ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗೆ 1000ಕ್ಕೂ ಹೆಚ್ಚು ಪ್ರದರ್ಶನ, ಮೊದಲ ದಿನವೇ ಅಬ್ಬರ ಜೋರು!
'ಕಾಟೇರ' ಅಬ್ಬರ ನಾಳೆಯಿಂದ ಶುರುವಾಗಲಿದೆ, ಕೆಲವು ಥಿಯೇಟರ್ಗಳಲ್ಲಿ ರಾತ್ರಿಯಿಂದ ಸಂಭ್ರಮ ಮೇಳೈಸಲಿದೆ. ನಟ ದರ್ಶನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಇದಾಗಿದ್ದು, ಕೋಟ್ಯಂತರ ಫ್ಯಾನ್ಸ್ 'ಕಾಟೇರ' ಸಿನಿಮಾ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಹೀಗಿದ್ದಾಗ ಸುಮಾರು 1000ಕ್ಕೂ ಹೆಚ್ಚು ಪ್ರದರ್ಶನವನ್ನ ಮೊದಲ ದಿನವೇ ಅಭಿಮಾನಿಗಳಿಗೆ ನೀಡೋಕೆ 'ಕಾಟೇರ' ಸಜ್ಜಾಗಿದೆ.
ಕಾಟೇರ ಸಿನಿಮಾದ ಹಲವು ಶೋಗಳು ಬೆಳ್ಳಂಬೆಳಗ್ಗೆ ಶುರು ಆಗಲಿವೆ. ಹೀಗೆ ಬೆಳಗ್ಗೆಯಿಂದಲೇ, ಕಾಟೇರ ಅಬ್ಬರ ಶುರುವಾಗಲಿದೆ. ರಾಜಧಾನಿ ಬೆಂಗಳೂರಿನ ಕೆ.ಜಿ. ರಸ್ತೆಯಲ್ಲಿರುವ ಥಿಯೇಟರ್ ಅನುಪಮ ಕಾಟೇರ ಆಗಮನಕ್ಕೆ ಕಾಯುತ್ತಿದೆ. ಅನುಪಮ ಸಿನಿಮಾ ಮಂದಿರದಲ್ಲಿ, ಬೆಳಗ್ಗೆ 6 ಗಂಟೆಗೆ ಶೋ ಶುರುವಾಗಲಿದೆ. ಸುಂಕದಕಟ್ಟೆಯ ಮೋಹನ್ ಥಿಯೇಟರ್ ಬೆಳಗ್ಗೆ 5.30ಕ್ಕೆ ಶೋ ಶುರು ಮಾಡಲಿದೆ. ಇನ್ನು ಮಾಗಡಿ ರಸ್ತೆಯ ಪ್ರಸನ್ನ ಥಿಯೇಟರ್ನ ಕೂಡ ಕಾಟೇರ ಸಿನಿಮಾಗೆ ಸಿಂಗರಿಸಲಾಗಿದೆ. ಬೆಳಗ್ಗೆ 5 ಗಂಟೆಗೆ ಶೋ ಶುರುವಾಗಲಿದೆ. ಈ ಮೂಲಕ ಇನ್ನೂ ಹಲವಾರು ಥಿಯೇಟರ್ಗಳಲ್ಲಿ ಇಂದು ಮಧ್ಯರಾತ್ರಿಯೇ ವಿಶೇಷ ಪ್ರದರ್ಶನಗಳು ಶುರುವಾಗಲಿದೆ.

ರಾಜ್ಯದ ಮೂಲೆ ಮೂಲೆಯಲ್ಲೂ..
ರಾಕ್ಲೈನ್ ಸಿನಿಮಾಸ್ನಲ್ಲಿ ಮಧ್ಯರಾತ್ರಿಯಿಂದಲೆ ಕಾಟೇರ ಸಿನಿಮಾ ಶೋ ಶುರುವಾಗಲಿದ್ದು ಟಿಕೆಟ್ ಮಾರಾಟ ಕೂಡ ಭರ್ಜರಿಯಾಗಿದೆ. ಕಳೆದ ಒಂದು ವಾರದಿಂದ 'ಕಾಟೇರ' ಟಿಕೆಟ್ ಭರ್ಜರಿಯಾಗಿ ಸೇಲ್ ಆಗಿವೆ. ಹೀಗಾಗಿ ಸಿನಿಮಾ ಬಿಡುಗಡೆ ಆದ ಮೊದಲ 3 ದಿನಗಳ ಕಾಲ ಟಿಕೆಟ್ ಬಹುತೇಕ ಬುಕ್ ಆಗಿದ್ದು, ಅಭಿಮಾನಿಗಳು 'ಕಾಟೇರ' ಕಾಣ್ತುಂಬಿಕೊಳ್ಳೋಕೆ ಈ ಮೂಲಕ ಕಾಯುತ್ತಿದ್ದಾರೆ. ಸಿಂಗಲ್ ಸ್ಕ್ರೀನ್ ಸೇರಿದಂತೆ ಮಾಲ್ಗಳಲ್ಲಿ ಕೂಡ ಅಬ್ಬರಿಸೋಕೆ 'ಕಾಟೇರ' ಸಿನಿಮಾ ಸಜ್ಜಾಗಿದೆ. ರಾಜ್ಯದ ಮೂಲೆ ಮೂಲೆಯಲ್ಲೂ ಈ ಸಿನಿಮಾ ಬಿಡುಗಡೆ ಆಗಲಿದ್ದು, ನೆರೆ ರಾಜ್ಯಗಳಲ್ಲೂ ಕನ್ನಡ ಸಿನಿಮಾ ಅಬ್ಬರಿಸಲು ಸಜ್ಜಾಗಿದೆ.
'ಕ್ರಾಂತಿ' ಬಳಿಕ 'ಕಾಟೇರ' ಸೌಂಡ್
2023 ದರ್ಶನ್ ಅವರ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಸರ್ಪ್ರೈಸ್ ಕೊಟ್ಟಿದೆ. ಯಾಕೆ ಅಂದರೆ ಈ ವರ್ಷ ಎರಡೆರಡು ಸಿನಿಮಾ ರಿಲೀಸ್ ಆಗುತ್ತಿವೆ. ಕೆಲವು ತಿಂಗಳ ಹಿಂದಷ್ಟೇ 'ಕ್ರಾಂತಿ' ಸಿನಿಮಾ ರಿಲೀಸ್ ಆಗಿ ದಾಖಲೆ ಧೂಳ್ ಮಾಡಿತ್ತು. ಇದೀಗ ಫ್ಯಾನ್ಸ್ ಪಾಲಿನ ಡಿ-ಬಾಸ್ ದರ್ಶನ್ ಅವರು ಕಾಟೇರ ಮೂಲಕ ರೀ ಎಂಟ್ರಿಯನ್ನ ಕೊಡ್ತಿದ್ದಾರೆ. ಹೀಗಾಗಿ ಸಹಜವಾಗಿಯೇ ಅಭಿಮಾನಿಗಳಿಗೆ ಕುತೂಹಲ ಇದೆ. ಸಿನಿಮಾ ಬಿಡುಗಡೆ ಹಿನ್ನೆಲೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ ಫ್ಯಾನ್ಸ್.

ಥಿಯೇಟರ್ ಎದುರು ಕಟೌಟ್ ಅಬ್ಬರ
ಈಗಾಗಲೇ ಬಹುತೇಕ ಥಿಯೇಟರ್ಗಳ ಎದುರಲ್ಲಿ ನಟ ದರ್ಶನ್ ಅವರ ಕಟೌಟ್ಗಳ ಹಾಕಿ ಸಂಭ್ರಮ ಶುರು ಮಾಡಿದ್ದಾರೆ ಫ್ಯಾನ್ಸ್. ಇನ್ನೇನಿದ್ದರೂ ಸಿನಿಮಾ ನೋಡಿ, ಬೆಳ್ಳಿತೆರೆ ಮೇಲೆ ಅದರ ಅಬ್ಬರ ಕಣ್ತುಂಬಿಕೊಳ್ಳುವುದು ಬಾಕಿ. ಹೀಗಾಗಿ ಇಂದು ರಾತ್ರಿಯಿಂದಲೇ ಬಹುತೇಕ ಸಿನಿಮಾ ಮಂದಿರಗಳ ಎದುರು ಕಾಟೇರ ಸಂಭ್ರಮ ಶುರುವಾಗಲಿದೆ. ಕೆಲ ಥಿಯೇಟರ್ ಬಳಿ ಮುಗಿಲ ಎತ್ತರಕ್ಕೆ ಎದ್ದು ನಿಂತಿರುವ ಕಟೌಟ್ಗಳು ರಾರಾಜಿಸುತ್ತಿವೆ.
-
Chandan Shetty: ವಯಸ್ಸಾದ್ಮೇಲೆ ಒಂಟಿತನ ಕಾಡುತ್ತೆ, ಆಗ ಕೊರಗುವ ಬದಲು ಈಗಲೇ ಒಳ್ಳೆಯ ಸಂಗಾತಿ ಹುಡುಕುವೆ: ಚಂದನ್ ಶೆಟ್ಟಿ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ












Click it and Unblock the Notifications