Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್
Bhagyalakshmi Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಸೀರಿಯಲ್ ಮಹತ್ವದ ತಿರುವು ಪಡೆದುಕೊಂಡಿದೆ. ಎಲ್ಲ ಅಡ್ಡಿಗಳನ್ನೂ ಮೀರಿ ನಡೆದೇಹೋಯ್ತು ಭಾಗ್ಯ - ಆದಿ ಮದುವೆ ಆಗಿದೆ. ತಾಂಡವ್ ನಾಟಕವನ್ನು ಭಾಗ್ಯ ಎಳೆ ಎಳೆಯಾಗಿ ಬಿಚ್ಚಿಡ್ತಿದಾಳೆ. ಭಾಗ್ಯ - ಶ್ರೇಷ್ಠಾ ಇಬ್ಬರನ್ನೂ ವಂಚಿಸಲು ಹೊರಟಿದ್ದ ತಾಂಡವ್ಗೆ ಕೊನೆಗೂ ತಕ್ಕ ಶಾಸ್ತಿ ಆಗಿದೆ. ಈ ಮೂಲಕ ಭಾಗ್ಯಲಕ್ಷ್ಮೀ ಸೀರಿಯಲ್ ವೀಕ್ಷಕರು ನಿಟ್ಟುಸಿರು ಬಿಟ್ಟಿದ್ದಾರೆ.
ಭಾಗ್ಯಲಕ್ಷ್ಮೀ ಸೀರಿಯಲ್ನಲ್ಲಿ ಹಲವು ದಿನಗಳಿಂದ ಸೃಷ್ಟಿಯಾಗಿದ್ದ ಗೊಂದಲ ಹಾಗೂ ಕುತೂಹಲಕ್ಕೆ ಈಗ ಕೊನೆಗೂ ತೆರೆ ಬಿದ್ದಿದೆ. ಶ್ರೇಷ್ಠಾ ಹಾಗೂ ಭಾಗ್ಯಲಕ್ಷ್ಮೀಗೆ ಮೋಸ ಮಾಡಬೇಕು ಎನ್ನುವ ಲೆಕ್ಕಾಚಾರದಲ್ಲಿದ್ದ ತಾಂಡವ್ ಪ್ಲ್ಯಾನ್ಗೆ ಹಿನ್ನಡೆ ಆಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಭಾಗ್ಯಲಕ್ಷ್ಮೀ ಹಾಗೂ ತಾಂಡವ್ ಎರಡನೇ ಬಾರಿ ಮದುವೆ ಆಗಬೇಕಾಗಿತ್ತು. ಆದರೆ, ಭಾಗ್ಯ ಮತ್ತು ತಾಂಡವ್ಗೆ ಮದುವೆ ನಡೆಯುತ್ತಿದ್ದ ಮದುವೆ ಮಂಟಪಕ್ಕೆ ಶ್ರೇಷ್ಠಾ ಬರುವುದರೊಂದಿಗೆ ತಾಂಡವ್ ಬಣ್ಣ ಬಯಲಾಗಿದೆ. ಶ್ರೇಷ್ಠಾ ಅದು ಆಗಲ್ಲ, ನಿನಗೆ ಅರ್ಥ ಆಗಲ್ಲ ನಾನು ವಿವರಿಸುತ್ತೀನಿ ತಡಿ ಅಂತ ತಾಂಡವ್ ಹೇಳಿದ್ದಾನೆ.

ಇದಕ್ಕೆ ಶ್ರೇಷ್ಠಾ ಮುಚ್ರಿ ಬಾಯಿ.. ಈಡಿಯಟ್ ಏನೇ ಆದರೂ ನೀನು ಬದಲಾಗಲ್ಲ. ಇದು ಗೊತ್ತಿರುವ ವಿಷಯನೇ. ನಿನಗೋಸ್ಕರ ನಮ್ಮ ಅಪ್ಪ - ಅಮ್ಮ ಎಲ್ಲರನ್ನೂ ಬಿಟ್ಟು ಬಂದರೆ ಅದಕ್ಕೋಸ್ಕರನಾದರೂ ನನ್ನ ಜೊತೆ ಇರಬೇಕು ಅಂತ ಅನಿಸಲಿಲ್ಲವಾ. ನಿನ್ನ ಮದುವೆ ಆಗುವುದಕ್ಕೆ ಏನೆಲ್ಲ ಸಮಸ್ಯೆ ಎದುರಿಸಿದ್ದೇನೆ ಅಂತ ಗೊತ್ತಿದೆ. ಆದರೂ ನೀನು ಈ ರೀತಿ ಮಾಡಿದ್ದೀಯ. ಇಷ್ಟೆಲ್ಲ ಆದರೂ ನನ್ನ ಬಿಟ್ಟು ಬಂದಿದ್ದಿಯ. ಈಗಲೂ ಏನು ಒಳ್ಳೆಯದು ಮಾಡುವುದಕ್ಕೆ ಬಂದಿಲ್ಲ ನೀನು. ಭಾಗ್ಯನ ಮೋಸ ಮಾಡಬೇಕು ಅಂತತಾನೆ ನೀನು ಬಂದಿರುವುದು ಎಂದು ಶ್ರೇಷ್ಠಾ ಪ್ರಶ್ನೆ ಮಾಡುವುದರೊಂದಿಗೆ ತಾಂಡವ್ ಬಣ್ಣ ಬಯಲಾಗಿದೆ.
ಭಾಗ್ಯಲಕ್ಷ್ಮೀಯಿಂದ ಟ್ವಿಸ್ಟ್
ನೀವು ಯಾವೊತ್ತು ನಾನು ಬದಲಾಗಿದ್ದೀನಿ ಅಂತ ಬಂದು ನನ್ನ ಕಾಲಿಗೆ ಬಿದ್ದಿರೋ ಆವೊತ್ತೇ ನಾನು ಅಂದುಕೊಂಡೆ ನೀವು ಬದಲಾಗಿಲ್ಲ; ಏನೋ ಸಾಧಿಸುವುದಕ್ಕೆ ಬಂದಿರುವ ಸಮಯ ಸಾಧಕ ಎಂದು ಕೊಂಡೆ ಎಂದು ತಾಂಡವ್ನ ನೋಡಿ ಭಾಗ್ಯ ಹೇಳಿದ್ದಾರೆ. ಆವೊತ್ತಿಂದ ನಿಮ್ಮನು ನಾನು ಗಮನಿಸುತ್ತಿದ್ದೇನೆ. ಎಲ್ಲರೂ ಇದ್ದಾಗ ನೀವು ಇರುವುದಕ್ಕೂ - ನೀವೊಬ್ಬರೇ ಇರುವಾಗ ಇರುವುದಕ್ಕೂ ತುಂಬಾನೇ ವ್ಯತ್ಯಾಸ ಕಾಣ್ಸತಾ ಇತ್ತು. ಆಗಲೇ ನನಗೆ ಅನುಮಾನ ಶುರುವಾಗಿತ್ತು. ಏನೋ ಒಂದು ಮಾಡ್ತಾ ಇದ್ದಿರ ಅಂತ. ಆದರೆ ನಾನು ಆಗಲೇ ಯಾಕೆ ಹೇಳಲಿಲ್ಲ ಗೊತ್ತಾ, ಆಗ ನನ್ನ ಬಳಿ ಸಾಕ್ಷಿ ಇರಲಿಲ್ಲ. ಇವರು ಆರತಿ ಮಾಡಿ ಮನೆಯೊಳಗೆ ಕರೆದುಕೊಂಡ್ರೋ ಆವೊತ್ತೇ ಸ್ಟೋರೂಮ್ಗೆ ಹೋಗಿ ನನ್ನ ಫೋಟೋನ ಸುಟ್ಟು ಹಾಕಿದ್ರು. ಆಗಲೇ ನನಗೆ ಇವರ ನಿಜವಾದ ಮುಖ ಕನ್ಫರ್ಮ್ ಆಗೋಯ್ತು ಅಂತ ಭಾಗ್ಯ ಹೇಳಿದ್ದಾರೆ.
ಭಾಗ್ಯ - ಆದಿ ಮದುವೆ
ಕೊನೆಗೂ ಭಾಗ್ಯ ಮತ್ತು ಆದಿ ಲಕ್ಷ್ಮೀ ಮದುವೆಯಾಗಿದೆ. ಆದಿ ಅವರು ನಮ್ಮ ಮೂರು ಕುಟುಂಬಗಳು ಇನ್ಮುಂದೆ ಒಂದೇ ಆಗಿರುತ್ತದೆ ಅಂತ ಹೇಳಿದ್ದಾರೆ. ಇದಕ್ಕೆ ಭಾಗ್ಯ ಅದನ್ನು ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ ಅಂತ ಹೇಳಿರುವುದು ಹೊಸ ಪ್ರೋಮೋದಲ್ಲಿದೆ.
-
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ankita Jayaram: ನಟನೆಯ ನಡುವೆಯೂ ದ್ವಿತೀಯ ಪಿಯುಸಿಯಲ್ಲಿ ಕರ್ಣ ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಜಯರಾಮ್ ಅಮೋಘ ಸಾಧನೆ -
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ












Click it and Unblock the Notifications