ಮಗ ಬೇಕಾ? ಮಗಳು ಬೇಕಾ? ಸಿದ್ದು ಮೂಲಿಮನಿ ಹೇಳಿದ್ದೇನು?
ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ನಟಿ ಪ್ರಿಯಾ ಜೆ ಆಚಾರ್ ಹಾಗೂ ಪಾರು ಧಾರಾವಾಹಿ ಖ್ಯಾತಿಯ ನಟ ಸಿದ್ದು ಮೂಲಿಮನಿ 2023ರ ಫೆಬ್ರವರಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸದ್ಯ ಇಬ್ಬರೂ ತಮ್ಮ ತಮ್ಮ ಹೊಸ ಪ್ರಾಜೆಕ್ಟ್ಗಳಲ್ಲಿ ಬ್ಯೂಸಿಯಾಗಿದ್ದು, ಸಿದ್ದು ಮೂಲಿಮನಿ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಈ ಮಧ್ಯೆ ಇತ್ತೀಚಿನ ಸಂದರ್ಶನದಲ್ಲಿ ಸಿದ್ದು ತಮ್ಮ ಖಾಸಗಿ ವಿಚಾರಗಳ ಬಗ್ಗೆ ಹಂಚಿಕೊಂಡಿದ್ದಾರೆ.
ಬಾಸ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, 'ನಾನು ಪ್ರಿಯಾ ಇಬ್ಬರೂ ಸರಳವಾಗಿ ಇರಲು ಇಷ್ಟಪಡುತ್ತೇವೆ. ಜೊತೆಯಾಗಿ ಸಿನಿಮಾಗೆ ಹೋಗುತ್ತೇವೆ. ಇಬ್ಬರು ಜೊತೆಯಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತೇವೆ. ಹೀಗೆ ಇಬ್ಬರು ಜೊತೆಯಲ್ಲಿ ಸಮಯ ಕಳೆಯುತ್ತಲೇ ಇರುತ್ತೇವೆ. ಆದರೆ ಅದು ನೋಡುವವರಿಗೆ ಗೊತ್ತಾಗಲ್ಲ ಅಷ್ಟೇ. ಗೊತ್ತಾಗಬಾರದು ಎಂದು ಮಾಸ್ಕ್ ಹಾಕಿಕೊಂಡು ಓಡಾಡುತ್ತೇವೆ'.

'ಜನಗಳ ಮಧ್ಯೆ ಇದ್ದಾಗಲೇ ಜೀವನ ನೋಡಲು ಸಾಧ್ಯ ಹೀಗಾಗಿ ಜನರ ಮಧ್ಯೆ ಇಬ್ಬರು ಹೋಗುತ್ತೇವೆ. ನಾವು ಜನರನ್ನು ಬಿಟ್ಟು ಬದುಕುತ್ತೇವೆ. ಪ್ರಪಂಚವನ್ನು ಬಿಟ್ಟು ಬದುಕುತ್ತೇವೆ ಅಂದರೆ ಆಗುವುದಿಲ್ಲ. ನಟನಾಗಿ ನಾವು ಜೀವನ ನೋಡುವುದೇ ಜನರ ಮಧ್ಯೆ. ಹೀಗಾಗಿ ನನಗೆ ಜನರ ಮಧ್ಯೆಯೇ ಇರಲು ನನಗೆ ಇಷ್ಟ. ನನಗೆ ಜನಸಂದಣಿ ಅಂದರೆ ತುಂಬಾ ಇಷ್ಟ. ಆದರೆ ಗೊತ್ತಾಗದ ರೀತಿ ಹೋಗುತ್ತೇವೆ. ನಾವಿಬ್ಬರು ಜೊತೆಯಾಗಿ ಜಾತ್ರೆಗಳಿಗೆ ಸಹ ಹೋಗುತ್ತೇವೆ ಆದರೆ ಯಾರಿಗೂ ಗೊತ್ತಾಗಲ್ಲ ಅಷ್ಟೇ' ಎಂದರು.
ಜೂನಿಯರ್ ಸಿದ್ದು ಅಥವಾ ಜೂನಿಯರ್ ಪ್ರಿಯಾ ಯಾವಾಗ ಬರುತ್ತಾರೆ ಎಂದು ನಿರೀಕ್ಷೆ ಮಾಡಬಹುದು ಎನ್ನುವ ಪ್ರಶ್ನೆಗೆ ನಾಚಿಕೊಂಡೇ ಉತ್ತರಿಸಿದ ಸಿದ್ದು ಮೂಲಿಮನಿ, 'ನನ್ನ ಪ್ರಕಾರ ಪ್ರಿಯಾ ಕೂಡ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡಿರುವ ನಟಿ. ಅವಳಿಗೆ ಅವಳದೇ ಆದ ಒಂದು ಜೀವನ ಇದೆ. ಒಂದು ಸ್ವಾತಂತ್ರ್ಯ ಇದೆ. ಹೀಗಾಗಿ ಅವಳು ಈಗ ಕೆಲಸ ಮಾಡಲಿ. ಒಬ್ಬ ಮನುಷ್ಯನಾಗಿ ನನಗೆ ಏನು ಅನಿಸುತ್ತದೆ ಅಂದರೆ ಇಂತಹ ನಿರ್ಧಾರದಲ್ಲಿ ಪುರುಷನಿಗೆ ಎಷ್ಟು ಹಕ್ಕು ಇರುತ್ತದೆಯೇ ಮಹಿಳೆಗೂ ಕೂಡ ಅಷ್ಟೇ ಹಕ್ಕು ಇರುತ್ತದೆ. ಯಾಕೆಂದರೆ ಅವಳ ದೇಹ ಅದು. ಅವರೇ ಅದನ್ನು ನಿರ್ಧರಿಸಲಿ ಎನ್ನುವುದು ನನ್ನ ಅಭಿಪ್ರಾಯ' ಎಂದು ಹೇಳಿದರು.
'ಇನ್ನು ಒಳ್ಳೆಯ ಸಿನಿಮಾಗಳು ಮಾಡಬೇಕು ಎನ್ನುವುದೇ ನಮ್ಮ ಈಗಿನ ಗುರಿ. ಜನರನ್ನು ಮನೋರಂಜಿಸ ಬೇಕು. ಇಬ್ಬರು ಒಟ್ಟಿಗೆ ಕೆಲಸ ಮಾಡಬೇಕು ಎನ್ನುವ ಲೆಕ್ಕಾಚಾರ ಇದೆ. ನಟ ನಟಿಯಾದ ಮೇಲೆ ಅದು ನಮ್ಮ ಜವಾಬ್ದಾರಿ. ಸದ್ಯಕ್ಕೆ ನಮ್ಮ ಮನೆಯಲ್ಲಿ ಪುಟ್ಟ ನಾಯಿ ಮರಿ ಇದೆ. ಸದ್ಯಕ್ಕೆ ಅವನೇ ನಮ್ಮ ಪ್ರೀತಿಯ ಮಗು. ಅವನನ್ನೇ ಆಟವಾಡಿಸಿಕೊಂಡು ಚೆನ್ನಾಗಿದ್ದೇವೆ' ಎಂದರು.
ಇಬ್ಬರು ಜೊತೆಯಾಗಿ ಸಿನಿಮಾ ಮಾಡುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಿದ್ದು, 'ತುಂಬಾ ಕಥೆಗಳು ಬಂದಿವೆ. ಆದರೆ ನಾನು ಪ್ರಿಯ ಒಟ್ಟಿಗೆ ಸಿನಿಮಾ ಮಾಡುತ್ತೇವೆ ಅಂದಾಗ ಜನರಿಗೆ ಒಂದು ನಿರೀಕ್ಷೆ ಇರುತ್ತದೆ. ಕಥೆ ತುಂಬಾ ಮುದ್ದಾಗಿ ಇರಬೇಕು. ಹೆಚ್ಚು ಡಾನ್ಸ್ ಇರಬೇಕು. ಈ ರೀತಿ ಕಥೆ ಬಂದರೆ ಖಂಡಿತಾ ಮಾಡುತ್ತೇವೆ' ಎಂದು ಹೇಳಿದರು.
-
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
ವೈಭವ್ ಸೂರ್ಯವಂಶಿ ಅದೃಷ್ಟದ ಮೇಲೆ ಸವಾರಿ ಮಾಡುತ್ತಿದ್ದಾರೆ: ಕೊಡಗಿನ ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ












Click it and Unblock the Notifications