Amruthadhaare: ಅಮೃತಧಾರೆ ಸೀರಿಯಲ್ನ ಜಾಮೂನ್ ಸೀನ್ ವೈರಲ್!
Amruthadhaare: ಕನ್ನಡ ಸೀರಿಯಲ್ಗಳಲ್ಲಿ ಹೊಸ ತಿರುವುಗಳನ್ನು ಪಡೆದುಕೊಂಡು ಮುನ್ನುಗುತ್ತಿರುವ ಅಮೃತಧಾರೆ ಮತ್ತೊಂದು ಕಾರಣಕ್ಕೆ ಸುದ್ದಿಯಲ್ಲಿದೆ. ಅಮೃತಧಾರೆ ಸೀರಿಯಲ್ ದಿನಕ್ಕೊಂದು ತಿರುವು ಪಡೆದುಕೊಂಡು ಮುನ್ನುಗ್ಗುತ್ತಿದೆ. ಕೆಲವು ದಿನಗಳ ಹಿಂದೆ ಈ ಸೀರಿಯಲ್ ಅಲ್ಲಿ ಬರುತ್ತಿದ್ದ ದೃಶ್ಯಗಳ ಜನರ ಮನಸ್ಸಿಗೆ ಅಷ್ಟೇನು ಇಷ್ಟವಾಗಿರಲಿಲ್ಲ. ಇದೀಗ ಸೀರಿಯಲ್ ಮತ್ತೆ ಹಳಿಗೆ ಬರುತ್ತಿದ್ದು ಪ್ರೇಕ್ಷಕರು ಫಿದಾ ಆಗಿದ್ದಾರೆ. ಈಗ ಬಿಡುಗಡೆಯಾಗಿರುವ ಪ್ರೋಮೋ ನೋಡಿರುವ ವೀಕ್ಷಕರು ಈ ಸೀರಿಯಲ್ನ ಬಗ್ಗೆ ಹಾಗೂ ಸೂರ್ಯವಂಶ ಸಿನಿಮಾ ನೆನಪಿಸಿಕೊಂಡು ಮಜವಾದ ಕಮೆಂಟ್ ಮಾಡುತ್ತಿದ್ದಾರೆ.
ಅಮೃತಧಾರೆ ಸೀರಿಯಲ್ ಯಾರೂ ನಿರೀಕ್ಷೆ ಮಾಡದಂತಹ ತಿರುವುಗಳನ್ನು ಪಡೆದುಕೊಂಡು ಮುನ್ನುಗ್ಗುತ್ತಿದೆ. ಡುಮ್ಮ ಸರ್ ಹಾಗೂ ಅವರ ಮಗ ಒಂದಾಗಿರುವ ದೃಶ್ಯಗಳು ಜನರ ಮನಸ್ಸನ್ನು ಸೆಳೆದಿದೆ. ಭೂಮಿಕಾ ಹಾಗೂ ಗೌತಮ್ ಅವರು ಒಂದಾಗಬೇಕು. ಕೂಡುಕುಟುಂಬವಾಗಿ ಎಲ್ಲರೂ ಸೇರಬೇಕು. ಕಾಣೆಯಾಗಿರುವ ಹೆಣ್ಣು ಮಗವೂ ಸೇರಬೇಕು ಅಂತ ಜನ ಇಷ್ಟಪಡುತ್ತಿದ್ದಾರೆ.

ಅಮೃತಧಾರೆ ಸೀರಿಯಲ್ ಈಗ ಪ್ರೇಕ್ಷಕರು ಸಣ್ಣ ಅಸಮಾಧಾನ ಹಾಗೂ ಆಶಾಭಾವನೆಯಿಂದಲೇ ನೋಡುತ್ತಿದ್ದಾರೆ ಎಂದು ಹೇಳಬಹುದು. ಮುಂದಿನ ದಿನಗಳಲ್ಲಿ ಎಲ್ಲರೂ ಒಂದಾಗಬಹುದು ಎನ್ನುವ ನಿರೀಕ್ಷೆ ಪ್ರೇಕ್ಷಕರದ್ದು. ಈಗ ಬಂದಿರುವ ಪ್ರೋಮೋದಲ್ಲಿ ಆಕಾಶ್ ಬರ್ತಡೇ ಸಂಭ್ರಮಾಚರಣೆಯನ್ನು ತೋರಿಸಲಾಗಿದೆ. ಆಕಾಶ್ ಬರ್ತಡೇ ಸಂಭ್ರಮಾಚರಣೆಯಲ್ಲಿದ್ದು. ಗೌತಮ್ ಅವರಿಗೆ ಸಹಿ ಸಹಿ ಜಾಮೂನು ತೆಗೆದುಕೊಂಡು ಬಂದಿರುವ ದೃಶ್ಯಗಳು ಮೂಡಿ ಬಂದಿವೆ.
ಸೂರ್ಯವಂಶ ಪಿಚ್ಚರ್ ತರ ಇದೆ ಇದು ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಸೂರ್ಯವಂಶ ಗಸಗಸ ಪಾಸಯ ಅಲ್ಲ ಅಮೃತಧಾರೆ ಜಾಮೂನ್ ಅಂತ, ಸೂರ್ಯವಂಶದಲ್ಲಿ ಅಪ್ಪ - ಮೊಮ್ಮಗ, ಅಮೃತಧಾರೆಯಲ್ಲಿ ಅಪ್ಪ - ಮಗ, ಸಿನಿಮಾ ನೋಡಿದಂತೆ ಆಗುತ್ತಿದೆ. ಆದರೆ ದೃಶ್ಯಗಳು ಮನಮೋಹಕವಾಗಿದೆ ಎಂದು ಪ್ರೇಕ್ಷಕರು ಕಮೆಂಟ್ ಮಾಡುತ್ತಿದ್ದಾರೆ.
ಎಲ್ಲರೂ ದೂರ ದೂರ ಆಗಿರುವುದು ಪ್ರೇಕ್ಷಕರಲ್ಲಿ ಸಣ್ಣ ಅಸಮಾಧಾನವನ್ನು ಮೂಡಿಸಿರುವುದಂತೂ ನಿಜ. ಆದರೆ ಇತ್ತೀಚಿಗೆ ಬರುತ್ತಿರುವ ಸೀನ್ಗಳನ್ನು ನೋಡಿದರೆ ಗೌತಮ್ ಹಾಗೂ ಭೂಮಿಕಾ ಅವರು ಬೇಗ ಸೇರಲಿದ್ದಾರೆ ಎನ್ನುವಂತೆಯೇ ಇದೆ. ಮುಖ್ಯವಾಗಿ ಗೌತಮ್ ಮತ್ತು ಆಕಾಶ್ ಒಂದಾಗಿರುವುದು ಜನರ ಮನಸ್ಸು ಸೆಳೆದಿದೆ. ಈಗ ಬಂದಿರುವ ಪ್ರೋಮೋ ಸೂರ್ಯವಂಶ ಸಿನಿಮಾ ನೆನಪಿಸುತ್ತಿದೆ ಎಂದು ಪ್ರೇಕ್ಷಕರು ಹೇಳಿದ್ದಾರೆ.
ಬೇಗ ಸೇರಿಸಿ: ಇನ್ನು ಗೌತಮ್, ಭೂಮಿ ಹಾಗೂ ಆಕಾಶ್ ಅವರನ್ನು ಬೇಗ ಒಂದು ಮಾಡಿ. ಅಲ್ಲದೇ ಗೌತಮ್ ಅವರನ್ನು ಮೊದಲಿನಂತಯೇ ಶ್ರೀಮಂತರನ್ನಾಗಿಸಿ, ದುಷ್ಟರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಿ. ತುಂಬಾ ಎಳೆಯದೆ ಸೀರಿಯಲ್ಗೆ ಒಳ್ಳೆಯ ಅಂತ್ಯ ಕೊಡಿ ಎಂದು ಪ್ರೇಕ್ಷಕರು ಒತ್ತಾಯಿಸಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ












Click it and Unblock the Notifications