Get Updates
Get notified of breaking news, exclusive insights, and must-see stories!

ಗಿಲ್ಲಿ ಬಿಗ್‌ಬಾಸ್‌ ಗೆದ್ದರೆ ₹20,00,000 ಕೊಡ್ತೀನಿ: ಎಂಎಲ್‌ಸಿ ಟಿ.ಎ.ಶರವಣ ಘೋಷಣೆ

ಬಿಗ್‌ಬಾಸ್‌ ಕನ್ನಡ ಸೀಸನ್‌-12ರ ಗ್ರ್ಯಾಂಡ್‌ ಫಿನಾಲೆ ಕ್ಷಣ ಕ್ಷಣಕ್ಕೂ ರೋಚಕತೆಯನ್ನು ಹೆಚ್ಚಿಸುತ್ತಿರುವ ನಡುವೆಯೇ, ಗಿಲ್ಲಿ ನಟ ಪರವಾಗಿ ರಾಜಕೀಯ ವಲಯದಿಂದ ಮಹತ್ವದ ಘೋಷಣೆ ಹೊರಬಿದ್ದಿದೆ. ಜೆಡಿಎಸ್‌ ಎಂಎಲ್‌ಸಿ ಹಾಗೂ ಸಾಯಿ ಗೋಲ್ಡ್‌ ಪ್ಯಾಲೇಸ್‌ ಮಾಲೀಕ ಟಿ.ಎ.ಶರವಣ ಅವರು, ಗಿಲ್ಲಿ ನಟ ಬಿಗ್‌ಬಾಸ್‌ ಗೆದ್ದರೆ ಬರೋಬ್ಬರಿ 20 ಲಕ್ಷ ರೂಪಾಯಿ ನೀಡುವುದಾಗಿ ಬಹಿರಂಗವಾಗಿ ಘೋಷಣೆ ಮಾಡಿದ್ದಾರೆ.

ರೈತನ ಮಗ ಗೆಲ್ಲಬೇಕು

ಫಿನಾಲೆ ನಡೆಯುತ್ತಿರುವ ಈ ಹೊತ್ತಿನಲ್ಲಿ ಮಾತನಾಡಿದ ಅವರು, "ರೈತನ ಮಗ ಗಿಲ್ಲಿ ಗೆಲ್ಲಬೇಕು. ಈ ಬಾರಿ ಬಿಗ್‌ಬಾಸ್‌ ಟ್ರೋಫಿ ಗಿಲ್ಲಿಗೇ ಸಿಗಲಿದೆ ಎಂಬ ವಿಶ್ವಾಸ ನನಗಿದೆ. ನಾನೂ ಕೂಡ ಪ್ರತಿದಿನ ಬಿಗ್‌ಬಾಸ್‌ ನೋಡುತ್ತಿದ್ದೇನೆ" ಎಂದು ಹೇಳಿದರು. ಗಿಲ್ಲಿಯ ಆಟ, ಅವರ ಸರಳತೆ ಮತ್ತು ಪ್ರಾಮಾಣಿಕ ನಡೆ ಜನಮನ ಗೆದ್ದಿದೆ ಎಂದು ಶರವಣ ಅಭಿಪ್ರಾಯಪಟ್ಟಿದ್ದಾರೆ.

BBK 12 Finale MLC TA Sharavana Announces 20 Lakh Reward If Gilli Wins Bigg Boss

"ಈ ಸೀಸನ್‌ನಲ್ಲಿ ಗಿಲ್ಲಿಯೇ ಗೆಲ್ಲಬೇಕು. ರೈತನ ಮಗನಾಗಿ ಬಂದಿರುವ ಗಿಲ್ಲಿ ತನ್ನ ನಡವಳಿಕೆ, ಶ್ರಮ ಮತ್ತು ಪ್ರಾಮಾಣಿಕತೆಯಿಂದ ಜನರ ಮನ ಗೆದ್ದಿದ್ದಾನೆ. ನಾನೂ ಪ್ರತಿದಿನ ಬಿಗ್‌ಬಾಸ್‌ ನೋಡುತ್ತಿದ್ದೇನೆ. ಗಿಲ್ಲಿಯ ಆಟ ನನಗೆ ಬಹಳ ಇಷ್ಟವಾಗಿದೆ" ಎಂದು ಹೇಳಿದರು. ಸಾಮಾನ್ಯ ಕುಟುಂಬ ಹಿನ್ನೆಲೆಯಿಂದ ಬಂದ ಗಿಲ್ಲಿಯ ಪಯಣ ಅನೇಕ ಯುವಕರಿಗೆ ಪ್ರೇರಣೆಯಾಗಿದೆ ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದರು.

ಇನ್ನು ರನ್ನರ್‌ ಅಪ್‌ ಯಾರು ಆಗಬಹುದು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಈ ಸೀಸನ್‌ನಲ್ಲಿ ರಕ್ಷಿತಾ ಅಥವಾ ಅಶ್ವಿನಿ ರನ್ನರ್‌ ಆಗುವ ಸಾಧ್ಯತೆ ಇದೆ" ಎಂದು ಹೇಳಿದರು. ಆದರೆ ಅಂತಿಮವಾಗಿ ವಿನ್ನರ್‌ ಗಿಲ್ಲಿಯೇ ಎಂಬ ತಮ್ಮ ನಂಬಿಕೆಯನ್ನು ಅವರು ಪುನರುಚ್ಚರಿಸಿದರು.

ಹಣ ನೀಡಲು ಬಂಂದಿದ್ದೇನೆ ಎಂದ ಶರವಣ

ಗಿಲ್ಲಿಯ ಗೆಲುವಿನ ಬಗ್ಗೆ ತಮಗೆ ಶೇ.100ರಷ್ಟು ವಿಶ್ವಾಸವಿದೆ ಎಂದು ಹೇಳಿದ ಶರವಣ, ಈ ಬಾರಿ ಬಿಗ್‌ಬಾಸ್‌ ಟ್ರೋಫಿ ಗಿಲ್ಲಿಗೇ ಸಿಗಲಿದೆ ಎಂಬ ನಿರೀಕ್ಷೆ ವ್ಯಕ್ತಪಡಿಸಿದರು. ಟಿ.ಎ. ಶರವಣ ಅವರ ಈ ಘೋಷಣೆಯ ನಂತರ ಗಿಲ್ಲಿ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ತುಂಬಿದೆ. ಸೋಷಿಯಲ್‌ ಮೀಡಿಯಾದಲ್ಲಿ #GilliWinner, #FarmerSonGilli ಎಂಬ ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್‌ ಆಗುತ್ತಿದ್ದು, ಗಿಲ್ಲಿ ಪರ ಬೆಂಬಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈಗಾಗಲೇ ಫಿನಾಲೆ ವೇದಿಕೆ ಬಳಿ ಹಾಗೂ ಬಿಗ್‌ಬಾಸ್‌ ಮನೆ ಮುಂದೆ ಅಭಿಮಾನಿಗಳು ಜಮಾಯಿಸಿ ಸಂಭ್ರಮಾಚರಣೆ ನಡೆಸುತ್ತಿರುವುದು ಕಂಡುಬಂದಿದೆ.

ಒಟ್ಟಾರೆ, ಬಿಗ್‌ಬಾಸ್‌ ಕನ್ನಡ ಸೀಸನ್‌-12ರ ಫಿನಾಲೆ ಕೇವಲ ರಿಯಾಲಿಟಿ ಶೋವಲ್ಲದೆ, ಸಾಮಾಜಿಕ ಮತ್ತು ರಾಜಕೀಯ ಚರ್ಚೆಗಳಿಗೂ ಕಾರಣವಾಗಿದೆ. ರೈತನ ಮಗನಾಗಿ ಗುರುತಿಸಿಕೊಂಡ ಗಿಲ್ಲಿ, ಟ್ರೋಫಿಯ ಜೊತೆಗೆ ಜೆಡಿಎಸ್‌ ಎಂಎಲ್‌ಸಿ ಘೋಷಿಸಿದ ₹20 ಲಕ್ಷ ಬಹುಮಾನವನ್ನೂ ಪಡೆದುಕೊಳ್ಳುತ್ತಾರೆಯೇ ಎಂಬುದೇ ಈಗ ಎಲ್ಲರಲ್ಲೂ ಇರುವ ದೊಡ್ಡ ಪ್ರಶ್ನೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಈ ಕುತೂಹಲಕ್ಕೆ ತೆರೆ ಬೀಳಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+