Ramachari: ಮಾವನ ಮನೆಯಲ್ಲಿ ಡುಪ್ಲಿಕೇಟ್ ಅಳಿಯನಿಂದ ಸತ್ಯನಾರಾಯಣ ಪೂಜೆ! ಇವನವನಲ್ಲ... ಇವನವನಲ್ಲ... ಎಂದ ಚಾರು!
ರಾಮಾಚಾರಿ ಧಾರವಾಹಿ ದಿನದಿಂದ ದಿನಕ್ಕೆ ಬಿಗ್ ಟ್ವಿಸ್ಟ್ ಮೂಲಕ ನೋಡುಗರಿಗೆ ಕುತೂಹಲ ಮೂಡಿಸಿದೆ. ನಿತ್ಯ ಅರ್ಧ ಗಂಟೆ ಮಾತ್ರ ಪ್ರಸಾರವಾಗುತ್ತಿದ್ದ ಧಾರಾವಾಹಿ ಸದ್ಯ ಮಹಾಸಂಚಿಕೆ ಮೂಲಕ ಒಂದು ಗಂಟೆ ಪ್ರಸಾರವಾಗುತ್ತಿದೆ. ಇದರೊಂದಿಗೆ ನೋಡುಗರ ಗಮನವನ್ನು ಸೆಳೆಯುತ್ತಿದೆ.
ಜೈಲಿನಲ್ಲಿ ತಪ್ಪೇ ಮಾಡದ ರಾಮಾಚಾರಿ, ಮನೆಯಲ್ಲಿ ಕೃಷ್ಣ, ಮಾವನ ಮನೆಯಲ್ಲಿ ಸತ್ಯನಾರಾಯಣ ಪೂಜೆ, ಮಾನ್ಯತಾಗೆ ಟೆನ್ಷನ್ ಇವೆಲ್ಲವೂ ರಾಮಾಚಾರಿ ಧಾರಾವಾಹಿಯ ಸದ್ಯದ ಹೈಲೆಟ್ಸ್. ಈ ಎಲ್ಲಾ ಕುತೂಹಲಕಾರಿ ವಿಷಯಗಳಿಂದ ರಾಮಾಚಾರಿ ಧಾರಾವಾಹಿ ನೋಡುಗರ ಆಸಕ್ತಿ ಹೆಚ್ಚಿಸಿದೆ.

ರಾಮಾಚಾರಿ ಮನೆಯಲ್ಲಿ ಕೃಷ್ಣ
ಚಿಕ್ಕವನಿರುವಾಗ ಕಳೆದು ಹೋಗಿದ್ದ ನೋಡಲು ರಾಮಾಚಾರಿಯಂತೆಯೇ ಕಾಣುವ ನಾರಾಯಣಾಚಾರ್ಯ ಹಾಗೂ ಜಾನಕಿಯ ಮತ್ತೊಬ್ಬ ಮಗ ಕೃಷ್ಣ ಈಗ ಡುಪ್ಲಿಕೇಟ್ ರಾಮಾಚಾರಿಯಾಗಿ ತಮ್ಮ ಮನೆ ಸೇರಿದ್ದಾನೆ. ಚಾರುಲತಾ ತಾಯಿ ಮಾನ್ಯತಾ ಕೊಟ್ಟ ಡೀಲ್ ಮುಗಿಸಲು ಬಂದ ಕೃಷ್ಣನಿಗೆ ತನ್ನ ತಂದೆ ಮತ್ತು ತಾಯಿ ನಾರಾಯಣಾಚಾರ್ಯ ಹಾಗೂ ಜಾನಕಿನೇ ಎನ್ನುವುದು ಗೊತ್ತಾಗಿದೆ.
ಚಾರಿಯನ್ನು ಪತ್ತೆ ಮಾಡಿದ ಚಾರು
ನಾರಾಯಣಾಚಾರ್ಯರ ಮನೆಗೆ ಡುಪ್ಲಿಕೇಟ್ ರಾಮಾಚಾರಿಯಾಗಿ ಎಂಟ್ರಿ ಕೊಟ್ಟ ಕೃಷ್ಣ ಚಾರುಲತಾಗೆ ಬೇಸರವಾಗುವಂತೆ ನಡೆದುಕೊಳ್ಳುತ್ತಲೇ ತಾನು ರಾಮಚಾರಿ ಅಲ್ಲ ಅನ್ನೋದನ್ನು ಸಾಬೀತು ಮಾಡಿದ್ದಾನೆ. ಅನುಮಾನ ಬಂದ ಚಾರು ಜೈಲಿಗೆ ಹೋಗಿ ತನ್ನ ಗಂಡ ರಾಮಚಾರಿಯನ್ನ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾಳೆ. ಮನೆಯಲ್ಲಿರುವುದು ಗಂಡ ರಾಮಾಚಾರಿ ಅಲ್ಲ ಬದಲಿಗೆ ರಾಮಾಚಾರಿಯಂತೆ ಇರುವ ಆತನ ಸಹೋದರ ಕೃಷ್ಣ ಅನ್ನೋದು ಚಾರುಲತಾಗೆ ತಿಳಿದಿದೆ.
ಗೊಂದಲ ಸೃಷ್ಟಿ
ಆದರೀಗ 30ಕ್ಕೂ ಹೆಚ್ಚು ಕೇಸ್ಗಳಿರುವ ಕೃಷ್ಣನನ್ನ ಜೈಲಿಗೆ ಕಳುಹಿಸಿ ರಾಮಾಚಾರಿಯನ್ನು ಬಿಡಿಸುವುದೋ ಅಥವಾ ವರ್ಷಗಳಿಂದ ಮಗನಿಗಾಗಿ ಕಾಯುತ್ತಿದ್ದ ತಂದೆ-ತಾಯಿಯಿಂದ ಮಗ ಕೃಷ್ಣನನ್ನು ದೂರ ಮಾಡದಂತೆ ಕಾಪಾಡುವುದೋ ಎನ್ನುವ ಗೊಂದಲ ಚಾರುಲತಾಗೆ ಸೃಷ್ಟಿಯಾಗಿದೆ. ಇದರ ನಡುವೆ ಕೃಷ್ಣನನ್ನು ಮುಂದಿಟ್ಟುಕೊಂಡು ಈ ಎಲ್ಲಾ ಕೆಲಸಗಳನ್ನು ಮಾಡಿಸುತ್ತಿರುವವರು ಯಾರು ಎನ್ನುವ ಅನುಮಾನವೂ ಚಾರುಲತಾಗೆ ಕಾಡತೊಡಗಿದೆ.

ಜೈಲಿನಲ್ಲಿ ತಪ್ಪೇ ಮಾಡದ ರಾಮಾಚಾರಿ
ಮಾನ್ಯಾತ ಮಾಡಿದ ಪ್ಲ್ಯಾನ್ನಿಂದಾಗಿ ಕೆಕೆ ಅನುಭವಿಸಬೇಕಾಗಿದ್ದ ಜೈಲು ಶಿಕ್ಷೆ ರಾಮಾಚಾರಿ ಅನುಭವಿಸುವಂತಾಗಿದೆ. ಕೆಕೆಯನ್ನು ಬಳಸಿಕೊಂಡು ಮಾನ್ಯತಾ ಚಾರುಲತಾಳನ್ನ ಮನೆಗೆ ಕರೆಸಿಕೊಳ್ಳುವ ಹೊಂಚು ಹಾಕಿದ್ದು ಯಾರಿಗೂ ಗೊತ್ತಿಲ್ಲ. ಆದರೆ ಕೆಕೆಗೆ ಮಾತ್ರ ತಾನು ಕೊಲ್ಲಲು ಬಂದ ನಾರಾಯಣಾಚಾರ್ಯರೇ ತನ್ನ ತಂದೆ, ಅದೇ ತನ್ನ ಕುಟುಂಬ ಅನ್ನೋದು ತಿಳಿದಿದೆ. ಆದರೆ ಇದು ಚಾರುಲತಾ ತಂದೆಗೆ ತಿಳಿದಿಲ್ಲ.
ಮಾವನ ಮನೆಯಲ್ಲಿ ಸತ್ಯನಾರಾಯಣ ಪೂಜೆ
ವಿದೇಶದಿಂದ ಬಂದ ಮೇಲೆ ಮನಸ್ಸಿಗೆ ಯಾಕೋ ಸಮಾಧಾನವೇ ಇಲ್ಲ ಎಂದು ಚಾರುಲತಾ ತಂದೆ ತಮ್ಮ ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಿಸಲು ಮುಂದಾಗಿದ್ದಾರೆ. ಆ ಪೂಜೆಯನ್ನು ನೆರವೇರಿಸಲು ತನ್ನ ಅಳಿಯನೇ ಸೂಕ್ತ ಎಂದು ನಿರ್ಧರಿಸಿ ಅವರನ್ನು ಬರ ಹೇಳಲು ಮಗಳ ಮನೆಗೆ ಹೋಗುತ್ತಾರೆ. ಆದರೆ ರಾಮಾಚಾರಿಯಂತೆ ನಟಿಸುತ್ತಿರುವ ಕೆಕೆಗೆ ಈ ಪೂಜೆ ಮಾಡುವುದು ಸುಲಭವಲ್ಲ.
ಮಾನ್ಯತಾಗೆ ಟೆನ್ಷನ್
ಇದನ್ನು ಅರಿತ ಮಾನ್ಯತಾ ಕೂಡ ಇದರಿಂದ ಕೆಕೆ ಅನ್ನ ಹೇಗೆ ಬಿಡಿಸುವುದು ಎಂದು ಯೋಚನೆ ಮಾಡಲು ಶುರು ಮಾಡಿದ್ದಾಳೆ. ಸದಾ ಲಾಂಗು-ಮಚ್ಚು, ಕೊಲೆ-ದರೋಡೆ ಮಾಡಿಕೊಂಡು ಬಂದ ಕೃಷ್ಣಾಗೆ ಪೂಜೆ ಪುನಸ್ಕಾರ ಮಾಡುವುದು ಕಷ್ಟಸಾಧ್ಯ. ಹರಳು ಸಿಡಿದಂತೆ ಮಂತ್ರ ಹೇಳುವ ರಾಮಾಚಾರಿ ಹಾಗೂ ಕೃಷ್ಣ ನೋಡಲು ಒಂದೇ ರೀತಿ ಇದ್ದರು ಅವರಿಬ್ಬರು ಬೆಳೆದ ವಾತಾವರಣ ಮಾತ್ರ ಬೇರೆ ಬೇರೆ. ಹೀಗಾಗಿ ಕೃಷ್ಣ ಮಂತ್ರ ಹಾಗೂ ಪೂಜೆ ಹೇಳಲು ವಿಫಲನಾದರೆ ಮಾನ್ಯತಾ ಮಾಡಿದ ಪ್ಲ್ಯಾನ್ ಬಯಲಾಗುತ್ತದೆ.

ಮಾನ್ಯತಾಗೆ ಈಗ ಟೆನ್ಷನ್ ಶುರುವಾಗಿದೆ. ಈ ಗಂಡಾಂತರದಿಂದ ಕೆಕೆಯನ್ನ ಪಾರು ಮಾಡದೇ ಹೋದಲ್ಲಿ ವೈಶಾಕಾ, ಮಾನ್ಯತಾ ಹಾಗೂ ಕೃಷ್ಣ ಜೊತೆ ಪೊಲೀಸ್ ಆಫೀಸರ್ ಕೂಡ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಮಾವನ ಮನೆಯಲ್ಲಿ ಡುಪ್ಲಿಕೇಟ್ ಅಳಿಯನಿಂದ ಸತ್ಯನಾರಾಯಣ ಪೂಜೆ ನಡೆಯುತ್ತಾ ಅಥವಾ ರಾಮಾಚಾರಿಯನ್ನೇ ಜೈಲಿನಿಂದ ಕರೆಸಿಕೊಳ್ಳಲಾಗುತ್ತಾ? ಇವನವನಲ್ಲ... ಇವನವನಲ್ಲ... ಎನ್ನುವ ಚಾರುಲತಾ ಜೈಲಿನಿಂದ ಗಂಡನನ್ನು ಬಿಡಿಸಿಕೊಂಡು ಬರ್ತಾಳಾ ಅನ್ನೋದನ್ನು ಕಾದು ನೋಡಬೇಕಿದೆ.
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications