ಬಂದ್ರು.. ಬಂದ್ರು.. ಬಂದ್ರು.. ಕನ್ನಡಿಗರ ಎದುರು ಹೊಸ ಲೋಕ ಸೃಷ್ಟಿಸಿದ ರಿಯಲ್ ಸ್ಟಾರ್ ಉಪೇಂದ್ರ!
ಕನ್ನಡಿಗರ ನಿರೀಕ್ಷೆಗಳನ್ನು ಕೆರಳಿಸಿದ್ದ 'UI' ಸಿನಿಮಾ ಇದೀಗ ಟೀಸರ್ ಮೂಲಕ ಅದನ್ನೆಲ್ಲಾ ನಿಜ ಮಾಡುವ ನಿರೀಕ್ಷೆ ಮೂಡಿಸಿದೆ. ನಟ ಉಪೇಂದ್ರ ಅವರು ಈಗ, ದೊಡ್ಡ ಮಟ್ಟದಲ್ಲಿ ಕಂಬ್ಯಾಕ್ ಮಾಡುವ ಮುನ್ಸೂಚನೆ ನೀಡಿದ್ದಾರೆ. ಉಪ್ಪಿ ಡೈರೆಕ್ಷನ್ ಮಾಡಿ, ನಟನೆ ಮಾಡಿ ಕನ್ನಡಿಗರ ಎದುರು ಹೊಸ ಲೋಕವನ್ನೇ ತೆರೆದಿಡಲು ಸಜ್ಜಾಗಿದ್ದಾರೆ. ಹಾಗಾದರೆ 'ಯುಐ' ಟೀಸರ್ ಬಗ್ಗೆ ಫ್ಯಾನ್ಸ್ ಹೇಳಿದ್ದೇನು?
ಉಪೇಂದ್ರ ಅವರು ರಿಯಲ್ ಸ್ಟಾರ್ ಅಂತಾನೆ ಫೇಮಸ್. ಹೊರ ರಾಜ್ಯದಲ್ಲೂ ಸ್ಯಾಂಡಲ್ವುಡ್ ನಟನಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಇಡೀ ಚಿತ್ರರಂಗ, ಉಪೇಂದ್ರ ಅವರ 'UI' ಎಂಟ್ರಿಗೆ ಕಾಯುತ್ತಿದೆ. ಹೀಗಿದ್ದಾಗ ಇಂದು ಬಹುನಿರೀಕ್ಷಿತ, 'UI' ಸಿನಿಮಾದ ಟೀಸರ್ ರಿಲೀಸ್ ಆಗೇ ಹೋಗಿದೆ. ತಾವು ಕೊಟ್ಟ ಮಾತಿನಂತೆ ನಟ ಉಪೇಂದ್ರ ಯುಐ ಟೀಸರ್ ರಿಲೀಸ್ ಮಾಡಿದ್ದು ಎಲ್ಲೆಲ್ಲೂ ಟ್ರೆಂಡ್ ಆಗುತ್ತಿದೆ. ಅಲ್ಲದೆ ಟೀಸರ್ ನೋಡಿದ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಟೀಸರ್ ಆರಂಭದಿಂದ ಹಿಡಿದು ಅಂತ್ಯದ ತನಕ ಬರೀ ಸರ್ಪ್ರೈಸ್.. ಸರ್ಪ್ರೈಸ್.. ಸರ್ಪ್ರೈಸ್..

ಬಂದ್ರು.. ಬಂದ್ರು.. ಬಂದ್ರು..!
ಇತ್ತೀಚೆಗೆ UI ಟೀಸರ್ ಬಿಡುಗಡೆ ಬಗ್ಗೆ ವಿಶೇಷ ಘೋಷಣೆ ಮಾಡಲಾಗಿತ್ತು. ಈ ಹಿನ್ನೆಲೆ, ಭಾರಿ ಕುತೂಹಲ ಕೆರಳಿಸಿತ್ತು ಉಪೇಂದ್ರ ಅವರ 'UI' ಸಿನಿಮಾ ಟೀಸರ್ ಬಿಡುಗಡೆ ದಿನಾಂಕ. ಇದೀಗ ಅದ್ಧೂರಿಯಾಗಿ ಟೀಸರ್ ರಿಲೀಸ್ ಆಗಿದೆ. ಹೀಗೆ ರಿಲೀಸ್ ಆದ 'UI' ಟೀಸರ್ ಅನ್ನ ಕನ್ನಡದ ಪ್ರೇಕ್ಷಕರ ಸಮೇತ ಇಡೀ ದೇಶವೇ ಮೆಚ್ಚಿಕೊಂಡಿದೆ. ಹಾಗೇ ಉಪೇಂದ್ರ ಅವರ ಕಾಲ್ಪನಿಕ & ಹೊಸ ಲೋಕಕ್ಕೆ ಸಿನಿಮಾ ಅಭಿಮಾನಿಗಳು ಫಿದಾ ಆಗಿದ್ದಾರೆ. ರಿಲೀಸ್ ಆದ ಕೆಲವೇ ಕ್ಷಣಕ್ಕೆ ಯುಐ ಟೀಸರ್ ಬಿರುಗಾಳಿಯ ರೀತಿ ಮುನ್ನುಗ್ಗುತ್ತಿದೆ.
'ಉಪ್ಪಿ' ಅಭಿಮಾನಿಗಳ ಸಂಭ್ರಮ
ಇನ್ನು ಹೀಗೆ ಉಪೇಂದ್ರ ಅವರ ಯುಐ ಟೀಸರ್ ರಿಲೀಸ್ಗೆ ಮೊದಲೇ ರಿಯಲ್ ಸ್ಟಾರ್ ಫ್ಯಾನ್ಸ್ ಸಂಭ್ರಮ ಜೋರಾಗಿತ್ತು. ಹಾಗೇ ಟೀಸರ್ ರಿಲೀಸ್ ಆದ ನಂತರ ಆ ಸಂಭ್ರಮ ಮತ್ತಷ್ಟು & ಮೊಗದಷ್ಟು ಹೆಚ್ಚಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ತಮ್ಮ ಫೋಟೋ & ವಿಡಿಯೋ ಶೇರ್ ಮಾಡಿ ಸಂಭ್ರಮಿಸುತ್ತಿದ್ದಾರೆ. ಹಾಗೇ ಎಲ್ಲೆಲ್ಲೂ ಯುಐ ಸಿನಿಮಾ ಈಗ ಫುಲ್ ವೈರಲ್ ಕೂಡ ಆಗುತ್ತಿದೆ. ಅಭಿಮಾನಿಗಳು ಉಪೇಂದ್ರ ಅವರ ಈ ಟ್ಯಾಲೆಂಟ್ಗೆ, ಫುಲ್ ಫಿದಾ ಆಗಿದ್ದಾರೆ.
Visuals Looks Stunning 🔥🔥
— Adheera (@adheeraeditz) January 8, 2024
#UITheMovie #Upendra pic.twitter.com/tKF614Z10K
ಒಟ್ನಲ್ಲಿ ನಟ ಉಪೇಂದ್ರ ಅವರ ಬಹು ನಿರೀಕ್ಷಿತ ಸಿನಿಮಾ 'UI' ಸಂಚಲನ ಸೃಷ್ಟಿ ಮಾಡಿದ್ದು. ಈಗ ಹೊಸ ವರ್ಷಕ್ಕೆ ಹೊಸ ಸುದ್ದಿಯೊಂದು ಹೊರಬಿದ್ದಿದ್ದು, ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಇಷ್ಟು ದಿನ ಕಾಲ 'UI' ಸಿನಿಮಾಗೆ ಕಾಯುತ್ತಿದ್ದ ಉಪೇಂದ್ರ ಅವರ ಅಭಿಮಾನಿಗಳಿಗೆ ಭರ್ಜರಿ ಸರ್ಪ್ರೈಸ್ ಸಿಕ್ಕಿದ್ದು, ಇನ್ನೇನು ಕೆಲವೇ ದಿನದಲ್ಲಿ ಯುಐ ಬೆಳ್ಳಿತೆರೆ ಮೇಲೆ ಭರ್ಜರಿ ಆರ್ಭಟ ತೋರಿಸುವ ಮುನ್ಸೂಚನೆ ಕೂಡ ಸಿಗುತ್ತಿದೆ.
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ












Click it and Unblock the Notifications