Radhika Pandit: ಬ್ಯೂಟಿ ಸೀಕ್ರೆಟ್ ಬಿಚ್ಚಿಟ್ಟ ಯಶ್ ಮನದರಸಿ ರಾಧಿಕಾ ಪಂಡಿತ್
ರಾಕಿಂಗ್ ಸ್ಟಾರ್ ಯಶ್ ಮನದರಸಿ, ಮೊಗ್ಗಿನ ಮನಸಿನ ಹುಡುಗಿ ನಟಿ ರಾಧಿಕಾ ಪಂಡಿತ್ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಳ್ಳದೇ ಕೆಲವು ವರ್ಷಗಳು ಕಳೆದು ಹೋಯ್ತು. ಕೊನೆಯದಾಗಿ ಆದಿ ಲಕ್ಷ್ಮೀ ಪುರಾಣದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಅವರು ಬಳಿಕ ತಮ್ಮ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾದರು.
ನಟಿ ರಾಧಿಕಾ ಪಂಡಿತ್ ಕಥೆಯ ಆಯ್ಕೆಯಲ್ಲಿ ಬಹಳ ಜಾಗರೂಕರಾಗಿದ್ದು, ಮೊಗ್ಗಿನ ಮನಸ್ಸು ಸಿನಿಮಾ ಸೇರಿದಂತೆ 11 ವರ್ಷಗಳಲ್ಲಿ 21 ಸಿನಿಮಾ ಮಾಡಿದ್ದರು. ಸದ್ಯ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ರಾಧಿಕಾ ಪಂಡಿತ್ ಬೆಳ್ಳಿ ತೆರೆಗೆ ಮರಳಿ ಬರುವುದು ಯಾವಾಗ? ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿದೆ. ಅಲ್ಲದೇ ರಾಧಿಕಾ ಪಂಡಿತ್ ಅಭಿಮಾನಿಗಳು ಮಾತ್ರವಲ್ಲದೇ ಯಶ್ ಅಭಿಮಾನಿಗಳು ಕೂಡ ರಾಧಿಕಾ ಪಂಡಿತ್ ಕಂಬ್ಯಾಕ್ಗೆ ಕಾತುರರಾಗಿದ್ದಾರೆ.

ಇತ್ತೀಚಿಗೆ ರಾಧಿಕಾ ಪಂಡಿತ್ ಕೆಲವು ಇವೆಂಟ್ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ತಮ್ಮ ಹಿಂದಿನ ಲುಕ್ಗೆ ವಾಪಸ್ ಆಗಿದ್ದಾರೆ. ಇಬ್ಬರು ಮಕ್ಕಳ ತಾಯಾಗಿರುವ ರಾಧಿಕಾ ಪಂಡಿತ್ ಅವರ ಬ್ಯೂಟಿ ಸೀಕ್ರೆಟ್ ಏನಿರಬಹುದು ಎನ್ನುವ ಪ್ರಶ್ನೆಗೆ ಇದೀಗ ಸ್ವತಃ ರಾಧಿಕಾ ಪಂಡಿತ್ ಅವರೇ ಉತ್ತರಿಸಿದ್ದು, ಅವರ ಉತ್ತರಕ್ಕೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
ರೇಗಲ್ ಜ್ಯುವೆಲ್ಸ್(Regal Jewellers) ಕಾರ್ಯಕ್ರಮಕ್ಕೆ ಬಂದ ರಾಧಿಕಾ ಪಂಡಿತ್ ಅವರಿಗೆ ಅಭಿಮಾನಿಯೊಬ್ಬರು ಯಶ್, ರಾಧಿಕಾ ಪಂಡಿತ್, ಐರಾ ಹಾಗೂ ಯಥರ್ವ ಫೋಟೋವನ್ನು ಸ್ಕೆಚ್ ಮಾಡಿ ಉಡುಗೊರೆಯಾಗಿ ನೀಡಿದ್ದಾರೆ. ಅದನ್ನು ನೋಡುತ್ತಿದ್ದಂತೆ ಫುಲ್ ಖುಷಿಯಾದ ರಾಧಿಕಾ ಪಂಡಿತ್ ತುಂಬಾ ಚೆನ್ನಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಇದೇ ವೇಳೆ ಯಶ್ ಅವರ ಬಗ್ಗೆ ಮಾತನಾಡಿದ್ದಾರೆ.

'ಇಂದು ಯಶ್ ಅವರು ನಮ್ಮೆಲ್ಲರ ಹೆಮ್ಮೆ. ನನ್ನ ನಗುವಿನ ಹಿಂದಿನ ಕಾರಣ ಅವರು. ನನ್ನ ಬ್ಯೂಟಿ ಸೀಕ್ರೆಟ್ ಏನು ಎಂದು ಎಲ್ಲರೂ ಕೇಳುತ್ತಿರುತ್ತಾರೆ. ನಾನು ಇಷ್ಟೊಂದು ಖುಷಿ ಖುಷಿಯಾಗಿ ನಗುನಗುತ್ತಾ ಇದ್ದೇನೆ ಅಂದರೆ ಅದಕ್ಕೆ ಕಾರಣ ಯಶ್' ಎಂದು ಬಹಳ ಪ್ರೀತಿಯಿಂದ ಹಾಗೂ ಹೆಮ್ಮೆಯಿಂದ ರಾಧಿಕಾ ಪಂಡಿತ್ ಹೇಳಿಕೊಂಡಿದ್ದಾರೆ.
ಇನ್ನು ತಾವು ಹಾಗೂ ಯಶ್ ತಮ್ಮ ಮಕ್ಕಳನ್ನು ಬೆಳೆಸುತ್ತಿರುವ ಪರಿ ಬಗ್ಗೆ ಮಾತನಾಡಿದ ಅವರು, 'ನಾನು ತುಂಬಾ ಶಿಸ್ತಿನಿಂದ ಬೆಳೆಸುತ್ತಿದ್ದೇನೆ. ಆದರೆ ಯಶ್ ಅವರು ಮಕ್ಕಳನ್ನು ತುಂಬಾ ಮುದ್ದು ಮಾಡುತ್ತಾರೆ. ಅವರಿಗೆ ಅವರ ತಂದೆ ಎಂದರೆ ಎಲ್ಲಾ. ನಾನು ಶಿಸ್ತಿನಿಂದ ಇರುವುದರಿಂದ ಅವರಿಬ್ಬರು ಏನೇ ಬೇಕಿದ್ದರು ಅಪ್ಪನನ್ನು ಕೇಳುತ್ತಾರೆ. ತಾಯಂದಿರು ಶಿಸ್ತಿನಿಂದ ಇರಬೇಕು. ಇಲ್ಲ ಅಂದರೆ ಮಕ್ಕಳಲ್ಲಿ ಶಿಸ್ತು ಬೆಳೆಸುವುದು ಹೇಗೆ?' ಎಂದು ರಾಧಿಕಾ ಪಂಡಿತ್ ಹೇಳಿದ್ದಾರೆ.
-
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Bengaluru Rent: ಬೆಂಗಳೂರಲ್ಲಿ ನಾನ್ವೆಜ್ ಪ್ರಿಯರಿಗೆ ಶಾಕ್: ಮಾಂಸಾಹಾರಿಗಳಿಗೆ ಸಿಗ್ತಿಲ್ಲ ನಗರದಲ್ಲಿ ಬಾಡಿಗೆ ಮನೆ












Click it and Unblock the Notifications