Don 3: ಡಾನ್ 3 ಅನೌನ್ಸ್ ಮಾಡಿದ ಫರ್ಹಾನ್ ಅಖ್ತರ್- ಶಾರುಖ್ ಬದಲು ರಣವೀರ್? ಕಿಂಗ್ಖಾನ್ ಬೇಕೆಂದು ಹಠ ಹಿಡಿದ ಅಭಿಮಾನಿಗಳು
ಮುಂಬೈ, ಆಗಸ್ಟ್ 08: ಬಾಲಿವುಡ್ನ ಹೆಸರಾಂತ ಚಿತ್ರ ಡಾನ್ ಸಿಕ್ವೆಲ್ ಅನ್ನು ನಟ ಹಾಗೂ ನಿರ್ಮಾಪಕ ಪರ್ಹಾನ್ ಅಖ್ತರ್ ಘೋಷಣೆ ಮಾಡಿದ್ದಾರೆ. 1978 ರಲ್ಲಿ ತೆರೆಕಂಡ ಡಾನ್ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ನಟಿಸಿದ್ದರು. ಆ ಬಳಿಕ 2006 ರಲ್ಲಿ ಡಾನ್ ಚಿತ್ರವನ್ನು ಮರು ನಿರ್ಮಾಣ ಮಾಡಲಾಗಿತು. ಅದರಲ್ಲಿ ಶಾರುಖ್ ಖಾನ್ ನಟಿಸಿದ್ದರು. 2011 ರಲ್ಲಿ ಡಾನ್ 2 ಚಿತ್ರವನ್ನು ನಿರ್ಮಿಸಲಾಯಿತು. ಈ ಚಿತ್ರದಲ್ಲಿಯೂ ಶಾರುಖ್ ಖಾನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಇವರೆಡೂ ಚಿತ್ರಗಳನ್ನು ನಿರ್ದೇಶಿಸಿದ್ದ ಫರ್ಹಾನ್ ಅಖ್ತರ್ ಅವರೇ ಡಾನ್ 3 ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಆದರೆ, ಈ ಬಾರಿ ಶಾರುಖ್ ಇರುವುದು ಡೌಟ್ ಎನ್ನುತ್ತಿವೆ ಹಲವು ಮಿಡಿಯಾಗಳು.

ಶಾರುಖ್ ಖಾನ್ ಅವರ ಅಪ್ರತಿಮ ಪಾತ್ರದಲ್ಲಿ ರಣವೀರ್ ಸಿಂಗ್ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತ ಅಪ್ಡೇಟ್ಗಳನ್ನು ಫರ್ಹಾನ್ ಅಖ್ತರ್ ಅವರು ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ ಹಂಚಿಕೊಂಡಿದ್ದಾರೆ. 'A New Era Begins' ಎಂಬ ಬರಹವನ್ನು ಡಾನ್ 3 ಘೋಷಣೆ ಟೀಸರ್ನಲ್ಲಿ ಬರೆಯಲಾಗಿದೆ.
ಶಾರುಖ್ ಬೇಕೇಬೇಕು ಎಂದು ಹಠ ಹಿಡಿದ ಅಭಿಮಾನಿಗಳು
ಡಾನ್ 3 ಚಿತ್ರದಲ್ಲಿಯೂ ಶಾರುಖ್ ಖಾನ್ ನಟಿಸಲು ಎಂಬುದು ಅಭಿಮಾನಿಗಳ ಒತ್ತಾಸೆಯಾಗಿದೆ. ಈ ಚಿತ್ರದಲ್ಲಿ ರಣವೀರ್ ಸಿಂಗ್ ನಟಿಸುವುದು ಅವರಿಗೆ ಎಳ್ಳಷ್ಟೂ ಇಷ್ಟವಿಲ್ಲವೆಂದು ಕಿಂಗ್ಖಾನ್ ಅಭಿಮಾನಿಗಳು ಹೇಳಿದ್ದಾರೆ. ಡಾನ್ ಸಿಕ್ವೆಲ್ಗಳು ಶಾರುಖ್ ಖಾನ್ ಅವರ ನಟನೆಯಿಂದಲೇ ಹಿಟ್ ಆಗಿದ್ದವು. ಶಾರುಖ್ ಖಾನ್ ಬಿಟ್ಟರೆ, ಈ ಪಾತ್ರಕ್ಕೆ ಯಾರೂ ಸಹ ಯೋಗ್ಯರಲ್ಲವೆಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಎಸ್ಆರ್ಕೆ ಇಲ್ಲದಿದ್ದರೆ ಅದನ್ನು ಡಾನ್ 3 ಎಂದು ಕರೆಯುವ ಅಗತ್ಯವಿಲ್ಲ. ನಿಮಗೆ ಅಭಿಮಾನಿಗಳನ್ನು ಗೌರವಿಸುವ ಸೌಜನ್ಯವೂ ಇಲ್ಲ. ನಾವು ಡಾನ್ 3 ಗಾಗಿ ಹಲವು ವರ್ಷಗಳಿಂದ ಕಾಯುತ್ತಿದ್ದೆವು. ಶಾರುಖ್ ಇರುತ್ತಾರೆಂದು ನಮ್ಮ ಬಯಕೆಯಾಗಿತ್ತು, ನೀವು ನಮಗೆ ನಿರಾಸೆಯನ್ನು ಉಂಟು ಮಾಡಿದ್ದೀರಿ ಎಂದು ಅಭಿಮಾನಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ, ಈ ಚಿತ್ರದಲ್ಲಿ ಯಾರು ನಟಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಜವಾನ್ ಅಗಿ ಬರಲಿದ್ದಾರೆ ಶಾರುಖ್
ಶಾರುಖ್ ಖಾನ್ ಅವರ ಬಹು ನಿರೀಕ್ಷಿತ ಚಿತ್ರ ಜವಾನ್ ಸೆಪ್ಟಂಬರ್ 7 ರಂದು ಬಿಡುಗಡೆಯಾಗಲಿದೆ. ಇದು ಜಗತ್ತಿನಾದ್ಯಂತ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಜವಾನ್ ಚಿತ್ರವನ್ನು ತಮಿಳಿನ ಯುವ ನಿರ್ದೇಶಕ ಅಟ್ಲಿ ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ವಿಜಯ್ ಸೇತುಪತಿ ಹಾಗೂ ನಯನತಾರಾ ಅವರು ನಟಿಸಿದ್ದಾರೆ. ಇದು ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಬಿಡುಗಡೆಯಾಗುತ್ತಿದೆ.
-
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ 3 ಜಾಗ ನಿಗದಿ: ಡಿಸಿಎಂ ಡಿ.ಕೆ ಶಿವಕುಮಾರ್ ಅಪ್ಡೇಟ್ಸ್ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್












Click it and Unblock the Notifications