ಹಿಂದೆ ನನ್ನ ಬೈದವರೆಲ್ಲಾ ಚನ್ನಾಗಿರಲಿ... ಆಂಕರ್ ಅನುಶ್ರೀ ದಿಢೀರ್ ಪಂಚ್! Anchor Anushree
ಕನ್ನಡಿಗರ ಪಾಲಿಗೆ ಆಂಕರ್ ಅನುಶ್ರೀ ಅವರು ತುಂಬಾನೇ ವಿಶೇಷ, ಅದರಲ್ಲೂ ಆಂಕರ್ ಅನುಶ್ರೀ ಅವರನ್ನ ಕನ್ನಡಿಗರ ಮನೆಮಗಳು ಅಂತಾ ಕೂಡ ಕರೆಯುವುದುಂಟು. ಕಿರುತೆರೆ ಲೋಕದ ಸೂಪರ್ ಸ್ಟಾರ್ ಅಂತಾನೇ ಫೇಮಸ್ ಆಗಿರುವ ಆಂಕರ್ ಅನುಶ್ರೀ, ಕೋಟಿ ಕೋಟಿ ಅಭಿಮಾನಿ ಸಾಗರವನ್ನೇ ಸಂಪಾದನೆ ಮಾಡಿದ್ದಾರೆ. ಕನ್ನಡ ರಿಯಾಲಿಟಿ ಶೋಗಳ ಪಾಲಿನ ರಾಣಿ ಕೂಡ ಆಂಕರ್ ಅನುಶ್ರೀ ಅಂತಾರೆ ಅವರ ಫ್ಯಾನ್ಸ್. ಹೀಗಿದ್ದರೂ ಆಂಕರ್ ಅನುಶ್ರೀ ಅವರಿಗೆ ಪದೇ ಪದೇ ಶತ್ರುಗಳ ಕಾಟ & ವಿರೋಧಿಗಳ ಕಾಟ ಇದ್ದೇ ಇದೆ.
ಆಂಕರ್ ಅನುಶ್ರೀ ಅವರ ಬೆಳವಣಿಗೆ ಸಹಿಸದ ಕೆಲವರು ಸೋಷಿಯಲ್ ಮೀಡಿಯಾ ಮೂಲಕ & ತಮ್ಮ ಕೈಲಾಗುವ ಎಲ್ಲಾ ಪ್ರಯತ್ನಗಳನ್ನು ಮಾಡಿ ವದಂತಿ ಹಬ್ಬಿಸುವ ಕೆಲಸ ಮಾಡುತ್ತಾರೆ. ಈ ಕೆಲಸದ ಜೊತೆಗೆ ಆಂಕರ್ ಅನುಶ್ರೀ ಅವರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಹಾಕಿ ಸರಿಯಾಗಿ ಉತ್ತರ ಪಡೆದ ವಿರೋಧಿಗಳು ಕೂಡ ಇದ್ದಾರೆ. ಹೀಗೆ ಎಲ್ಲವನ್ನೂ ನೋಡುತ್ತಾ ಇದ್ದ ಆಂಕರ್ ಅನುಶ್ರೀ ಅವರು ಈಗ ಸರಿಯಾಗಿ ಉತ್ತರ ಕೊಡುತ್ತಿದ್ದಾರೆ. ಹಾಗಾದರೆ ಆಂಕರ್ ಅನುಶ್ರೀ ಈಗ ದಿಢೀರ್, ಹಿಂದೆ ನನ್ನ ಬೈದವರೆಲ್ಲಾ ಚನ್ನಾಗಿರಲಿ... ಎಂದು ಹೇಳಿದ್ದು ಯಾರಿಗೆ? ಮುಂದೆ ಓದಿ.

ಆಂಕರ್ ಅನುಶ್ರೀ ಪಂಚ್!
ಹೌದು, ಆಂಕರ್ ಅನುಶ್ರೀ ಇಷ್ಟು ದೊಡ್ಡ ಮಟ್ಟಕ್ಕೆ ಬೆಳವಣಿಗೆ ಹೊಂದುತ್ತಿರುವ ಕಾರಣ ಕೆಲವರು ವಿವಾದ ಹುಟ್ಟು ಹಾಕುತ್ತಿರುವ ಆರೋಪ ಕೇಳಿಬಂದಿದೆ. ಅದರಲ್ಲೂ ಆಂಕರ್ ಅನುಶ್ರೀ ಮದುವೆ ಆದ ನಂತರ, ಸೋಷಿಯಲ್ ಮೀಡಿಯಾ ಮೂಲಕ ಕಿಡಿಗೇಡಿಗಳು ಕಿರಿಕ್ ಮಾಡುತ್ತಿದ್ದಾರೆ. ಇಷ್ಟು ದಿನಗಳ ಕಾಲ ಖುದ್ದು ಆಂಕರ್ ಅನುಶ್ರೀ ಅವರ ಅಭಿಮಾನಿಗಳೇ ಇದಕ್ಕೆಲ್ಲಾ ತಕ್ಕ ಉತ್ತರವನ್ನು ನೀಡುತ್ತಿದ್ದರು. ಆದರೆ ಈಗ ನೇರವಾಗಿ ಅನುಶ್ರೀ ಅವರೇ ಅಖಾಡ ಪ್ರವೇಶ ಮಾಡಿ, ಶತ್ರುಗಳಿಗೆ & ಅನಗತ್ಯ ಕಮೆಂಟ್ ಹಾಕುವವರ ಹೆಡೆಮುರಿ ಕಟ್ಟುತ್ತಿದ್ದಾರೆ.
'ಹಿಂದೆ ನನ್ನ ಬೈದವರೆಲ್ಲಾ ಚೆನ್ನಾಗಿರಲಿ...'
ಹೊಸ ವರ್ಷ ಶುರುವಾಗಿರುವ ಸಮಯದಲ್ಲೇ, 'ಹಿಂದೆ ನನ್ನ ಬೈದವರೆಲ್ಲಾ ಚೆನ್ನಾಗಿರಲಿ, ಮುಂದೆ ನನ್ನ ಬೈಯ್ಯುವರೆಲ್ಲ ಅಂದಣವಿರಲಿ, ಕುಂದು ಇಟ್ಟವರೆಲ್ಲಾ ಕುದುರೆಯ ಕಟ್ಟಿ ಬಾಳಲಿ, ಬಂದು ಒದ್ದವರಿಗೆ ಬತ್ತದ ಗದ್ದೆ ಬೆಳೆಯಲಿ...' ಹೀಗೆ ದಾಸ ಶ್ರೇಷ್ಠರಾದ ಕನಕದಾಸರ ಸಾಲುಗಳನ್ನು ಹೇಳಿ ತಮ್ಮ ಅಭಿಮಾನಿಗಳಿಗೆ ಶುಭಾಶಯ ಕೋರುವ ಜೊತೆಯಲ್ಲೇ ಶತ್ರುಗಳು ಹಾಗೂ ವಿರೋಧಿಗಳಿಗೆ ಉತ್ತರವನ್ನೂ ನೀಡಿದ್ದಾರೆ ಅಂತಾ ಇದೀಗ ಚರ್ಚೆ ಶುರುವಾಗಿದೆ. ಅಭಿಮಾನಿಗಳು ಆಂಕರ್ ಅನುಶ್ರೀ ಅವರ ಈ ಸಾಲುಗಳನ್ನು ಕೇಳಿ ಫುಲ್ ಖುಷಿಯಾಗಿದ್ದಾರೆ.
-
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್












Click it and Unblock the Notifications