬಾ ಚೆನ್ನಾಗಿ ಗೊತ್ತು. ರಮ್ಯಾ ಅವರು ನನಗೆ ತುಂಬಾ ಒಳ್ಳೆಯ ಫ್ರೆಂಡ್. ಆಗಾಗ ಮೀಟ್ ಮಾಡುತ್ತಿರುತ್ತೇವೆ' ಎಂದು ಕ್ಲಾರಿಟಿ ಕೊಟ್ಟಿದ್ದಾರೆ.
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications