Darshan Thoogudeepa: ದರ್ಶನ್ ತೂಗುದೀಪ್ ಸುತ್ತಲೂ 7 ಸುತ್ತಿನ ಕೋಟೆ ಕಟ್ಟಿದ ಪತ್ನಿ ವಿಜಯಲಕ್ಷ್ಮೀ...
ದರ್ಶನ್ ತೂಗುದೀಪ್ ಕನ್ನಡ ಸಿನಿಮಾ ರಂಗದ ಹೀರೋ ಮಾತ್ರವಲ್ಲ, ದರ್ಶನ್ ತೂಗುದೀಪ್ ಅವರು ಕೋಟ್ಯಂತರ ಜನರಿಗೆ ಸಹಾಯ ಮಾಡಿ ಮಾದರಿ ಕೂಡ ಆಗಿದ್ದಾರೆ ಅನ್ನೋ ಮಾತು ಅವರ ಅಭಿಮಾನಿಗಳು ಹೇಳುತ್ತಾರೆ. ದರ್ಶನ್ ತೂಗುದೀಪ್ ಮತ್ತೆ ಕನ್ನಡ ಸಿನಿಮಾ ರಂಗದ ಸೂಪರ್ ಹೀರೋ ಆಗುತ್ತಾರೆ ಅಂತಾ ಅಭಿಮಾನಿಗಳು ಕಾಯುತ್ತಿದ್ದಾರೆ, ಅದು ನಿಜವಾಗುವ ಸಮಯ ಕೂಡ ಬಂದಿದೆ!
ಇನ್ನು ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಒಳ್ಳೇ ಮನುಷ್ಯ, ಆದರೆ ಡಿ-ಬಾಸ್ ದರ್ಶನ್ ತೂಗುದೀಪ್ ಸುತ್ತಮುತ್ತ ಇದ್ದವರು ಶುದ್ಧ ಅದು & ಇದು ಅಂತೆಲ್ಲಾ ಆರೋಪ ಕೇಳಿ ಬಂದಿತ್ತು. ಅದರಲ್ಲೂ ರೇಣುಕಾಸ್ವಾಮಿ ಬರ್ಬರ ಮರ್ಡರ್ ಕೇಸ್ನಲ್ಲಿ ದರ್ಶನ್ ತೂಗುದೀಪ್ ಸುತ್ತಮುತ್ತ ಇದ್ದವರೇ ಸೇರಿಕೊಂಡು ಕುತಂತ್ರ ಮಾಡಿ, ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನು ಇದೇ ಕೇಸ್ನಲ್ಲಿ ಲಾಕ್ ಮಾಡಿಸಿ ಸಮಸ್ಯೆ ಮಾಡಿದರು ಅನ್ನೋ ಭಾರಿ ಗಂಭೀರ ಆರೋಪ ಕೂಡ ಇದೆ!

ಧರ್ಮಪತ್ನಿ ರಕ್ಷಣೆಯಲ್ಲಿ ಡಿ-ಬಾಸ್ ದರ್ಶನ್?
ದರ್ಶನ್ ತೂಗುದೀಪ್ ಅವರು ತಮ್ಮ ಹೆಂಡತಿ ಜೊತೆಗೆ ಹಲವು ಬಾರಿ ಜಗಳ ಮಾಡಿಕೊಂಡು, ವಿಜಯಲಕ್ಷ್ಮೀ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಕೂಡ ಮಾಡಿದ್ದರು ಎಂಬ ಭಾರಿ ಗಂಭೀರ ಆರೋಪ ಕೇಳಿ ಬಂದಿತ್ತು. ಹೀಗಿದ್ದರೂ ಗಂಡ ಕಷ್ಟದಲ್ಲಿ ಪರದಾಡುವಾಗ ತಕ್ಷಣ ಬಂದು ಗಂಡನ ರಕ್ಷಣೆ ಮಾಡಿದರು ವಿಜಯಲಕ್ಷ್ಮೀ ಅವರು ಎಂಬ ಹೆಮ್ಮೆಯ ಮಾತುಗಳನ್ನ ಅವರ ಅಭಿಮಾನಿಗಳು ಹೇಳುತ್ತಾರೆ. ಹೀಗಿದ್ದಾಗಲೇ ಗಂಡ ಡಿ-ಬಾಸ್ ದರ್ಶನ್ ಅವರ ರಕ್ಷಣೆಗೆ ವಿಜಯಲಕ್ಷ್ಮೀ ದರ್ಶನ್ ಅವರು ಏನು ಮಾಡಿದ್ದಾರೆ ಗೊತ್ತಾ?
ದರ್ಶನ್ ತೂಗುದೀಪ್ ಸುತ್ತಲೂ 7 ಸುತ್ತಿನ ಕೋಟೆ!
ಡಿ-ಬಾಸ್ ದರ್ಶನ್ ತೂಗುದೀಪ್ 25 ವರ್ಷಗಳಲ್ಲಿ ದೊಡ್ಡ ಸಾಮ್ರಾಜ್ಯ ಕಟ್ಟಿಕೊಂಡಿದ್ದಾರೆ. ಈ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಬಾಕ್ಸ್ ಆಫಿಸ್ ಕಾ ಸುಲ್ತಾನ ಆಗಿ ಮೆರೆದಿದ್ದರು ಅನ್ನೋದು, ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ಹೆಮ್ಮೆ ಆಗಿದೆ. ಹೀಗಿದ್ದಾಗಲೇ, ದರ್ಶನ್ ತೂಗುದೀಪ್ ನೂರಾರು ಶತ್ರುಗಳನ್ನ ಎದುರು ಹಾಕಿಕೊಂಡು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮೆರೆಯುತ್ತಿದ್ದರು. ಇದೇ ಸಮಯದಲ್ಲೇ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಬೇಕು ಅಂತಲೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನ ಸಿಲುಕಿಸಿರುವ ಆರೋಪ ಕೂಡ ಇದೆ. ಹೀಗಿದ್ದಾಗಲೇ, ದರ್ಶನ್ ತೂಗುದೀಪ್ರ ಸುತ್ತಲೂ 7 ಸುತ್ತಿನ ಕೋಟೆ ಕಟ್ಟಿದ ಪತ್ನಿ ವಿಜಯಲಕ್ಷ್ಮೀ...
ರೇಣುಕಾಸ್ವಾಮಿ ವಿರುದ್ಧ ತೀವ್ರ ಆಕ್ರೋಶ!
ಅಭಿಮಾನಿಗಳ ಪಾಲಿನ ಪ್ರೀತಿಯ ಡಿ-ಬಾಸ್ ಆಗಿರುವ ದರ್ಶನ್ ತೂಗುದೀಪ್ ಅವರನ್ನ ಫ್ಯಾನ್ಸ್ ಯಾವ ಸ್ಥಿತಿಯಲ್ಲೂ ಬಿಟ್ಟು ಕೊಡುವುದೇ ಇಲ್ಲ ಅನ್ನೋದು ಮತ್ತೆ, ಮತ್ತೆ ಸಾಬೀತಾಗಿದೆ. ಡಿ-ಬಾಸ್ ದರ್ಶನ್ ತೂಗುದೀಪ್ ಅವರು ತಪ್ಪು ಮಾಡಿಲ್ಲ, ಸಮಾಜದಲ್ಲಿದ್ದ ಒಬ್ಬ ಕಾಮುಕ ಕ್ರಿಮಿ ತೊಲಗಿಸಿದ್ದಾರೆ ಅಷ್ಟೇ... ಅಂದಹಾಗೆ ಈ ರೀತಿ ರೇಣುಕಾಸ್ವಾಮಿ ಭೀಕರ ಕೊಲೆ ಬಗ್ಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಸಮರ್ಥನೆ ಮಾಡ್ಕೊಂಡಿದ್ದಾರೆ. ಅಲ್ಲದೆ ಈ ವೇಳೆ ರೇಣುಕಾಸ್ವಾಮಿ ಒಬ್ಬ ವಿಕೃತ ಕಾಮುಕ ಎಂಬ ಪಟ್ಟವನ್ನೂ ಕೊಟ್ಟಿದ್ದಾರೆ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು.
ಪವಿತ್ರಾ ಗೌಡ & ಡಿ-ಬಾಸ್ ಮಧ್ಯೆ ದ್ವೇಷ?
ರೇಣುಕಾಸ್ವಾಮಿ ಬರ್ಬರ ಕೊಲೆ ಕೇಸ್ನಲ್ಲಿ ದರ್ಶನ್ ತೂಗುದೀಪ್ ಅವರು & ಪವಿತ್ರಾ ಗೌಡಗೆ ದೊಡ್ಡ ಕಂಟಕ ಎದುರಾಗಿದೆ. ಹೀಗೆ ಇಬ್ಬರೂ ಈ ಕೇಸ್ನಲ್ಲಿ ಈಗಲೂ ನರಳುತ್ತಿದ್ದು, ಯಾವ ಕ್ಷಣದಲ್ಲಿ ಮತ್ತೆ ಜೈಲಿಗೆ ಹೋಗುತ್ತಾರೋ ಎಂಬ ಅನುಮಾನ ಇದೆ. ಈ ಕೇಸ್ ತುಂಬಾನೇ ಸ್ಟ್ರಾಂಗ್ ಆಗಿದ್ದು ಪೊಲೀಸರು ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಪರಿಸ್ಥಿತಿ ಕಠಿಣವಾಗಿರುವ ಸಮಯದಲ್ಲೇ ಮತ್ತೊಂದು ಘಟನೆ ನಡೆದು ಹೋಗಿದೆ...
ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರಣೆ ಸಂಬಂಧ ಡಿ-ಬಾಸ್ ದರ್ಶನ್ ತೂಗುದೀಪ್ ಅವರು & ಪವಿತ್ರಾ ಗೌಡ ಕೋರ್ಟ್ ಎದುರು ಹಾಜರಾದರು. ವಿಚಾರಣೆ ವೇಳೆ ಇಬ್ಬರೂ ಎದುರಾಗಿ ಬಂದರೂ ಮಾತನಾಡಿಲ್ಲ ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿತ್ತು. ಈ ಮೂಲಕ ಇಬ್ಬರೂ ದೂರವಾಗಿ ಹೋಗಿದ್ದು, ಇಬ್ಬರ ನಡುವೆ ಇದೀಗ ಮಾತುಕತೆಯೇ ಇಲ್ಲ ಎಂಬ ಸುದ್ದಿ ಹಬ್ಬಿದೆ. ಅಲ್ಲದೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಮನೆಯವರು ಕೂಡ ಪವಿತ್ರಾ ಗೌಡ ಅವರಿಂದ ದೂರ ಇಡಲು ಪ್ರಯತ್ನ ಮಾಡುತ್ತಿದ್ದು, ಇದೀಗ ಯಾರೂ ಕೂಡ ನೇರ ಡಿ-ಬಾಸ್ ಅವರನ್ನ ಭೇಟಿ ಮಾಡಲು ಅಥವಾ ಸಂಪರ್ಕ ಮಾಡಲು ಆಗುತ್ತಿಲ್ಲವಂತೆ!












Click it and Unblock the Notifications