Actress Vijayalakshmi: ಗಂಡ-ತಾಳಿ ಇಲ್ಲ ಎನ್ನುವ ಕೊರಗು ನನಗೆ ಕಾಡುತ್ತದೆ- ನಟಿ ವಿಜಯಲಕ್ಷ್ಮಿ
ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಬಹುಭಾಷಾ ನಟಿ ವಿಜಯಲಕ್ಷ್ಮಿಇತ್ತೀಚೆಗೆ ವಿವಾದಗಳಿಂದ ಸುದ್ದಿಯಾಗಿದ್ದೇ ಹೆಚ್ಚು. ತಮ್ಮ ಜೀವನ ಅಕ್ಕನ ಜೀವನದ ಬಗ್ಗೆ ಆಗಾಗ ನೋವು ತೋಡಿಕೊಳ್ಳುವ ವಿಜಯಲಕ್ಷ್ಮಿ ಅಕ್ಕನ ಮದುವೆ ಸಮಯದಲ್ಲಿ ಏನಾಯ್ತು..? ಬದುಕು ಯಾಕೆ ಹೀಗಾಯ್ತು ಎನ್ನುವುದರ ಬಗ್ಗೆ ಮಾತನಾಡಿದ್ದಾರೆ.
ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಅವರು, 'ಹಬ್ಬ ಚಿತ್ರದ ಶೂಟಿಂಗ್ ಸಮಯದಲ್ಲಿ ನಾನು ಜಯಪ್ರದಾ ತುಂಬಾ ಕ್ಲೋಸ್ ಆಗಿದ್ದೇವು. ಹೀಗಾಗಿ ಒಂದು ದಿನ ಜಯಪ್ರದಾ ಜೊತೆ ಮಾತನಾಡುವಾಗ ಕೇಳಿದರು. ಹಬ್ಬ ಚಿತ್ರದಲ್ಲಿ ನನ್ನದು ರಾಮ್ ಕುಮಾರ್ ಅವರ ಹಾಡಿನ ಶೂಟಿಂಗ್ ಇತ್ತು ಆ ಸಮಯದಲ್ಲಿ ಕೇಳಿದರು. ನಮ್ಮ ಅಣ್ಣನಿಗೆ ಇನ್ನೂ ಮದುವೆ ಆಗಿಲ್ಲ. ಎಲ್ಲರೂ ನಿಮ್ಮ ಅಕ್ಕನ ಬಗ್ಗೆ ಹೇಳಿದರು, ನಿಮ್ಮಕ್ಕ ಒಳ್ಳೆ ಹುಡುಗಿ ಎಂದು ವಿಷ್ಣು ಸರ್ ಹೇಳಿದರು' ಎಂದರು.

'ನಮ್ಮಕ್ಕ ತುಂಬಾ ಒಳ್ಳೆ ಹುಡುಗಿ. ಮನೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆ. ತುಂಬಾ ಶಾಂತ ಸ್ವಭಾವದವಳು. ಹೀಗಾಗಿ ವಿಷ್ಣು ಸರ್ ಎಲ್ಲಾ ಹೇಳಿದ್ದಾರೆ ರಾಜ್ ಬಾಬುಗೆ ಕೇಳಬಹುದು ಅಂತಾ ಎಂದು ಜಯಪ್ರದಾ ಹೇಳಿದರು. ಆಗ ನಾನು ಒಕೆ ಅಕ್ಕ ಅಪ್ಪ ಹತ್ತಿರ ಮಾತನಾಡಿ. ಅಪ್ಪ ಏನು ಹೇಳುತ್ತಾರೆ ಹಾಗೇ ಮಾಡೋಣ ಅಂದೆ. ಕೊನೆಗೆ ಜಯಪ್ರದಾ ಅವರು ಮನೆಗೆ ಬಂದು ಕೇಳಿದರು'.
'ಅವರು ತೆಲುಗು ನಾಯ್ಡು, ನಾವು ಕರ್ನಾಟಕದ ನಾಯ್ಡು ಹೀಗಾಗಿ ಹೈದರಾಬಾದ್ನಲ್ಲೇ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟರು. ಮದುವೆಗೆ ನಾನು ಕೂಡ ದುಡಿದು ಹಣ ಹಾಕಿದ್ದೆ. ಅವರು ರಿಸೆಪಕ್ಷನ್ ಮಾಡಿದರು ನಾವು ಮದುವೆ ಮಾಡಿಕೊಟ್ಟೆವು' ಎಂದು ಅಕ್ಕನ ಬದುಕಿನ ದುರಂತರದ ಬಗ್ಗೆ ವಿವರಿಸಿದ ವಿಜಯಲಕ್ಷ್ಮಿ ಒಂದು ಹೆಣ್ಣಿಗೆ ಗಂಡ, ತಾಳಿ ಎಷ್ಟು ಮುಖ್ಯ ಎನ್ನುವುದರ ಬಗ್ಗೆ ಕೂಡ ಮಾತನಾಡಿದ್ದಾರೆ.
'ಪ್ರತಿಯೊಂದು ಹೆಣ್ಣು ಗಂಡನು ಬಿಟ್ಟು ಬರಬೇಕು ಅಂತಲೋ ಆ ಜೀವನ ಬಿಟ್ಟು ಬರಬೇಕೋ ಅಂತಲೋ ಯಾವ ಹೆಣ್ಣು ಬಯಸಲ್ಲ. ನಾನು ಎಲ್ಲಾ ಮಹಿಳೆಯರ ದೃಷ್ಟಿಯಿಂಧ ಹೇಳುತ್ತಿದ್ದೇನೆ. ಅವರು ತಮ್ಮ ತಾಳಿ, ಗಂಡ, ಆ ಕುಂಕುಮ, ಹೂವು ಅವರಿಗೆ ಅದು ದೇವರಾಗಿರುತ್ತದೆ. ಏನೇ ಸಾಧನೆ ಮಾಡಿದರೂ ಕೂಡ ತಾಳಿ, ಕುಂಕುಮ ದೇವರಾಗಿರುತ್ತದೆ.
ನಾನು ಕೂಡ ಎಷ್ಟು ಸಾಧನೆ ಮಾಡಿದ್ದೇನೆ. ನನಗೂ ಆ ಕೊರತೆ ಇದೆ. ನನ್ನ ಗಂಡ ಅಂತಾ ಒಬ್ಬರು ಇಲ್ಲ ನನಗೆ. ನನ್ನ ತಾಳಿ ಇಲ್ಲ. ನನ್ನ ಕುಂಕುಮ ಇಲ್ಲ. ನನಗೆ ಆ ಕೊರತೆ ಇದೆ. ಯಾರೋ ಒಬ್ಬರೂ ಎಲ್ಲಾ ಪದ್ಧತಿಯನ್ನು ಮೀರಿ ಹೊರಗೆ ಬರುತ್ತಾರೆ ಎಂದರೆ ಅದು ಅವರ ಜೀವನಕ್ಕೆ ಎಷ್ಟು ಕೆಟ್ಟದಾಗಿ ಕಂಡಿರಬಹುದು. ಅಲ್ಲಿ ನೆಮ್ಮದಿ ಇಲ್ಲ ಎಂದು ಹೊರಗಡೆ ಬಂದು ಬಿಡುತ್ತಾರೆ' ಎಂದು ಹೇಳಿದರು.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ












Click it and Unblock the Notifications