Bigg Boss: ಮನೆಯ ಪರಿಕಲ್ಪನೆಗೇ ಕೊಡಲಿ ಪೆಟ್ಟು ಕೊಟ್ಟ ಬಿಗ್ಬಾಸ್, ದುಷ್ಪರಿಣಾಮಗಳು ಒಂದೆರೆಡಲ್ಲ -ವತ್ಸಲಾ ಸುರೇಶ್ ಬರಹ
ಬೆಂಗಳೂರು: ಟಿವಿ ರಿಯಾಲಿಟಿ ಶೋಗಳ ಪೈಕಿ ಸದ್ಯ ರಾಜ್ಯದಲ್ಲಿ 'ಬಿಗ್ ಬಾಸ್ 12 ಕನ್ನಡ' ಬಹಳಷ್ಟು ಸದ್ದು ಮಾಡುತ್ತಿದೆ. ಕಾರ್ಯಕ್ರಮ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಬಿಬಿಕೆ ಸ್ಪರ್ಧಿಯಾಗಿರುವ ಗಿಲ್ಲಿಗೆ ಓಟ್ ಹಾಕುವಂತೆ ಅವರ ಅಭಿಮಾನಿಗಳು ಹಲವೆಡೆ ಅಭಿಯಾನ ಆರಂಭಿಸಿದ್ದಾರೆ. ಈ ಕಾರ್ಯಕ್ರಮ ನಡೆಯುವ ರೀತಿ, ಜಗಳ, ಮಾತುಗಳು, ಶೋ ಪ್ರದರ್ಶನ, ಇದೀಗ ಗೆಲ್ಲುವ ಅಭ್ಯರ್ಥಿವರೆಗೆ ಜನರು ನಾನಾ ರೀತಿಯಲ್ಲಿ ಬಿಬಿಕೆ ವಿಶ್ಲೇಷಿಸುತ್ತಿದ್ದಾರೆ. ಅದೇ ರೀತಿ ಬ್ಲಾಗರ್ 'ವಸು ವತ್ಸಲೆ' ಅವರು ಜನರ ಆಲೋಚನೆ ಬದಲಿಸುವಂತಹ ವಿಚಾರಗಳನ್ನು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ಅವರ ಬರಹ ಮುಂದಿದೆ.
''ಆಕ್ರಮಣಕಾರಿ ಮಾಧ್ಯಮಗಳು ಮುನುಷ್ಯನ ಮೆದುಳಿನಲ್ಲಿ ಸೃಷ್ಠಿಸುತ್ತಿರುವ ಕೋಲಾಹಲಗಳು ಒಂದೆರಡಲ್ಲ. ಮಾಧ್ಯಮಗಳು ಕೀಳುಮಟ್ಟದ ಡೊಪಮೈನ್ ಉದ್ರೇಕಿಸುವ ಕಾರ್ಯಕ್ರಮಗಳನ್ನು ಬಿತ್ತರಿಸುವಲ್ಲಿ ಎತ್ತಿದ ಕೈ. ಇದರಿಂದ ಮಕ್ಕಳನ್ನು, ವೃದ್ಧರನ್ನು ಜೊತೆಗೆ ಜವಾಬ್ದಾರಿಯು ಮನೆಯೊಡತಿಯರನ್ನೂ, ಒಡೆಯರನ್ನೂ ಕಾಪಿಟ್ಟುಕೊಳ್ಳುವುದು ಬಲು ಪ್ರಯಾಸದ ವಿಷಯವಾಗಿದೆ.

ರಿಯಾಲಿಟಿ ಶೋಗಳೆಂಬ ಕಾಲಹರಣ, ಶಕ್ತಿವ್ಯಯ, ಹುಚ್ಚು ಮನರಂಜನೆ, ಕೆಳಮಟ್ಟದ ಹಾಸ್ಯವನ್ನು ಮುಂದು ಮಾಡಿಕೊಂಡ ಕಾರ್ಯಕ್ರಮಗಳು ಮನೆಮಂದಿ ಮಕ್ಕಳ ಮನಸ್ಸನ್ನಂತೂ ಹೆಗ್ಗಿಲ್ಲದೆ ಹಾಳುಗೆಡುವುತಿವೆ. ನಿಜವಾದ ಕೌಟುಂಬಿಕ ಮನರಂಜನೆಯೊಂತೂ ಧಾರವಾಹಿಗಳೊಂದಿಗೆ ವಿಲೀನಗೊಂಡಿವೆ. ಇನ್ನು ಪುಸ್ತಕದ ಓದು ಜ್ಞಾನಾರ್ಜನೆ ಚಂದನ ವಾಹಿನಿ ಬಿಟ್ಟಂದಿನಿಂದಲೇ ಮುಕ್ತಾಯಗೊಂಡಿವೆ. ಅದಿರಲಿ ನಮ್ಮ ಜಂಜಾಟದ ಬದುಕಿನಲ್ಲಿ ಯಾವುದಕ್ಕೆ ಪ್ರಾಮುಖ್ಯತೆ ನೀಡಬೇಕು? ಯಾವ ವಿಷಯದಲ್ಲಿ ಚಿಂತನೆಗಿಳಿಯಬೇಕೆಂಬ ಯಕಶ್ಚಿತ್ ಕಾಳಜಿಯೂ ಇಲ್ಲದೆ ವರ್ತಿಸುವ ನಮ್ಮ ಬಗ್ಗೆಯೂ ನಾವು ಚಿಂತಿಸದಿದ್ದರೆ ಹೇಗೆ?
"ಬಿಗ್ ಬಾಸ್" ಎಂಬ ಅತಿಶಯದ ಕಾರ್ಯಕ್ರಮ 'ಮನೆ' ಎಂಬ ಪರಿಕಲ್ಪನೆಗೆ ಕೊಡಲಿ ಏಟು ನೀಡಿದೆ ಎಂದರೆ ತಪ್ಪಾಗಲಾರದು. ಈ ಕಾರ್ಯಕ್ರಮ ಕೇವಲ ಕನ್ನಡವಷ್ಟೇ ಅಲ್ಲ ಏಳು ಭಾಷೆಗಳಲ್ಲೂ ಇದರ ಉಪಟಳವಿದ್ದೇ ಇದೆ. Endomolshine ಎಂಬ ಅಂತರಾಷ್ಟ್ರೀಯ ಕಂಪೆನಿಯು ಇಂತಹ ಕೀಳು ಅಭಿರುಚಿಯ ಕಾರ್ಯಕ್ರಮವೊಂದನ್ನು ಬಹಳ ವರ್ಷಗಳಿಂದ ತಂದು ತುರುಕಿತು. ಹೆಣ್ಣು ಗಂಡುಗಳನ್ನು ಒಟ್ಟಿಗೆ ಕೂಡಿ ಹಾಕಿ ಅಸಹ್ಯಕರ ವರ್ತನೆಗೆ ಸಾಕ್ಷಿಯಾಗುವುದಲ್ಲದ ಸಮಾಜದ ಸ್ವಾಸ್ಥ್ಯ ವನ್ನು ಹಾಳುಗೆಡುವುದರಲ್ಲಿ ಯಶಸ್ವಿಯಾಗಿದೆ.
ಅದರಲ್ಲೂ ಅಂತರಾಷ್ಟೀಯ ಮಟ್ಟದ ಇಂಗ್ಲೀಷ್ ಬಿಗ್ ಬಾಸ್ನ್ನೊಂತು ಕಣ್ಣಿಂದ ನೋಡಲಾಗದ್ದು. ಹಿಂದಿಯೂ ಹೊರತಲ್ಲ. ಆ ತುಂಡುಡುಗೆಯ ಹೇಯಕರ ವರ್ತನೆಯ ಮಾಡೆಲ್ಗಳ, ನಟರ ಪ್ರಭಾವ ಮಕ್ಕಳಲ್ಲಿ ಹೆಚ್ಚಾಗುತ್ತಿದೆ ಎಂಬ ಭಯವಿಲ್ಲದೆ ಅಪ್ಪಂದಿರಿ, ತಾಯಂದಿರು, ಮಕ್ಕಳೊಂದಿಗೆ ಕೂತು ನೋಡುವ ಬೇಜವಾಬ್ದಾರಿತನಕ್ಕೆ ಏನು ಹೇಳಬೇಕು?
ಈ ಕಾರ್ಯಕ್ರಮವು ಜನರ ಮನಸ್ಸನ್ನು ಆವರಿಸುವಂತೆ ಮಾಡಲು ಖ್ಯಾತ ಚಲನಚಿತ್ರ ನಾಯಕರನ್ನು ನಟರನ್ನು ಬಳಸಿಕೊಳ್ಳಲಾಯಿತು. ಅದು ಈಗ ಯಾವ ಮಟ್ಟಕ್ಕೆ ತಲೆಯೇರಿದೆಯೆಂದರೆ, ಒಂದು presidential ಚುನಾವಣೆಯಂತೆ ವಿಜೇತರ ವೋಟಿಂಗ್ ಅನ್ನು ಬಿಂಬಿಸುತ್ತಿದ್ದಾರೆ. ನಿಜಕ್ಕೂ ಇದು ಕಳವಳಕಾರಿ. ಈ ಕಾರ್ಯಕ್ರಮದ ವಿಜೇತರು ಯಾವ ಕೋಟೆ ಆಳುತ್ತಾರೋ, ಅದೇನು ದಬಾಕುತ್ತಾರೋ? ಅಥವಾ ಬರೇ ಬಕೇಟನ್ನೇ ದಬಾಕುತ್ತಾರೋ ಯಾರೂ ಅರಿಯರು. ಆದರೆ ಅದರ ಬಗೆಗಿನ ಆಸಕ್ತಿಯನ್ನು ಕಂಡಾಗ, ಇದು ಇಷ್ಟೊಂದು ಅವಶ್ಯವೇ ಎನಿಸುತ್ತದೆ.
ಬಿಗ್ ಕಾರ್ಯಕ್ರಮದ ಸಂದೇಶವೇನು?
ಒಂದು ಕೃತಕ ಮನೆಯಲ್ಲಿ ಹತ್ತಾರು ಜನರನ್ನು ಕೂಡಿ ಹಾಕಿ, ಅವರ ವಿಕಲ್ಪಗಳನ್ನು ಆಟವೆಂದು ಹೆಸರಿಟ್ಟು, ಅಸಹ್ಯಕರ ಭಾಷೆ, ಜಗಳ, ಟಾಸ್ಕ್ ಹೆಸರಿನ ದ್ವೇಷ ಭಾವದ ಹೂರಣವಾಗಿಸಿರುವ, ಈ ಕಾರ್ಯಕ್ರಮ ಜನರಲ್ಲಿ ಮಾನಸಿಕ ದ್ವಂದ್ವ, ಅರೆಚಾಟ ಕಿರುಚಾಟವನ್ನು ತುಂಬುತ್ತಿದೆ. ಇಲ್ಲಿ ಮತ್ತೊಂದು ಗಮನಿಸಬೇಕಾದ ವಿಚಾರವೆಂದರೆ ಇದರಲ್ಲಿನ ಆಟಗಾರರೆಲ್ಲರೂ controversy ಗೆ ಒಳಗಾದವರು. ಹಾಗಾದರೆ ಈ ಕಾರ್ಯಕ್ರಮದ ಸಂದೇಶ controversial ವ್ಯಕ್ತಿಗಳಾದರೆ ಬಿಗ್ ಬಾಸ್ ಪ್ರವೆಶವೆಂಬಂತಿದೆ. ಅಲ್ಲಿಯ ಹಣ, ಪ್ರಚಾರಕ್ಕೆ ಆಸೆ ಪಟ್ಟು ಯುವಪೀಳಿಗೆ controversyಗೆ ತೊಡಗಲು ಪ್ರೇರೇಪಿಸಿದಂತಾಗಲಿಲ್ಲವೇ?
ಯುವಪೀಳಿಗೆಯಲ್ಲಿ ವೈಚಾರಿಕವಾಗಿಯೋ, ಶೈಕ್ಷಣಿಕವಾಗಿಯೋ, ವೈಜ್ಞಾನಿಕವಾಗಿಯೋ ಜ್ಞಾನ ಬಿತ್ತಬೇಕಾದ ಮಾದ್ಯಮಗಳು, ಇಂದು ಹಣಕ್ಕಾಗಿ, ಟಿ.ಆರ್.ಪಿಗಾಗಿ ಇಂತಹ ಮಾರಕ ಮಾರ್ಗಗಳನ್ನು ಅನುಸರಿಸಿರುವುದನ್ನು ಯಾರೂ ಏಕೆ ಖಂಡಿಸುತ್ತಿಲ್ಲವೆಂಬುದೇ ಆಶ್ಚರ್ಯ. ಇದರ ಬದಲಾಗಿ ಹುಚ್ಚುಚ್ಚಾಗಿ ಮನಬಂದಂತಾಡುವ ಅಭ್ಯರ್ಥಿಗಳಿಗೆ ಸಪೋರ್ಟ್ ಮಾಡುತ್ತಾ ಊರು ತುಂಬಾ ಬ್ಯಾನರ್ ಹಾಕಿ ರಾರಾಜಿಸುವಂತೆ ಮಾಡಿದ್ದಾರೆ. ಇವೆಲ್ಲಾ ಗಿಮಿಕ್ಗಳು ಓದುವ ಹುಡುಗರ ಮೇಲೆ ಪ್ರಭಾವ ಬೀರದೇ ಇರುತ್ತದೆಯೇ? ಬಿಗ್ ಬಾಸ್ ಹೋಗುವ ಆಸಕ್ತಿಗೆ ಏನೋ ಮಾಡಲು ಹೋಗಿ ಏನೂ ಆಗಬಹುದು ಎಚ್ಚರ. ಅದರಲ್ಲಿ ನಿಮ್ಮ ಮಕ್ಕಳೂ ಇರಬಹುದು ಎಚ್ಚರ.
ಬಿಗಬಾಸ್ ನೋಡುವುದು ನಿಲ್ಲಿಸಿ, ಸ್ವಾಸ್ಥ್ಯ ಕಾಪಾಡಿ
ಆದರ್ಶ ವ್ಯಕ್ತಿತ್ವಗಳನ್ನು ಸಮಾಜದ ಮುಂದಿಡುವ ಬದಲು ಆರಕ್ಕೂ ಮೂರಕ್ಕೂ ಉಪಯೋಗಕ್ಕೆ ಬರದ ಇವರನ್ನು ತಿಂಗಳಾನುಗಟ್ಟಲೆ ತೋರಿಸಿ ಏನು ಸಾಧಿಸಬೇಕೆಂದಿದ್ದಾರೋ ಆ ಸಂಸ್ಥೆವರೇ ಬಲ್ಲರು. ಯಾವುದೇ ಸಾಮಾಜಿಕ ಬದ್ಧತೆ ಇಲ್ಲದೇ ಈ ಬಿಗಬಾಸ್ ನೋಡುವುದನ್ನು ನಿಲ್ಲಿಸದಿದ್ದರೆ, ನಿಮ್ಮ ಮನೆಯ ಸ್ವಾಸ್ಥ್ಯ ಕೆಡುವುದಂತೂ ಖಂಡಿತ.

ಈ ಹನ್ನೆರಡು ಸೀಸನ್ ಗಳಲ್ಲಿ ಒಂದೇ ಒಂದು ಆಟವನ್ನು ನೋಡುವ ಮನಸ್ಸಾಗದಿದ್ದಕ್ಕೆ ನನಗೆ ನಾನೇ ಥ್ಯಾಂಕ್ಸ್ ಹೇಳಿಕೊಳ್ಳುವೆ. ಮನೆಯಲ್ಲೂ ಟಿ.ವಿ ಬಂದ್. ಏಕೆಂದರೆ ಕೆಡುಕು ಬೇಗ ಆಕರ್ಷಿಸುತ್ತದೆ. ಅದೊಂದು ಮನೆಯಂತೆ ಅವರೆಲ್ಲ ಬಂಧು ಬಾಂಧವರಂತೆ, ಅವರೊಳಗೇ ಕಿತ್ತಾಟವಾಗುವಂತೆ ಮಾಡುವವನು ಬಿಗ್ ಬಾಸ್ ಅಂತೆ, ಅವನು ಇವಳಿಗೆ, ಇವಳು ಅವನಿಗೆ ಎಕ್ಕಾಮಕ್ಕ ಉಗಿಯುವುದಂತೆ, ಅವರವರಲ್ಲೇ ಎಲಿಮಿನೇಟ್ ಎಂಬ ಬಾಣ ಹೂಡಿ ದ್ವೇಷದ ಕಿಡಿ ಹೊತ್ತಿಸುವುದಂತೆ, ಅದ್ಯಾರೊಳಗೋ ಪ್ರೇಮ ಗೀಮ ಎಬ ಕಾಮೋದ್ರೇಕಿತ ವಿಲಾಸಗಳನ್ನು ತೋರ್ಪಡಿಸಿ ಚರ್ಚೆಗೆಳೆಯುವುದಂತೆ ಅದನ್ನೆಲ್ಲಾ ಪಂಚಾಯತಿ ಕಟ್ಟೆಯಲ್ಲಿ ಇತ್ಯರ್ಥ ಮಾಡುವುದಂತೆ... ಅದನ್ನೆಲ್ಲಾ ವಾರವೆಲ್ಲಾ ನೋಡಿ ವಾರಾಂತ್ಯದಲ್ಲಿ ಮಕ್ಕಳು ಮರಿ ಅವ್ವ ಅಪ್ಪನ ಸಮೇತ ಕೂತು ಕಣ್ಣು ಬಾಯಿ ಬಿಟ್ಟುಕೊಂಡು ನೋಡುವುದಂತೆ...ನೀವೇ ಯೋಚಿಸಿ ಇದರಲ್ಲಿ ಎಷ್ಟರ ಮಟ್ಟಿಗೆ ಸರಿ ತಪ್ಪು ಎಂದು!
ನಮ್ಮ ಅಪಾರ್ಟ್ ಮೆಂಟಿನ ಪುಟಾಣಿ ಮಕ್ಕಳೂ ಸಹ ಮೊನ್ನೆ ಪಾರ್ಕಿಂಗ್ ಪ್ಲೇಸಿನಲ್ಲಿ ಇದೇ ಆಟವನ್ನು ಆಡುತ್ತಾ, "ಬಿಗ್ ಬಾಸ್ ಹೇಳುತ್ತಿದ್ದಾರೆ"ಎಂದು ಜೋರು ದನಿಯಲ್ಲಿ ಅನುಕರಣೆ ಮಾಡುತ್ತಿದ್ದವು. ಗಿಲ್ಲಿ ಗಿಲ್ಲಿ ಏನು ದಬಾಕಿದ್ದೀಯ? ಎಂದೆಲ್ಲಾ ಆಡುತ್ತಿದ್ದವು. ದೂರದಲ್ಲೇ ನಿಂತು ನಾನು ಹತ್ತಾರು ನಿಮಿಷ ನೋಡುತ್ತಲೇ ಇದ್ದೆ. ಅದೇ ತೆರನಾದ ಆಟ ಆವಾಹಿಸಿಕೊಂಡಂತೆ ಅವೂ ಆಡುತ್ತಿದ್ದನ್ನು ನೋಡಿ "ದೇವ್ರೆ" ಎಂದುಕೊಂಡು ಬಂದೆ.
ಇನ್ನು ಬಹುಭಾಷಾ ವಿದ್ಯಾರ್ಥಿಗಳ ನಮ್ಮ ಶಾಲೆಯಲ್ಲಿ ಇದರ ಬಗ್ಗೆ ಸೊಲ್ಲೆತ್ತಿ ನೋಡೋಣವೆಂದು "ಹೇ ಮಕ್ಕಳಾ ಬಿಗ್ ಬಾಸ್ ನೋಡ್ತೀರಾ" ಎಂದು ಕೇಳಿ ರಿಯಾಲಿಟಿ ಚೆಕ್ ಮಾಡಿದೆ. "ನಾನು ನಾನು" ಎಂದು ತೆಲುಗು, ತಮಿಳು, ಕನ್ನಡ, ಹಿಂದಿ ಮಕ್ಕಳೂ ಕೂಗಿದವು. ಮೊನ್ನೆಯ ಟಾಸ್ಕ್ಗಳನ್ನು ಊಟದ ಸಮಯದಲ್ಲಿ ಇವೂ ಆಡಿ, ಇಬ್ಬರು ಮಕ್ಕಳು ಹೊಡೆದಾಡಿಕೊಂಡ ಬಗ್ಗೆ ಕೇಳಿ ಸುಸ್ತಾದೆ. ಒಟ್ಟಾರೆ ಎಲ್ರೂ ಅವರವರ ಭಾಷೆಯಲ್ಲಿ ನೋಡುತ್ತಿದ್ದಾರೆ ಎಂಬುದು ಖಚಿತವಾಯಿತು.
ನಾಡಿನ ಜ್ವಲಂತ ಸಮಸ್ಯೆ ಬಗ್ಗೆ ಚರ್ಚೆಗಳಿಲ್ಲ
ದೇಶದಲ್ಲಿ ಯಾವುದೋ ಜ್ವಲಂತ ಸಮಸ್ಯೆ ಬಂದಾಗಲೂ ಇಷ್ಟು ಚರ್ಚೆ ನಡೆಯುವುದಿಲ್ಲ. ಈಗ ನಾಳೆ ಯಾರು ಗೆಲ್ಲಬೇಕು? ಯಾರು ಗೆಲ್ತಾರೆ? ಎಂಬ ಚರ್ಚೆ ಪ್ರಸ್ತುತ ಜ್ವಲಂತ ಸಮಸ್ಯೆಯಾಗಿರುವುದು ನಿಜಕ್ಕೂ ವಿಷಾದನೀಯ. ಸ್ನೇಹಿತರೇ ನಿಮಗೋ, ನಮ್ಮ ಮನೆಯಲ್ಲಿರುವ ಮಕ್ಕಳಿಗೋ ಈ ಗೀಳು ಹೆಚ್ಚಾಗುವ ಮುನ್ನ ಎಚ್ಚರ ವಹಿಸಿ. ಇಂತಹ ಹತ್ತು ಹಲವಾರು ರೀಲ್ ಶೋಗಳು ನಿಮ್ಮ ಮನಸ್ಸು ಹೃದಯವನ್ನು ತಟ್ಟಿ, ನಿಮಗೇ ತಿಳಿಯದ ಸಂದರ್ಭದಲ್ಲಿ ಅಲ್ಲಿಯಂತೆಯೇ ನೀವು ವರ್ತಿಸುವ ಮುನ್ನ ಪ್ರಜ್ಞಾವಸ್ಥೆಗೆ ಬನ್ನಿ.
ಏಕೆಂದರೆ, ಯಾರು ಗೆಲ್ಲಬೇಕೆಂಬ ಈ ಚರ್ಚೆ ಪ್ರಸ್ತುತವೇ? ಗೆದ್ದವನಿಂದ ನಿಮಗೆ? ಅಥವಾ ದೇಶಕ್ಕೆ ಏನಾದರೂ ಪ್ರಯೋಜನವಿದೆಯೇ? ಇದ್ದರೆ ಅದೇನೆಂದು ಕಮೆಂಟಿಸಿ.'' ಎಂದು ಅವರು ಬರೆದುಕೊಂಡಿದ್ದಾರೆ. ಇದಕ್ಕೆ ಹಲವು ಕಾಮೆಂಟ್ಗಳು ಬಂದಿವೆ. 'ಬಿಗ್ ಬಾಸ್ ನಂತಹ ಸ್ಪರ್ಧಿಗಳಿಗೆ ಸಿಗುವ ಬೆಂಬಲ ದೇಶದ ಅನೇಕ ಕ್ರೀಡಾಪಟುಗಳಿಗೆ, ಸಮಾಜ ಸೇವಕರಿಗೆ ಸಿಗುವುದಿಲ್ಲ' ಎಂದು ಒಬ್ಬರು ಬರೆದಿದ್ದಾರೆ. ಮತ್ತೆ ಕೆಲವರು 'ಬಿಗ್ ಬಾಸ್ ಒಳಗಿನ ಸ್ಪರ್ಧಿಗಳ ಬುದುಕು, ಹೊರ ಜಗತ್ತಿನ ಜನ ಬದುಕು ಭೀನ್ನವಲ್ಲ' ಎಂದು ಕಾಮೆಂಟ್ ಮಾಡಿದ್ದಾರೆ. ಬಿಗ್ ಬಾಸ್ ಪರ ಮತ್ತು ವಿರೋಧವಾಗಿ ನೆಟ್ಟಿಗರು ಅವರ ಪೋಸ್ಟ್ಗೆ ಪ್ರತಿಕ್ರಿಯಿಸಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications