ದ್ವಾಪರ ದಾಟುತ ಹಾಡು ಬರೆಯಲು ನಾಗೇಂದ್ರ ಪ್ರಸಾದ್ ತೆಗೆದುಕೊಂಡ ಸಮಯ ಎಷ್ಟು..?
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಕೃಷ್ಣಂ ಪ್ರಣಯ ಸಖಿ ಸಿನಿಮಾ ಇನ್ನೇನು ತೆರೆ ಕಾರಣು ಸಿದ್ಧವಾಗಿದೆ. ಈ ಸಿನಿಮಾದ ದ್ವಾಪರ ದಾಟುತ ನನ್ನನೇ ನೋಡಲು ನನ್ನನೇ ಸೇರಲು ಬಂದ ರಾಧಿಕೆ ಎಂಬ ಹಾಡು ಸಖತ್ ಟ್ರೆಂಡಿಂಗ್ನಲ್ಲಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಹಾಡಿನದ್ದೇ ಅಬ್ಬರವಾಗಿದೆ. ಕೇಳುಗರು ತಲೆದೂಗುವ ಈ ಹಾಡನ್ನು ಹೊಸ ಗಾಯಕ ಜಸ್ಕರಣ್ ಸಿಂಗ್ ಹಾಡಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಮುಖ್ಯವಾಗಿ ವಿ.ನಾಗೇಂದ್ರ ಪ್ರಸಾದ್ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.
ಸದ್ಯ ಟ್ರೆಂಡಿಂಗ್ನಲ್ಲಿರುವ ಈ ಹಾಡನ್ನು ಬರೆಯಲು ಎಷ್ಟು ಸಮಯ ತೆಗೆದುಕೊಂಡಿತು ಎನ್ನುವುದನ್ನು ಸ್ವತಃ ನಾಗೇಂದ್ರ ಪ್ರಸಾದ್ ಅವರೇ ಹೇಳಿದ್ದಾರೆ. ಟವಿ 9 ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಸಾಮಾನ್ಯವಾಗಿ ಎಲ್ಲಾ ಹಾಡುಗಳನ್ನು ಐದು-ಹತ್ತು ನಿಮಿಷದಲ್ಲಿ ಬರೆಯುತ್ತೇನೆ. ಈ ಹಾಡು ಬರೆಯಲು ಕೂಡ ಹೆಚ್ಚು ಸಮಯ ತೆಗೆದುಕೊಂಡಿಲ್ಲ. ಆದರೆ ಈ ಹಾಡಿಗೆ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನ ಇತ್ತು. ಕಾಂಪೋಸೇಷನ್ ಜೊತೆ ಜೊತೆ ಈ ಹಾಡನ್ನು ಬರೆದಿರುವುದು ಎಂದರು.

ಯಾವುದೇ ಸಿನಿಮಾ ಆಗಲೀ, ಯಾವುದೇ ಹಾಡಾಗಲಿ, ಒಬ್ಬರಿಗೆ ಕ್ರೆಡಿಟ್ ಸಲ್ಲುವುದಿಲ್ಲ. ನಿರ್ದೇಶಕನಿಂದ ಹಿಡಿದು ಕೊರಿಯೋಗ್ರಾಫರ್ತನಕ ಎಲ್ಲರ ಶ್ರಮವೂ ಲೆಕ್ಕಕ್ಕೆ ಬರುತ್ತದೆ. ಒಂದು ಹಾಡಿಗೆ ಎಲ್ಲರ ಕೊಡುಗೆ ಇರುತ್ತದೆ. ಅವರು ಟ್ಯೂನ್ ಕೊಟ್ಟಿದ್ದಕ್ಕೆ, ನಾನು ಬರೆದಿದ್ದಕ್ಕೆ, ಅದಕ್ಕೆ ಸರಿಯಾಗಿ ಸೀನ್ ಸಿಕ್ಕಿರುವುದಕ್ಕೆ ಹಾಡು ಇಷ್ಟೊಂದು ಜನಪ್ರಿಯತೆ ಪಡೆದಿದೆ. ಇತ್ತೀಚಿಗೆ ನಾವು ಏನು ಮಾಡುತ್ತೇವೆ ಎಂದರೆ, ಕಾಂಪೋಸಿಂಗ್ ಜೊತೆಗೆ ಹಾಡಿನ ಸಾಲು ಬರೆಯಲು ಶುರು ಮಾಡುತ್ತೇವೆ ಎಂದು ಹೇಳಿದರು.
ಹಿಂದೆಲ್ಲಾ ಹಾಡು ಕೊಟ್ಟು ಸ್ವಲ್ಪ ದಿನ ಸಮಯ ತೆಗೆದುಕೊಳ್ಳುವುದು ಯಾವಾಗಲೋ ಟ್ಯೂನ್ ಬರುತ್ತಿತ್ತು ನಾನು ಸಮಯ ತೆಗೆದುಕೊಂಡು ಬರೆಯುತ್ತಿದ್ದೆ. ಈ ಸಿನಿಮಾದಲ್ಲಿ ಜೊತೆಯಲ್ಲೇ ಕುಳಿತುಕೊಂಡು ಮಾಡೋಣ ಅಂತಾ ಹೇಳಿದರು. ಹೀಗಾಗಿ ಅಲ್ಲಿ ಕಾಂಪೋಸಿಂಗ್ ಮಾಡುತ್ತಿದ್ದರು. ಅಲ್ಲಿಯೇ ಹಾಡಿನ ಸಾಲುಗಳನ್ನು ಅವರಿಗೆ ಕೊಡುತ್ತಿದ್ದೆ. ಈ ಹಾಡು ಹಾಗೇ ಆಗಿರುವಂತದ್ದು.

ಇಡೀ ಹಾಡು ಅಲ್ಲೇ ಕುಳಿತು ಮಾಡಿದ್ದು. ಅರ್ಜುನ್ ಬಹಳ ಸ್ಪೀಡ್ ಆಗಿ ಕಂಪೋಸ್ ಮಾಡುತ್ತಾರೆ. ಅಲ್ಲೇ ಈ ಹಾಡನ್ನು ಕಂಪೋಸ್ ಮಾಡಿದ್ರು, ನಾನು ಅಲ್ಲೇ ಸಾಲುಗಳನ್ನು ಬರೆದೆ. ಅಲ್ಲೇ ಸಿಂಗರ್ ಇರುತ್ತಾರೆ. ಅಲ್ಲೇ ಹಾಡಿ , ಅಲ್ಲೇ ಸಣ್ಣ ರಿಧಮ್ ಕೂಡ ಹಾಕಿ ಅರ್ಜುನ್ ಹಾಡು ಸಿದ್ಧ ಮಾಡಿಕೊಳ್ಳುತ್ತಾರೆ. ನನ್ನ ಅಂದಾಜು ಅಬ್ಬಾಬ್ಬ ಅಂದರೆ ಒಂದು ಎರಡು ಗಂಟೆಯಲ್ಲೇ ಈ ಹಾಡು ಸಿದ್ಧವಾಯಿತು ಎಂದು ಹೇಳಿದರು.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications