Get Updates
Get notified of breaking news, exclusive insights, and must-see stories!

Manju Warrier: ನಟಿ ಮಂಜು ವಾರಿಯರ್‌ಗೆ ವೇದಿಕೆಯಲ್ಲೇ ಮುತ್ತಿಟ್ಟ ಹುಚ್ಚು ಅಭಿಮಾನಿ, ವೈರಲ್ ವಿಡಿಯೋ ಇಲ್ಲಿದೆ

ಕೇರಳದ ಪಾಲಕ್ಕಾಡ್‌ನಲ್ಲಿ ನಡೆದ ಜ್ಯುವೆಲ್ಲರಿ ಶೋರೂಂ ಉದ್ಘಾಟನಾ ಸಮಾರಂಭದಲ್ಲಿ ಮಲಯಾಳಂ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಮಂಜು ವಾರಿಯರ್ ಅವರಿಗೆ ಅಭಿಮಾನಿಯೊಬ್ಬರಿಂದ ಮುಜುಗರದ ಅನುಭವ ಎದುರಾಗಿದೆ. ವೇದಿಕೆಯ ಮೇಲೆಯೇ ನಟಿಯನ್ನು ತಬ್ಬಿಕೊಂಡು ಬಲವಂತವಾಗಿ ಮುತ್ತಿಟ್ಟ ಮಹಿಳೆಯ ವರ್ತನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ವಿಡಿಯೋ ವೈರಲ್‌ ಆಗಿದೆ.

ನಡೆದಿದ್ದೇನು?

ಪಾಲಕ್ಕಾಡ್‌ನಲ್ಲಿ ಹೊಸ ಜ್ಯುವೆಲ್ಲರಿ ಮಳಿಗೆಯನ್ನು ಉದ್ಘಾಟಿಸಲು ಮಂಜು ವಾರಿಯರ್ ಆಗಮಿಸಿದ್ದರು. ಅಲ್ಲಿ ನೆರೆದಿದ್ದ ಬೃಹತ್ ಜನಸಮೂಹವನ್ನು ಉದ್ದೇಶಿಸಿ ಮಾತನಾಡಲು ಆಯೋಜಕರು ವೇದಿಕೆಯೊಂದನ್ನು ಸಿದ್ಧಪಡಿಸಿದ್ದರು. ಮಂಜು ವಾರಿಯರ್ ಅವರು ವೇದಿಕೆಯ ಮೇಲೆ ಮಾತನಾಡುತ್ತಿದ್ದಾಗ, ಮಹಿಳೆಯೊಬ್ಬರು ಏಕಾಏಕಿ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ವೇದಿಕೆಗೆ ನುಗ್ಗಿದ್ದಾರೆ. ಅಷ್ಟಕ್ಕೇ ನಿಲ್ಲದೆ, ನಟಿಯನ್ನು ಬಲವಂತವಾಗಿ ಅಪ್ಪಿಕೊಂಡು ಮುತ್ತಿಟ್ಟಿದ್ದಾರೆ.

Manju Warrier

ಈ ಅನಿರೀಕ್ಷಿತ ಘಟನೆಯಿಂದ ನಟಿ ಕ್ಷಣಕಾಲ ಗಾಬರಿಗೊಂಡರು. ಅಲ್ಲಿ ನೆರೆದಿದ್ದ ಜನರು ಮತ್ತು ಆಯೋಜಕರು ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಭದ್ರತಾ ಸಿಬ್ಬಂದಿ ಕೂಡಲೇ ಕಾರ್ಯಪ್ರವೃತ್ತರಾಗಿ ಆ ಮಹಿಳೆಯನ್ನು ನಟಿಯಿಂದ ದೂರಕ್ಕೆ ಎಳೆದೊಯ್ದಿದ್ದಾರೆ. ಈ ಘಟನೆಯ ವಿಡಿಯೋ ಇದೀಗ ಇಂಟರ್ನೆಟ್‌ನಲ್ಲಿ ವೈರಲ್‌ ಆಗಿದೆ. ಇದು ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳ ಸುರಕ್ಷತೆ ಮತ್ತು ವೈಯಕ್ತಿಕ ಗಡಿಗಳ ಕುರಿತು ದೊಡ್ಡ ಮಟ್ಟದ ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ.

ಅಭಿಮಾನ ಮತ್ತು ಪ್ರೀತಿ ಇರಲಿ, ಆದರೆ ಸಾರ್ವಜನಿಕವಾಗಿ ಒಬ್ಬರ ಅನುಮತಿಯಿಲ್ಲದೆ ಇಂತಹ ವರ್ತನೆ ತೋರುವುದು ತಪ್ಪು ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟು ದೊಡ್ಡ ನಟಿ ಬರುತ್ತಾರೆ ಎಂದ ಮೇಲೆ ಭದ್ರತಾ ವ್ಯವಸ್ಥೆ ಇಷ್ಟು ಸಡಿಲವಾಗಿತ್ತೇ? ಎಂದು ಅಭಿಮಾನಿಗಳು ಆಯೋಜಕರನ್ನು ಪ್ರಶ್ನಿಸುತ್ತಿದ್ದಾರೆ. ಈ ಘಟನೆಯು ಸಾರ್ವಜನಿಕವಾಗಿ ಸೆಲೆಬ್ರಿಟಿಗಳ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಮತ್ತೆ ನಾಗರಿಕ ಪ್ರಜ್ಞೆಯ ಚರ್ಚೆಯನ್ನು ಮುನ್ನಲೆಗೆ ತಂದಿದೆ.

ನಟಿ ಹೇಳಿದ್ದೇನು?

ಪಾಲಕ್ಕಾಡ್‌ನಲ್ಲಿ ನಡೆದ ಈ ಅನಿರೀಕ್ಷಿತ ಘಟನೆಯ ವೇಳೆ ಮಂಜು ವಾರಿಯರ್ ಅವರು ತೋರಿದ ಸಂಯಮ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ವೇದಿಕೆಯ ಮೇಲೆ ಮಹಿಳೆಯೊಬ್ಬರು ಬಲವಂತವಾಗಿ ಮುತ್ತಿಟ್ಟಾಗ ಗಾಬರಿಗೊಂಡರೂ, ಮಂಜು ವಾರಿಯರ್ ಅವರು ಪರಿಸ್ಥಿತಿಯನ್ನು ಅತ್ಯಂತ ಶಾಂತವಾಗಿ ನಿಭಾಯಿಸಿದರು. ಭದ್ರತಾ ಸಿಬ್ಬಂದಿ ಆ ಮಹಿಳೆಯನ್ನು ಎಳೆದೊಯ್ಯುವಾಗ, ಮಂಜು ಅವರು ಆಕೆಯ ಕೈಹಿಡಿದು ಸಮಾಧಾನಪಡಿಸಲು ಪ್ರಯತ್ನಿಸಿದರು. ಘಟನೆಯಿಂದ ಧೃತಿಗೆಡದ ನಟಿ, ಆ ನಂತರವೂ ಎಂದಿನಂತೆ ನಗುತ್ತಾ ಇತರ ಅಭಿಮಾನಿಗಳ ಜೊತೆ ಸೆಲ್ಫಿ ನೀಡುವ ಮೂಲಕ ತಮ್ಮ ಕಾರ್ಯಕ್ರಮವನ್ನು ಮುಂದುವರಿಸಿದರು.

Manju Warrier

ನನಗೆ ಮಂಜು ಅಂದ್ರೆ ಪ್ರಾಣ

ಆಯೋಜಕಿ ಮತ್ತು ನಿರೂಪಕಿ ಮೀರಾ ನಾಯರ್ ಅವರು ವೇದಿಕೆಯ ಮೇಲೆಯೇ ಈ ವರ್ತನೆಯನ್ನು ಖಂಡಿಸಿ, ಇದು ಅತ್ಯಂತ ಅನುಚಿತ ಎಂದು ತಿಳಿಸಿದರು. ಆದರೆ, ಅಲ್ಲಿಂದ ಕರೆದೊಯ್ಯಲ್ಪಡುತ್ತಿದ್ದ ಆ ಮಹಿಳೆ ಮಾತ್ರ "ನನಗೆ ಮಂಜು ಚೇಚಿ ಅಂದರೆ ಪ್ರಾಣ, ಅದಕ್ಕೇ ಮುತ್ತಿಟ್ಟೆ" ಎಂದು ಜೋರಾಗಿ ಕಿರುಚುತ್ತಿದ್ದರು. ಇಷ್ಟು ದೊಡ್ಡ ಸ್ಟಾರ್‌ ನಟಿಯ ಭದ್ರತೆಯಲ್ಲಿ ಲೋಪವಾಗಿರುವುದನ್ನು ನೆಟ್ಟಿಗರು ಪ್ರಶ್ನಿಸಿದ್ದಾರೆ. ಒಬ್ಬ ವ್ಯಕ್ತಿ ಅಷ್ಟು ಸುಲಭವಾಗಿ ನಟಿಯ ಸಮೀಪಕ್ಕೆ ಬರಲು ಹೇಗೆ ಸಾಧ್ಯವಾಯಿತು ಎಂಬುದು ಈಗ ಚರ್ಚೆಯ ವಿಷಯವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+