ನಟ ಅಲ್ಲು ಅರ್ಜುನ್ ದಂಪತಿ ಸುತ್ತುವರಿದ ಫ್ಯಾನ್ಸ್, ಕಾರು ಹತ್ತಲು ಪರದಾಟ
ಇತ್ತೀಚೆಗೆ ಅಭಿಮಾನಿಗಳ ಹುಚ್ಚಾಟ ಅತಿರೇಕಕ್ಕೆ ಹೋಗುತ್ತಿದೆ. ಸೆಲೆಬ್ರಿಟಿಗಳು ಹೊರಗೆ ಬರಲಾಗದ ಸ್ಥಿತಿ ನಿರ್ಮಾಣವಾಗಿದೆ. ನಟಿ ಸಮಂತಾ ಹಾಗೂ ನಿಧಿ ಅಗರ್ವಾಲ್ ಅವರಿಗೆ ಇತ್ತೀಚೆಗೆ ಇಂತಹ ಅನುಭವ ಆಗಿತ್ತು. ಇದೀಗ ಟಾಲಿವುಡ್ ನಟ ಅಲ್ಲು ಅರ್ಜುನ್ ದಂಪತಿ ಕೂಡ ಇದೇ ಘಟನೆಯನ್ನು ಎದುರಿಸಿದ್ದಾರೆ. ಹೈದರಾಬಾದ್ನಲ್ಲಿ ಅಲ್ಲು ಅರ್ಜುನ್ ಮತ್ತು ಅವರ ಪತ್ನಿ ಸ್ನೇಹಾ ರೆಡ್ಡಿ ದಂಪತಿ ಮೇಲೆ ಜನರು ಮುಗಿಬಿದ್ದಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಅಲ್ಲು ಅರ್ಜುನ್ ಮತ್ತು ಸ್ನೇಹಾ ಅಭಿಮಾನಿಗಳಿಂದ ತುಂಬಿ ತುಳುಕುತ್ತಿರುವ ಸ್ಥಳದಿಂದ ಹೊರಬರುವುದನ್ನು ಕಾಣಬಹುದು. ಹೈದರಾಬಾದ್ನ ಹೈಟೆಕ್ ಸಿಟಿಯ ಕೆಫೆಗೆ ತೆರಳಿದ್ದಾಗ ಅಲ್ಲು ಅರ್ಜುನ್ ದಂಪತಿ ಕಂಡು ಅಭಿಮಾನಿಗಳು ಹುಚ್ಚಾಟ ಮೆರೆದಿದ್ದಾರೆ. ನಟ ತನ್ನ ಪತ್ನಿಯನ್ನು ಸುರಕ್ಷಿತವಾಗಿ ತಮ್ಮ ಕಾರಿನ ಬಳಿಗೆ ಕರೆದೊಯ್ಯಲು ಒದ್ದಾಡಿದ್ದಾರೆ. ಭದ್ರತಾ ಸಿಬ್ಬಂದಿಯ ಕಾವಲು ಇದ್ದರೂ, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ಕೆಲಕಾಲ ಪರಿಸ್ಥಿತಿ ಹತೋಟಿಗೆ ಬರಲಿಲ್ಲ.

ಕೆಫೆಗೆ ಬಂದಿದ್ದ ದಂಪತಿ
ಈ ಘಟನೆ ಶನಿವಾರ ಸಂಜೆ ಹೈದರಾಬಾದ್ನ ಕೆಫೆ ನಿಲೋಫರ್ನಲ್ಲಿ ನಡೆದಿದೆ. ಅಲ್ಲು ಅರ್ಜುನ್ ತಮ್ಮ ಹೊಸ ಥಿಯೇಟರ್ ಅನ್ನು ಅಲ್ಲು ಸಿನಿಮಾ ಎಂಬ ಹೆಸರಿನಲ್ಲಿ ಪ್ರಾರಂಭಿಸಿ, ನಂತರ ನಟ ತಮ್ಮ ಪತ್ನಿಯೊಂದಿಗೆ ಸ್ವಲ್ಪ ಸಮಯದವರೆಗೆ ಇಲ್ಲಿನ ಕೆಫೆಗೆ ಭೇಟಿ ನೀಡಿದರು. ದಂಪತಿ ಕೆಫೆಗೆ ಬರುತ್ತಿದ್ದಂತೆ, ಅಭಿಮಾನಿಗಳು ಅವರ ಸುತ್ತಲೂ ಸೇರಲು ಪ್ರಾರಂಭಿಸಿದರು. ಸ್ವಲ್ಪ ಸಮಯದ ನಂತರ, ಅಭಿಮಾನಿಗಳು ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆದುಕೊಳ್ಳಲು ಧಾವಿಸಿದಾಗ ಜನಸಂದಣಿ ಹೆಚ್ಚಾಯಿತು.
ಬಳಿಕ ಸ್ನೇಹಾ ರೆಡ್ಡಿ ಅವರ ಕೈಹಿಡಿದು ಅಲ್ಲು ಅರ್ಜುನ್ ಅಭಿಮಾನಿಗಳು ಹಿಂದೆ ಸರಿಯುವಂತೆ ವಿನಂತಿಸಿದ್ದಾರೆ. ಈ ಗುಂಪಿನ ನಡುವೆಯೂ ನಟ ತನ್ನ ಪತ್ನಿಯನ್ನು ಜನಸಂದಣಿಯಲ್ಲಿ ಕಾಳಜಿಯಿಂದ ಕಾರಿಗೆ ಹತ್ತಿಸಿದ್ದಾರೆ. ಕೆಫೆಯೊಳಗೆ ಜನಸಂದಣಿ ಹೆಚ್ಚಾಗಿ, ದಂಪತಿ ಸುರಕ್ಷಿತವಾಗಿ ಹೊರಬರಲು ಸಹಾಯ ಮಾಡಲು ಭದ್ರತಾ ಸಿಬ್ಬಂದಿ ಕೂಡ ಇದ್ದರು. ಆದರೂ ಜನ ಹೆಚ್ಚಾಗಿದ್ದರಿಂದ ಒದ್ದಾಡಿದ್ದಾರೆ.
ಕೆಫೆಯಿಂದ ಹೊರಬಂದಾಗ ಅಭಿಮಾನಿಗಳು ಅವರ ಕಾರಿನವರೆಗೂ ಹಿಂಬಾಲಿಸಿದರು. ಜನರು ಸೆಲ್ಫಿಗಳಿಗಾಗಿ ಮುಗಿಬಿದ್ದಿದ್ದರಿಂದ ಪರಸ್ಪರ ತಳ್ಳಾಡಿದ್ದಾರೆ. ಕೊನೆಗೆ ಭದ್ರತಾ ಸಿಬ್ಬಂದಿಯೊಂದಿಗೆ ಅಲ್ಲು ಅರ್ಜುನ್, ಅಭಿಮಾನಿಗಳು ಸುರಕ್ಷಿತವಾಗಿ ನಡೆಯಲು ಪಕ್ಕಕ್ಕೆ ಸರಿಯುವಂತೆ ಕೇಳಿಕೊಳ್ಳುತ್ತಲೇ ಇದ್ದರು. ಬಳಿಕ ಸ್ನೇಹಾ ರೆಡ್ಡಿ ಸುರಕ್ಷಿತವಾಗಿ ಕಾರಿನಲ್ಲಿ ಕುಳಿತ ನಂತರ ಅಲ್ಲು ಅರ್ಜುನ್ ಅಭಿಮಾನಿಗಳತ್ತ ಕೈ ಬೀಸಿ ಅಲ್ಲಿಂದ ಹೊರಟರು.
ಸಮಂತಾ-ನಿಧಿಗೂ ಇದೇ ಅನುಭವ
ನಟಿಯರಾದ ಸಮಂತಾ ರುತ್ ಪ್ರಭು ಮತ್ತು ನಿಧಿ ಅಗರ್ವಾಲ್ ಕೂಡ ಇತ್ತೀಚೆಗೆ ಇದೇ ರೀತಿ ಅಭಿಮಾನಿಗಳಿಂದ ಪರದಾಡಿದ್ದರು. ಕಿಕ್ಕಿರಿದ ಜನರ ನಡುವೆ ಕಹಿ ಅನುಭವ ಎದುರಿಸಿದ್ದರು. ಇದಾದ ಕೆಲವು ದಿನಗಳ ನಂತರ ಈ ಘಟನೆ ಸಂಭವಿಸಿದೆ. ಕುಕಟ್ಪಲ್ಲಿಯ ಲುಲು ಮಾಲ್ನಲ್ಲಿ ನಡೆದ 'ದಿ ರಾಜಾ ಸಾಬ್' ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿಧಿ ಅಗರ್ವಾಲ್ ಅವರು ಸ್ಥಳದಿಂದ ಹೊರಬರುವಾಗ ಅಭಿಮಾನಿಗಳಿಂದ ತಳ್ಳಲ್ಪಟ್ಟಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಸೈಬರಾಬಾದ್ ಪೊಲೀಸರು ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಿದ್ದರು. ನಿಧಿ ತನ್ನ ಕಾರನ್ನು ತಲುಪಲು ಕಷ್ಟಪಡುತ್ತಿರುವ ವೀಡಿಯೊಗಳು ಆನ್ಲೈನ್ನಲ್ಲಿ ವೈರಲ್ ಆಗಿದ್ದವು.
-
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral












Click it and Unblock the Notifications