ಯಾವ ಹೀರೋನೂ ಬಂದು ಕಾಪಾಡಲ್ಲ: ಫ್ಯಾನ್ಸ್ಗೆ ರಾಕ್ಲೈನ್ ವೆಂಕಟೇಶ್ ಹೇಳಿದ್ದೇನು?
ಸ್ಯಾಂಡಲ್ವುಡ್ ನಟಿ ರಮ್ಯಾಗೆ ದರ್ಶನ್ ಅಭಿಮಾನಿಗಳು ಅಶ್ಲೀಲ ಕಾಮೆಂಟ್ಸ್ ಹಾಕಿರುವ ವಿಚಾರವಾಗಿ ಚಿತ್ರರಂಗದ ಹಲವು ಖಂಡನೆ ವ್ಯಕ್ತಪಡಿಸಿದ್ದಾರೆ. ಬಹುತೇಕರು ರಮ್ಯಾ ಅವರು ಮಾಡಿದ್ದು ಸರಿ ಇದೆ. ಯಾವ ನಟನ ಅಭಿಮಾನಿಗಳಾದರೂ ಹೆಣ್ಣುಮಕ್ಕಳ ವಿಚಾರದಲ್ಲಿ ಈ ರೀತಿ ಕೆಟ್ಟದಾಗಿ ವರ್ತಿಸಬಾರದು ಎನ್ನುತ್ತಿದ್ದಾರೆ. ಇದೀಗ ಸ್ಯಾಂಡಲ್ವುಡ್ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಕೂಡ ರಮ್ಯಾ ಅವರನ್ನು ಬೆಂಬಲಿಸಿ ಮಾತನಾಡಿದ್ದಾರೆ. 'ನನಗೆ ಕೆಟ್ಟದಾಗಿ ಕಮೆಂಟ್ ಮಾಡಿದವರನ್ನ ಕೋರ್ಟ್ ಅಲೆದಾಡುವಂತೆ ಮಾಡಿದ್ದೇನೆ. ಈಗ ರಮ್ಯಾಗೆ ಕಾಮೆಂಟ್ ಮಾಡಿದವರಿಗೂ ಅದೇ ಗತಿ ಆಗಲಿದೆ' ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
'ಚಿತ್ರರಂಗದ ಇತ್ತೀಚಿನ ಬೆಳವಣಿಗೆಗಳು ನೋಡುತ್ತಿದ್ದರೆ ಸಿನಿಮಾ ಮಾಡಲು ಭಯ ಆಗ್ತಿದೆ. ನಟಿ ರಮ್ಯಾ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದವರಿಗೆ ಶಿಕ್ಷೆಯಾಗಬೇಕು ಎಂದೂ ರಾಕ್ಲೈನ್ ವೆಂಕಟೇಶ್ ಆಗ್ರಹಿಸಿದ್ದಾರೆ. ಈ ಹಿಂದೆ ನನಗೂ ಕೆಲವರು ಕೆಟ್ಟ ಕಾಮೆಂಟ್ಸ್ ಹಾಕಿದ್ದರು. ಅವರ ಮೇಲೆಲ್ಲ ಕೇಸ್ ಹಾಕಿ ಕೋರ್ಟ್ಗೆ ಅಲೆಯುವಂತೆ ಮಾಡಿದ್ದೇನೆ. ವರ್ಷಾನುಗಟ್ಟಲೆ ಅಲೆಯಬೇಕು. ಇದೇ ಅಂತವರಿಗೆ ಶಿಕ್ಷೆ. ದುಡಿದಿದ್ದೆಲ್ಲ ಕಳೆದುಕೊಂಡು ಒದ್ದಾಡುತ್ತಾರಲ್ಲ? ಆವಾಗ ಯಾವ ಸ್ಟಾರ್ಗಾಗಿ ನಾನು ಈ ಕೆಲಸ ಮಾಡಿದ್ದು? ಯಾವ ಸ್ಟಾರ್ ಸಹಾಯಕ್ಕೆ ಬರ್ತಾನೇ ಅನ್ನೋದು ಅವರಿಗೇ ಗೊತ್ತಾಗುತ್ತೆ' ಎಂದಿದ್ದಾರೆ.

'ಕೆಟ್ಟ ಕಾಮೆಂಟ್ ಮಾಡಿದವರಿಗೆ ಸುಮ್ಮನೆ ಒಡೆಯುವುದು ಸರಿ ಅಲ್ಲ. ಅದಕ್ಕೆ ಅವರನ್ನು ಕಾನೂನಿನ ಮೂಲಕ ಎದುರಿಸುತ್ತಿದ್ದೇನೆ. ಆಗ ಮಾಡಿದ ತಪ್ಪಿಗೆ ಕೇಸ್ ವಾಪಸ್ ತಗೊಳ್ಳಿ ಅಂತ ಈಗ ಬೇಡಿಕೊಳ್ತಾರೆ. ಆದರೆ ಕೋರ್ಟ್ನಲ್ಲಿರುವುದರಿಂದ ಅಲ್ಲೇ ಇತ್ಯರ್ಥ ಮಾಡಿಕೊಳ್ಳಿ ಎನ್ನುತ್ತೇನೆ. ಅವರಗೆ ತಾವು ಮಾಡಿದ ತಪ್ಪೇನು ಅನ್ನೋದು ಗೊತ್ತಾಗಬೇಕು' ಎಂದು ರಾಕ್ಲೈನ್ ಹೇಳಿದ್ದಾರೆ.
'ರಮ್ಯಾಗೆ ಕೆಟ್ಟ ಕಾಮೆಂಟ್ ಮಾಡಿದ್ದಾರೆ. ಇಂತಹ ಕೆಲಸ ಮುಂದುವರಿಸಿಕೊಂಡು ಹೋಗುವವರಿಗೆ ಶಿಕ್ಷೆ ಆಗಬೇಕು. ಎದುರಲ್ಲಿ ನಿಂತು ಮಾತನಾಡುವವರನ್ನ ಎದುರಿಸಬಹುದು. ಆದರೆ ಎಲ್ಲೋ ನಿಂತು ಮಾತಾಡೋರನ್ನ ಹೇಗೆ ಸಹಿಸಿಕೊಳ್ಳೋದು? ಯಾವ ಹೀರೋ ಆಗಿದ್ರೂ ತನ್ನ ಫ್ಯಾನ್ಸ್ ಇಂತಹ ಕೆಲಸ ಮಾಡಿದ್ರೆ ತಪ್ಪು. ಮೊದಲು ನಿಮ್ಮ ಮನೆ ಹೆಣ್ಣುಮಕ್ಕಳನ್ನ ಸಂತೋಷವಾಗಿ ಇಟ್ಟುಕೊಳ್ಳಿ. ಯಾವ ಹೀರೋನೂ ಬಂದು ಕಾಪಾಡಲ್ಲ' ಎಂದು ಅಭಿಮಾನಿಗಳಿಗೆ ಬುದ್ಧಿ ಹೇಳಿದ್ದಾರೆ.

'ಸ್ವಾರ್ಥಕ್ಕೆ ಚಿತ್ರರಂಗವನ್ನ ಕೊಲ್ಲಬೇಡಿ'
'ಇಂತಹ ವಿಚಾರಗಳಿಂದ ಈಗ ಸಿನಿಮಾ ಮಾಡೋಕೆ ಭಯ ಆಗುತ್ತಿದೆ. ಡಾ.ರಾಜ್ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಅವರು ಚಿತ್ರರಂಗವನ್ನ ಕಟ್ಟಿದ್ರು. ಆದರೆ ಅದನ್ನ ನಾವು ಹೇಗೆ ಬಳಸುತ್ತಿದ್ದೇವೆ? ಆಗಿರುವ ತಪ್ಪನ್ನು ಸರಿ ಮಾಡಿಕೊಂಡು ನೀವೇ ಬನ್ನಿ, ನಿಮ್ಮ ಸ್ವಾರ್ಥಕ್ಕೆ ಚಿತ್ರರಂಗವನ್ನು ಕೊಲ್ಲಬೇಡಿ. ಇದನ್ನ ಇಲ್ಲಿಗೇ ನಿಲ್ಲಿಸಿ' ಎಂದು ರಾಕ್ಲೈನ್ ಮನವಿ ಮಾಡಿಕೊಂಡಿದ್ದಾರೆ.
'ನಾವು ಕ್ಯಾಮೆರಾ ಮುಂದೆ ಜನಗಳಿಗೆ ಬುದ್ಧಿ ಹೇಳೋದನ್ನ ನಿಜ ಜೀವನದಲ್ಲಿ ಫಾಲೋ ಮಾಡಿದ್ರೆ ಚೆನ್ನಾಗಿರುತ್ತೆ. ನಟರು ಅಭಿಮಾನಿಗಳಿಗೆ ಬುದ್ಧಿ ಹೇಳಬೇಕು. ದರ್ಶನ್ ಆಗಲಿ, ಸುದೀಪ್ ಆಗಲಿ, ಯಾವುದೇ ಆದರೂ ಮುಂದೆ ಬರಬೇಕು. ಶೀಘ್ರದಲ್ಲೇ ನಾನು ಸಭೆ ಕರೆಯುತ್ತೇನೆ. ನಮ್ಮ ಮನೆಗೆ ಹೊತ್ತಿರುವ ಬೆಂಕಿಯನ್ನ ನಾವೇ ಆರಿಸಲು ಪ್ರಯತ್ನ ಮಾಡ್ತೀವಿ' ಎಂದೂ ಹೇಳಿದ್ದಾರೆ.
-
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ












Click it and Unblock the Notifications