Salman Khan: ಕಿಚ್ಚ ಸುದೀಪ್ ಬೆನ್ನಲ್ಲೆ ನಿರೂಪಣೆಯಿಂದ ಸಲ್ಮಾನ್ ಖಾನ್ ಎಕ್ಸಿಟ್! ಬೇರೆ ನಿರೂಪಕ ಯಾರು?
Bigg Boss: ಎಲ್ಲಿ ನೋಡಿದರೂ ಬಿಗ್ ಬಾಸ್ ರಿಯಾಲಿಟಿ ಶೋನದ್ದೆ ಸುದ್ದಿ. ಇತ್ತೀಚೆಗೆ ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋನಿಂದ ನಟ ಕಿಚ್ಚ ಸುದೀಪ್ ಅವರು ಹೊರ ಬರುವುದಾಗಿ ಘೋಷಿಸಿದ್ದರು. ಬಿಗ್ ಬಾಸ್ 11ನೇ ಸೀಸನ್ ನಡೆಯುವಾಗ ಯಾಕೆ ಈ ದಿಢೀರ್ ನೀರ್ಧಾರ ಘೋಷಲಾಯಿತು ಎಂದು ಜನರು ತಲೆಗೆ ಹುಳ ಬಿಟ್ಟುಕೊಂಡಿದ್ದರು. ಇದೀಗ ಸುದೀಪ್ ಬೆನ್ನಲ್ಲೆ ಹಿಂದಿ ಬಿಗ್ ಬಾಸ್ 18ನೇ ಶೋನಿಂದ ನಟ ಸಲ್ಮಾನ್ ಖಾನ್ ಸಹ ಹೊರ ನಡೆಯಲಿದ್ದಾರೆ.
ಹಿಂದಿ 'ದಬಾಂಗ್' 3 ಸಿನಿಮಾದಲ್ಲಿ ಈ ಇಬ್ಬರು ನಟರು ಒಟ್ಟಿಗೆ ನಟಿಸಿದ್ದರು. ಇಬ್ಬರ ಮಧ್ಯೆ ಒಳ್ಳೆ ಸ್ನೇಹ ಸಂಬಂಧವಿದೆ. ಈ ಇಬ್ಬರು ದಶಕಗಳಿಂದ ಬಿಗ್ ಬಾಸ್ ಶೋ ನಡೆಸಿಕೊಂಡು ಬರುತ್ತಿದ್ದರು. ಇದೀಗ ಇಬ್ಬರು ಒಟ್ಟಿಗೆ ಶೋ ಹೋಸ್ಟ್ ಮಾಡುವುದು ನಿಲ್ಲಿಸುತ್ತಿದ್ದಾರೆಯೇ? ಈ ಬಗ್ಗೆ ಅನುಮಾನಗಳಿಗೆ ಉತ್ತರ ಇಲ್ಲಿದೆ.

ಕನ್ನಡದಲ್ಲಿ ನಟ ಸುದೀಪ್ ಕೆಲವು ಕಾರಣಾಂತರಗಳಿಂದ ಮುಂದಿನ ಯಾವ ಬಿಗ್ ಬಾಸ್ ಸೀಸನ್ ಹೋಸ್ಟ್ ಮಾಡುವುದಿಲ್ಲ. ಇದೇ ನನ್ನ ಕೊನೆ ನಿರೂಪಣೆ ಎಂದಿದ್ದಾರೆ. ಆದರೆ ಸಲ್ಮಾನ್ ಅವರದ್ದು ಬೇರೆಯ ಕಥೆ ಇದೆ. ಅವರು ಮೇಲೆ ಹತ್ಯೆಯ ಸಂಚು ನಡೆದಿದೆ. ಈ ಹಿಂದೆಯು ಅವರ ಮನೆ ಶೂಟೌಟ್ ನಡೆದಿತ್ತು. ಇದೀಗ 25 ಲಕ್ಷಕ್ಕೆ ಅವರನ್ನು ಕೊಲೆ ಮಾಡುವುದಾಗಿ ಸುಪಾರಿ ನೀಡಲಾಗಿದೆ ಎಂಬ ಮಾಹಿತಿ ಮುಂಬೈ ಪೊಲೀಸರು ಸಲ್ಲಿಸಿದ ಚಾರ್ಜ್ ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಈ ಮಧ್ಯೆ ಅವರು ಬಿಗ್ ಬಾಸ್ ಹಿಂದಿ ಶೋ ನಿರೂಪಣೆ ಮಾಡುತ್ತಿದ್ದರು. ಮತ್ತೊಂದೆಡೆ ಬಾಬಾ ಸಿದ್ದಿಕಿ ಕೊಲೆಯಾಗಿದೆ. ಲಾರೆನ್ಸ್ ಬಿಷ್ಣೋಯ್ ಕೈವಾಡ ಈ ಹತ್ಯೆ ಹಿಂದೆ ಇದೆ ಎಂಬ ಮಾತು ಕೇಳಿ ಬಂದಿದೆ. ಈ ಕೊಲೆ ಘಟನೆಯಿಂದ ಬಾಲಿವುಡ್ ಶಾಕ್ ಆಗಿದೆ. ಇತ್ತ ಸಲ್ಮಾನ್ ಖಾನ್ ವಿರುದ್ಧ ಕೊಲೆ ಸಂಚು ಬಹಿರಂಗಗೊಳ್ಳುತ್ತಿದ್ದಂತೆ ಅವರು ಬಿಗ್ ಬಾಸ್ ಶೋನ ಈ ವಾರಾಂತ್ಯ ನಿರೂಪಣೆಯಿಂದ ಅವರು ಹೊರ ಬಂದಿದ್ದಾರೆ ಎನ್ನಲಾಗಿದೆ.
ಭದ್ರತೆ ಕಾರಣ ಹಾಗೂ ಪೊಲೀಸರ ಸಲಹೆ ಮೆರೆಗೆ ಸಲ್ಮಾನ್ ಖಾನ್ ಅವರು ಯಾರನ್ನು ಭೇಟಿ ಮಾಡುತ್ತಿಲ್ಲ. ಈ ಮಧ್ಯೆ ವಾರಾಂತ್ಯಕ್ಕೆ ಬಿಗ್ ಶೋ ನಡೆಸುವುದು ಬೇಡ ಎಂಬ ಸಲಹೆ ಬಂದ ಹಿನ್ನೆಲೆಯಲ್ಲಿ ಅವರು ಈವಾರ ಬಿಗ್ ಬಾಸ್ ಶೋನಿಂದ ಹೊರಗುಳಿದಿದ್ದಾರೆ. ಮತ್ತೊಂದಡೆ ಇಲ್ಲ, ಅವರು ಬಿಗಿ ಭದ್ರತೆ ನಡುವೆ ವಾರಾಂತ್ಯ ಶೋ ನಡೆಸಿಕೊಡುತ್ತಾರೆ ಅಂತಲೂ ತಿಳಿಸಲಾಗಿದೆ.
ಸಲ್ಮಾನ್ ಖಾನ್ ಬದಲಾಗಿ ಯಾರು ಬರ್ತಾರೆ ಶೋಗೆ
ಈ ವಾರಾಂತ್ಯದ ಸಂಚಿಕೆಯಿಂದ ಸಲ್ಮಾನ್ ಹೊರಗುಳಿದ ಬೆನ್ನಲ್ಲೆ ಆ ಶೋ ಅನ್ನು ನಡೆಸಿಕೊಡಲು ಹಲವು ಹಿಂದಿ ನಟರ ಹೆಸರು ಕೇಳಿ ಬರುತ್ತಿದೆ. ಫರಾನ್ ಖಾನ್, ಕರಣ್ ಜೋಹರ್ ಅವರ ಹೆಸರು ಸಹ ಕೇಳಿ ಬಂದಿದೆ. ಇನ್ನೊಂದೆಡೆ ಹಿರಿಯ ನಟ ಅನಿಲ್ ಕಪೂರ್ ಅವರ ಹೆಸರು ಕೇಳಿ ಬರುತ್ತಿದೆ. ಆದರೆ ಬಿಗ್ ಬಾಸ್ ನಿರೂಪಕರೂ ಯಾವ ನಿರ್ಧಾರ ಕೈಗೊಳ್ಳುತ್ತಾರೋ ಕಾದು ನೋಡಬೇಕು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications